Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಉತ್ತರ ಪ್ರದೇಶದಲ್ಲಿ ನಾಡಿಗೆ ಬಂದ ಈ ದೈತ್ಯ ಮೊಸಳೆಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಮೊಸಳೆ ಬೇಲಿ ಹಾರಲು ಪ್ರಯತ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅಷ್ಟೊಂದು ದೊಡ್ಡ ಮೊಸಳೆ ಅದೂ ರಸ್ತೆಯಲ್ಲಿ ನೋಡಿದ ಜನರು ಭಯಭೀತರಾಗಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ಶೇರ್ ಮಾಡಿ ಉತ್ತರ ಪ್ರದೇಶದ ಬುಲೇಂದರ್ಶರ್ ಜಿಲ್ಲೆಗೆ ಈ ಮೊಸಳೆ ಗಂಗಾ ಕಾಲುವೆಯಿಂದ ಬಂದಿದೆ. ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಆ ಮೊಸಳೆ ರಕ್ಷಣೆ ಮಾಡಿ ನದಿಗೆ ಬಿಟ್ಟಿದ್ದಾರೆ.

ತುಂಬಾ ಜನರು ಈ ಮೊಸಳ ಬಂದಿರುವ ವೀಡಿಯೋ ಮಾಡಿದ್ದು ಇದೀಗ ಈ ವೀಡಿಯೋಗಳು ವೈರಲ್ ಆಗಿವೆ, ಈ ಮೊಸಳೆ ಸುಮಾರು 10 ಅಡಿ ಉದ್ದವಿದೆ.
ಇದನ್ನು ಹೇಗೆ ರಕ್ಷಣೆ ಮಾಡಲಾಯ್ತು?
ಮೊಸಳೆಯ ಬಾಯಿ ಭಾಗವನ್ನು ಬಟ್ಟೆಯಿಂದ ಮುಚ್ಚಿ, ಅದನ್ನು ಅಲುಗಾಡದಂತೆ ಹಗ್ಗದಿಂದ ಕಟ್ಟಿ ಹಿಡಿದು ಅದನ್ನು ಕೊಂಡೊಯ್ಯಲಾಯ್ತು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾಹುತ ಉಂಟಾಗಬಹುದು, ಅದ್ದರಿಂದ ಅತಿ ಜಾಗ್ರತೆಯಿಂದ ಮೊಸಳೆಯನ್ನು ಕಟ್ಟಿ ಕೊಂಡೊಯ್ಯೊದ್ದು ನಂತರ ಹಗ್ಗ ಬಿಚ್ಚಿ ನೀರಿಗೆ ಬಿಡಲಾಯ್ತು.
ಮೊಸಳೆ ಈ ರೀತಿ ಆಗಾಗ ನೀರಿನಿಂದ ನಾಡಿಗೆ ಬಂದಿರುವ ಅನೇಕ ಘಟನೆಗಳಿವೆ. ನದಿಯಲ್ಲಿ ನೀರಿನಂಶ ಹೆಚ್ಚಾದಾಗ ನೀರು ಉಕ್ಕಿ ಹರಿಯಲಾರಂಭಿಸಿದಾಗ ಕೂಡ ಮೊಸಳೆ ನೀರಿನಿಂದ ಹೊರ ಬರುತ್ತದೆ. ಈ ಮೊಸಳೆ ನೀರಿನಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೊರ ಬಂದಿದೆ ಎಂದು ಹೇಳಲಾಗುವುದು.
ಅಷ್ಟು ದೊಡ್ಡ ಮೊಸಳೆಯು ನದಿಯಿಂದ ಹೊರಬಂದು ಅಲ್ಲಿರುವ ಕಬ್ಬಿಣದ ಬೇಲಿ ಹತ್ತಲು ಹೊರಟಂತೆ ಕಾಣುತ್ತದೆ. ಈ ಮೊಸಳೆಗೆ ನೀರಿನಿಂದ ಹೊರ ಬಂದ ಮೇಲೆ ಗಲಿಬಿಲಿಯಾಗಿರಬಹುದು, ಇದನ್ನು ಸೇರಿ ನೆರೆದಿರುವ ಜನ, ಎತ್ತ ಹೋಗಬೇಕು ಅಂತ ಗೊತ್ತಾಗುವುದಿಲ್ಲ, ಹಾಗಾಗಿ ರೇಲಿಂಗ್ ಹತ್ತಲು ನೋಡಿದೆ.
ಬುಲಂದ್ಶಹರ್ನ ನರೋರಾ ಗಂಗಾ ಕಾಲುವೆ ಬಳಿ ಹಾದುಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಮೊಸಳೆಯನ್ನು ರಕ್ಷಿಣೆ ಮಾಡಲಾಗಿದೆ, ಈ ರಕ್ಷಣೆ ಕಾರ್ಯಾಚರಣೆಯಲ್ಲಿ ಯಾವುದೇ ಜನರಿಗೆ ತೊಂದರೆಯಾಗಿಲ್ಲ, ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.



Click it and Unblock the Notifications
