Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಿತ್ಯಾನಂದನ ಕೈಲಾಸ ಎಲ್ಲಿದೆ, ಈ ಗುರು ಪೂರ್ಣಿಮೆಯಂದು ಜಗತ್ತಿಗೆ ತಿಳಿಯುವುದೇ?
ಬಿಡದಿಯಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಅನ್ನೋ ದೇಶದಲ್ಲಿ ವಿರಾಜಮಾನನಾಗಿದ್ದಾನೆ. ಆದರೆ ಈ ಕೈಲಾಸ ದೇಶ ಎಲ್ಲಿದೆ ಅನ್ನೋದು ಇದುವರೆಗೂ ಯಾರಿಗೂ ತಿಳಿದಿಲ್ಲ. ಕೊನೆಗೂ ಈ ಕೈಲಾಸ ದೇಶದ ವಿಳಾಸ ಬಯಲಾಗಲಿದೆ. ಜುಲೈ 21ಕ್ಕೆ ನಿತ್ಯಾನಂದ ಮಹತ್ವದ ಘೋಷಣೆ ಮಾಡಲಿದ್ದಾರೆ.

ನಿತ್ಯಾನಂದ ಹೆಸರು ಯಾರು ತಾನೆ ಕೇಳಿಲ್ಲ, ಸ್ವಯಂ ಘೋಷಿಸತ ದೇವಮಾನವ ನಿತ್ಯಾನಂದ ಬಿಡದಿಯಲ್ಲಿ ರಾಜಾರೋಷವಾಗಿ ಸಾಮ್ರಾಜ್ಯ ಕಟ್ಟಿಕೊಂಡಿದ್ದಾಗ ಲೈಂಗಿಕ ಹಗರಣ ಪ್ರಕರಣದಲ್ಲಿ ಸಿಕ್ಕಾಕಿಕೊಂಡು ಭಾರತ ಬಿಟ್ಟು ಮಾಯವಾಗಿದ್ದ, ಆದರೆ ಅದಾದ ಬಳಿಕ ನಿತ್ಯಾಂತ ಕೈಲಾಸ ಎಂಬ ದೇಶ ಕಟ್ಟಿಕೊಂಡಿದ್ದೇನೆ ಎಂದು ವೀಡಿಯೋ ಮೂಲಕ ಹೇಳಿದಾಗ ಯಾರೂ ನಂಬಿರಲಿಲ್ಲ, ನಂತರ ಆತ ಎಲ್ಲಿಯೋ ಕೈಲಾಸ ಎಂದು ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದಾನೆ ಎಂಬುವುದು ಹೊರ ಜಗತ್ತಿಗೆ ತಿಳಿಯಿತು. ಕೈಲಾಸಕ್ಕೆ ಸಂಬಂಧಿಸಿದ ಅನೇಕ ವೀಡಿಯೋಗಳ ಸ್ವತಃ ನಿತ್ಯಾನಂದರೇ ಹರಿಬಿಡುತ್ತಾ ಇರ್ತಾನೆ.
ಒಂದೊಂದು ವೀಡಿಯೋವೂ ಟ್ರೋಲ್ ಆಗ್ತಾ ಇರುತ್ತದೆ, ಅರೇ ಈ ಕೈಲಾಸ ಹೇಗಿರುತ್ತೆ ಒಮ್ಮೆ ಹೋಗಿ ನೋಡಿ ಬರೋಣ ಎನ್ನುವವರಿಗೆ ಅದರ ಅಡ್ರೆಸ್ ಗೊತ್ತಿರಲಿಲ್ಲ, ಅಲ್ಲಿಗೆ ಹೋಗಲು ಪಾಸ್ಪೋರ್ಟ್, ವೀಸಾ ಬೇಕೆಂಬುವುದೂ ಗೊತ್ತಿಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲಿಯೇ ಉತ್ತರ ಸಿಗಬಹುದೇನೋ, ಏಕೆಂದರೆ ಈ ಗುರು ಪೂರ್ಣಿಮಾ ದಿನದಂದು ನಿತ್ಯಾನಂತ ತಾನಿರುವ ಕೈಲಾಸದ ವಿಳಾಸ ತಿಳಿಸಲಿದ್ದಾನೆ.
