Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು? ಈ ಮಾಹಿತಿ ನಿಮಗೆ ತಿಳಿದಿದ್ಯಾ?
ಶ್ರಾವಣ ಹುಣ್ಣಿಮೆಯ ಈ ದಿನವನ್ನು ರಕ್ಷಾ ಬಂಧನ ಅಥವಾ ರಾಖಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಸಹೋದರರಿಗೆ ತಂಗಿ ರಾಖಿ ಕಟ್ಟಿ ಅವರಿಂದ ರಕ್ಷಣೆ ಬೇಡುವ ಹಬ್ಬ ಎಂದು ಪರಿಗಣಿಸಲಾಗಿದೆ. ಹೀಗಾಗಿ ದೇಶದ ಎಲ್ಲಾ ಭಾಗದಲ್ಲೂ ಇದನ್ನು ಆಚರಿಸುತ್ತಾರೆ. ಹಾಗೆ ಸಹೋದರರು ತನ್ನ ತಂಗಿಯ ರಕ್ಷಣೆ ಮಾಡುವ ಮಾತು ನೀಡುತ್ತಾರೆ.
ಈ ಹಬ್ಬದಂದು ಸಂಭ್ರಮದ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನೆನಪಿಸುವ ಹಬ್ಬ ಎನ್ನಬಹುದು, ಹಾಗೆ ಬಣ್ಣ ಬಣ್ಣದ ದುಬಾರಿ ಬೆಲೆಯ ರಾಖಿಯನ್ನು ಕಟ್ಟು ಹಾಗೆ ದೂರದಲ್ಲಿರುವ ಸಹೋದರರಿಗೆ ಕಳುಹಿಸುವ ವಿಶೇಷ ರೀತಿ ಆಚರಣೆಯ ಹಬ್ಬ ಇದು. ಹಾಗೆ ದುಬಾರಿ ರಾಖಿಗಳು ಕೂಡ ಈಗ ಮಾರುಕಟ್ಟೆಯ್ಲಿ ಗಮನ ಸೆಳೆಯುತ್ತವೆ.

ಇನ್ನು ಈ ರಾಖಿ ಹಬ್ಬದ ಸಮಯದಲ್ಲಿ ಕೈಗೆ ಕಟ್ಟಿರುವ ರಾಖಿಯನ್ನು ಯಾವಾಗ ತೆಗೆಯಬೇಕು? ತೆಗೆಯುವ ಸೂಕ್ತ ಸಮಯ ಏನು?, ರಾಖಿಯನ್ನು ತೆಗೆದು ಏನು ಮಾಡಬೇಕು ಎಂಬುದನು ನಿಮಗೆ ಗೊತ್ತಾ? ಸಾಮಾನ್ಯವಾಗಿ ರಾಖಿಯನ್ನು ಕೈಗೆ ಕಟ್ಟಲು ಕೂಡ ಸಮಯ ಹಾಗೂ ಮುಹೂರ್ತ ನೋಡಲಾಗುತ್ತದೆ. ಆದ್ರೆ ಇತ್ತೀಚಿಗೆ ಎಲ್ಲಾ ಸಮಯದಲ್ಲು ರಾಖಿ ಕಟ್ಟುವುದು ನೋಡಬಹುದು.
ಆದ್ರೆ ರಾಖಿಯನ್ನು ಯಾವಾಗ ಕೈಯಿಂದ ತೆಗೆಯಬೇಕು? ತೆಗೆದ ಬಳಿಕ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಈ ಹಬ್ಬ ಆಚರಿಸುವುದು ನಿಮಗೆಲ್ಲಾ ತಿಳಿದಿದೆ. ಇದನ್ನು ನೂಲ ಹುಣ್ಣಿಗೆ ಹಬ್ಬ ಎಂದು ಕೂಡ ಕರೆಯುತ್ತಾರೆ. ರಾಮಾಯಣ ಕಾಲದಲ್ಲಿ ಈ ಹಬ್ಬ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ರಾಖಿ ಕಟ್ಟುವುದರಿಂದ ಅಣ್ಣ ತಂಗಿಯ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ಸಂಬಂಧ ಗಟ್ಟಿಯಾಗಲಿದೆ ಎಂದು ನಂಬಲಾಗಿದೆ.
ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು?
ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲವು ಅದೇ ದಿನ ಸಂಜೆ ತೆಗೆಯುತ್ತಾರೆ. ಮತ್ತೆ ಕೆಲವರು ತಿಂಗಳುಗಳ ಕಾಲ ಹಾಗೆ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ, ಮತ್ತೆ ಕೆಲವರು ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ನೀರಿನಲ್ಲಿ ನಿಮಜ್ಜನ ಮಾಡುವ ಸಮಯದಲ್ಲಿ ರಾಖಿಯನ್ನು ಬಿಚ್ಚಿ ನೀರಿಗೆ ಹಾಕುವುದು ನೋಡಬಹುದು. ಆದರೆ ಈ ರಾಖಿಯನ್ನು ನೀವು ಯಾವಾಗ ಬೇಕಾದರು ತೆಗೆಯಬಹುದು. ಇದಕ್ಕೆ ನಿರ್ಧಿಷ್ಟವಾಗಿ ಇಂತಹದ್ದೇ ದಿನ ಎಂದು ಹೇಳಲಾಗಿಲ್ಲ. ಆದ್ರೆ ಈ ರಾಖಿಯನ್ನು ಬರುವ ಅಮಾವಾಸ್ಯೆಯ ಒಳಗೆ ತೆಗೆಯುವುದು ಸೂಕ್ತ ಎಂದು ಹೇಳಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿ ಸೂಕ್ತ ಸಮಯ ಎಂದು ಹೇಳಲಾಗಿದೆ.
ಹಾಗೆ ಹಲವರು ಕೃಷ್ಣ ಜನ್ಮಾಷ್ಠಮಿಯ ಮಾರನೆ ದಿನ ಈ ರಾಖಿಗಳ ತೆಗೆದು ನೀರಿಗೆ ಹಾಕುತ್ತಾರೆ. ರಾಖಿ ಹಬ್ಬದ ಮುಗಿದು 8ನೇ ದಿನಕ್ಕೆ ಕಷ್ಣ ಜನ್ಮಾಷ್ಠಮಿ ಹಬ್ಬ ಬರಲಿದೆ. ಈ ಹಬ್ಬದ ಮಾರನೆ ದಿನ ರಾಖಿಗಳ ಬಿಚ್ಚಿ ಕೆರೆ, ನದಿಗೆ ಹಾಕುವುದು ನೋಡಬಹುದು. ಹಾಗೆ ಈ ರಾಖಿಯನ್ನು ಕೈಯಿಂದ ಬಿಚ್ಚಿ ಎಲ್ಲೆಂದರಲ್ಲಿ ಎಸೆಯಬಾರದು. ರಾಖಿಯನ್ನು ನೀರಿಗೆ ಹಾಕುವುದು ಸೂಕ್ತ, ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇಲ್ಲದಿದ್ದರೆ ಈ ರಾಖಿಯನ್ನು ಹಾಲು ಮರದ ಕೆಳಗೆ ಇಡಬಹುದು. ಇಲ್ಲವೆ ಯಾರು ತುಳಿಯದಂತಹ ಜಾಗದಲ್ಲಿ ಇಡಬಹುದು.
(ಹಕ್ಕುತ್ಯಾಗ: ಈ ಮೇಲಿನ ಲೇಖನದಲ್ಲಿ ಹೇಳಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ವಿಷಯವನ್ನು ಬೋಲ್ಡ್ ಸ್ಕೈ ಕನ್ನಡ ವೆಬ್ಸೈಟ್ ದೃಢೀಕರಿಸುವುದಿಲ್ಲ. ಹಾಗೆ ಇದನ್ನು ಅನುಸರಿಸುವುದು ಓದುಗರ ನಂಬಿಕೆ ಹಾಗೂ ಸ್ವಂತ ಜಬಾವ್ದಾರಿಯಾಗಿರಲಿದೆ. ಮಾಹಿತಿ ಒದಗಿಸುವುದು ಮಾತ್ರ ಈ ಲೇಖನದ ಉದ್ದೇಶವಾಗಿದೆ)



Click it and Unblock the Notifications