Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು? ಈ ಮಾಹಿತಿ ನಿಮಗೆ ತಿಳಿದಿದ್ಯಾ?
ಶ್ರಾವಣ ಹುಣ್ಣಿಮೆಯ ಈ ದಿನವನ್ನು ರಕ್ಷಾ ಬಂಧನ ಅಥವಾ ರಾಖಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಸಹೋದರರಿಗೆ ತಂಗಿ ರಾಖಿ ಕಟ್ಟಿ ಅವರಿಂದ ರಕ್ಷಣೆ ಬೇಡುವ ಹಬ್ಬ ಎಂದು ಪರಿಗಣಿಸಲಾಗಿದೆ. ಹೀಗಾಗಿ ದೇಶದ ಎಲ್ಲಾ ಭಾಗದಲ್ಲೂ ಇದನ್ನು ಆಚರಿಸುತ್ತಾರೆ. ಹಾಗೆ ಸಹೋದರರು ತನ್ನ ತಂಗಿಯ ರಕ್ಷಣೆ ಮಾಡುವ ಮಾತು ನೀಡುತ್ತಾರೆ.
ಈ ಹಬ್ಬದಂದು ಸಂಭ್ರಮದ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನೆನಪಿಸುವ ಹಬ್ಬ ಎನ್ನಬಹುದು, ಹಾಗೆ ಬಣ್ಣ ಬಣ್ಣದ ದುಬಾರಿ ಬೆಲೆಯ ರಾಖಿಯನ್ನು ಕಟ್ಟು ಹಾಗೆ ದೂರದಲ್ಲಿರುವ ಸಹೋದರರಿಗೆ ಕಳುಹಿಸುವ ವಿಶೇಷ ರೀತಿ ಆಚರಣೆಯ ಹಬ್ಬ ಇದು. ಹಾಗೆ ದುಬಾರಿ ರಾಖಿಗಳು ಕೂಡ ಈಗ ಮಾರುಕಟ್ಟೆಯ್ಲಿ ಗಮನ ಸೆಳೆಯುತ್ತವೆ.

ಇನ್ನು ಈ ರಾಖಿ ಹಬ್ಬದ ಸಮಯದಲ್ಲಿ ಕೈಗೆ ಕಟ್ಟಿರುವ ರಾಖಿಯನ್ನು ಯಾವಾಗ ತೆಗೆಯಬೇಕು? ತೆಗೆಯುವ ಸೂಕ್ತ ಸಮಯ ಏನು?, ರಾಖಿಯನ್ನು ತೆಗೆದು ಏನು ಮಾಡಬೇಕು ಎಂಬುದನು ನಿಮಗೆ ಗೊತ್ತಾ? ಸಾಮಾನ್ಯವಾಗಿ ರಾಖಿಯನ್ನು ಕೈಗೆ ಕಟ್ಟಲು ಕೂಡ ಸಮಯ ಹಾಗೂ ಮುಹೂರ್ತ ನೋಡಲಾಗುತ್ತದೆ. ಆದ್ರೆ ಇತ್ತೀಚಿಗೆ ಎಲ್ಲಾ ಸಮಯದಲ್ಲು ರಾಖಿ ಕಟ್ಟುವುದು ನೋಡಬಹುದು.
ಆದ್ರೆ ರಾಖಿಯನ್ನು ಯಾವಾಗ ಕೈಯಿಂದ ತೆಗೆಯಬೇಕು? ತೆಗೆದ ಬಳಿಕ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಈ ಹಬ್ಬ ಆಚರಿಸುವುದು ನಿಮಗೆಲ್ಲಾ ತಿಳಿದಿದೆ. ಇದನ್ನು ನೂಲ ಹುಣ್ಣಿಗೆ ಹಬ್ಬ ಎಂದು ಕೂಡ ಕರೆಯುತ್ತಾರೆ. ರಾಮಾಯಣ ಕಾಲದಲ್ಲಿ ಈ ಹಬ್ಬ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ರಾಖಿ ಕಟ್ಟುವುದರಿಂದ ಅಣ್ಣ ತಂಗಿಯ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ಸಂಬಂಧ ಗಟ್ಟಿಯಾಗಲಿದೆ ಎಂದು ನಂಬಲಾಗಿದೆ.
ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು?
ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲವು ಅದೇ ದಿನ ಸಂಜೆ ತೆಗೆಯುತ್ತಾರೆ. ಮತ್ತೆ ಕೆಲವರು ತಿಂಗಳುಗಳ ಕಾಲ ಹಾಗೆ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ, ಮತ್ತೆ ಕೆಲವರು ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ನೀರಿನಲ್ಲಿ ನಿಮಜ್ಜನ ಮಾಡುವ ಸಮಯದಲ್ಲಿ ರಾಖಿಯನ್ನು ಬಿಚ್ಚಿ ನೀರಿಗೆ ಹಾಕುವುದು ನೋಡಬಹುದು. ಆದರೆ ಈ ರಾಖಿಯನ್ನು ನೀವು ಯಾವಾಗ ಬೇಕಾದರು ತೆಗೆಯಬಹುದು. ಇದಕ್ಕೆ ನಿರ್ಧಿಷ್ಟವಾಗಿ ಇಂತಹದ್ದೇ ದಿನ ಎಂದು ಹೇಳಲಾಗಿಲ್ಲ. ಆದ್ರೆ ಈ ರಾಖಿಯನ್ನು ಬರುವ ಅಮಾವಾಸ್ಯೆಯ ಒಳಗೆ ತೆಗೆಯುವುದು ಸೂಕ್ತ ಎಂದು ಹೇಳಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿ ಸೂಕ್ತ ಸಮಯ ಎಂದು ಹೇಳಲಾಗಿದೆ.
ಹಾಗೆ ಹಲವರು ಕೃಷ್ಣ ಜನ್ಮಾಷ್ಠಮಿಯ ಮಾರನೆ ದಿನ ಈ ರಾಖಿಗಳ ತೆಗೆದು ನೀರಿಗೆ ಹಾಕುತ್ತಾರೆ. ರಾಖಿ ಹಬ್ಬದ ಮುಗಿದು 8ನೇ ದಿನಕ್ಕೆ ಕಷ್ಣ ಜನ್ಮಾಷ್ಠಮಿ ಹಬ್ಬ ಬರಲಿದೆ. ಈ ಹಬ್ಬದ ಮಾರನೆ ದಿನ ರಾಖಿಗಳ ಬಿಚ್ಚಿ ಕೆರೆ, ನದಿಗೆ ಹಾಕುವುದು ನೋಡಬಹುದು. ಹಾಗೆ ಈ ರಾಖಿಯನ್ನು ಕೈಯಿಂದ ಬಿಚ್ಚಿ ಎಲ್ಲೆಂದರಲ್ಲಿ ಎಸೆಯಬಾರದು. ರಾಖಿಯನ್ನು ನೀರಿಗೆ ಹಾಕುವುದು ಸೂಕ್ತ, ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇಲ್ಲದಿದ್ದರೆ ಈ ರಾಖಿಯನ್ನು ಹಾಲು ಮರದ ಕೆಳಗೆ ಇಡಬಹುದು. ಇಲ್ಲವೆ ಯಾರು ತುಳಿಯದಂತಹ ಜಾಗದಲ್ಲಿ ಇಡಬಹುದು.
(ಹಕ್ಕುತ್ಯಾಗ: ಈ ಮೇಲಿನ ಲೇಖನದಲ್ಲಿ ಹೇಳಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ವಿಷಯವನ್ನು ಬೋಲ್ಡ್ ಸ್ಕೈ ಕನ್ನಡ ವೆಬ್ಸೈಟ್ ದೃಢೀಕರಿಸುವುದಿಲ್ಲ. ಹಾಗೆ ಇದನ್ನು ಅನುಸರಿಸುವುದು ಓದುಗರ ನಂಬಿಕೆ ಹಾಗೂ ಸ್ವಂತ ಜಬಾವ್ದಾರಿಯಾಗಿರಲಿದೆ. ಮಾಹಿತಿ ಒದಗಿಸುವುದು ಮಾತ್ರ ಈ ಲೇಖನದ ಉದ್ದೇಶವಾಗಿದೆ)



Click it and Unblock the Notifications