Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ನಿತ್ಯಾನಂದನ ಕೈಲಾಸ ಎಲ್ಲಿದೆ, ಈ ಗುರು ಪೂರ್ಣಿಮೆಯಂದು ಜಗತ್ತಿಗೆ ತಿಳಿಯುವುದೇ?
ಬಿಡದಿಯಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಅನ್ನೋ ದೇಶದಲ್ಲಿ ವಿರಾಜಮಾನನಾಗಿದ್ದಾನೆ. ಆದರೆ ಈ ಕೈಲಾಸ ದೇಶ ಎಲ್ಲಿದೆ ಅನ್ನೋದು ಇದುವರೆಗೂ ಯಾರಿಗೂ ತಿಳಿದಿಲ್ಲ. ಕೊನೆಗೂ ಈ ಕೈಲಾಸ ದೇಶದ ವಿಳಾಸ ಬಯಲಾಗಲಿದೆ. ಜುಲೈ 21ಕ್ಕೆ ನಿತ್ಯಾನಂದ ಮಹತ್ವದ ಘೋಷಣೆ ಮಾಡಲಿದ್ದಾರೆ.

ನಿತ್ಯಾನಂದ ಹೆಸರು ಯಾರು ತಾನೆ ಕೇಳಿಲ್ಲ, ಸ್ವಯಂ ಘೋಷಿಸತ ದೇವಮಾನವ ನಿತ್ಯಾನಂದ ಬಿಡದಿಯಲ್ಲಿ ರಾಜಾರೋಷವಾಗಿ ಸಾಮ್ರಾಜ್ಯ ಕಟ್ಟಿಕೊಂಡಿದ್ದಾಗ ಲೈಂಗಿಕ ಹಗರಣ ಪ್ರಕರಣದಲ್ಲಿ ಸಿಕ್ಕಾಕಿಕೊಂಡು ಭಾರತ ಬಿಟ್ಟು ಮಾಯವಾಗಿದ್ದ, ಆದರೆ ಅದಾದ ಬಳಿಕ ನಿತ್ಯಾಂತ ಕೈಲಾಸ ಎಂಬ ದೇಶ ಕಟ್ಟಿಕೊಂಡಿದ್ದೇನೆ ಎಂದು ವೀಡಿಯೋ ಮೂಲಕ ಹೇಳಿದಾಗ ಯಾರೂ ನಂಬಿರಲಿಲ್ಲ, ನಂತರ ಆತ ಎಲ್ಲಿಯೋ ಕೈಲಾಸ ಎಂದು ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದಾನೆ ಎಂಬುವುದು ಹೊರ ಜಗತ್ತಿಗೆ ತಿಳಿಯಿತು. ಕೈಲಾಸಕ್ಕೆ ಸಂಬಂಧಿಸಿದ ಅನೇಕ ವೀಡಿಯೋಗಳ ಸ್ವತಃ ನಿತ್ಯಾನಂದರೇ ಹರಿಬಿಡುತ್ತಾ ಇರ್ತಾನೆ.
ಒಂದೊಂದು ವೀಡಿಯೋವೂ ಟ್ರೋಲ್ ಆಗ್ತಾ ಇರುತ್ತದೆ, ಅರೇ ಈ ಕೈಲಾಸ ಹೇಗಿರುತ್ತೆ ಒಮ್ಮೆ ಹೋಗಿ ನೋಡಿ ಬರೋಣ ಎನ್ನುವವರಿಗೆ ಅದರ ಅಡ್ರೆಸ್ ಗೊತ್ತಿರಲಿಲ್ಲ, ಅಲ್ಲಿಗೆ ಹೋಗಲು ಪಾಸ್ಪೋರ್ಟ್, ವೀಸಾ ಬೇಕೆಂಬುವುದೂ ಗೊತ್ತಿಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲಿಯೇ ಉತ್ತರ ಸಿಗಬಹುದೇನೋ, ಏಕೆಂದರೆ ಈ ಗುರು ಪೂರ್ಣಿಮಾ ದಿನದಂದು ನಿತ್ಯಾನಂತ ತಾನಿರುವ ಕೈಲಾಸದ ವಿಳಾಸ ತಿಳಿಸಲಿದ್ದಾನೆ.
