Latest Updates
-
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ!
ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲು ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಬೇಕು?
ದೇವನೊಬ್ಬ ನಾಮ ಹಲವು ಎನ್ನುವ ಹಾಗೆ ಈ ಜಗತ್ತಿನಲ್ಲಿ ಮುಕ್ಕೋಟಿ ದೇವತೆಗಳು ಇದ್ದಾರಂತೆ. ದೇವರು ಅನ್ನೋದು ಒಂದು ನಂಬಿಕೆ. ಮನುಷ್ಯ ಆತನಿಗೆ ಕಷ್ಟ ಬಂದಾಗ ಮಾತ್ರ ದೇವರನ್ನು ನೆನಪು ಮಾಡಿಕೊಳ್ಳತ್ತಾನೆ. ಗ್ರಹಗಳು ಹೇಗೆ ರಾಶಿಯ ಮೇಲೆ ಪ್ರಾಬಲ್ಯತೆಯನ್ನು ಹೊಂದಿದ್ಯೋ ಅದೇ ರೀತಿ ಪ್ರತಿಯೊಂದು ರಾಶಿಗೂ ಒಬ್ಬೊಬ್ಬ ದೇವರಿದ್ದಾನೆ.
ಆಯಾ ರಾಶಿಯವರು ಅದೇ ದೇವರನ್ನು ಪೂಜಿಸಿದರೆ ಮಾತ್ರ ಶಾಂತಿ, ಸಮೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಯಾಗುತ್ತೆ ಎನ್ನುವ ನಂಬಿಕೆಯಿದೆ. ಅಷ್ಟಕ್ಕು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದ್ರೆ ಒಳಿತಾಗುತ್ತೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮಂಗಳ ಗ್ರಹವು ಮೇಷ ರಾಶಿಯ ಸರ್ವೋಚ್ಛ ಗ್ರಹವಾಗಿದೆ. ಹೀಗಾಗಿ ಮೇಷ ರಾಶಿಯ ಸೂರ್ಯ ಅಥವಾ ಸೂರ್ಯ ದೇವನನ್ನು ಉನ್ನತ ಅಥವಾ ಉಚ್ಚ ಎಂದು ಪರಿಗಣಿಸಲಾಗುತ್ತದೆ. ನಮ್ಮ ಜೀವನದಲ್ಲಿ ಧನಾತ್ಮಕ ಪರಿಣಾಮಗಳು ಹೆಚ್ಚಾಗಬೇಕೆಂದರೆ ಸೂರ್ಯ ದೇವನ ಆರಾಧನೆ ಮಾಡುವುದು ತುಂಬಾನೇ ಮುಖ್ಯ.
ಜಲ ಅರ್ಪಣೆ ಮತ್ತು ಧ್ಯಾನ ಮಾಡೋದು ಸೂರ್ಯ ದೇವ ಆರಾಧನೆಯ ಪರಿಣಾಮಕಾರಿ ರೂಪಗಳೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಸೂರ್ಯದೇವ, ಹನುಮಾನ್, ಶಿವ, ಕಾರ್ತಿಕೇಯ ಮತ್ತು ನರಸಿಂಹನನ್ನು ಪೂಜಿಸಿದರೆ ಒಳ್ಳೆಯದಾಗುತ್ತಂತೆ.
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ವೃಷಭದಲ್ಲಿ ಚಂದ್ರ ಅಥವಾ ಚಂದ್ರ ದೇವನನ್ನು ಅತ್ಯಂತ ಶಕ್ತಿಶಾಲಿ ಅಥವಾ ಉಚ್ಚ ಎಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯೊಳಗೆ ಚಂದ್ರನು ಭಾವನಾತ್ಮಕ ಸಮತೋಲನವನ್ನು ಉಂಟು ಮಾಡುತ್ತಾನೆ. ನಿಮ್ಮ ದೇಹದ ಸ್ತ್ರೀಲಿಂಗ ಶಕ್ತಿಯು ನಿಮ್ಮ ಮನೋಧರ್ಮಕ್ಕೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಶಕ್ತಿ ಚಂದ್ರನಿಗೆ ಇದೆ. ವೃಷಭ ರಾಶಿಯವರು ಗಣೇಶ, ಕಾಳಿ, ಶಕ್ತಿ ಮತ್ತು ಸರಸ್ವತಿಯನ್ನು ಫೂಜೆ ಮಾಡಿದರೆ ಒಳಿತಾಗುತ್ತೆ ಎಂದು ನಂಬಲಾಗಿದೆ.
