Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೋದಿಯ ಗಡ್ಡ ಎಳೆದು ಮುದ್ದು ಮಾಡುತ್ತಿರುವ ಆ ಪುಟ್ಟ ಬಾಲೆ: ಆ ಮಗುವಿನ ಕತೆ ಕೇಳಿದರೆ ಕರುಳು ಹಿಂಡುತ್ತೆ
ಮೋದಿಯ ಗಡ್ಡ ಹಿಡಿದು ಎಳೆದು, ಮೋದಿಯ ಕನ್ನಡಕ ಮುಟ್ಟುತ್ತಾ, ಮುದ್ದಾಡುತ್ತಿರುವ ಮೂರು ವರ್ಷದ ಆ ಮಗಳ ವೀಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡುತ್ತಿದ್ದರೆ ಎಂಥವರ ಮುಖದಲ್ಲಿಯೂ ನಗು ಮೂಡುವುದು.
ಅದಕ್ಕೆ ಅಲ್ಲವೇ ಹೇಳುವುದು ಮಕ್ಕಳು ದೇವರ ಸಮಾನವೆಂದು, ಆ ಮಗುವಿಗೆ ತನ್ನ ಎದುರಿಗಿರುವುದು ಪ್ರಧಾನಿಯೆಂದು ಗೊತ್ತಿಲ್ಲ, ಆದರೆ ಆ ವ್ಯಕ್ತಿಯನ್ನು ನೋಡಿದಾಗ ಮಗುವಿಗೆ ರಕ್ಷಕಂತೆ ಅಥವಾ ತುಂಬಾ ಆಪ್ತನಂತೆ ಅನಿಸಿರಬಹುದು, ಇಲ್ಲದಿದ್ದರೆ ಹತ್ರಕ್ಕೂ ಬರಲ್ಲ, ಆದರೆ ಈ ಮಗು ಮೋದಿಯನ್ನು ತುಂಬಾ ಚೆನ್ನಾಗಿ ಗೊತ್ತಿರುವಂತೆ ಮೋದಿಯನ್ನು ಅಪ್ಪಿಕೊಂಡು ಬಿಳಿಗಡ್ಡ ಎಳೆದು ಮೋದಿಯನ್ನು ಮುದ್ದು ಮಾಡುತ್ತಿರುವ ಕ್ಯೂಟ್ ವೀಡಿಯೋ ವೈರಲ್ ಆಗುತ್ತಿದೆ.

ಮೋದಿ ವಯನಾಡ್ ದುರಂತ ನಡೆದ ಸ್ಥಳ ವೀಕ್ಷಣೆಗೆ ಬಂದಾಗ ಅಲ್ಲಿಯ ಸಂತ್ರಸ್ಥರನ್ನು ಭೇಟಿಯಾಗಿದ್ದರು, ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಜನರನ್ನು ಭೇಟಿಯಾದರು, ಆವಾಗ ತನ್ನ ತಾಯಿ ಇದ್ದ ಮೂರು ವರ್ಷದ ಈ ಹೆಣ್ಮಗುವನ್ನು ಮೋದಿ ಮಾತನಾಡಿಸಿದಾಗ ಆ ಮಗು ಖುಷಿಯಿಂದ ಮೋದಿಯನ್ನು ಮುದ್ದು ಮಾಡುತ್ತಿರುವ ವೀಡಿಯೋ ಇದಾಗಿದೆ. ಆ ಮಗುವಿನ ನಗು, ತುಂಟಾಟ ನೋಡಿ ಮೋದಿಯವರು ಮಾತ್ರವಲ್ಲ ಇಡೀ ರಾಷ್ಟ್ರದ ಜನತೆ ಮನಸೋತಿದೆ, ಅಯ್ಯೋ ಮುದ್ದು ನೀನು ಹೀಗೆ ನಗು ನಗುತ್ತಾ ಇರು ಎಂದು ಹಾರೈಸುತ್ತಿದ್ದಾರೆ.
ಆ ಮಗುವಿನ ಬದುಕಿನಲ್ಲಿ ನಡೆದಿರುವ ದುರಂತ ಕೇಳಿದರೆ ಕರುಳು ಹಿಂಡುತ್ತೆ
ವಯನಾಡ್ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಒಂಟಿಯಾಗಿರುವ ನೂರಾರು ಕಣ್ನೀರಿನ ಕತೆಗಳಿವೆ, ಅದರಲ್ಲೊಂದು ಈ ಮಗುವಿನ ಕತೆ. ಈ ವಯನಾಡ್ ದುರಂತದ ಬಗ್ಗೆ ಮಾತನಾಡುತ್ತಾ ಆ ಮಗುವಿನ ತಾಯಿ ಹೇಳುತ್ತಾರೆ, ಈ ದುರಂತದಲ್ಲಿ ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು, ಗಂಡನನ್ನು ಕಳೆದುಕೊಂಡೆ, ನಮ್ಮ ಕುಟುಂಬದ ಎಲ್ಲರೂ ಹೋದರು, ಈಗ ಉಳಿದಿರುವುದು ನಾನು, ನನ್ನ ಈ ಮೂರು ವರ್ಷದ ಮಗಳು ಮಾತ್ರ... ಆ ಪುಟ್ಟ ಕಂದಮ್ಮ ತನ್ನ ಅಣ್ಣಂದಿರು, ಅಪ್ಪ-ಅಜ್ಜ ಎಲ್ಲರನ್ನೂ ಒಂದೇ ದಿನದಲ್ಲಿ ಕಳೆದುಕೊಂಡಿದೆ.
