Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ ವರ್ಷ ಆಷಾಢ ಅಮವಾಸ್ಯೆ ಆಗಸ್ಟ್ 4 ಅಥವಾ ಆಗಸ್ಟ್ ಐದಾಕ್ಕಾ? ಏಕೆ ಈ ಗೊಂದಲ
ಆಷಾಢ ಅಮವಾಸ್ಯೆ ಹಿಂದೂಗಳಿಗೆ ತುಂಬಾನೇ ಪ್ರಮುಖವಾದ ದಿನವಾಗಿದೆ. ಏಕೆಂದರೆ ಈ ದಿನ ಪಿತೃ ತರ್ಪಣಕ್ಕೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಈ ವರ್ಷ ಆಷಾಢ ಅಮವಾಸ್ಯೆ ಆಗಸ್ಟ್ 4 ಅಥವಾ ಆಗಸ್ಟ್ ಐದಾ ಎಂಬ ಗೊಂದಲ ಕೆಲವರಲ್ಲಿದೆ, ಯಾವ ದಿನ ಆಷಾಢ ಅಮವಾಸ್ಯೆ ಅಚರಿಸಲಾಗುತ್ತಿದೆ, ಈ ದಿನ ಏನು ಮಾಡಿದರೆ ಒಳ್ಳೆಯದು, ಪಿತೃ ತರ್ಪಣ ಮಾಡುವುದರಿಂದ ಧಾರ್ಮಿಕ ನಂಬಿಕೆ ಪ್ರಕಾರ ನಮ್ಮ ಬದುಕಿನಲ್ಲಿ ಆಗುವ ಬದಲಾವಣೆಯೇನು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ ಯಾವಾಗ?
ಆಷಾಢ ಅಮವಾಸ್ಯೆಯನ್ನು ಆಗಸ್ಟ್ 5ರಂದು ಆಚರಿಸಲಾಗುವುದು, ಆಷಾಢ ಅಮವಾಸ್ಯೆ ತಿಥಿ ಆಗಸ್ಟ್ 3ಕ್ಕೆ ಪ್ರಾರಂಭವಾಗಿ ಆಗಸ್ಟ್ 4 ಮಧ್ಯಾಹ್ನ 03:51ಕ್ಕೆ ಮುಕ್ತಾಯವಾಗಲಿದೆ, ಹಾಗಾಗಿ ಆಷಾಢ ಅಮವಾಸ್ಯೆ ಆಗಸ್ಟ್ 4ರಂದು, ಉತ್ತರ ಭಾರತದ ಕಡೆ ಆಗಸ್ಟ್ 4ಕ್ಕೆ ಇರುವುದು ಶ್ರಾವಣ ಅಮವಾಸ್ಯೆ ಅವರು ಜುಲೈ 5ಕ್ಕೆ ಆಷಾಢ ಅಮವಾಸ್ಯೆ ಆಚರಿಸಿದರು, ಆದರೆ ನಮ್ಮಲ್ಲಿ ಈಗ ನಡೆಯುತ್ತಿರುವುದು ಆಷಾಢ, ಶ್ರಾವಣ ಪ್ರಾರಂಭವಾಗಿಲ್ಲ, ಆದ್ದರಿಂದ ಗೊಂದಲ ಬೇಡ, ಈ ಬಾರಿ ಆಷಾಢ ಅಮವಾಸ್ಯೆಯನ್ನು ಆಗಸ್ಟ್ 4ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಏಕಿಷ್ಟು ಪ್ರಾಮುಖ್ಯತೆ
ಈ ದಿನ ತೀರಿ ಹೋದವರಿಗೆ ತರ್ಪಣ ನೀಡಿದರೆ ಪಿತೃದೋಷ ನಿವಾರಣೆಯಾಗುವುದು ಅಲ್ಲದೆ ಅವರಿಗೆ ಕೂಡ ಮೋಕ್ಷ ಸಿಗುವುದು ಎಂಬ ನಂಬಿಕೆ ಇದೆ. ಈ ಪಿತೃ ತರ್ಪಣ ಕೆಲವೊಂದು ವಿಶೇಷ ಸಂದರ್ಭದಲ್ಲಿ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಆಷಾಢ ಅಮವಾಸ್ಯೆಗೆ, ಪಿತೃ ಪಕ್ಷದಲ್ಲಿ ಹಾಗೂ ಕೆಲವರು ಮಹಾಲಯ ಅಮವಾಸ್ಯೆಗೆ ಪಿತೃ ತರ್ಪಣ ನೀಡುತ್ತಾರೆ.
