ವಾಚ್‌ಮೆನ್‌ಗೆ ಒಲಿದ ಅದೃಷ್ಟ ಲಕ್ಷ್ಮಿ: 2 ಕೋಟಿ ಲಾಟರಿ ಗೆದ್ದ 60 ವರ್ಷದ ರಾಚಮಲ್ಲಯ್ಯ

ಅದೃಷ್ಟಲಕ್ಷ್ಮಿ ಒಲಿದಳು ಅಂದ್ರೆ ಒಂದೇ ದಿನದಲ್ಲಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾಗಬಹುದು ಎಂಬ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈಗ ಅಂಥದ್ದೇ ಅದೃಷ್ಟ ಹೈದರಾಬಾದ್‌ ಮೂಲದ ವ್ಯಕ್ತಿಗೆ ಒಲಿದಿದೆ. ಅದರಲ್ಲಿಯೂ ಅವರು ತಮ್ಮ 60ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಶ್ರೀಮಂತ ವ್ಯಕ್ತಿಯಾಗಿ ಬಿಟ್ಟಿದ್ದಾರೆ.

Lottery

ನಿವೃತ್ತಿ ವಯಸ್ಸಿನಲ್ಲಿ ಒಲಿದಳು ಅದೃಷ್ಟ ಲಕ್ಷ್ಮಿ
ಹೈದರಾಬಾದ್‌ನ ಈ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ವಯಸ್ಸು 60 ವರ್ಷ. ಕಳೆದ 3 ದಶಕಗಳಿಂದ ಅಬುದಾಬಿಯಲ್ಲಿ ವಾಚ್‌ಮೆನ್‌ ಮೆನ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಅಪರೂಪಕ್ಕೆ ಲಾಟರಿ ಖರೀದಿಸುತ್ತಿದ್ದರು. ಆದರೆ ಈ ಬಾರಿಯ ಲಾಟರಿ ಅವರ ಕೈ ಹಿಡಿದಿದೆ. ಅವರೀಗ ಮಿಲಿನಿಯರ್‌ ಆಗಿದ್ದಾರೆ. ಇವರಿಗೆ ಸುಮಾರು ಎರಡು ಕೋಟಿ ರುಪಾಯಿ ಲಾಟರಿ ಹೊಡೆದಿದೆ. ಪಾಪ ಇದರಿಂದಾಗಿ ಅವರ ಅದೃಷ್ಟವೇ ಬದಲಾಗಿದೆ. ಇಷ್ಟು ವರ್ಷ ಕುಟುಂಬದಿಂದ ದೂರವಿದ್ದು ದುಡಿಯುತ್ತಿದ್ದರು, ಈಗ ಲಾಟರಿ ಹೊಡೆದಿರುವುದರಿಂದ ಅವರ ಆರ್ಥಿಕ ಸ್ಥಿತಿಯೇ ಬದಲಾಗಿದೆ.

ಇತ್ತೀಚೆಗೆ ಮಂಡ್ಯದ ಮೆಕ್ಯಾನಿಕ್‌ಗೆ ಬರೋಬರಿ 25 ಕೋಟಿ ಲಾಟಿ ಹೊಡೆದಿತ್ತು. ಈ ಬಾರಿ ಓಣಂ ಬಂಪರ್‌ ಅವರ ಪಾಲಿಗೆ ಒಲಿದಿತ್ತು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗುವ ಮೂಲಕ ತುಂಬಾನೇ ಸುದ್ದಿ ಮಾಡಿದರು. ಮಂಡ್ಯದ ಅಲ್ತಾಫ್‌ ಕೇರಳಕ್ಕೆ ಹೋದಾಗ ಲಾಟರಿ ಖರೀದಿ ಮಾಡಿ ಬಂದಿದ್ದರು ಆದರೆ ಅವರ ಅದೃಷ್ಟ ಮಾತ್ರ ತುಂಬಾ ಚೆನ್ನಾಗಿತ್ತು, ಆ 25 ಕೋಟಿ ಲಾಟರಿ ಇವರಿಗೆ ಒಲಿದಿತ್ತು. ಅವರು ಲಾಟರಿ ಹಣದಲ್ಲಿ ಮಕ್ಕಳ ಮದುವೆ ಮಾಡುವುದಾಗಿ , ಮನೆ ಕಟ್ಟುವುದಾಗಿ ಸ್ವಲ್ಪ ಹಣವನ್ನು ಅಗ್ಯತವಿರುವವರೆಗೆ ದಾನ ಮಾಡುವುದಾಗಿ ಹೇಳಿದ್ದರು. ಕೇರಳದ ಒಂದು ಲಾಟರಿ ಅಲ್ತಾಫ್‌ ಬದುಕನ್ನೇ ಬದಲಾಯಿಸಿತು, ಮೆಕ್ಯಾನಿಕ್‌ ವೃತ್ತಿಯಿಂದ ಜೀವನ ನಡೆಸುತ್ತಿದ್ದ ಅಲ್ತಾಫ್‌ ಈಗ ಕೋಟ್ಯಾಧಿಪತಿ.

ಲಾಟರಿ ಕರ್ನಾಟಕದಲ್ಲಿ ಬ್ಯಾನ್‌ ಮಾಡಲಾಗಿದೆ
ಕರ್ನಾಟಕದಲ್ಲಿ ಲಾಟರಿ ನಿಷೇಧಿಸಲಾಗಿದೆ, ಎಷ್ಟೋ ಕುಟುಂಬಗಳು ಲಾಟರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ದುಡಿದ ಹಣವನ್ನು ಲಾಟರಿ ಖರೀದಿಗೆ ಖರ್ಚು ಮಾಡಿ ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ಪರಿದಾಡುವಂತೆ ಮಾಡುತ್ತಿದೆ. ಈ ಕಾರಣದಿಂದಲೇ ಲಾಟರಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.

English summary

Watchmen Win 2 Crore Lottery Prize

60 Year old watchmen win 2 crore rupees Lottery Prize, read on..
X
Desktop Bottom Promotion