Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಾಚ್ಮೆನ್ಗೆ ಒಲಿದ ಅದೃಷ್ಟ ಲಕ್ಷ್ಮಿ: 2 ಕೋಟಿ ಲಾಟರಿ ಗೆದ್ದ 60 ವರ್ಷದ ರಾಚಮಲ್ಲಯ್ಯ
ಅದೃಷ್ಟಲಕ್ಷ್ಮಿ ಒಲಿದಳು ಅಂದ್ರೆ ಒಂದೇ ದಿನದಲ್ಲಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾಗಬಹುದು ಎಂಬ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈಗ ಅಂಥದ್ದೇ ಅದೃಷ್ಟ ಹೈದರಾಬಾದ್ ಮೂಲದ ವ್ಯಕ್ತಿಗೆ ಒಲಿದಿದೆ. ಅದರಲ್ಲಿಯೂ ಅವರು ತಮ್ಮ 60ನೇ ವಯಸ್ಸಿನಲ್ಲಿ ಒಂದೇ ದಿನದಲ್ಲಿ ಶ್ರೀಮಂತ ವ್ಯಕ್ತಿಯಾಗಿ ಬಿಟ್ಟಿದ್ದಾರೆ.

ನಿವೃತ್ತಿ ವಯಸ್ಸಿನಲ್ಲಿ ಒಲಿದಳು ಅದೃಷ್ಟ ಲಕ್ಷ್ಮಿ
ಹೈದರಾಬಾದ್ನ ಈ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ವಯಸ್ಸು 60 ವರ್ಷ. ಕಳೆದ 3 ದಶಕಗಳಿಂದ ಅಬುದಾಬಿಯಲ್ಲಿ ವಾಚ್ಮೆನ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಅಪರೂಪಕ್ಕೆ ಲಾಟರಿ ಖರೀದಿಸುತ್ತಿದ್ದರು. ಆದರೆ ಈ ಬಾರಿಯ ಲಾಟರಿ ಅವರ ಕೈ ಹಿಡಿದಿದೆ. ಅವರೀಗ ಮಿಲಿನಿಯರ್ ಆಗಿದ್ದಾರೆ. ಇವರಿಗೆ ಸುಮಾರು ಎರಡು ಕೋಟಿ ರುಪಾಯಿ ಲಾಟರಿ ಹೊಡೆದಿದೆ. ಪಾಪ ಇದರಿಂದಾಗಿ ಅವರ ಅದೃಷ್ಟವೇ ಬದಲಾಗಿದೆ. ಇಷ್ಟು ವರ್ಷ ಕುಟುಂಬದಿಂದ ದೂರವಿದ್ದು ದುಡಿಯುತ್ತಿದ್ದರು, ಈಗ ಲಾಟರಿ ಹೊಡೆದಿರುವುದರಿಂದ ಅವರ ಆರ್ಥಿಕ ಸ್ಥಿತಿಯೇ ಬದಲಾಗಿದೆ.
ಇತ್ತೀಚೆಗೆ ಮಂಡ್ಯದ ಮೆಕ್ಯಾನಿಕ್ಗೆ ಬರೋಬರಿ 25 ಕೋಟಿ ಲಾಟಿ ಹೊಡೆದಿತ್ತು. ಈ ಬಾರಿ ಓಣಂ ಬಂಪರ್ ಅವರ ಪಾಲಿಗೆ ಒಲಿದಿತ್ತು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗುವ ಮೂಲಕ ತುಂಬಾನೇ ಸುದ್ದಿ ಮಾಡಿದರು. ಮಂಡ್ಯದ ಅಲ್ತಾಫ್ ಕೇರಳಕ್ಕೆ ಹೋದಾಗ ಲಾಟರಿ ಖರೀದಿ ಮಾಡಿ ಬಂದಿದ್ದರು ಆದರೆ ಅವರ ಅದೃಷ್ಟ ಮಾತ್ರ ತುಂಬಾ ಚೆನ್ನಾಗಿತ್ತು, ಆ 25 ಕೋಟಿ ಲಾಟರಿ ಇವರಿಗೆ ಒಲಿದಿತ್ತು. ಅವರು ಲಾಟರಿ ಹಣದಲ್ಲಿ ಮಕ್ಕಳ ಮದುವೆ ಮಾಡುವುದಾಗಿ , ಮನೆ ಕಟ್ಟುವುದಾಗಿ ಸ್ವಲ್ಪ ಹಣವನ್ನು ಅಗ್ಯತವಿರುವವರೆಗೆ ದಾನ ಮಾಡುವುದಾಗಿ ಹೇಳಿದ್ದರು. ಕೇರಳದ ಒಂದು ಲಾಟರಿ ಅಲ್ತಾಫ್ ಬದುಕನ್ನೇ ಬದಲಾಯಿಸಿತು, ಮೆಕ್ಯಾನಿಕ್ ವೃತ್ತಿಯಿಂದ ಜೀವನ ನಡೆಸುತ್ತಿದ್ದ ಅಲ್ತಾಫ್ ಈಗ ಕೋಟ್ಯಾಧಿಪತಿ.
ಲಾಟರಿ ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗಿದೆ
ಕರ್ನಾಟಕದಲ್ಲಿ ಲಾಟರಿ ನಿಷೇಧಿಸಲಾಗಿದೆ, ಎಷ್ಟೋ ಕುಟುಂಬಗಳು ಲಾಟರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ದುಡಿದ ಹಣವನ್ನು ಲಾಟರಿ ಖರೀದಿಗೆ ಖರ್ಚು ಮಾಡಿ ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ಪರಿದಾಡುವಂತೆ ಮಾಡುತ್ತಿದೆ. ಈ ಕಾರಣದಿಂದಲೇ ಲಾಟರಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.



Click it and Unblock the Notifications