ವಿಚಿತ್ರ ವೇಷ ಭೂಷಣಗಳ ಮೂಲಕ ಗಮನ ಸೆಳೆಯುತ್ತಿರುವ ಸ್ವಯಂ ಘೋಷಿತ ದೇವ ಮಾನವ
ನಿತ್ಯಾನಂದ , ಅವನ ಅನುಯಾಯಿಗಳ ವೇಷ ಭೂಷಣ ನೋಡಿದರೆ ಅಚ್ಚರಿಯಾಗುತ್ತದೆ. ನಮ್ಮ ಪೌರಾಣಿಕ ಕತೆಯಲ್ಲಿ ಬರುವ ವೇಷಗಳಂತೆ ವೇಷ ಧರಿಸುತ್ತಾರೆ, ಅಲ್ಲದೆ ನಿತ್ಯಾನಂತ ಪರಮಾತ್ಮ ಎಂದರೆ ಅದು ನಾನೇ ಎಂದು ನಂಬಿಸಲು ಹೊರಟಿದ್ದಾನೆ ಎಂಬುವುದು ನೋಡಿದಾಗಲೇ ತಿಳಿಯುತ್ತದೆ. ನಿತ್ಯಾನಂದಿನಿಗೆ ದೇಶ-ವಿದೇಶದಿಂದ ಅನುಯಾಯಿಗಳು ಇದ್ದಾರೆ, ಹಾಗಂತ ಅವರೇನು ಲೋಕಜ್ಞಾನ ಇಲ್ಲದವರು ಎಂದು ಹೇಳಲು ಸಾಧ್ಯವಿಲ್ಲ. ಚೆನ್ನಾಗ ಓದಿಕೊಂಡಿರುವ ದೊಡ್ಡ ಹುದ್ದೆಯಲ್ಲಿರುವವರು ಕೂಡ ಈತನ ಅನುಯಾಯಿಗಳಾಗಿರುವುದು ನೋಡುವಾಗ ಅಚ್ಚರಿಯಾಗುತ್ತೆ. ಅದ್ಹೇಗೆ ಈತನ ಮೋಡಿಗೆ ಸಿಲುಕಿದ್ದಾರೋ, ವಿಜ್ಞಾನಿಗಳಾಗಿ ಗುರುತಿಸಿಕೊಂಡವರೂ ಇವನ ಅನುಯಾಯಿಯಾಗಳಾಗಿದ್ದಾರೆ ಗೊತ್ತಾ? ಏಕೆ ಇಂಥ ದೇವ ಮಾನವರಿಗೆ ಜನ ಮರಳಾಗುತ್ತಾರೋ ಗೊತ್ತಿಲ್ಲ...
ಅತ್ಯಾಚಾರ ಪ್ರಕರಣದಲ್ಲಿದ್ದ ಸಿಲುಕಿದ್ದ ವ್ಯಕ್ತಿ ಸ್ಟ್ರೈಟ್ ಬಡ್ತಿ ಪಡೆದಿದದ್ದು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಅಧಿಪತಿಯಾಗಿ
2019ರಲ್ಲಿ ಈತನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು, ಅದರ ಮೊದಲು ಈತನ ಹಾಗೂ ನಟಿ ಖಾಸಗಿ ವೀಡಿಯೋಗಳೂ ಲೀಕ್ ಆಗಿತ್ತು. ಪೊಲೀಸರು ನಿತ್ಯಾನಂದನ ಹಿಡಿಯಲು ಹೋದಾಗ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ಈತ ಎಲ್ಲಿದ್ದಾನೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ವೀಡಿಯೋಗಳು ಹೊರ ಬರ್ತಾ ಇತ್ತು, ತನ್ನ ಪ್ರವಚನಗಳನ್ನು ವೀಡಿಯೋ ಮೂಲಕ ಹೊರ ಬಿಡುತ್ತಿದ್ದ, ಆತನ ಪ್ರವಚನ ಕೇಳಿದರೆ ನಮ್ಮೆಲ್ಲಾ ಒತ್ತಡ ಮರೆತು ನಕ್ಕು ಬಿಡುತ್ತೇವೆ ಅಷ್ಟೊಂದು ಕಾಮಿಡಿಯಾಗಿರುತ್ತದೆ, ಹಾಗಾಗಿ ಈತನ ಪ್ರತಿಯೊಂದು ವೀಡಿಯೋಗಳೂ ಗಮನ ಸೆಳೆಯುತ್ತದೆ. ಅಲ್ಲದೆ ವಿಶ್ವಸಂಸ್ಥೆಯ ಸಭೆಗೆ ಈತ ತನ್ನ ಪ್ರತಿ ನಿಧಿಗಳನ್ನು ಕಳುಹಿಸಿದ್ದಾನೆ ಎಂಬ ವೀಡಿಯೋ ಕೂಡ ಗಮನ ಸೆಳೆದಿತ್ತು.
ನಿಜವಾಗಲೂ 21ಕ್ಕೆ ಕೈಲಾಸದ ಅಡ್ರೆಸ್ ಸಿಗುವುದೇ?
ನಿತ್ಯಾನಂದ ಕೈಲಾಸದ ವಿಳಾಸ ಬಹುರಂಗ ಪಡಿಸುವುದಾಗಿಯೂ, ಅಪ್ಪಟ ಹಿಂದೂಗಳು ಇಲ್ಲಿಯ ಪ್ರಜೆಯಾಗಬಹುದೆಂದೂ, ಈ ಅವಕಾಶ ಒಂದು ಬಾರಿಯಷ್ಟೇ ಸಿಗಲಿದೆ ಎಂದೆಲ್ಲಾ ಹೇಳಿದ್ದಾನೆ. ನಾಸಾಗೂ ಗೊತ್ತಿಲ್ಲದ ಕೈಲಾಸ ನಿತ್ಯಾನಂದನ ಲೋಕ ಅನಾವರಣ ಗೊಳ್ಳಲಿದೆಯೇ?... ಕಾದು ನೋಡುವ



Click it and Unblock the Notifications











