Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು? ಈ ಮಾಹಿತಿ ನಿಮಗೆ ತಿಳಿದಿದ್ಯಾ?
ಶ್ರಾವಣ ಹುಣ್ಣಿಮೆಯ ಈ ದಿನವನ್ನು ರಕ್ಷಾ ಬಂಧನ ಅಥವಾ ರಾಖಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಸಹೋದರರಿಗೆ ತಂಗಿ ರಾಖಿ ಕಟ್ಟಿ ಅವರಿಂದ ರಕ್ಷಣೆ ಬೇಡುವ ಹಬ್ಬ ಎಂದು ಪರಿಗಣಿಸಲಾಗಿದೆ. ಹೀಗಾಗಿ ದೇಶದ ಎಲ್ಲಾ ಭಾಗದಲ್ಲೂ ಇದನ್ನು ಆಚರಿಸುತ್ತಾರೆ. ಹಾಗೆ ಸಹೋದರರು ತನ್ನ ತಂಗಿಯ ರಕ್ಷಣೆ ಮಾಡುವ ಮಾತು ನೀಡುತ್ತಾರೆ.
ಈ ಹಬ್ಬದಂದು ಸಂಭ್ರಮದ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನೆನಪಿಸುವ ಹಬ್ಬ ಎನ್ನಬಹುದು, ಹಾಗೆ ಬಣ್ಣ ಬಣ್ಣದ ದುಬಾರಿ ಬೆಲೆಯ ರಾಖಿಯನ್ನು ಕಟ್ಟು ಹಾಗೆ ದೂರದಲ್ಲಿರುವ ಸಹೋದರರಿಗೆ ಕಳುಹಿಸುವ ವಿಶೇಷ ರೀತಿ ಆಚರಣೆಯ ಹಬ್ಬ ಇದು. ಹಾಗೆ ದುಬಾರಿ ರಾಖಿಗಳು ಕೂಡ ಈಗ ಮಾರುಕಟ್ಟೆಯ್ಲಿ ಗಮನ ಸೆಳೆಯುತ್ತವೆ.

ಇನ್ನು ಈ ರಾಖಿ ಹಬ್ಬದ ಸಮಯದಲ್ಲಿ ಕೈಗೆ ಕಟ್ಟಿರುವ ರಾಖಿಯನ್ನು ಯಾವಾಗ ತೆಗೆಯಬೇಕು? ತೆಗೆಯುವ ಸೂಕ್ತ ಸಮಯ ಏನು?, ರಾಖಿಯನ್ನು ತೆಗೆದು ಏನು ಮಾಡಬೇಕು ಎಂಬುದನು ನಿಮಗೆ ಗೊತ್ತಾ? ಸಾಮಾನ್ಯವಾಗಿ ರಾಖಿಯನ್ನು ಕೈಗೆ ಕಟ್ಟಲು ಕೂಡ ಸಮಯ ಹಾಗೂ ಮುಹೂರ್ತ ನೋಡಲಾಗುತ್ತದೆ. ಆದ್ರೆ ಇತ್ತೀಚಿಗೆ ಎಲ್ಲಾ ಸಮಯದಲ್ಲು ರಾಖಿ ಕಟ್ಟುವುದು ನೋಡಬಹುದು.
ಆದ್ರೆ ರಾಖಿಯನ್ನು ಯಾವಾಗ ಕೈಯಿಂದ ತೆಗೆಯಬೇಕು? ತೆಗೆದ ಬಳಿಕ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಈ ಹಬ್ಬ ಆಚರಿಸುವುದು ನಿಮಗೆಲ್ಲಾ ತಿಳಿದಿದೆ. ಇದನ್ನು ನೂಲ ಹುಣ್ಣಿಗೆ ಹಬ್ಬ ಎಂದು ಕೂಡ ಕರೆಯುತ್ತಾರೆ. ರಾಮಾಯಣ ಕಾಲದಲ್ಲಿ ಈ ಹಬ್ಬ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ರಾಖಿ ಕಟ್ಟುವುದರಿಂದ ಅಣ್ಣ ತಂಗಿಯ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ಸಂಬಂಧ ಗಟ್ಟಿಯಾಗಲಿದೆ ಎಂದು ನಂಬಲಾಗಿದೆ.
ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು?
ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲವು ಅದೇ ದಿನ ಸಂಜೆ ತೆಗೆಯುತ್ತಾರೆ. ಮತ್ತೆ ಕೆಲವರು ತಿಂಗಳುಗಳ ಕಾಲ ಹಾಗೆ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ, ಮತ್ತೆ ಕೆಲವರು ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ನೀರಿನಲ್ಲಿ ನಿಮಜ್ಜನ ಮಾಡುವ ಸಮಯದಲ್ಲಿ ರಾಖಿಯನ್ನು ಬಿಚ್ಚಿ ನೀರಿಗೆ ಹಾಕುವುದು ನೋಡಬಹುದು. ಆದರೆ ಈ ರಾಖಿಯನ್ನು ನೀವು ಯಾವಾಗ ಬೇಕಾದರು ತೆಗೆಯಬಹುದು. ಇದಕ್ಕೆ ನಿರ್ಧಿಷ್ಟವಾಗಿ ಇಂತಹದ್ದೇ ದಿನ ಎಂದು ಹೇಳಲಾಗಿಲ್ಲ. ಆದ್ರೆ ಈ ರಾಖಿಯನ್ನು ಬರುವ ಅಮಾವಾಸ್ಯೆಯ ಒಳಗೆ ತೆಗೆಯುವುದು ಸೂಕ್ತ ಎಂದು ಹೇಳಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿ ಸೂಕ್ತ ಸಮಯ ಎಂದು ಹೇಳಲಾಗಿದೆ.
ಹಾಗೆ ಹಲವರು ಕೃಷ್ಣ ಜನ್ಮಾಷ್ಠಮಿಯ ಮಾರನೆ ದಿನ ಈ ರಾಖಿಗಳ ತೆಗೆದು ನೀರಿಗೆ ಹಾಕುತ್ತಾರೆ. ರಾಖಿ ಹಬ್ಬದ ಮುಗಿದು 8ನೇ ದಿನಕ್ಕೆ ಕಷ್ಣ ಜನ್ಮಾಷ್ಠಮಿ ಹಬ್ಬ ಬರಲಿದೆ. ಈ ಹಬ್ಬದ ಮಾರನೆ ದಿನ ರಾಖಿಗಳ ಬಿಚ್ಚಿ ಕೆರೆ, ನದಿಗೆ ಹಾಕುವುದು ನೋಡಬಹುದು. ಹಾಗೆ ಈ ರಾಖಿಯನ್ನು ಕೈಯಿಂದ ಬಿಚ್ಚಿ ಎಲ್ಲೆಂದರಲ್ಲಿ ಎಸೆಯಬಾರದು. ರಾಖಿಯನ್ನು ನೀರಿಗೆ ಹಾಕುವುದು ಸೂಕ್ತ, ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇಲ್ಲದಿದ್ದರೆ ಈ ರಾಖಿಯನ್ನು ಹಾಲು ಮರದ ಕೆಳಗೆ ಇಡಬಹುದು. ಇಲ್ಲವೆ ಯಾರು ತುಳಿಯದಂತಹ ಜಾಗದಲ್ಲಿ ಇಡಬಹುದು.
(ಹಕ್ಕುತ್ಯಾಗ: ಈ ಮೇಲಿನ ಲೇಖನದಲ್ಲಿ ಹೇಳಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ವಿಷಯವನ್ನು ಬೋಲ್ಡ್ ಸ್ಕೈ ಕನ್ನಡ ವೆಬ್ಸೈಟ್ ದೃಢೀಕರಿಸುವುದಿಲ್ಲ. ಹಾಗೆ ಇದನ್ನು ಅನುಸರಿಸುವುದು ಓದುಗರ ನಂಬಿಕೆ ಹಾಗೂ ಸ್ವಂತ ಜಬಾವ್ದಾರಿಯಾಗಿರಲಿದೆ. ಮಾಹಿತಿ ಒದಗಿಸುವುದು ಮಾತ್ರ ಈ ಲೇಖನದ ಉದ್ದೇಶವಾಗಿದೆ)



Click it and Unblock the Notifications











