Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಮೂರ್ತಿ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭಕರ?
ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಗಣೇಶನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆಯೋ ಅವರ ಮನೆಯಲ್ಲಿ ಸಮೃದ್ಧಿ, ಯಶಸ್ಸು ಹಾಗೂ ಅದೃಷ್ಟ ತುಂಬಿರುತ್ತಂತೆ. ಅದೇ ರೀತಿ ಹೆಚ್ಚಿನವರ ಮನೆಯಲ್ಲಿ ಗಣೇಶನ ಮೂರ್ತಿ ಇದ್ದೇ ಇರುತ್ತದೆ. ಆದರೆ ಅವರು ಅದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಿರೋದಿಲ್ಲ. ಗಣೇಶನ ಮೂರ್ತಿಯನ್ನು ಇಡುವ ಸಂದರ್ಭದಲ್ಲಿ ಯಾವುದೇ ರೀತಿ ತಪ್ಪಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಆ ಮನೆಗೆ ಶೋಭೇ ತರೋದಿಲ್ವಂತೆ.
ನಿಮ್ಮ ಮನೆಯಲ್ಲಿ ಸಮೃದ್ಧಿ ಹಾಗೂ ಸಂಪತ್ತು ತುಂಬಿರಬೇಕೆಂದರೆ ಗಣೇಶನನ್ನು ಸರಿಯಾದ ದಿಕ್ಕಿನಲ್ಲಿ ಇಡೋದನ್ನು ಮರೀಬೇಡಿ. ಅಷ್ಟಕ್ಕು ಮನೆಯಲ್ಲಿ ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿ ಇರಬೇಕು? ಗಣೇಶನ ಯಾವ ರೀತಿಯ ಮೂರ್ತಿ ಇಟ್ಟರೆ ಮನೆಗೆ ಒಳ್ಳೆಯದಾಗುತ್ತೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

ದೃಷ್ಟಿ ಗಣೇಶನ ಮೂರ್ತಿಯನ್ನು ಇಡುವ ಸರಿಯಾದ ವಿಧಾನ ಯಾವುದು?
ಗಣೇಶನ ಮೂರ್ತಿಯನ್ನು ನಿಮ್ಮ ಮನೆ ಅಥವಾ ಆಫಿಸ್ ನ ಪ್ರವೇಶ ದ್ವಾರದ ವಿರುದ್ಧ ದಿಕ್ಕಿನಲ್ಲಿ ಇಡಬೇಕು. ಇನ್ನೂ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗಳನ್ನು ಜೋಡಿಯಾಗಿ ಇಡೋದಕ್ಕೆ ಹೋಗಬೇಡಿ. ಅದ್ರಲ್ಲೂ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ತುಂಬಾನೇ ಒಳ್ಳೆಯದು. ಇನ್ನೂ ಗಣೇಶನ ಮೂರ್ತಿಯನ್ನು ಖರೀದಿ ಮಾಡುವಾಗ ಅದರ ಸೊಂಡಿಲು ಎಡಕ್ಕೆ ಇರುವುದನ್ನು ನೋಡಿ ಖರೀದಿಸಿ.
ಬಿಳಿ ಗಣೇಶನ ಮೂರ್ತಿ
ಬಿಳಿ ಗಣೇಶನನ್ನು ಮನೆ ಅಥವಾ ಆಫೀಸ್ ನಲ್ಲಿ ಇಟ್ಟರೆ ತುಂಬಾನೇ ಒಳ್ಳೆಯದು. ಇದು ಹೆಚ್ಚಿನ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತಂತೆ. ಇನ್ನೂ ಮನೆಯಲ್ಲಿ ಇಡೋದಕ್ಕೆ ಬಿಳಿ ಗಣೇಶನ ಮೂರ್ತಿಯೇ ಆಗಬೇಕೆಂದೇನಿಲ್ಲ. ಅದರ ಬದಲಿಗೆ ಗಣೇಶನ ಫೋಟೋವನ್ನು ಕೂಡ ಇಡಬಹುದು.
ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿ ಇರಬೇಕು?
ಗಣೇಶನ ಮೂರ್ತಿ ಯಾವಾಗಲೂ ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಅದ್ರಲ್ಲೂ ಈಶಾನ್ಯ ಮೂಲೆಯೂ ಗಣೇಶನ ಮೂರ್ತಿಯನ್ನು ಇಡೋದಕ್ಕೆ ಅತ್ಯುತ್ತಮ ಸ್ಥಳವಾಗಿದೆ. ಒಂದು ವೇಳೆ ಈಶಾನ್ಯ ಮೂಲೆ ಲಭ್ಯವಿರದೇ ಹೋದರೆ ಪ್ರಾರ್ಥನೆಯನ್ನು ಸಲ್ಲಿಸುವಾಗ ನೀವು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡುವ ರೀತಿಯಲ್ಲಿ ವಿಗ್ರಹವನ್ನು ಇರಿಸಿ.
ದಕ್ಷಿಣ ದಿಕ್ಕಿಗೆ ಗಣೇಶನ ಮೂರ್ತಿಯನ್ನು ಇಡಬಾರದು ಯಾಕೆ ಗೊತ್ತಾ?
ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಯನ್ನು ದಕ್ಷಿಣ ದಿಕ್ಕಿಗೆ ಇಡಲೇಬಾರದು. ಅಷ್ಟೇ ಅಲ್ಲದೇ, ವಿಗ್ರಹವನ್ನು ಶೌಚಾಲಯ ಅಥವಾ ಸ್ನಾನ ಗೃಹದ ಗೋಡೆಗೆ ಜೋಡಿಸಲಾದ ಕೋಣೆಯಲ್ಲಿ ಇಡೋದಕ್ಕೆ ಹೋಗಲೇಬೇಡಿ.
ಮಲಗುವ ಕೋಣೆಯಲ್ಲಿ ಇಡಬಾರದು!
ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಯನ್ನು ಇಡಲೇಬೇಡಿ. ಒಂದು ವೇಳೆ ನೀವು ಇಡಲೇಬೇಕೆಂದಿದ್ದರೆ ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಹುದು. ವಾಸ್ತು ಪ್ರಕಾರ ನಿಮ್ಮ ಪಾದಗಳು ವಿಗ್ರಹಕ್ಕೆ ಮುಖ ಮಾಡುವಂತೆ ಇರಲೇಬಾರದು.
ಯಾವ ವಿಧದ ವಿಗ್ರಹಗಳು ಉತ್ತಮ?
ಮಾವು, ಆಲದ ಮರ, ಬೇವಿನ ಮರಗಳಿಂದ ಮಾಡಿದ ಗಣೇಶನ ವಿಗ್ರಹವು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಹಸುವಿನ ಸಗಣಿಯಿಂದ ಮಾಡಿದ ವಿಗ್ರಹವು ನಮ್ಮ ಎಲ್ಲಾ ರೀತಿಯ ದುಃಖವನ್ನು ಹೋಗಲಾಡಿಸುತ್ತೆ ಎಂದು ನಂಬಲಾಗಿದೆ. ಇನ್ನೂ ಸ್ಫಟಿಕದಿಂದ ಮಾಡಿದ ಪ್ರತಿಮೆಗಳು ಎಲ್ಲಾ ವಾಸ್ತು ದೋಷಗಳನ್ನು ತೆಗೆದುಹಾಕುತ್ತೆ. ಅಷ್ಟೇ ಅಲ್ಲದೇ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ನಿರೀಕ್ಷೇ ಮಾಡಬಹುದಂತೆ. ಇನ್ನೂ ಅರಶಿಣದಿಂದ ಮಾಡಿದ ವಿಗ್ರಹಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಗಣೇಶನ ಮೂರ್ತಿಯ ಬಣ್ಣ ಮುಖ್ಯವಾಗುತ್ತಾ?
