Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಎಡಮುರಿ ಹಾಗೂ ಬಲಮುರಿ ಗಣಪನ ಬಗ್ಗೆ ಗೊತ್ತಾ? ಗಣಪನ ಸೊಂಡಿಲು ಯಾವ ಕಡೆ ಇರಬೇಕು?
ನಾಳೆಯಿಂದ ಇಡೀ ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ನೋಡಬಹುದು. ದೇಶದ ಮೂಲೆ ಮೂಲೆಯಲ್ಲೂ ಗಣೇಶನ ಪ್ರತಿಷ್ಠಾಪನೆ ಮಾಡುವುದು ನೋಡಬಹುದು. ಹಾಗೆ ಇಡೀ ಊರಿಗೆ ಊರೆ ಈ ಹಬ್ಬವನ್ನು ಒಟ್ಟಿಗೆ ಆಚರಿಸಿ, ವಾರಕ್ಕೂ ಹೆಚ್ಚು ದಿನಗಳ ಕಾಲ ಪೂಜೆಗೈದು ನಿಮಜ್ಜನ ಮಾಡುವುದು ನೋಡಬಹುದು.
ಭಾರತದಲ್ಲಿ ಪ್ರಮುಖ ಸಾರ್ವಜನಿಕ ಹಬ್ಬವಾಗಿರುವ ಇದು ತಿಂಗಳ ಕಾಲ ನಡೆಯುವುದು ಕೂಡ ಇದೆ. ಹಾಗೆ ಗಣೇಶ ಹಬ್ಬವನ್ನು ಮನೆಯಲ್ಲೂ ಆಚರಿಸುತ್ತಾರೆ. ಮನೆಯಲ್ಲಿ ಚಿಕ್ಕ ಚಿಕ್ಕ ಗಣಪನ ಮೂರ್ತಿಗಳ ಇಟ್ಟು ಪೂಜಿಸಿದರೆ ಸಾರ್ವಜನಿಕವಾಗಿ ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡುತ್ತಾರೆ. ಇನ್ನು ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮ ಹೆಚ್ಚಾಗುತ್ತಲೇ ಇದೆ.

ಹಾಗೆ ಕೆಲವು ಕಡೆ ವಿಶೇಷ ರೀತಿಯ ಆಚರಣೆ ಸಹ ನೋಡಬಹುದು. ಕೆಲವೊಂದು ಭಾಗದಲ್ಲಿ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳ ನೋಡಬಹುದು. ಹಾಗೆ ಗಣಪನ ಮೂರ್ತಿಯಲ್ಲು ಬಗೆಗಳಿವೆ, ಬಲಮುರಿ ಗಣಪ ಹಾಗೆ ಎಡಮುರಿ ಗಣಪ ಎಂಬುದಾಗಿ ಕರೆಯಲಾಗುತ್ತದೆ. ಆದ್ರೆ ಇದರ ಹಿಂದಿರುವ ಸರಿಯಾದ ಕಾರಣವೇನು? ಯಾವ ಗಣಪನ ಮೂರ್ತಿಯನ್ನು ಪೂಜಿಸಬೇಕು? ಯಾವ ಮೂರ್ತಿ ಶ್ರೇಷ್ಠ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮನೆಯಲ್ಲಿ ಯಾವ ಗಣಪನ ಪೂಜಿಸಬೇಕು?
ಗಣೇಶನನ್ನು ಮನೆಯಲ್ಲಿ ಪೂಜಿಸುವಾಗ ಸಾಮಾನ್ಯವಾಗಿ ಎಡಮುರಿ ಗಣಪನ ಪೂಜಿಸಲಾಗುತ್ತದೆ. ಎಡಮುರಿ ಗಣೇಶ ವಾಮಮುಖಿ. ವಾಮಮುಖಿ ಎಂದರೆ ಉತ್ತರ ದಿಕ್ಕು. ಇಂದು ಬಹುತೇಕ ದೇವಾಲಯ, ಸಾರ್ವಜನಿಕ ಗಣೇಶೋತ್ಸವ ಸೇರಿ ಹಲವು ಕಡೆಗಳಲ್ಲಿ ನೋಡುವುದು ಈ ಎಡಮುರಿ ಗಣಪನನ್ನು. ಎಡಮುರಿ ಗಣಪನನ್ನು ವಾಮಮುಖಿ ಎಂದು ಕರೆಯಲಾಗುತ್ತದೆ. ವಾಮ ಎಂದರೆ ಉತ್ತರ ದಿಕ್ಕು, ಬಲಬದಿಗೆ ಸೂರ್ಯನಾಡಿ ಇದ್ದರೆ ಈ ಎಡಬದಿಗೆ ಚಂದ್ರನಾಡಿ ಇರುತ್ತದೆ.
