Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಮೋಡಕ್ಕೆ ಮುತ್ತಿಕ್ಕುವ ಆಸೆ ನಿಮಗಿದ್ದರೆ ಕುಂದಾದ್ರಿಗೆ ಬರಲೇಬೇಕು..!!
ಮಲೆನಾಡಲ್ಲಿ ಪ್ರತಿ 10 ಕಿ ಮೀಟರ್ಗೆ ಒಂದರಂತೆ ಪ್ರವಾಸಿ ತಾಣಗಳಿವೆ, ಅದ್ರಲ್ಲೂ ಪ್ರಕೃತಿಯಲ್ಲಿ ಹಸಿರನ್ನೇ ಹೊದ್ದು ಮಲಗಿದಂತಹ ಹತ್ತಾರು ಪ್ರಾಕೃತಿಕ ಶ್ರೀಮಂತ ಸ್ಥಳಗಳಿವೆ. ಅದ್ರಲ್ಲೂ ಈ ಮೋಡಗಳ ಮರೆಯಲ್ಲಿ ಆಕಾಶಕ್ಕೆ ಮುತ್ತಿಡುವಷ್ಟು ಎತ್ತರದಲ್ಲಿರುವ ಕುಂದಾದ್ರಿ ಸೌಂದರ್ಯ ರಾಶಿಯನ್ನೇ ತನ್ನಲ್ಲಿಟ್ಟುಕೊಂಡಿದೆ. ಸಮುದ್ರ ಮಟ್ಟದಿಂದ 1343 ಅಡಿ ಎತ್ತರದಲ್ಲಿರುವ ಕುಂದಾದ್ರಿ ಮಳೆಗಾಲದಲ್ಲಿ ಭೂಮಿ ಮೇಲಿನ ಸ್ವರ್ಗವೇ.
ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯಬೇಕು. ಪ್ರವಾಸ ಕೈಗೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಯಾವ ಪ್ರದೇಶಕ್ಕೆ ಹೋಗಬೇಕು? ಎಲ್ಲಿ ನೆಮ್ಮದಿ ನೀಡುತ್ತೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಈ ಶಿವಮೊಗ್ಗದ ತೀರ್ಥಹಳ್ಳಿಯಿಂದ 20 ಕಿ,ಮೀ ದೂರದಲ್ಲಿರುವ ಒಂದು ಸುಂದರ ಪ್ರಕೃತಿಯ ಮಡಿಲು. ಮೋಡಗಳು ಕಾಲಿನ ಅಡಿಯಲ್ಲೇ ಹೋಗುತ್ತೆ ಅನ್ನೋ ಭಾವನೆ ಬರುತ್ತೆ, ಯಾಕಂದ್ರೆ ಅಷ್ಟೊಂದು ಎತ್ತರದಲ್ಲಿದೆ ಈ ಬೆಟ್ಟ.

ನೀವು ಈ ಬೆಟ್ಟದ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರಬಹುದು. ಯಾಕಂದ್ರೆ ಇದು ಮಾನವರ ಹಸ್ತಕ್ಷೇಪದಿಂದ ದೂರವೇ ಉಳಿದಿರುವ ಒಂದೇ ಒಂದು ಪ್ರವಾಸಿ ಸ್ಥಳವಾಗಿದೆ ಅಂದರೂ ತಪ್ಪಾಗಲಾರದು. ಏಕೆಂದರೆ ಈ ಬೆಟ್ಟ ಸಣ್ಣ ಹಳ್ಳಿಯಿಂದ ಹಾದು ಕಾಡು ದಾರಿಯಲ್ಲಿ ಸಾಗಬೇಕಿದೆ. ಹೀಗಾಗಿ ಮಾನವರಿಂದ ದೂರ ಉಳಿದುಬಿಟ್ಟಿದೆ.
ಕುಂದಾದ್ರಿ ಎಂಬ ಹೆಸರು ಬಂದಿದ್ದು ಹೇಗೆ?
