Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಉತ್ತರ ಪ್ರದೇಶದಲ್ಲಿ ನಾಡಿಗೆ ಬಂದ ಈ ದೈತ್ಯ ಮೊಸಳೆಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಮೊಸಳೆ ಬೇಲಿ ಹಾರಲು ಪ್ರಯತ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅಷ್ಟೊಂದು ದೊಡ್ಡ ಮೊಸಳೆ ಅದೂ ರಸ್ತೆಯಲ್ಲಿ ನೋಡಿದ ಜನರು ಭಯಭೀತರಾಗಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ಶೇರ್ ಮಾಡಿ ಉತ್ತರ ಪ್ರದೇಶದ ಬುಲೇಂದರ್ಶರ್ ಜಿಲ್ಲೆಗೆ ಈ ಮೊಸಳೆ ಗಂಗಾ ಕಾಲುವೆಯಿಂದ ಬಂದಿದೆ. ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಆ ಮೊಸಳೆ ರಕ್ಷಣೆ ಮಾಡಿ ನದಿಗೆ ಬಿಟ್ಟಿದ್ದಾರೆ.

ತುಂಬಾ ಜನರು ಈ ಮೊಸಳ ಬಂದಿರುವ ವೀಡಿಯೋ ಮಾಡಿದ್ದು ಇದೀಗ ಈ ವೀಡಿಯೋಗಳು ವೈರಲ್ ಆಗಿವೆ, ಈ ಮೊಸಳೆ ಸುಮಾರು 10 ಅಡಿ ಉದ್ದವಿದೆ.
ಇದನ್ನು ಹೇಗೆ ರಕ್ಷಣೆ ಮಾಡಲಾಯ್ತು?
ಮೊಸಳೆಯ ಬಾಯಿ ಭಾಗವನ್ನು ಬಟ್ಟೆಯಿಂದ ಮುಚ್ಚಿ, ಅದನ್ನು ಅಲುಗಾಡದಂತೆ ಹಗ್ಗದಿಂದ ಕಟ್ಟಿ ಹಿಡಿದು ಅದನ್ನು ಕೊಂಡೊಯ್ಯಲಾಯ್ತು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾಹುತ ಉಂಟಾಗಬಹುದು, ಅದ್ದರಿಂದ ಅತಿ ಜಾಗ್ರತೆಯಿಂದ ಮೊಸಳೆಯನ್ನು ಕಟ್ಟಿ ಕೊಂಡೊಯ್ಯೊದ್ದು ನಂತರ ಹಗ್ಗ ಬಿಚ್ಚಿ ನೀರಿಗೆ ಬಿಡಲಾಯ್ತು.
ಮೊಸಳೆ ಈ ರೀತಿ ಆಗಾಗ ನೀರಿನಿಂದ ನಾಡಿಗೆ ಬಂದಿರುವ ಅನೇಕ ಘಟನೆಗಳಿವೆ. ನದಿಯಲ್ಲಿ ನೀರಿನಂಶ ಹೆಚ್ಚಾದಾಗ ನೀರು ಉಕ್ಕಿ ಹರಿಯಲಾರಂಭಿಸಿದಾಗ ಕೂಡ ಮೊಸಳೆ ನೀರಿನಿಂದ ಹೊರ ಬರುತ್ತದೆ. ಈ ಮೊಸಳೆ ನೀರಿನಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೊರ ಬಂದಿದೆ ಎಂದು ಹೇಳಲಾಗುವುದು.
ಅಷ್ಟು ದೊಡ್ಡ ಮೊಸಳೆಯು ನದಿಯಿಂದ ಹೊರಬಂದು ಅಲ್ಲಿರುವ ಕಬ್ಬಿಣದ ಬೇಲಿ ಹತ್ತಲು ಹೊರಟಂತೆ ಕಾಣುತ್ತದೆ. ಈ ಮೊಸಳೆಗೆ ನೀರಿನಿಂದ ಹೊರ ಬಂದ ಮೇಲೆ ಗಲಿಬಿಲಿಯಾಗಿರಬಹುದು, ಇದನ್ನು ಸೇರಿ ನೆರೆದಿರುವ ಜನ, ಎತ್ತ ಹೋಗಬೇಕು ಅಂತ ಗೊತ್ತಾಗುವುದಿಲ್ಲ, ಹಾಗಾಗಿ ರೇಲಿಂಗ್ ಹತ್ತಲು ನೋಡಿದೆ.
ಬುಲಂದ್ಶಹರ್ನ ನರೋರಾ ಗಂಗಾ ಕಾಲುವೆ ಬಳಿ ಹಾದುಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಮೊಸಳೆಯನ್ನು ರಕ್ಷಿಣೆ ಮಾಡಲಾಗಿದೆ, ಈ ರಕ್ಷಣೆ ಕಾರ್ಯಾಚರಣೆಯಲ್ಲಿ ಯಾವುದೇ ಜನರಿಗೆ ತೊಂದರೆಯಾಗಿಲ್ಲ, ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.



Click it and Unblock the Notifications