ಕೇರಳದಲ್ಲಿ ಬದಲಾದ ಮೋದಿ ಚಿತ್ರಣ
ವಯನಾಡ್ ದುರಂತದ ಬಳಿಕ ಪ್ರಧಾನಿ ಮೋದಿಯವರನ್ನು ಕೇರಳದ ಜನತೆ ಪ್ರೀತಿಸಲಾರಂಭಿಸಿದ್ದಾರೆ, ತಮಗೊಂದು ಆಪತ್ತು ಬಂದಾಗ ತಕ್ಷಣವೇ ಸೇನೆ ಕಳುಹಿಸಿ ನಮ್ಮ ಕಷ್ಟಕ್ಕೆ ನೆರವಾದ ಕೇಂದ್ರ ಸರ್ಕಾರದ ಸ್ಪಂದನೆ ಜನರ ಮನ ಮುಟ್ಟಿದೆ, ದುರಂತ ನಡೆದ ಸ್ಥಳವನ್ನು ಪ್ರಧಾನಿಯವರು ಬಂದು ನೋಡಬೇಕು ಆವಾಗ ಇಲ್ಲಿಯ ಭೀಕರತೆ ಸ್ಪಷ್ಟ ಚಿತ್ರಣ ಅವರಿಗೆ ಸಿಗುತ್ತದೆ ಎಂದು ಜನ ಅಂದುಕೊಂಡಿದ್ದರು.
ಅದರಂತೆ ವಯನಾಡ್ಗೆ ಮೋದಿ ಭೇಟಿ ನೀಡಿ ದುರಂತ ನಡೆದ ಸ್ಥಳದಲ್ಲಿ ಓಡಾಡಿದರು, ಅಲ್ಲಿಯ ಸಂತ್ರಸ್ಥರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ನಿಮಗೆ ಏನು ಅವಶ್ಯಕತೆ ಇದೆ ನನಗೆ ತಿಳಿಸಿ, ನಾವು ನಿಮ್ಮ ಸಹಾಯಕ್ಕೆ ಸದಾ ಸಿದ್ಧ ಎಂದು ಹೇಳುವ ಮೂಲಕ ಅಲ್ಲಿದದ್ದವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಕೇರಳದಲ್ಲಿ ಬಿಜೆಪಿ ಬೆಂಬಲಿಗರು ತುಂಬಾನೇ ಕಡಿಮೆ, ಕಾಂಗ್ರೆಸ್ನ ಬೆಂಬಲಿಗರು ಹೆಚ್ಚಿದ್ದಾರೆ, ಹೀಗಾಗಿ ಮೋದಿಯನ್ನು ಸದಾ ಟೀಕಿಸುತ್ತಿದ್ದರು, ಅದರೆ ಈ ಘಟನೆಯ ಬಳಿಕ ಅಲ್ಲಿಯ ಜನತೆ ಕೇಂದ್ರ ಸರ್ಕಾರ ಹಾಗೂ ಸೇನೆಯ ಕಾರ್ಯವನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದಾರೆ.
ಮೋದಿ ಭೇಟಿ ಬಳಿಕ ಅಲ್ಲಿಯ ಮಾಧ್ಯಮದವರು ವಯನಾಡ್ನ ಜನತೆ ಬಳಿ ನಿಮಗೆ ಮೋದಿಯವರ ಮೇಲೆ ನಂಬಿಕೆ ಇದೆಯೇ ಎಂದು ಕೇಳಿದಾಗ ಅವರು ಹೆಳುತ್ತಾರೆ, ಹೌದು ಸೇ. 100ರಷ್ಟು ನಂಬುತ್ತೇವೆ. ಕೇಂದ್ರದಿಂದ ಅನುದಾನ ಬಂದರೆ ಅದು ಯಾರ ಪಾಲಾಗದೆ ಸೀದಾ ನಮಗೆ ತಲುಪುತ್ತದೆ, ಅದೇ ಕಳೆದ ಬಾರಿ ಸುನಮಿ ದುರಂತದಲ್ಲಿ ಸಂತ್ರಸ್ಥರಿಗೆ ಬಂದ ಹಣವನ್ನು ಹೇಗೆ ಸ್ವಂತ ಲಾಭಕ್ಕೆ ಬಳಸಿಕೊಂಡರು ಎಂಬುವುದನ್ನು ನೋಡಿದ್ದೇವೆ, ಅದೇ ಪ್ರಧಾನಿ ಮೋದಿಯವರ ಸಹಾಯ ಸೀದಾ ಫಲಾನುಭವಿಗಳಿಗೇ ತಲುಪಲಿದೆ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ.



Click it and Unblock the Notifications