ಈ ಉತ್ತರ ದಿಕ್ಕು ಶಾಂತವಾದ ದಿಕ್ಕು . ಹಾಗಾಗಿ ಎಡಮುರಿ ಗಣೇಶನ ಪೂಜೆ ಮಾಡುವುದು ಕಷ್ಟವಲ್ಲ. ಅಲ್ಲದೇ, ಈ ಗಣಪನ ಸಮಾಧಾನ ಮಾಡುವುದು ಸಹ ಬಹಳ ಸುಲಭ ಎಂಬ ನಂಬಿಕೆ ಇದೆ. ಹಾಗೆ ಉತ್ತರ ದಿಕ್ಕು ಆಧ್ಯಾತ್ಮಿಕವಾಗಿ ಶಾಂತಿ, ನೆಮ್ಮದಿ ತರುವಂತಹ ದಿಕ್ಕು ಎಂದು ಹೇಳಲಾಗುತ್ತದೆ. ಹಾಗೆ ಈ ಎಡಮುರಿ ಗಣಪನನ್ನು ಯಾರು ಬೇಕಾದರು ಪೂಜೆ ಮಾಡಬಹುದು. ಯಾವುದೇ ನಿಯಮಗಳ ಪಾಲಿಸದೆಯೂ ಪೂಜೆ ಮಾಡಬಹುದು. ಹಾಗೆ ಈ ಮೂರ್ತಿಯನ್ನು ಶಾಶ್ವಾತವಾಗಿ ಇಡಬಹುದು ಇಲ್ಲವೆ ಅದನ್ನು ನಿಮಜ್ಜನ ಮಾಡಬಹುದು.
ಹೀಗಾಗಿ ಮನೆಯಲ್ಲಿ, ಸಾರ್ವಜನಿಕ ಗಣೇಶೋತ್ಸವದ ಸಮಯದಲ್ಲಿ ಎಡಮುರಿ ಗಣಪನ ಹೆಚ್ಚಾಗಿ ಪೂಜಿಸಲಾಗುತ್ತದೆ.
ಬಲಮುರಿ ಗಣಪನ ಪೂಜೆ ಏಕಿಲ್ಲ?
ಮನೆಯಲ್ಲಿ ಬಲಮುರಿ ಗಣಪನನ್ನು ಸಾಮಾನ್ಯವಾಗಿ ಪೂಜಿಸುವುದಿಲ್ಲ. ಇದು ದಕ್ಷಿಣಾಭಿಮುಖವಾಗಿರುವ ಮೂರ್ತಿಯಾಗಿರುವ ಕಾರಣ ಅದು ಪೂಜೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಬಲಬದಿಗೆ ಸೂರ್ಯನಾಡಿ ಹಾಗೂ ಯಮಲೋಕದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು 'ಜಾಗೃತ' ಗಣಪತಿ ಎಂದು ಹೇಳುತ್ತಾರೆ. ಹೀಗಾಗಿಯೇ ದಕ್ಷಿಣಾಭಿಮುಖಿ ಗಣಪನ ಪೂಜೆ ಮಾಡುವುದಿಲ್ಲ. ಈ ಗಣಪನ ಪೂಜೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಜೊತೆಗೆ ಕಠಿಣ ನಿಯಮಗಳ ಪಾಲಿಸಬೇಕಿದೆ. ಇಲ್ಲದಿದ್ದರೆ ಗಣಪನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಹೀಗಾಗಿ ಕೆಲವೇ ಕೆಲವೂ ಮೂರ್ತಿಗಳು ಬಲಮುರಿ ಗಣಪ ಆಗಿರುತ್ತವೆ. ಮಿಕ್ಕಿದ್ದೆಲ್ಲವು ಎಡಮುರಿ ಗಣಪನಾಗಿರುತ್ತೆ. ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ದಾರಿಯಾಗಬಹುದು ಎಂದು ಹೇಳಲಾಗಿದೆ.



Click it and Unblock the Notifications