ಈ ಬೆಟ್ಟವು ಪ್ರಾಚೀನ ಜೈನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕುಂದಾದ್ರಿ ಬೆಟ್ಟವು ಹಚ್ಚ ಹಸಿರಿನಿಂದ ಆವ್ರತವಾಗಿದೆ. ಈ ಬೆಟ್ಟ ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಿಸಲು ಹೇಳಿ ಮಾಡಿಸಿದ ಜಾಗ. ಬೆಟ್ಟಿದ ಮೇಲಿರುವ ದೇವಾಲಯಕ್ಕೂ ಬರುವುದು ಬೆರಳೆಣಿಕೆಯ ಜನರಷ್ಟೇ. ಹೀಗಾಗಿ ಈ ತಾಣ ಉಳಿದ ಪ್ರವಾಸಿ ತಾಣಗಳಂತೆ ಜನರಿಂದ ಕಿಕ್ಕಿರಿದು ನಿಮ್ಮ ಶಾಂತಿ ಹಾಳು ಮಾಡುವುದಿಲ್ಲ. ಅಚ್ಚರಿ ಎಂದರೆ ಒಮ್ಮೊಮ್ಮೆ ನೀವು ಒಬ್ಬರೇ ಈ ಪ್ರವಾಸಿ ತಾಣದ ಪ್ರವಾಸಿಗರಾಗಿ ಉಳಿಯಬಹುದು.
ಪಾರ್ಶ್ವನಾಥ ಸ್ವಾಮಿಯ ಬಸದಿ ಇದು. ಈ ಜೈನ ಮಂದಿರಕ್ಕೆ ಸುಮಾರು ಮೂರು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಬೆಟ್ಟದಲ್ಲಿ ಎರಡು ಪವಿತ್ರ ಕೊಳಗಳು ಕೂಡಾ ಇವೆ. ಬೇಸಿಗೆಯಲ್ಲೂ ಇದರಲ್ಲಿ ನೀರು ಇರಲಿದೆ. ಹೀಗಾಗಿ, ಪ್ರವಾಸಿತಾಣವಾಗಿಯೂ, ಯಾತ್ರಾ ಕೇತ್ರವಾಗಿಯೂ ಈ ಬೆಟ್ಟ ಮಹತ್ವವನ್ನು ಪಡೆದಿದೆ.
ಕುಂದಾದ್ರಿಯ ದಂತಕಥೆ
ಪುರಾಣದ ಪ್ರಕಾರ, ಕುಂದಕುಂದಾಚಾರ್ಯ ಎಂಬ ಜೈನ ಮುನಿಯಿಂದಾಗಿ ಕುಂದಾದ್ರಿ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ಅವರು ಮಹಾ ತಪಸ್ಸು ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿ, ಗಿರಿಧಾಮವನ್ನು ಜೈನರ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಜೈನ ದೇವಾಲಯವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಪಾರ್ಶ್ವನಾಥನನ್ನು ದೇವಾಲಯದ ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು ಜೈನ ಪುರಾಣಕ್ಕೆ ಸಂಬಂಧಿಸಿದ ಹಲವಾರು ಪ್ರತಿಮೆಗಳನ್ನು ಸಹ ಒಳಗೊಂಡಿದೆ.
ಒಂದು ದಿನದ ಚಾರಣ ಮಾಡುವ ಹವ್ಯಾಸ ಇಟ್ಟುಕೊಂಡಿರುವವರು ಈ ಪ್ರವಾಸಿ ತಾಣಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕಿದೆ. ಈ ಬೆಟ್ಟಕ್ಕೆ ನೀವು ಸ್ವಂತ ವಾಹನ ತೆಗೆದುಕೊಂಡು ಹೋಗಬಹುದು. ಆದರೆ ಬೆಟ್ಟದ ರಸ್ತೆಯಲ್ಲಿ ವಾಹನ ಚಾಲನೆ ಕಷ್ಟಕರವೂ ಹೌದು. ಇನ್ನು ಬೆಟ್ಟದ ಮೇಲೆ ಯಾವುದೇ ಊಟ, ತಿಂಡಿ ಯಾವುದೇ ವಸ್ತು ಸಿಗುವುದಿಲ್ಲ. ಜೊತೆಗೆ ಪ್ರವಾಸಿ ಸ್ಥಳ ಎಂದ ಮಾತ್ರಕ್ಕೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಹೋಟೆಲ್ ಇದೇ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗಲಿದೆ. ಇಲ್ಲಿ ಆ ರೀತಿಯ ವ್ಯವಸ್ಥೆಗಳಿಲ್ಲ. ಈ ಸ್ಥಳಕ್ಕೆ ವರ್ಷದ ಯಾವುದೇ ಕಾಲದಲ್ಲೂ ತೆರಳಬಹುದು. ಆದ್ರೆ ಮಳೆಗಾಲದ ಹಾಗೂ ಚಳಿಗಾಲದ ದಿನದಲ್ಲಿ ಈ ಬೆಟ್ಟ ಹಚ್ಚ ಹಸಿರಾಗಿ ಕಾಣಿಸುತ್ತೆ, ಮನಸ್ಸಿಗೂ ಮುದ ನೀಡುತ್ತೆ.



Click it and Unblock the Notifications