ಈ ದಿನ ಉಪವಾಸವಿದ್ದು ತರ್ಪಣ ನೀಡಲಾಗುವುದು
ಈ ದಿನ ವ್ರತ ನಿಯಮಗಳನ್ನು ಕೈಗೊಂಡು ಉಪವಾಸವಿದ್ದು ನದಿ ದಂಡೆಯಲ್ಲಿ ತರ್ಪಣ ನೀಡಲಾಗುವುದು, ನಂತರ ಮನೆಗೆ ಬಂದು ಕೆಲವೊಂದು ವಿಶೇಷ ಅಡುಗೆ ಮಾಡಿ ಎಲೆ ಹಾಕಿ ಬಡಿಸುವ ಪದ್ಧತಿಯನ್ನು ಕೆಲವರು ಅನುಸರಿಸಿದರೆ ಇನ್ನು ಕೆಲವರು ಪಿಂಡದಾನಷ್ಟೇ ಮಾಡುತ್ತಾರೆ. ಒಟ್ಟಿನಲ್ಲಿ ಹೀಗೆಲ್ಲಾ ಮಾಡುವುದು ಮೋಕ್ಷ ಪಡೆಯಲು.
ಪಿತೃದೋಷ ನಿರ್ಲಕ್ಷ್ಯ ಮಾಡುವಂತಿಲ್ಲ
ಪಿತೃದೋಷಕ್ಕೆ ಒಳಗಾದರೆ ಆ ವ್ಯಕ್ತಿ ತುಂಬಾನೇ ಕಷ್ಟ ಅನುಭವಿಸುತ್ತಾನೆ, ಅವನಿಗೆ ಜೀವನದಲ್ಲಿ ಹೊಡೆತ ಮೇಲೆ ಹೊಡೆತ ಬೀಳುವುದು. ಮನೆಯಲ್ಲಿ ನೆಮ್ಮದಿ ಇರಲ್ಲ, ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲ್ಲ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ, ಪಿತೃತರ್ಪಣ ನಿರ್ಲಕ್ಷ್ಯ ಮಾಡುವುದರಿಂದ ಅವನ ಸಂಕಷ್ಟಗಳು ಹೆಚ್ಚಾಗುವುದು, ಹಾಗಾಗಿ ಪಿತೃದೋಷ ನಿರ್ಲಕ್ಷ್ಯ ಮಾಡಬಾರದು, ಪಿತೃದೋಷದಿಂದ ಮುಕ್ತರಾಗಲು ಇರುವ ಮಾರ್ಗವೆಂದರೆ ಪಿತೃ ತರ್ಪಣ.
ಹೀಗೆ ಮಾಡುವುದರಿಂದ ತೀರಿ ಹೋದವರ ಆತ್ಮ ಅಲೆದಾಡುವ ಪರಿಸ್ಥಿತಿ ಬರಲ್ಲ, ಇದರಿಂದ ಅವರು ಖುಷಿಯಾಗಿ ನಮಗೆ ಆಶೀರ್ವದಿಸುತ್ತಾರೆ, ಕುಟುಂಬದಲ್ಲಿ ಅವರ ಆಶೀರ್ವಾದದಿಮದ ಎಲ್ಲವೂ ಒಳಿತಾಗಲಿದೆ ಎಂಬುವುದೇ ಬಲವಾದ ನಂಬಿಕೆ.



Click it and Unblock the Notifications











