Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೋಡಕ್ಕೆ ಮುತ್ತಿಕ್ಕುವ ಆಸೆ ನಿಮಗಿದ್ದರೆ ಕುಂದಾದ್ರಿಗೆ ಬರಲೇಬೇಕು..!!
ಮಲೆನಾಡಲ್ಲಿ ಪ್ರತಿ 10 ಕಿ ಮೀಟರ್ಗೆ ಒಂದರಂತೆ ಪ್ರವಾಸಿ ತಾಣಗಳಿವೆ, ಅದ್ರಲ್ಲೂ ಪ್ರಕೃತಿಯಲ್ಲಿ ಹಸಿರನ್ನೇ ಹೊದ್ದು ಮಲಗಿದಂತಹ ಹತ್ತಾರು ಪ್ರಾಕೃತಿಕ ಶ್ರೀಮಂತ ಸ್ಥಳಗಳಿವೆ. ಅದ್ರಲ್ಲೂ ಈ ಮೋಡಗಳ ಮರೆಯಲ್ಲಿ ಆಕಾಶಕ್ಕೆ ಮುತ್ತಿಡುವಷ್ಟು ಎತ್ತರದಲ್ಲಿರುವ ಕುಂದಾದ್ರಿ ಸೌಂದರ್ಯ ರಾಶಿಯನ್ನೇ ತನ್ನಲ್ಲಿಟ್ಟುಕೊಂಡಿದೆ. ಸಮುದ್ರ ಮಟ್ಟದಿಂದ 1343 ಅಡಿ ಎತ್ತರದಲ್ಲಿರುವ ಕುಂದಾದ್ರಿ ಮಳೆಗಾಲದಲ್ಲಿ ಭೂಮಿ ಮೇಲಿನ ಸ್ವರ್ಗವೇ.
ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯಬೇಕು. ಪ್ರವಾಸ ಕೈಗೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಯಾವ ಪ್ರದೇಶಕ್ಕೆ ಹೋಗಬೇಕು? ಎಲ್ಲಿ ನೆಮ್ಮದಿ ನೀಡುತ್ತೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಈ ಶಿವಮೊಗ್ಗದ ತೀರ್ಥಹಳ್ಳಿಯಿಂದ 20 ಕಿ,ಮೀ ದೂರದಲ್ಲಿರುವ ಒಂದು ಸುಂದರ ಪ್ರಕೃತಿಯ ಮಡಿಲು. ಮೋಡಗಳು ಕಾಲಿನ ಅಡಿಯಲ್ಲೇ ಹೋಗುತ್ತೆ ಅನ್ನೋ ಭಾವನೆ ಬರುತ್ತೆ, ಯಾಕಂದ್ರೆ ಅಷ್ಟೊಂದು ಎತ್ತರದಲ್ಲಿದೆ ಈ ಬೆಟ್ಟ.

ನೀವು ಈ ಬೆಟ್ಟದ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರಬಹುದು. ಯಾಕಂದ್ರೆ ಇದು ಮಾನವರ ಹಸ್ತಕ್ಷೇಪದಿಂದ ದೂರವೇ ಉಳಿದಿರುವ ಒಂದೇ ಒಂದು ಪ್ರವಾಸಿ ಸ್ಥಳವಾಗಿದೆ ಅಂದರೂ ತಪ್ಪಾಗಲಾರದು. ಏಕೆಂದರೆ ಈ ಬೆಟ್ಟ ಸಣ್ಣ ಹಳ್ಳಿಯಿಂದ ಹಾದು ಕಾಡು ದಾರಿಯಲ್ಲಿ ಸಾಗಬೇಕಿದೆ. ಹೀಗಾಗಿ ಮಾನವರಿಂದ ದೂರ ಉಳಿದುಬಿಟ್ಟಿದೆ.
ಕುಂದಾದ್ರಿ ಎಂಬ ಹೆಸರು ಬಂದಿದ್ದು ಹೇಗೆ?
