Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವಯನಾಡ್ ದುರಂತದ 6 ದಿನಗಳ ಬಳಿಕ ಯಜಮಾನಿ ಸಿಕ್ಕಾಗ ನಾಯಿಗಾದ ಖುಷಿಯ ವೀಡಿಯೋ ವೈರಲ್
ವಯನಾಡಿನ ದುರಂತದಲ್ಲಿ ಕಣ್ಣೀರ ಕತೆಗಳು ಮಾತ್ರವಲ್ಲ ಕೆಲ ಹೃದಯಸ್ಪರ್ಶಿ ಕತೆಗಳೂ ಗಮನ ಸೆಳೆಯುತ್ತಿದೆ, ಮಾನವೀಯತೆ, ಪ್ರೀತಿ, ಮೌಲ್ಯಗಳು ಕೂಡ ಎದ್ದು ಕಾಣುತ್ತಿದೆ. ಪ್ರಕೃತಿಯ ರೌದ್ರಾವಾತಾರಕ್ಕೆ ನೂರಾರು ಜನ ಬದುಕು ಕಳೆದುಕೊಂಡರೆ ಸಾವಿರಾರು ಜನ ಬದುಕಿನಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಬದುಕುಳಿದವರಲ್ಲಿ ನಮ್ಮವರು ಯಾರಾದರು ಇದ್ದಾರೆಯೇ ಎಂದು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ನಮ್ಮವರು ಯಾರಾದರು ಕಂಡರೆ ಅವರಿಗೆ ಅದುವೇ ಕೋಟಿ ಸಂತೋಷ. ಮನುಷ್ಯದ ಸಂಕಟ ಒಂದು ರೀತಿಯಾದರೆ ಮೂಕ ಪ್ರಾಣಿಗಳ ವೇದನೆ ಮತ್ತೊಂದು ರೀತಿ, ತಮ್ಮವರನ್ನು ಕಾಣದೆ, ಊಟವೂ ಮಾಡದೆ ಅವು ಆ ಪ್ರದೇಶದಲ್ಲಿ ಯಾರಿಗೋ ಹುಡುಕಾಡುತ್ತಿರುವುದನ್ನು ನೋಡುವಾಗ ಅಯ್ಯೋ ಅನಿಸುತ್ತಿದೆ. ಅದರಲ್ಲೊಂದು ವೀಡಿಯೋ ತುಂಬಾನೆ ವೈರಲ್ ಆಗುತ್ತಿದೆ, 6 ದಿನಗಳ ಬಳಿಕ ತನ್ನ ಯಜಮಾನಿ ಸಿಕ್ಕಾಗ ಆ ನಾಯಿ ಸಂತೋಷ ಪಟ್ಟ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ತನ್ನ ಯಜಮಾನರನ್ನು ಕಾಣದೆ ಆಹಾರವು ಸೇವಿಸದೆ ದುಃಖಿಸುತ್ತಿತ್ತು ಈ ನಾಯಿ
ಘಟನೆ ನಡೆದು 6 ದಿನಗಳಲ್ಲಿ ಆ ನಾಯಿ ಅ ಜಾಗ ಬಿಟ್ಟು ಕದಲಿರಲಿಲ್ಲ. ಅತ್ತಿತ್ತ ಓಡಾಡುತ್ತಾ ಯಾರನ್ನೋ ಹುಡುಕುತ್ತಿತ್ತು. ಅಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಆಹಾರ ನೀಡಿದರು ದುಃಖದಿಂದ ಆಹಾರದತ್ತ ಕೂಡ ಗಮನ ಹರಿಸುತ್ತಿರಲಿಲ್ಲ.
ಮನೆ ಕುಸಿದು ಬಿದ್ದಲ್ಲಿ ಬಂದು ತಮ್ಮ ವಸ್ತುಗಳಿಗಾಗಿ ಹುಡುಕುತ್ತಿರುವ ಜನ
ತಮ್ಮ ಹಣ, ಒಡವೆ ಎಲ್ಲವೂ ಮಣ್ಣು ಪಾಲಾಗಿದೆ, ನಾಳೆಯ ಬದುಕಿನ ಬಗ್ಗೆ ಒಂದೂ ತೋಚುತ್ತಿಲ್ಲ, ಹೀಗಿರುವಾಗ ತಮ್ಮ ಮನೆಯಲ್ಲಿದ್ದ ಚಿನ್ನ, ಹಣವಾದರೂ ಸಿಕ್ಕರೆ ಒಳ್ಳೆಯದಿತ್ತು ಎಂದು ಜನ ಯೋಚಿಸುತ್ತಿದ್ದಾಗ ತಮ್ಮ-ತಮ್ಮ ಮನೆಗಳ ಬಳಿ ಹಫಗಿ ಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಮನೆ ಬಳಿಗೆ ಬಂದ ಯಜಮಾನಿಯನ್ನು ಕಂಡು ಓಡಿ ಬಂದ ನಾಯಿ ಖುಷಿಯನ್ನು ವ್ಯಕ್ತಪಡಿಸುತ್ತಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ.
ನಾಯಿ ವರ್ಷಗಳು ಕಳೆದರೂ ತನ್ನ ಯಜಮಾನರನ್ನು ಮರೆಯಲ್ಲ
ಒಂದು ನಾಯಿಯನ್ನು ಸಾಕಿ ನಾವು ಎಲ್ಲಿಗಾದರು ಹೋಗಿ ವರ್ಷಗಳ ಬಳಿಕ ಬಂದರು ನಮ್ಮನ್ನು ಗುರುತು ಹಿಡಿಯುತ್ತದೆ, ಹೀಗಾಗಿ ನಾಯಿ ಮನುಷ್ಯನ ಸಂಬಂಧ ವಿಶೇಷವಾದದ್ದು. ತನ್ನ ಯಜಮಾನನ ರಕ್ಷಣೆ ಮಾಡುವುದರ ಜೊತೆಗೆ ಅವರನ್ನು ಮುದ್ದು ಮಾಡಿ ಅವರ ಒಂಟಿತನ ಹೋಗಲಾಡಿಸುವ ಗುಣ ನಾಯಿಯಲ್ಲಿದೆ.
ಹಾಗಾಗಿಯೇ ಹೇಳುವುದು ನಾಯಿ ನಿಯತ್ತಿನ ಪ್ರಾಣಿಯೆಂದು....



Click it and Unblock the Notifications