ಸಾಮಾನ್ಯವಾಗಿ ಕೆಂಪು, ಗುಲಾಬಿ ಹಾಗೂ ಕಿತ್ತಳೆ ಬಣ್ಣವನ್ನು ನಾವು ಗಣೇಶನ ಮೂರ್ತಿಯಲ್ಲಿ ಗಮನಿಸಿರುತ್ತೇವೆ. ಆದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವುದು ಬಿಳಿ ಬಣ್ಣದ ಗಣೇಶನ ಮೂರ್ತಿ.
ಬಪ್ಪನ ಯಾವ ಭಂಗಿಯನ್ನು ಮನೆಯಲ್ಲಿಟ್ಟರೆ ಉತ್ತಮ?
ಕುಳಿತಿರುವ ಗಣೇಶನ ಮೂರ್ತಿ ಮನೆಯಲ್ಲಿ ಪೂಜಿಸೋದಕ್ಕೆ ಉತ್ತಮ. ಮನೆಯಲ್ಲಿ ಕೂತಿರುವ ಗಣೇಶನ ಮೂರ್ತಿಯನ್ನು ಪೂಜಿಸುವುದರಿಂದ ಪ್ರಶಾಂತತೆ ಹೆಚ್ಚಾಗುತ್ತಂತೆ. ಇನ್ನೂ ಒರಗಿರುವ ಗಣೇಶನು ಐಷಾರಾಮಿ, ಸೌಕರ್ಯ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತಾನೆ.
ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಈ ವಿಚಾರಗಳನ್ನು ಮರೀಬೇಡಿ
ಗಣೇಶನ ಮೂರ್ತಿಯ ಜೊತೆಗೆ ನಾಲ್ಕು ಕೈ, ಒಂದು ಕೈಯಲ್ಲಿ ಮೊದಕ ಹಾಗೂ ಕಾಲ ಹತ್ತಿರ ಇಲಿ ಇದೆಯಾ ಎಂದು ಗಮನಿಸಿ. ಇದೆಲ್ಲಾ ಇದ್ದರೆ ಮಾತ್ರ ಗಣೇಶನ ಮೂರ್ತಿಯನ್ನು ಮನೆಗೆ ತನ್ನಿ. ಈ ರೀತಿಯ ಗಣೇಶನ ಮೂರ್ತಿ ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚು ಮಾಡುತ್ತಂತೆ.
ವಾಸ್ತು ತಜ್ಞರ ಪ್ರಕಾರ ಗಣೇಶನ ಹತ್ತಿರ ಇರುವ ಇಲಿಯು ಅಹಂಕಾರವನ್ನು ಪ್ರತಿನಿಧಿಸುತ್ತಂತೆ. ಗಣೇಶನು ಆ ಅಹಂಕಾರವನ್ನು ನಿಯಂತ್ರಿಸುತ್ತಾನಂತೆ. ಇನ್ನೂ ಮೋದಕವು ಸಿಹಿಯಾಗಿದ್ದು ಅದು ನಮ್ಮ ಹಸಿವನ್ನು ನೀಗಿಸುತ್ತಂತೆ. ಮೋದಕವು ಗಣೇಶನಿಗೆ ತುಂಬಾನೇ ಇಷ್ಟವಾಗಿದ್ದು, ಪೂಜೆಯ ನಂತರ ಅದನ್ನು ಭಕ್ತರಿಗೆ ಹಂಚಲಾಗುತ್ತದೆ.
ಒಂದು ವೇಳೆ ಮನೆಯಲ್ಲಿ ಗಣೇಶ ಮೂರ್ತಿಯನ್ನು ಇಡೋದಾದರೆ ಈ ಎಲ್ಲಾ ವಿಚಾರಗಳನ್ನು ಯಾವುದೇ ಕಾರಣಕ್ಕೂ ಮರೆಯಲೇಬೇಡಿ.



Click it and Unblock the Notifications

