Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ: ಮದುವೆಯಲ್ಲಿ ಅಡೆತಡೆಯಿದ್ದರೆ, ದಾಂಪತ್ಯದಲ್ಲಿ ಸಮಸ್ಯೆಯಿದ್ದರೆ ಈ ದಿನ ಮಾಡಬೇಕಾದ ಪರಿಹಾರವೇನು?
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ, ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ವಿವಾಹ ಪಂಚಮಿ ಆಚರಿಸಲಾಗುವುದು. ವಿವಾಹ ಪಂಚಮಿಯಂದು ಶ್ರೀರಾಮ ಮತ್ತು ಸೀತೆ ಮದುವೆಯಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ವಿವಾಹ ಪಂಚಮಿಯಂದು ಕೆಲವೊಂದು ಪರಿಹಾರ ಮಾಡಿದರೆ ಮದುವೆಯಲ್ಲಿದ್ದ ಅಡೆತಡೆಗಳು ದೂರಾಗಿ ವೈವಾಹಿಕ ಬದುಕಿಗೆ ಕಾಲಿಡುತ್ತಾರೆ ಎಂದು ಹೇಳಲಾಗುವುದು.

ವಿವಾಹ ಪಂಚಮಿ ತಿಥಿ
ಡಿಸೆಂಬರ್ 5 ಮಧ್ಯರಾತ್ರಿ 12:49ಕ್ಕೆ ಪ್ರಾರಂಭವಾಗಿ ಡಿಸೆಂಬರ್ 6 ರಾತ್ರಿ 12:07ಕ್ಕೆ ಮುಕ್ತಾಯವಾಗಲಿದೆ, ವಿವಾಹ ಪಂಚಮಿಯನ್ನು ಉದಯ ತಿಥಿ ಪ್ರಕಾರ ಡಿಸೆಂಬರ್ 6ರಂದು ಆಚರಿಸಲಾಗುವುದು.
ವಿವಾಹ ಪಂಚಮಿಯಂದು ಮದುವೆಯಾಗದವರು ಈ ಪರಿಹಾರ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುವುದು
ವಿವಾಹ ಪಂಚಮಿಯಂದು ಅವಾಹಿತರು ಶ್ರೀರಾಮ ಮತ್ತು ಸೀತೆಯನ್ನು ಆರಾಧನೆ ಮಾಡುವುದರಿಂದ ಮದುವೆಗೆ ಇದ್ದ ಅಡೆತಡೆಗಳು ದೂರಾಗುವುದು. ಜಾತಕದಲ್ಲಿ ಏನಾದರು ದೋಷವಿದ್ದರೆ ಅದು ದೂರಾಗಿ ಒಳ್ಳೆಯ ಸಂಗಾತಿ ದೊರೆಯುವುದು ಎಂದು ನಂಬಲಾಗಿದೆ. ಈ ದಿನ ಜಾನಕಿ ಮಂಗಲ ಪಠಣೆ ಮಾಡಿದರೆ ಮದುವೆ ಸಂಬಂಧ ಬೇಗನೆ ಕೂಡಿ ಬರಲಿದೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಯಿದ್ದರೆ
ವೈವಾಹಿಕ ಜೀವನದಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ, ಸಮಸ್ಯೆಯಿದ್ದರೆ ವಿವಾಹ ಪಂಚಮಿ ಆಚರಣೆ ಮಾಡುವುದರಿಂದ ಈ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಲಾಗುವುದು. ಪಾರ್ವತಿ ದೇವಿಗೆ ಅಲಂಕಾರ ಮಾಡಿ ಆರಾಧನೆ ಮಾಡುವುದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ಈ ದಿನದಿಂದ 11 ದಿನದವರೆಗೆ ಶ್ರೀ ರಾಮ ಚರಿತ 108 ಪಠಿಸಬೇಕು.
ಓಂ ಜಾನಕಿವಲ್ಲಭಾಯೇ ನಮಃ"
ವಿವಾಹ ಪಂಚಮಿಯನ್ನು ಹೇಗೆ ಆಚರಿಸಲಾಗುವುದು
- ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು
- ನಂತರ ಸೂರ್ಯನಿಗೆ ನಮಸ್ಕಾರ ಮಾಡಬೇಕು
- ಶ್ರೀರಾಮ ಮತ್ತು ಸೀತೆಯ ವಿಗ್ರಹವನ್ನು ಅಲಂಕರಿಸಿ. ಕೆಂಪು ವಸ್ತ್ರ, ಹಣ್ಣು,ಹೂವು, ಧೂಪ ಇವುಗಳನ್ನು ಅರ್ಪಿಸಬೇಕು.
- ಈ ದಿನ ದೀಪವನ್ನು ಹಚ್ಚಿದ ಬಳಿಕ ಶ್ರೀರಾಮಯಣ ಓದಬೇಕು.
- ಈ ದಿನ ಉಪವಾಸವಿದ್ದು ಶ್ರೀರಾಮ ಹಾಗೂ ಸೀತೆಗೆ ಪೂಜೆಯನ್ನು ಮಾಡುವುದು ವಿವಾಹ ಸಂಬಂಧಿತ ಎಲ್ಲಾ ಅಡೆತಡೆ ದೂರಾಗಲಿದೆ.
ಈ ದಿನ ಮದುವೆಯಾಗಬಾರದು?
ವಿವಾಹ ಪಂಚಮಿಯಂದು ಮದುವೆಯಾಗಲು ಪರಿಹಾರ ಮಾಡಬಹುದು, ಆದರೆ ಈ ದಿನ ಮದುವೆಯಾಗಬಾರದು.ಈ ದಿನ ಮದುವೆಯಾದರೆ ವೈವಾಹಿಕ ಬದುಕಿನಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ, ಹಾಗಾಗಿ ವಿವಾಹ ಪಂಚಮಿಯಂದು ಮದುವೆಯಾಗುವುದಿಲ್ಲ.
ಸೀತೆ ಮಾತೆಗೆ ತಪ್ಪಿರಲಿಲ್ಲ ಕಷ್ಟ
ಸೀತೆಗೆ ಶ್ರೀರಾಮನಂಥ ಪತಿ ಸಿಕ್ಕರೂ ಕಷ್ಟ ತಪ್ಪಲಿಲ್ಲ, ಅರಣ್ಯ ವಾಸ ಮಾಡಬೇಕಾಗಿ ಬಂತು, ನಂತರ ರಾವಣ ಅಪಹರಿಸಿದ, ಅಲ್ಲಿಂದ ಶ್ರೀರಾಮ ಸೀತೆಯನ್ನು ರಕ್ಷಣೆ ಮಾಡಿ ಬಂದ ಮೇಲೂ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಲಿಲ್ಲ, ಅಪವಾದ ಎದುರಿಸಬೇಕಾಗಿ ಬಂತು, ಅಗ್ನಿ ಪರೀಕ್ಷೆಗೆ ಒಳಗಾದಳು ಹೀಗೆ ಸೀತೆ ವೈವಾಹಿಕ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದಳು, ಹಾಗಾಗಿ ವಿವಾಹ ಪಂಚಮಿಯಂದು ಮದುವೆ ಮಾಡುವುದಿಲ್ಲ.
ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿದೆ ವಿಶೇಷ ಪೂಜೆ
ಇದೀಗ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ, ಈ ದಿನದಂದು ಶ್ರೀರಾಮ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಅಧಿಕವಿರಲಿದೆ.



Click it and Unblock the Notifications