ವಿಚಿತ್ರ ವೇಷ ಭೂಷಣಗಳ ಮೂಲಕ ಗಮನ ಸೆಳೆಯುತ್ತಿರುವ ಸ್ವಯಂ ಘೋಷಿತ ದೇವ ಮಾನವ
ನಿತ್ಯಾನಂದ , ಅವನ ಅನುಯಾಯಿಗಳ ವೇಷ ಭೂಷಣ ನೋಡಿದರೆ ಅಚ್ಚರಿಯಾಗುತ್ತದೆ. ನಮ್ಮ ಪೌರಾಣಿಕ ಕತೆಯಲ್ಲಿ ಬರುವ ವೇಷಗಳಂತೆ ವೇಷ ಧರಿಸುತ್ತಾರೆ, ಅಲ್ಲದೆ ನಿತ್ಯಾನಂತ ಪರಮಾತ್ಮ ಎಂದರೆ ಅದು ನಾನೇ ಎಂದು ನಂಬಿಸಲು ಹೊರಟಿದ್ದಾನೆ ಎಂಬುವುದು ನೋಡಿದಾಗಲೇ ತಿಳಿಯುತ್ತದೆ. ನಿತ್ಯಾನಂದಿನಿಗೆ ದೇಶ-ವಿದೇಶದಿಂದ ಅನುಯಾಯಿಗಳು ಇದ್ದಾರೆ, ಹಾಗಂತ ಅವರೇನು ಲೋಕಜ್ಞಾನ ಇಲ್ಲದವರು ಎಂದು ಹೇಳಲು ಸಾಧ್ಯವಿಲ್ಲ. ಚೆನ್ನಾಗ ಓದಿಕೊಂಡಿರುವ ದೊಡ್ಡ ಹುದ್ದೆಯಲ್ಲಿರುವವರು ಕೂಡ ಈತನ ಅನುಯಾಯಿಗಳಾಗಿರುವುದು ನೋಡುವಾಗ ಅಚ್ಚರಿಯಾಗುತ್ತೆ. ಅದ್ಹೇಗೆ ಈತನ ಮೋಡಿಗೆ ಸಿಲುಕಿದ್ದಾರೋ, ವಿಜ್ಞಾನಿಗಳಾಗಿ ಗುರುತಿಸಿಕೊಂಡವರೂ ಇವನ ಅನುಯಾಯಿಯಾಗಳಾಗಿದ್ದಾರೆ ಗೊತ್ತಾ? ಏಕೆ ಇಂಥ ದೇವ ಮಾನವರಿಗೆ ಜನ ಮರಳಾಗುತ್ತಾರೋ ಗೊತ್ತಿಲ್ಲ...
ಅತ್ಯಾಚಾರ ಪ್ರಕರಣದಲ್ಲಿದ್ದ ಸಿಲುಕಿದ್ದ ವ್ಯಕ್ತಿ ಸ್ಟ್ರೈಟ್ ಬಡ್ತಿ ಪಡೆದಿದದ್ದು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಅಧಿಪತಿಯಾಗಿ
2019ರಲ್ಲಿ ಈತನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು, ಅದರ ಮೊದಲು ಈತನ ಹಾಗೂ ನಟಿ ಖಾಸಗಿ ವೀಡಿಯೋಗಳೂ ಲೀಕ್ ಆಗಿತ್ತು. ಪೊಲೀಸರು ನಿತ್ಯಾನಂದನ ಹಿಡಿಯಲು ಹೋದಾಗ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ಈತ ಎಲ್ಲಿದ್ದಾನೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ವೀಡಿಯೋಗಳು ಹೊರ ಬರ್ತಾ ಇತ್ತು, ತನ್ನ ಪ್ರವಚನಗಳನ್ನು ವೀಡಿಯೋ ಮೂಲಕ ಹೊರ ಬಿಡುತ್ತಿದ್ದ, ಆತನ ಪ್ರವಚನ ಕೇಳಿದರೆ ನಮ್ಮೆಲ್ಲಾ ಒತ್ತಡ ಮರೆತು ನಕ್ಕು ಬಿಡುತ್ತೇವೆ ಅಷ್ಟೊಂದು ಕಾಮಿಡಿಯಾಗಿರುತ್ತದೆ, ಹಾಗಾಗಿ ಈತನ ಪ್ರತಿಯೊಂದು ವೀಡಿಯೋಗಳೂ ಗಮನ ಸೆಳೆಯುತ್ತದೆ. ಅಲ್ಲದೆ ವಿಶ್ವಸಂಸ್ಥೆಯ ಸಭೆಗೆ ಈತ ತನ್ನ ಪ್ರತಿ ನಿಧಿಗಳನ್ನು ಕಳುಹಿಸಿದ್ದಾನೆ ಎಂಬ ವೀಡಿಯೋ ಕೂಡ ಗಮನ ಸೆಳೆದಿತ್ತು.
ನಿಜವಾಗಲೂ 21ಕ್ಕೆ ಕೈಲಾಸದ ಅಡ್ರೆಸ್ ಸಿಗುವುದೇ?
ನಿತ್ಯಾನಂದ ಕೈಲಾಸದ ವಿಳಾಸ ಬಹುರಂಗ ಪಡಿಸುವುದಾಗಿಯೂ, ಅಪ್ಪಟ ಹಿಂದೂಗಳು ಇಲ್ಲಿಯ ಪ್ರಜೆಯಾಗಬಹುದೆಂದೂ, ಈ ಅವಕಾಶ ಒಂದು ಬಾರಿಯಷ್ಟೇ ಸಿಗಲಿದೆ ಎಂದೆಲ್ಲಾ ಹೇಳಿದ್ದಾನೆ. ನಾಸಾಗೂ ಗೊತ್ತಿಲ್ಲದ ಕೈಲಾಸ ನಿತ್ಯಾನಂದನ ಲೋಕ ಅನಾವರಣ ಗೊಳ್ಳಲಿದೆಯೇ?... ಕಾದು ನೋಡುವ



Click it and Unblock the Notifications
