Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ!
ಸಂಖ್ಯಾಶಾಸ್ತ್ರ ಪ್ರಕಾರ ಯಾವ ಬಗೆಯ ಹರಳು ಧರಿಸಿದರೆ ನಿಮಗೆ ಮಂಗಳಕರ?
ಹರಳಿನ ಉಂಗುರ ಧರಿಸುವಾಗ ಹೆಚ್ಚಿನವರು ಹಾಗೇ ಸುಮ್ಮನೆ ಧರಿಸುವುದಿಲ್ಲ. ಜನ್ಮ ದಿನಾಂಕಕ್ಕೆ ತಕ್ಕಂತೆ ಧರಿಸುವುದರಿಂದ ಒಳ್ಳೆಯದು ಎಂದು ಹೇಳಲಾಗುವುದು.ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದ ಆಧಾರದ ಮೇಲೆ 9 ಸಂಖ್ಯೆಗಳಿವೆ. ಈ 9 ಸಂಖ್ಯೆಗಳಿಗೂ ನವಗ್ರಹಗಳಿಗೂ ಸಂಬಂಧವಿದೆ. ಒಂದೊಂದು ಸಂಖ್ಯೆ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತದೆ. ನಿಮ್ಮ ಜನ್ಮ ದಿನಾಂಕಕ್ಕೆ ತಕ್ಕಂತೆ ಹರಳು ಧರಿಸಿದರೆ ಒಳ್ಳೆಯದು. ಇದರಿಂದ ನಿಮ್ಮ ಸಂಖ್ಯೆಯ ಗ್ರಹದ ಸಂಪೂರ್ಣ ಶುಭಫಲ ಪಡೆಯಬಹುದು.

ಸಂಖ್ಯೆ 1
1, 10, 19 ರಂದು ಜನಿಸಿದ ವ್ಯಕ್ತಿಯ ಆಡಳಿತ ಗ್ರಹ ಸೂರ್ಯ. ಸೂರ್ಯ ಗ್ರಹಗಳ ಅಧಿಪತಿ, ಪರಾಕ್ರಮದ ಸಂಕೇತ. ಸಂಖ್ಯಾ ಶಾಸ್ತ್ರದ ಪ್ರಕಾರ ಒಂದು ಸಂಖ್ಯೆ ನಿಮ್ಮದಾಗಿದ್ದರೆ ನೀವು ನೀಲಮಣಿ ಮತ್ತು ಹಳದಿ, ಪಚ್ಚೆ ಹರಳನ್ನು ಧರಿಸುವುದು ಒಳ್ಳೆಯದು. ಈ ಹರಳುಗಳು ನಿಮಗೆ ಮಂಗಳಕರ ಫಲಿತಾಂಶ ನೀಡುವುದು.
ಸಂಖ್ಯೆ 2
2, 11, 20 ಮತ್ತು 29 ರಂದು ಜನಿಸಿದವರ ಅಧಿಪತಿ ಮಂಗಳ ಗ್ರಹ. ಸಂಖ್ಯಾ ಶಾಸ್ತ್ರ ಪ್ರಕಾರ 2 ಸಂಖ್ಯೆ ಬರುವವರ ಅಧಿಪತಿ ಚಂದ್ರ. ನೀವು ಮುತ್ತಿನ ಆಭರಣಗಳನ್ನು ಧರಿಸುವುದು ಒಳ್ಳೆಯುವುದು ಎಂದು ಹೇಳಲಾಗುವುದು. ಮುತ್ತು ಧರಿಸುವುದರಿಂದ ಮುಂಗೋಪ ನಿಯಂತ್ರಣಕ್ಕೆ ಬರುತ್ತದೆ. ದಲ್ಲದೇ ರಾಡಿಕ್ಸ್ 2 ಗಾಗಿ ಮೋತಿ ರತ್ನ ಸಹಿಷ್ಣುತೆ ಮತ್ತು ಪ್ರೀತಿಯನ್ನು ತೋರಿಸುತ್ತದೆ.
ಸಂಖ್ಯೆ 3
3, 12, 21 ಮತ್ತು 30 ರಂದು ಜನಿಸಿದ ವ್ಯಕ್ತಿಗೆ ಸಂಖ್ಯಾಶಾಸ್ತ್ರ ಪ್ರಕಾರ 3 ಸಂಖ್ಯೆ ಬರುತ್ತದೆ, 3 ಸಂಖ್ಯೆಗೆ ರಾಹು ಅಧಿಪತಿ. ಹಿಂದೂ ನಂಬಿಕೆ ಪ್ರಕಾರ ರಾಹು ಶುಭ ಫಲವನ್ನು ನೀಡುವ ಗ್ರಹವಾಗಿದೆ. ಆದ್ದರಿಂದ ಕೆಂಪು ಹರಳು, ಹಳದಿ ಅಥವಾ ಹವಳದ ಆಭರಣ ನಿಮಗೆ ಶುಭವಾಗಿದೆ.
