Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಉತ್ತರ ಪ್ರದೇಶದಲ್ಲಿ ನಾಡಿಗೆ ಬಂದ ಈ ದೈತ್ಯ ಮೊಸಳೆಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಮೊಸಳೆ ಬೇಲಿ ಹಾರಲು ಪ್ರಯತ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅಷ್ಟೊಂದು ದೊಡ್ಡ ಮೊಸಳೆ ಅದೂ ರಸ್ತೆಯಲ್ಲಿ ನೋಡಿದ ಜನರು ಭಯಭೀತರಾಗಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ಶೇರ್ ಮಾಡಿ ಉತ್ತರ ಪ್ರದೇಶದ ಬುಲೇಂದರ್ಶರ್ ಜಿಲ್ಲೆಗೆ ಈ ಮೊಸಳೆ ಗಂಗಾ ಕಾಲುವೆಯಿಂದ ಬಂದಿದೆ. ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಆ ಮೊಸಳೆ ರಕ್ಷಣೆ ಮಾಡಿ ನದಿಗೆ ಬಿಟ್ಟಿದ್ದಾರೆ.

ತುಂಬಾ ಜನರು ಈ ಮೊಸಳ ಬಂದಿರುವ ವೀಡಿಯೋ ಮಾಡಿದ್ದು ಇದೀಗ ಈ ವೀಡಿಯೋಗಳು ವೈರಲ್ ಆಗಿವೆ, ಈ ಮೊಸಳೆ ಸುಮಾರು 10 ಅಡಿ ಉದ್ದವಿದೆ.
ಇದನ್ನು ಹೇಗೆ ರಕ್ಷಣೆ ಮಾಡಲಾಯ್ತು?
ಮೊಸಳೆಯ ಬಾಯಿ ಭಾಗವನ್ನು ಬಟ್ಟೆಯಿಂದ ಮುಚ್ಚಿ, ಅದನ್ನು ಅಲುಗಾಡದಂತೆ ಹಗ್ಗದಿಂದ ಕಟ್ಟಿ ಹಿಡಿದು ಅದನ್ನು ಕೊಂಡೊಯ್ಯಲಾಯ್ತು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾಹುತ ಉಂಟಾಗಬಹುದು, ಅದ್ದರಿಂದ ಅತಿ ಜಾಗ್ರತೆಯಿಂದ ಮೊಸಳೆಯನ್ನು ಕಟ್ಟಿ ಕೊಂಡೊಯ್ಯೊದ್ದು ನಂತರ ಹಗ್ಗ ಬಿಚ್ಚಿ ನೀರಿಗೆ ಬಿಡಲಾಯ್ತು.
ಮೊಸಳೆ ಈ ರೀತಿ ಆಗಾಗ ನೀರಿನಿಂದ ನಾಡಿಗೆ ಬಂದಿರುವ ಅನೇಕ ಘಟನೆಗಳಿವೆ. ನದಿಯಲ್ಲಿ ನೀರಿನಂಶ ಹೆಚ್ಚಾದಾಗ ನೀರು ಉಕ್ಕಿ ಹರಿಯಲಾರಂಭಿಸಿದಾಗ ಕೂಡ ಮೊಸಳೆ ನೀರಿನಿಂದ ಹೊರ ಬರುತ್ತದೆ. ಈ ಮೊಸಳೆ ನೀರಿನಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೊರ ಬಂದಿದೆ ಎಂದು ಹೇಳಲಾಗುವುದು.
ಅಷ್ಟು ದೊಡ್ಡ ಮೊಸಳೆಯು ನದಿಯಿಂದ ಹೊರಬಂದು ಅಲ್ಲಿರುವ ಕಬ್ಬಿಣದ ಬೇಲಿ ಹತ್ತಲು ಹೊರಟಂತೆ ಕಾಣುತ್ತದೆ. ಈ ಮೊಸಳೆಗೆ ನೀರಿನಿಂದ ಹೊರ ಬಂದ ಮೇಲೆ ಗಲಿಬಿಲಿಯಾಗಿರಬಹುದು, ಇದನ್ನು ಸೇರಿ ನೆರೆದಿರುವ ಜನ, ಎತ್ತ ಹೋಗಬೇಕು ಅಂತ ಗೊತ್ತಾಗುವುದಿಲ್ಲ, ಹಾಗಾಗಿ ರೇಲಿಂಗ್ ಹತ್ತಲು ನೋಡಿದೆ.
ಬುಲಂದ್ಶಹರ್ನ ನರೋರಾ ಗಂಗಾ ಕಾಲುವೆ ಬಳಿ ಹಾದುಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಮೊಸಳೆಯನ್ನು ರಕ್ಷಿಣೆ ಮಾಡಲಾಗಿದೆ, ಈ ರಕ್ಷಣೆ ಕಾರ್ಯಾಚರಣೆಯಲ್ಲಿ ಯಾವುದೇ ಜನರಿಗೆ ತೊಂದರೆಯಾಗಿಲ್ಲ, ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.



Click it and Unblock the Notifications