ಮಿಥುನ ರಾಶಿ
ಬುಧ ಗ್ರಹವು ಮಿಥುನ ರಾಶಿಯ ಅಧಿಪತಿಯಾಗಿದೆ. ಮಿಥುನ ರಾಶಿಯವರು ಭಗವಾನ್ ವೆಂಕಟೇಶ್ವರನನ್ನು ಪೂಜಿಸಿದರೆ ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಬಹುದಂತೆ. ಇದ್ರ ಜೊತೆಗೆ ಬುದ್ಧ, ನಾರಾಯಣ ಮತ್ತು ಬ್ರಹ್ಮದೇವನನ್ನು ಪೂಜಿಸಿದರೆ ಒಳಿತಾಗಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಆಡಳಿತ ಗ್ರಹ ಚಂದ್ರ. ಪ್ರತಿನಿತ್ಯ ಹನುಮಾನ್ ಚಾಲೀಸ್ ಮಂತ್ರ ಪಠನೆ ಮಾಡೋದ್ರಿಂದ ಅವರ ಶಕ್ತಿ ಮತ್ತು ದೈರ್ಯ ಹೆಚ್ಚಾಗುತ್ತಂತೆ. ಇನ್ನೂ ಅದೃಷ್ಟ, ಸಂಪತ್ತು ಮತ್ತು ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸಲು ಶ್ರೀಕೃಷ್ಣ ಮತ್ತು ಸರಸ್ವತಿ ದೇವಿಯನ್ನು ಪೂಜಿಸಿದರೆ ಒಳಿತಾಗಲಿದೆ. ಪರಿಹಾರವಾಗಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪಕ್ಷಿ ಹಾಗೂ ಅಳಿಲುಗಳಿಗೆ ಆಹಾರವನ್ನು ನೀಡಿ.
ಸಿಂಹ ರಾಶಿ
ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ. ಸಿಂಹ ರಾಶಿಯವರ ಮೇಲೆ ಸೂರ್ಯನು ಗಮನಾರ್ಹ ಪರಿಣಾಮ ಬೀರಬಹುದು. ಸಿಂಹ ರಾಶಿಯವರು ಶಿವನನ್ನು ಆರಾಧನೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ಪ್ರತಿನಿತ್ಯ ಶಿವಲಿಂಗಕ್ಕೆ ಹಾಲು ಮತ್ತು ನೀರಿನ ಅಭಿಷೇಕ ಮಾಡಿದರೆ ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯು ಬುಧನ ಆಡಳಿತ ಗ್ರಹವಾಗಿದೆ. ಕನ್ಯಾ ರಾಶಿಯವರು ನಾರಾಯಣನನ್ನು ಪೂಜಿಸಿದರೆ ಒಳಿತಾಗಲಿದೆ. ದುಷ್ಟ ಶಕ್ತಿಗಳಿಂದ ನಾರಾಯಣ ನಿಮ್ಮನ್ನು ರಕ್ಷಣೆ ಮಾಡುತ್ತಾನೆ. ಮಹಿಳೆಯರನ್ನು ಗೌರವಿಸುವುದರಿಂದ ಜೀವನದಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರಗ್ರಹ. ತುಲಾ ರಾಶಿಯವರು ಪಾರ್ವತಿ ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸಿದರೆ ಒಳಿತಾಗುತ್ತೆ ಎಂಬ ನಂಬಿಕೆಯಿದೆ. ಶುಕ್ರವು ಪಾರ್ವತಿಯ ಶಕ್ತಿಗೆ ಆಕರ್ಷಿತವಾಗಿದೆ ಏಕೆಂದರೆ ಇಡೀ ಪ್ರಪಂಚದ ಮೇಲೆ ಅವಳ ಪ್ರಭಾವವಿದೆ. ಹೀಗಾಗಿ ತುಲಾ ರಾಶಿಯವರು ಶಿವ-ಪಾರ್ವತಿ ಪೂಜೆಯನ್ನು ಮಾಡಿ. ಶಿವ ಮತ್ತು ಪಾರ್ವತಿಯೊಂದಿಗೆ ಗಣೇಶನನ್ನು ಪೂಜಿಸಿದರೆ ನೀವು ಹೆಚ್ಚು ಯಶಸ್ವಿಯಾಗುತ್ತೀರಿ ಎಂಬ ನಂಬಿಕೆಯಿದೆ.
ವೃಶ್ಚಿಕ ರಾಶಿ
ವೃಶ್ಚಿಕ ಮಂಗಳ ಗ್ರಹದ ಅಧಿಪತಿ. ಆದ್ದರಿಂದ ವೃಶ್ಚಿಕ ರಾಶಿಯವರಿಗೆ ಮಂಗಳವಾರ ಮತ್ತು ಬುಧವಾರದಂದು ಗಣೇಶ ಮತ್ತು ಹನುಮಂತ ದೇವರನ್ನು ಪೂಜಿಸಬೇಕು. ಗಣೇಶನಿಗೆ ಮೋದಕ ಮತ್ತು ಹನುಮಾನ್ ಲಡ್ಡು ನೀಡಿದರೆ ಒಳಿತಾಗಲಿದೆ. ಗಣೇಶ ಮತ್ತು ಹನುಮಂತನನ್ನು ಪೂಜೆ ಮಾಡೋದ್ರಿಂದ ಅಡೆತಡೆಗಳೆಲ್ಲಾ ಕಳೆದು ಜೀವನ ಒತ್ತಡ ಮುಕ್ತವಾಗಲಿದೆ.
ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ದುಃಖದಿಂದಲೇ ಧನು ರಾಶಿಯವರು ಜೀವನದಲ್ಲಿ ಗಮನಾರ್ಹ ಪಾಠಗಳನ್ನು ಕಲಿತಿದ್ದಾರೆ. ಜೀವನದಲ್ಲಿ ಯಶಸ್ಸು, ಖ್ಯಾತಿ, ಶ್ರೀಮಂತಿಕೆ, ಸಾಮಾಜಿಕ ಸ್ಥಾನಮಾನ, ಸಮೃದ್ಧಿ ಮತ್ತು ಜೀವನದಲ್ಲಿ ಪ್ರಭಾವಶಾಲಿ ಸ್ಥಾನಗಳನ್ನು ಗಳಿಸಲು ಧನು ರಾಶಿಯವರು ಭಗವಾನ್ ವಿಷ್ಣುವನ್ನು ಪೂಜಿಸಬೇಕು. ಯಶಸ್ಸು, ಖ್ಯಾತಿ, ಶ್ರೀಮಂತಿಕೆ, ಸಾಮಾಜಿಕ ಸ್ಥಾನಮಾನ, ವಸ್ತು ಸಮೃದ್ಧಿ ಮತ್ತು ಜೀವನದಲ್ಲಿ ಪ್ರಭಾವಶಾಲಿ ಸ್ಥಾನಗಳನ್ನು ಸಾಧಿಸಲು ಧನು ರಾಶಿಯ ಸ್ಥಳೀಯರು ಭಗವಾನ್ ವಿಷ್ಣುವನ್ನು ಪೂಜಿಸಬೇಕು.
ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ. ಸರಸ್ವತಿಯನ್ನು ಆರಾಧಿಸುವುದರಿಂದ ಮಕರ ರಾಶಿಯವರು ತಮ್ಮ ವೃತ್ತಿ ಅಥವಾ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಪುಸ್ತಕವನ್ನು ಯಾವುದೇ ಕಾರಣಕ್ಕೂ ಪಾದದ ಕೆಳಗೆ ಇಡಬೇಡಿ. ಸರಸ್ವತಿ ದೇವಿಯನ್ನು ಭಕ್ತಿಯಿಂದ ಪೂಜೆ ಮಾಡಿದರೆ ಖ್ಯಾತಿ ಪಡೆಯುತ್ತೀರಿ ಹಾಗೂ ಅದೃಷ್ಟ ಒಲಿದು ಬರುತ್ತದೆ.
ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ. ಕುಂಭ ರಾಶಿಯವರು ಶನಿ ದೇವರನ್ನು ಮತ್ತು ಗಣೇಶನನ್ನು ಪೂಜಿಸಬೇಕು. ಅದೃಷ್ಟ, ಆರೋಗ್ಯ, ಹಣ ಮತ್ತು ಯಶಸ್ಸು ಪಡೆಯಲು ಶನಿವಾರದ ದಿನ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳಿಗೆ ಆಹಾರ ನೀಡಬೇಕು. ಇನ್ನೂ ಜೀವನದಲ್ಲಿ ಯಶಸ್ಸು ಹಾಗೂ ಸಂತೋಷ ಪಡೆಯಲು ಅವಕಾಶವಂಚಿತರು ಮತ್ತು ನಿರಾಶ್ರಿತರಿಗೆ ಆಹಾರ, ಬಟ್ಟೆ ಮತ್ತು ಹೊದಿಕೆಗಳನ್ನು ದಾನ ಮಾಡಿ. ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಮತ್ತು ಶನಿ ಮಂತ್ರವನ್ನು ಪಠಿಸಿ.
ಮೀನ ರಾಶಿ
ಗುರು ಮೀನ ರಾಶಿಯ ಅಧಿಪತಿ. ಮೀನ ರಾಶಿಯವರು ದುರ್ಗಾ ಮತ್ತು ಸೀತಾ ಮಾತೆಯನ್ನು ಪೂಜಿಸೋದ್ರಿಂದ ಒಳಿತಾಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಉಪವಾಸ ಕೈಗೊಳ್ಳೋದ್ರಿಂದ ಎಲ್ಲಾ ಚಿಂತೆಗಳು ಮತ್ತು ನಕಾರಾತ್ಮಕ ಶಕ್ತಿಯು ದೂರವಾಗಲಿದೆ. ಜನಪ್ರಿಯತೆ, ಅದೃಷ್ಟ ಮತ್ತು ಸಮೃದ್ಧಿಗಾಗಿ, ಭಾನುವಾರದಂದು ಭಗವಾನ್ ರಾಮ ಮತ್ತು ಸೀತಾ ಮಾತೆಯನ್ನು ಒಟ್ಟಿಗೆ ಪೂಜಿಸಿ.



Click it and Unblock the Notifications