ಸಂಖ್ಯೆ 4
4, 13, 22 ಮತ್ತು 31 ರಂದು ಜನಿಸಿದರೆ ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 4 ಆಗಿದೆ. ನಿಮಗೆ ನೀಲಮಣಿ ಅದೃಷ್ಟದ ಹರಳಾಗಿದೆ, ನೀಲಮಣಿ ದುಬಾರಿ, ಆದ್ದರಿಂದ ನೀವು ಪಂಚ ಲೋಹದ ಆಭರಣ ಕೂಡ ಧರಿಸಬಹುದು.
ಸಂಖ್ಯೆ 5
5, 14 ಮತ್ತು 23 ರಂದು ಜನಿಸಿದವರು 5 ಸಂಖ್ಯೆಯನ್ನು ಹೊಂದಿರುತ್ತಾರೆ. ನಿಮ್ಮ ಆಡಳಿತ ಗ್ರಹ ಬುಧವಾಗಿದ್ದು ನಿಮಗೆ ಪಚ್ಚೆ ಹರಳು ಶುಭವಾಗಿದೆ . ಬುಧ ನಮ್ಮ ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಬುಧದ ಪ್ರಭಾವ ಬಲವಾಗಿದ್ದರೆ ನಮ್ಮ ಸಂವಹನ ಸಾಮರ್ಥ್ಯದಿಂದ ಮುಂದುವರೆಯಲು ಸಾಧ್ಯವಾಗುವುದು.
ಸಂಖ್ಯೆ 6
6, 15 ಮತ್ತು 24 ರ ಜನ್ಮ ಸಂಖ್ಯೆಗಳು 6. 6 ಸಂಖ್ಯೆ ಹೊಂದಿರುವವರಿಗೆ ಶುಕ್ರ ಆಡಳಿತ ಗ್ರಹವಾಗಿದೆ. ಇದು ವ್ಯಕ್ತಿಯ ಜಾತಕದಲ್ಲಿ ಶುಭ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಸಂಖ್ಯೆ 6 ರ ಜನ್ಮ ದಿನಾಂಕದ ಪ್ರಕಾರ, ಮಂಗಳಕರ. ನಿಮಗೆ ವಜ್ರದ ಆಭರಣ ಶುಭವಾಗಿದೆ.
ಸಂಖ್ಯೆ 7
7, 16 ಮತ್ತು 25 ರಂದು ಜನಿಸಿದ ಜನರು 7 ರ ಜನ್ಮ ಸಂಖ್ಯೆಯನ್ನು ಹೊಂದಿರುತ್ತಾರೆ. ಈ ಸಂಖ್ಯೆಯವರಿಗೆ ಬೆಳ್ಳಿ ಅತ್ಯಂತ ಶುಭವಾಗಿದೆ. ನಿಮ್ಮ ಕೈಯಲ್ಲಿ ಬೆಳ್ಳಿಯ ಉಂಗುರ ಅಥವಾ ಕಡಗ ಇದ್ದರೆ ಒಳ್ಳೆಯದು. ಬೆಳ್ಳಿಯ ಉಂಗುರದಲ್ಲಿ ಯಾವುದೇ ಹರಳು ಇರುವ ಆಭರಣ ಧರಿಸಬಹುದು.
ಸಂಖ್ಯೆ 8
8, 17 ಮತ್ತು 26 ರಂದು ಜನಿಸಿದ ಜನರು 8 ರ ಜನ್ಮ ಸಂಖ್ಯೆಯನ್ನು ಹೊಂದಿರುತ್ತಾರೆ. ಜನ್ಮ ಸಂಖ್ಯೆ 8 ರ ಆಡಳಿತ ಅಧಿಪತಿ ಶನಿ. ನಿಮಗೆ ನೀಲಮಣಿ ಹರಳು ಶುಭವಾಗಿದೆ. ನೀವು ಕಪ್ಪು ದಾರ ಅಥವಾ ಕಪ್ಪು ಮಣಿಗಳನ್ನು ಧರಿಸುವುದು ಕೂಡ ಶುಭವಾಗಿದೆ.
ಸಂಖ್ಯೆ 9
9, 18 ಮತ್ತು 27 ರಂದು ಜನಿಸಿದ ಜನರು 9 ಸಂಖ್ಯೆಯನ್ನು ಹೊಂದಿರುತ್ತಾರೆ. ಈ ಸಂಖ್ಯೆ ಬರುವವರಿಗೆ ಹವಳ ನಿಮ್ಮ ಅದೃಷ್ಟದ ಕಲ್ಲು. ನಿಮ್ಮ ಬಳಿ ಹಳವದ ಆಭರಣವಿದ್ದರೆ ಅದು ನಿಮಗೆ ಶುಭವಾಗಿದೆ.



Click it and Unblock the Notifications