Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಾಚ್ಮೆನ್ಗೆ ಒಲಿದ ಅದೃಷ್ಟ ಲಕ್ಷ್ಮಿ: 2 ಕೋಟಿ ಲಾಟರಿ ಗೆದ್ದ 60 ವರ್ಷದ ರಾಚಮಲ್ಲಯ್ಯ
ಅದೃಷ್ಟಲಕ್ಷ್ಮಿ ಒಲಿದಳು ಅಂದ್ರೆ ಒಂದೇ ದಿನದಲ್ಲಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾಗಬಹುದು ಎಂಬ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈಗ ಅಂಥದ್ದೇ ಅದೃಷ್ಟ ಹೈದರಾಬಾದ್ ಮೂಲದ ವ್ಯಕ್ತಿಗೆ ಒಲಿದಿದೆ. ಅದರಲ್ಲಿಯೂ ಅವರು ತಮ್ಮ 60ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಶ್ರೀಮಂತ ವ್ಯಕ್ತಿಯಾಗಿ ಬಿಟ್ಟಿದ್ದಾರೆ.

ನಿವೃತ್ತಿ ವಯಸ್ಸಿನಲ್ಲಿ ಒಲಿದಳು ಅದೃಷ್ಟ ಲಕ್ಷ್ಮಿ
ಹೈದರಾಬಾದ್ನ ಈ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ವಯಸ್ಸು 60 ವರ್ಷ. ಕಳೆದ 3 ದಶಕಗಳಿಂದ ಅಬುದಾಬಿಯಲ್ಲಿ ವಾಚ್ಮೆನ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಅಪರೂಪಕ್ಕೆ ಲಾಟರಿ ಖರೀದಿಸುತ್ತಿದ್ದರು. ಆದರೆ ಈ ಬಾರಿಯ ಲಾಟರಿ ಅವರ ಕೈ ಹಿಡಿದಿದೆ. ಅವರೀಗ ಮಿಲಿನಿಯರ್ ಆಗಿದ್ದಾರೆ. ಇವರಿಗೆ ಸುಮಾರು ಎರಡು ಕೋಟಿ ರುಪಾಯಿ ಲಾಟರಿ ಹೊಡೆದಿದೆ. ಪಾಪ ಇದರಿಂದಾಗಿ ಅವರ ಅದೃಷ್ಟವೇ ಬದಲಾಗಿದೆ. ಇಷ್ಟು ವರ್ಷ ಕುಟುಂಬದಿಂದ ದೂರವಿದ್ದು ದುಡಿಯುತ್ತಿದ್ದರು, ಈಗ ಲಾಟರಿ ಹೊಡೆದಿರುವುದರಿಂದ ಅವರ ಆರ್ಥಿಕ ಸ್ಥಿತಿಯೇ ಬದಲಾಗಿದೆ.
ಇತ್ತೀಚೆಗೆ ಮಂಡ್ಯದ ಮೆಕ್ಯಾನಿಕ್ಗೆ ಬರೋಬರಿ 25 ಕೋಟಿ ಲಾಟಿ ಹೊಡೆದಿತ್ತು. ಈ ಬಾರಿ ಓಣಂ ಬಂಪರ್ ಅವರ ಪಾಲಿಗೆ ಒಲಿದಿತ್ತು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗುವ ಮೂಲಕ ತುಂಬಾನೇ ಸುದ್ದಿ ಮಾಡಿದರು. ಮಂಡ್ಯದ ಅಲ್ತಾಫ್ ಕೇರಳಕ್ಕೆ ಹೋದಾಗ ಲಾಟರಿ ಖರೀದಿ ಮಾಡಿ ಬಂದಿದ್ದರು ಆದರೆ ಅವರ ಅದೃಷ್ಟ ಮಾತ್ರ ತುಂಬಾ ಚೆನ್ನಾಗಿತ್ತು, ಆ 25 ಕೋಟಿ ಲಾಟರಿ ಇವರಿಗೆ ಒಲಿದಿತ್ತು. ಅವರು ಲಾಟರಿ ಹಣದಲ್ಲಿ ಮಕ್ಕಳ ಮದುವೆ ಮಾಡುವುದಾಗಿ , ಮನೆ ಕಟ್ಟುವುದಾಗಿ ಸ್ವಲ್ಪ ಹಣವನ್ನು ಅಗ್ಯತವಿರುವವರೆಗೆ ದಾನ ಮಾಡುವುದಾಗಿ ಹೇಳಿದ್ದರು. ಕೇರಳದ ಒಂದು ಲಾಟರಿ ಅಲ್ತಾಫ್ ಬದುಕನ್ನೇ ಬದಲಾಯಿಸಿತು, ಮೆಕ್ಯಾನಿಕ್ ವೃತ್ತಿಯಿಂದ ಜೀವನ ನಡೆಸುತ್ತಿದ್ದ ಅಲ್ತಾಫ್ ಈಗ ಕೋಟ್ಯಾಧಿಪತಿ.
ಲಾಟರಿ ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗಿದೆ
ಕರ್ನಾಟಕದಲ್ಲಿ ಲಾಟರಿ ನಿಷೇಧಿಸಲಾಗಿದೆ, ಎಷ್ಟೋ ಕುಟುಂಬಗಳು ಲಾಟರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ದುಡಿದ ಹಣವನ್ನು ಲಾಟರಿ ಖರೀದಿಗೆ ಖರ್ಚು ಮಾಡಿ ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ಪರಿದಾಡುವಂತೆ ಮಾಡುತ್ತಿದೆ. ಈ ಕಾರಣದಿಂದಲೇ ಲಾಟರಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.



Click it and Unblock the Notifications