Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯನಾಡ್ ದುರಂತದ 6 ದಿನಗಳ ಬಳಿಕ ಯಜಮಾನಿ ಸಿಕ್ಕಾಗ ನಾಯಿಗಾದ ಖುಷಿಯ ವೀಡಿಯೋ ವೈರಲ್
ವಯನಾಡಿನ ದುರಂತದಲ್ಲಿ ಕಣ್ಣೀರ ಕತೆಗಳು ಮಾತ್ರವಲ್ಲ ಕೆಲ ಹೃದಯಸ್ಪರ್ಶಿ ಕತೆಗಳೂ ಗಮನ ಸೆಳೆಯುತ್ತಿದೆ, ಮಾನವೀಯತೆ, ಪ್ರೀತಿ, ಮೌಲ್ಯಗಳು ಕೂಡ ಎದ್ದು ಕಾಣುತ್ತಿದೆ. ಪ್ರಕೃತಿಯ ರೌದ್ರಾವಾತಾರಕ್ಕೆ ನೂರಾರು ಜನ ಬದುಕು ಕಳೆದುಕೊಂಡರೆ ಸಾವಿರಾರು ಜನ ಬದುಕಿನಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಬದುಕುಳಿದವರಲ್ಲಿ ನಮ್ಮವರು ಯಾರಾದರು ಇದ್ದಾರೆಯೇ ಎಂದು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ನಮ್ಮವರು ಯಾರಾದರು ಕಂಡರೆ ಅವರಿಗೆ ಅದುವೇ ಕೋಟಿ ಸಂತೋಷ. ಮನುಷ್ಯದ ಸಂಕಟ ಒಂದು ರೀತಿಯಾದರೆ ಮೂಕ ಪ್ರಾಣಿಗಳ ವೇದನೆ ಮತ್ತೊಂದು ರೀತಿ, ತಮ್ಮವರನ್ನು ಕಾಣದೆ, ಊಟವೂ ಮಾಡದೆ ಅವು ಆ ಪ್ರದೇಶದಲ್ಲಿ ಯಾರಿಗೋ ಹುಡುಕಾಡುತ್ತಿರುವುದನ್ನು ನೋಡುವಾಗ ಅಯ್ಯೋ ಅನಿಸುತ್ತಿದೆ. ಅದರಲ್ಲೊಂದು ವೀಡಿಯೋ ತುಂಬಾನೆ ವೈರಲ್ ಆಗುತ್ತಿದೆ, 6 ದಿನಗಳ ಬಳಿಕ ತನ್ನ ಯಜಮಾನಿ ಸಿಕ್ಕಾಗ ಆ ನಾಯಿ ಸಂತೋಷ ಪಟ್ಟ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ತನ್ನ ಯಜಮಾನರನ್ನು ಕಾಣದೆ ಆಹಾರವು ಸೇವಿಸದೆ ದುಃಖಿಸುತ್ತಿತ್ತು ಈ ನಾಯಿ
ಘಟನೆ ನಡೆದು 6 ದಿನಗಳಲ್ಲಿ ಆ ನಾಯಿ ಅ ಜಾಗ ಬಿಟ್ಟು ಕದಲಿರಲಿಲ್ಲ. ಅತ್ತಿತ್ತ ಓಡಾಡುತ್ತಾ ಯಾರನ್ನೋ ಹುಡುಕುತ್ತಿತ್ತು. ಅಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಆಹಾರ ನೀಡಿದರು ದುಃಖದಿಂದ ಆಹಾರದತ್ತ ಕೂಡ ಗಮನ ಹರಿಸುತ್ತಿರಲಿಲ್ಲ.
ಮನೆ ಕುಸಿದು ಬಿದ್ದಲ್ಲಿ ಬಂದು ತಮ್ಮ ವಸ್ತುಗಳಿಗಾಗಿ ಹುಡುಕುತ್ತಿರುವ ಜನ
ತಮ್ಮ ಹಣ, ಒಡವೆ ಎಲ್ಲವೂ ಮಣ್ಣು ಪಾಲಾಗಿದೆ, ನಾಳೆಯ ಬದುಕಿನ ಬಗ್ಗೆ ಒಂದೂ ತೋಚುತ್ತಿಲ್ಲ, ಹೀಗಿರುವಾಗ ತಮ್ಮ ಮನೆಯಲ್ಲಿದ್ದ ಚಿನ್ನ, ಹಣವಾದರೂ ಸಿಕ್ಕರೆ ಒಳ್ಳೆಯದಿತ್ತು ಎಂದು ಜನ ಯೋಚಿಸುತ್ತಿದ್ದಾಗ ತಮ್ಮ-ತಮ್ಮ ಮನೆಗಳ ಬಳಿ ಹಫಗಿ ಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಮನೆ ಬಳಿಗೆ ಬಂದ ಯಜಮಾನಿಯನ್ನು ಕಂಡು ಓಡಿ ಬಂದ ನಾಯಿ ಖುಷಿಯನ್ನು ವ್ಯಕ್ತಪಡಿಸುತ್ತಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ.
ನಾಯಿ ವರ್ಷಗಳು ಕಳೆದರೂ ತನ್ನ ಯಜಮಾನರನ್ನು ಮರೆಯಲ್ಲ
ಒಂದು ನಾಯಿಯನ್ನು ಸಾಕಿ ನಾವು ಎಲ್ಲಿಗಾದರು ಹೋಗಿ ವರ್ಷಗಳ ಬಳಿಕ ಬಂದರು ನಮ್ಮನ್ನು ಗುರುತು ಹಿಡಿಯುತ್ತದೆ, ಹೀಗಾಗಿ ನಾಯಿ ಮನುಷ್ಯನ ಸಂಬಂಧ ವಿಶೇಷವಾದದ್ದು. ತನ್ನ ಯಜಮಾನನ ರಕ್ಷಣೆ ಮಾಡುವುದರ ಜೊತೆಗೆ ಅವರನ್ನು ಮುದ್ದು ಮಾಡಿ ಅವರ ಒಂಟಿತನ ಹೋಗಲಾಡಿಸುವ ಗುಣ ನಾಯಿಯಲ್ಲಿದೆ.
ಹಾಗಾಗಿಯೇ ಹೇಳುವುದು ನಾಯಿ ನಿಯತ್ತಿನ ಪ್ರಾಣಿಯೆಂದು....



Click it and Unblock the Notifications


