Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ವಯನಾಡ್ ದುರಂತದ 6 ದಿನಗಳ ಬಳಿಕ ಯಜಮಾನಿ ಸಿಕ್ಕಾಗ ನಾಯಿಗಾದ ಖುಷಿಯ ವೀಡಿಯೋ ವೈರಲ್
ವಯನಾಡಿನ ದುರಂತದಲ್ಲಿ ಕಣ್ಣೀರ ಕತೆಗಳು ಮಾತ್ರವಲ್ಲ ಕೆಲ ಹೃದಯಸ್ಪರ್ಶಿ ಕತೆಗಳೂ ಗಮನ ಸೆಳೆಯುತ್ತಿದೆ, ಮಾನವೀಯತೆ, ಪ್ರೀತಿ, ಮೌಲ್ಯಗಳು ಕೂಡ ಎದ್ದು ಕಾಣುತ್ತಿದೆ. ಪ್ರಕೃತಿಯ ರೌದ್ರಾವಾತಾರಕ್ಕೆ ನೂರಾರು ಜನ ಬದುಕು ಕಳೆದುಕೊಂಡರೆ ಸಾವಿರಾರು ಜನ ಬದುಕಿನಲ್ಲಿ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಬದುಕುಳಿದವರಲ್ಲಿ ನಮ್ಮವರು ಯಾರಾದರು ಇದ್ದಾರೆಯೇ ಎಂದು ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ನಮ್ಮವರು ಯಾರಾದರು ಕಂಡರೆ ಅವರಿಗೆ ಅದುವೇ ಕೋಟಿ ಸಂತೋಷ. ಮನುಷ್ಯದ ಸಂಕಟ ಒಂದು ರೀತಿಯಾದರೆ ಮೂಕ ಪ್ರಾಣಿಗಳ ವೇದನೆ ಮತ್ತೊಂದು ರೀತಿ, ತಮ್ಮವರನ್ನು ಕಾಣದೆ, ಊಟವೂ ಮಾಡದೆ ಅವು ಆ ಪ್ರದೇಶದಲ್ಲಿ ಯಾರಿಗೋ ಹುಡುಕಾಡುತ್ತಿರುವುದನ್ನು ನೋಡುವಾಗ ಅಯ್ಯೋ ಅನಿಸುತ್ತಿದೆ. ಅದರಲ್ಲೊಂದು ವೀಡಿಯೋ ತುಂಬಾನೆ ವೈರಲ್ ಆಗುತ್ತಿದೆ, 6 ದಿನಗಳ ಬಳಿಕ ತನ್ನ ಯಜಮಾನಿ ಸಿಕ್ಕಾಗ ಆ ನಾಯಿ ಸಂತೋಷ ಪಟ್ಟ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ತನ್ನ ಯಜಮಾನರನ್ನು ಕಾಣದೆ ಆಹಾರವು ಸೇವಿಸದೆ ದುಃಖಿಸುತ್ತಿತ್ತು ಈ ನಾಯಿ
ಘಟನೆ ನಡೆದು 6 ದಿನಗಳಲ್ಲಿ ಆ ನಾಯಿ ಅ ಜಾಗ ಬಿಟ್ಟು ಕದಲಿರಲಿಲ್ಲ. ಅತ್ತಿತ್ತ ಓಡಾಡುತ್ತಾ ಯಾರನ್ನೋ ಹುಡುಕುತ್ತಿತ್ತು. ಅಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಆಹಾರ ನೀಡಿದರು ದುಃಖದಿಂದ ಆಹಾರದತ್ತ ಕೂಡ ಗಮನ ಹರಿಸುತ್ತಿರಲಿಲ್ಲ.
ಮನೆ ಕುಸಿದು ಬಿದ್ದಲ್ಲಿ ಬಂದು ತಮ್ಮ ವಸ್ತುಗಳಿಗಾಗಿ ಹುಡುಕುತ್ತಿರುವ ಜನ
ತಮ್ಮ ಹಣ, ಒಡವೆ ಎಲ್ಲವೂ ಮಣ್ಣು ಪಾಲಾಗಿದೆ, ನಾಳೆಯ ಬದುಕಿನ ಬಗ್ಗೆ ಒಂದೂ ತೋಚುತ್ತಿಲ್ಲ, ಹೀಗಿರುವಾಗ ತಮ್ಮ ಮನೆಯಲ್ಲಿದ್ದ ಚಿನ್ನ, ಹಣವಾದರೂ ಸಿಕ್ಕರೆ ಒಳ್ಳೆಯದಿತ್ತು ಎಂದು ಜನ ಯೋಚಿಸುತ್ತಿದ್ದಾಗ ತಮ್ಮ-ತಮ್ಮ ಮನೆಗಳ ಬಳಿ ಹಫಗಿ ಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಮನೆ ಬಳಿಗೆ ಬಂದ ಯಜಮಾನಿಯನ್ನು ಕಂಡು ಓಡಿ ಬಂದ ನಾಯಿ ಖುಷಿಯನ್ನು ವ್ಯಕ್ತಪಡಿಸುತ್ತಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ.
ನಾಯಿ ವರ್ಷಗಳು ಕಳೆದರೂ ತನ್ನ ಯಜಮಾನರನ್ನು ಮರೆಯಲ್ಲ
ಒಂದು ನಾಯಿಯನ್ನು ಸಾಕಿ ನಾವು ಎಲ್ಲಿಗಾದರು ಹೋಗಿ ವರ್ಷಗಳ ಬಳಿಕ ಬಂದರು ನಮ್ಮನ್ನು ಗುರುತು ಹಿಡಿಯುತ್ತದೆ, ಹೀಗಾಗಿ ನಾಯಿ ಮನುಷ್ಯನ ಸಂಬಂಧ ವಿಶೇಷವಾದದ್ದು. ತನ್ನ ಯಜಮಾನನ ರಕ್ಷಣೆ ಮಾಡುವುದರ ಜೊತೆಗೆ ಅವರನ್ನು ಮುದ್ದು ಮಾಡಿ ಅವರ ಒಂಟಿತನ ಹೋಗಲಾಡಿಸುವ ಗುಣ ನಾಯಿಯಲ್ಲಿದೆ.
ಹಾಗಾಗಿಯೇ ಹೇಳುವುದು ನಾಯಿ ನಿಯತ್ತಿನ ಪ್ರಾಣಿಯೆಂದು....



Click it and Unblock the Notifications