Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ: ಮದುವೆಯಲ್ಲಿ ಅಡೆತಡೆಯಿದ್ದರೆ, ದಾಂಪತ್ಯದಲ್ಲಿ ಸಮಸ್ಯೆಯಿದ್ದರೆ ಈ ದಿನ ಮಾಡಬೇಕಾದ ಪರಿಹಾರವೇನು?
ಡಿಸೆಂಬರ್ 6ಕ್ಕೆ ವಿವಾಹ ಪಂಚಮಿ, ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ವಿವಾಹ ಪಂಚಮಿ ಆಚರಿಸಲಾಗುವುದು. ವಿವಾಹ ಪಂಚಮಿಯಂದು ಶ್ರೀರಾಮ ಮತ್ತು ಸೀತೆ ಮದುವೆಯಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ವಿವಾಹ ಪಂಚಮಿಯಂದು ಕೆಲವೊಂದು ಪರಿಹಾರ ಮಾಡಿದರೆ ಮದುವೆಯಲ್ಲಿದ್ದ ಅಡೆತಡೆಗಳು ದೂರಾಗಿ ವೈವಾಹಿಕ ಬದುಕಿಗೆ ಕಾಲಿಡುತ್ತಾರೆ ಎಂದು ಹೇಳಲಾಗುವುದು.

ವಿವಾಹ ಪಂಚಮಿ ತಿಥಿ
ಡಿಸೆಂಬರ್ 5 ಮಧ್ಯರಾತ್ರಿ 12:49ಕ್ಕೆ ಪ್ರಾರಂಭವಾಗಿ ಡಿಸೆಂಬರ್ 6 ರಾತ್ರಿ 12:07ಕ್ಕೆ ಮುಕ್ತಾಯವಾಗಲಿದೆ, ವಿವಾಹ ಪಂಚಮಿಯನ್ನು ಉದಯ ತಿಥಿ ಪ್ರಕಾರ ಡಿಸೆಂಬರ್ 6ರಂದು ಆಚರಿಸಲಾಗುವುದು.
ವಿವಾಹ ಪಂಚಮಿಯಂದು ಮದುವೆಯಾಗದವರು ಈ ಪರಿಹಾರ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುವುದು
ವಿವಾಹ ಪಂಚಮಿಯಂದು ಅವಾಹಿತರು ಶ್ರೀರಾಮ ಮತ್ತು ಸೀತೆಯನ್ನು ಆರಾಧನೆ ಮಾಡುವುದರಿಂದ ಮದುವೆಗೆ ಇದ್ದ ಅಡೆತಡೆಗಳು ದೂರಾಗುವುದು. ಜಾತಕದಲ್ಲಿ ಏನಾದರು ದೋಷವಿದ್ದರೆ ಅದು ದೂರಾಗಿ ಒಳ್ಳೆಯ ಸಂಗಾತಿ ದೊರೆಯುವುದು ಎಂದು ನಂಬಲಾಗಿದೆ. ಈ ದಿನ ಜಾನಕಿ ಮಂಗಲ ಪಠಣೆ ಮಾಡಿದರೆ ಮದುವೆ ಸಂಬಂಧ ಬೇಗನೆ ಕೂಡಿ ಬರಲಿದೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಯಿದ್ದರೆ
ವೈವಾಹಿಕ ಜೀವನದಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ, ಸಮಸ್ಯೆಯಿದ್ದರೆ ವಿವಾಹ ಪಂಚಮಿ ಆಚರಣೆ ಮಾಡುವುದರಿಂದ ಈ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಲಾಗುವುದು. ಪಾರ್ವತಿ ದೇವಿಗೆ ಅಲಂಕಾರ ಮಾಡಿ ಆರಾಧನೆ ಮಾಡುವುದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ಈ ದಿನದಿಂದ 11 ದಿನದವರೆಗೆ ಶ್ರೀ ರಾಮ ಚರಿತ 108 ಪಠಿಸಬೇಕು.
ಓಂ ಜಾನಕಿವಲ್ಲಭಾಯೇ ನಮಃ"
ವಿವಾಹ ಪಂಚಮಿಯನ್ನು ಹೇಗೆ ಆಚರಿಸಲಾಗುವುದು
- ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು
- ನಂತರ ಸೂರ್ಯನಿಗೆ ನಮಸ್ಕಾರ ಮಾಡಬೇಕು
- ಶ್ರೀರಾಮ ಮತ್ತು ಸೀತೆಯ ವಿಗ್ರಹವನ್ನು ಅಲಂಕರಿಸಿ. ಕೆಂಪು ವಸ್ತ್ರ, ಹಣ್ಣು,ಹೂವು, ಧೂಪ ಇವುಗಳನ್ನು ಅರ್ಪಿಸಬೇಕು.
- ಈ ದಿನ ದೀಪವನ್ನು ಹಚ್ಚಿದ ಬಳಿಕ ಶ್ರೀರಾಮಯಣ ಓದಬೇಕು.
- ಈ ದಿನ ಉಪವಾಸವಿದ್ದು ಶ್ರೀರಾಮ ಹಾಗೂ ಸೀತೆಗೆ ಪೂಜೆಯನ್ನು ಮಾಡುವುದು ವಿವಾಹ ಸಂಬಂಧಿತ ಎಲ್ಲಾ ಅಡೆತಡೆ ದೂರಾಗಲಿದೆ.
ಈ ದಿನ ಮದುವೆಯಾಗಬಾರದು?
ವಿವಾಹ ಪಂಚಮಿಯಂದು ಮದುವೆಯಾಗಲು ಪರಿಹಾರ ಮಾಡಬಹುದು, ಆದರೆ ಈ ದಿನ ಮದುವೆಯಾಗಬಾರದು.ಈ ದಿನ ಮದುವೆಯಾದರೆ ವೈವಾಹಿಕ ಬದುಕಿನಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ, ಹಾಗಾಗಿ ವಿವಾಹ ಪಂಚಮಿಯಂದು ಮದುವೆಯಾಗುವುದಿಲ್ಲ.
ಸೀತೆ ಮಾತೆಗೆ ತಪ್ಪಿರಲಿಲ್ಲ ಕಷ್ಟ
ಸೀತೆಗೆ ಶ್ರೀರಾಮನಂಥ ಪತಿ ಸಿಕ್ಕರೂ ಕಷ್ಟ ತಪ್ಪಲಿಲ್ಲ, ಅರಣ್ಯ ವಾಸ ಮಾಡಬೇಕಾಗಿ ಬಂತು, ನಂತರ ರಾವಣ ಅಪಹರಿಸಿದ, ಅಲ್ಲಿಂದ ಶ್ರೀರಾಮ ಸೀತೆಯನ್ನು ರಕ್ಷಣೆ ಮಾಡಿ ಬಂದ ಮೇಲೂ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಲಿಲ್ಲ, ಅಪವಾದ ಎದುರಿಸಬೇಕಾಗಿ ಬಂತು, ಅಗ್ನಿ ಪರೀಕ್ಷೆಗೆ ಒಳಗಾದಳು ಹೀಗೆ ಸೀತೆ ವೈವಾಹಿಕ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದಳು, ಹಾಗಾಗಿ ವಿವಾಹ ಪಂಚಮಿಯಂದು ಮದುವೆ ಮಾಡುವುದಿಲ್ಲ.
ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯಲಿದೆ ವಿಶೇಷ ಪೂಜೆ
ಇದೀಗ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ, ಈ ದಿನದಂದು ಶ್ರೀರಾಮ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಅಧಿಕವಿರಲಿದೆ.



Click it and Unblock the Notifications