ಈ ಬೆಟ್ಟವು ಪ್ರಾಚೀನ ಜೈನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕುಂದಾದ್ರಿ ಬೆಟ್ಟವು ಹಚ್ಚ ಹಸಿರಿನಿಂದ ಆವ್ರತವಾಗಿದೆ. ಈ ಬೆಟ್ಟ ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಿಸಲು ಹೇಳಿ ಮಾಡಿಸಿದ ಜಾಗ. ಬೆಟ್ಟಿದ ಮೇಲಿರುವ ದೇವಾಲಯಕ್ಕೂ ಬರುವುದು ಬೆರಳೆಣಿಕೆಯ ಜನರಷ್ಟೇ. ಹೀಗಾಗಿ ಈ ತಾಣ ಉಳಿದ ಪ್ರವಾಸಿ ತಾಣಗಳಂತೆ ಜನರಿಂದ ಕಿಕ್ಕಿರಿದು ನಿಮ್ಮ ಶಾಂತಿ ಹಾಳು ಮಾಡುವುದಿಲ್ಲ. ಅಚ್ಚರಿ ಎಂದರೆ ಒಮ್ಮೊಮ್ಮೆ ನೀವು ಒಬ್ಬರೇ ಈ ಪ್ರವಾಸಿ ತಾಣದ ಪ್ರವಾಸಿಗರಾಗಿ ಉಳಿಯಬಹುದು.
ಪಾರ್ಶ್ವನಾಥ ಸ್ವಾಮಿಯ ಬಸದಿ ಇದು. ಈ ಜೈನ ಮಂದಿರಕ್ಕೆ ಸುಮಾರು ಮೂರು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಬೆಟ್ಟದಲ್ಲಿ ಎರಡು ಪವಿತ್ರ ಕೊಳಗಳು ಕೂಡಾ ಇವೆ. ಬೇಸಿಗೆಯಲ್ಲೂ ಇದರಲ್ಲಿ ನೀರು ಇರಲಿದೆ. ಹೀಗಾಗಿ, ಪ್ರವಾಸಿತಾಣವಾಗಿಯೂ, ಯಾತ್ರಾ ಕೇತ್ರವಾಗಿಯೂ ಈ ಬೆಟ್ಟ ಮಹತ್ವವನ್ನು ಪಡೆದಿದೆ.
ಕುಂದಾದ್ರಿಯ ದಂತಕಥೆ
ಪುರಾಣದ ಪ್ರಕಾರ, ಕುಂದಕುಂದಾಚಾರ್ಯ ಎಂಬ ಜೈನ ಮುನಿಯಿಂದಾಗಿ ಕುಂದಾದ್ರಿ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ಅವರು ಮಹಾ ತಪಸ್ಸು ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿ, ಗಿರಿಧಾಮವನ್ನು ಜೈನರ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಜೈನ ದೇವಾಲಯವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಪಾರ್ಶ್ವನಾಥನನ್ನು ದೇವಾಲಯದ ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು ಜೈನ ಪುರಾಣಕ್ಕೆ ಸಂಬಂಧಿಸಿದ ಹಲವಾರು ಪ್ರತಿಮೆಗಳನ್ನು ಸಹ ಒಳಗೊಂಡಿದೆ.
ಒಂದು ದಿನದ ಚಾರಣ ಮಾಡುವ ಹವ್ಯಾಸ ಇಟ್ಟುಕೊಂಡಿರುವವರು ಈ ಪ್ರವಾಸಿ ತಾಣಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕಿದೆ. ಈ ಬೆಟ್ಟಕ್ಕೆ ನೀವು ಸ್ವಂತ ವಾಹನ ತೆಗೆದುಕೊಂಡು ಹೋಗಬಹುದು. ಆದರೆ ಬೆಟ್ಟದ ರಸ್ತೆಯಲ್ಲಿ ವಾಹನ ಚಾಲನೆ ಕಷ್ಟಕರವೂ ಹೌದು. ಇನ್ನು ಬೆಟ್ಟದ ಮೇಲೆ ಯಾವುದೇ ಊಟ, ತಿಂಡಿ ಯಾವುದೇ ವಸ್ತು ಸಿಗುವುದಿಲ್ಲ. ಜೊತೆಗೆ ಪ್ರವಾಸಿ ಸ್ಥಳ ಎಂದ ಮಾತ್ರಕ್ಕೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಹೋಟೆಲ್ ಇದೇ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗಲಿದೆ. ಇಲ್ಲಿ ಆ ರೀತಿಯ ವ್ಯವಸ್ಥೆಗಳಿಲ್ಲ. ಈ ಸ್ಥಳಕ್ಕೆ ವರ್ಷದ ಯಾವುದೇ ಕಾಲದಲ್ಲೂ ತೆರಳಬಹುದು. ಆದ್ರೆ ಮಳೆಗಾಲದ ಹಾಗೂ ಚಳಿಗಾಲದ ದಿನದಲ್ಲಿ ಈ ಬೆಟ್ಟ ಹಚ್ಚ ಹಸಿರಾಗಿ ಕಾಣಿಸುತ್ತೆ, ಮನಸ್ಸಿಗೂ ಮುದ ನೀಡುತ್ತೆ.



Click it and Unblock the Notifications


