Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಉತ್ತರ ಪ್ರದೇಶದಲ್ಲಿ ನಾಡಿಗೆ ಬಂದ ಈ ದೈತ್ಯ ಮೊಸಳೆಯ ವೀಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ದೊಡ್ಡದೊಂದು ಮೊಸಳೆ ಬೇಲಿ ಹಾರಲು ಪ್ರಯತ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅಷ್ಟೊಂದು ದೊಡ್ಡ ಮೊಸಳೆ ಅದೂ ರಸ್ತೆಯಲ್ಲಿ ನೋಡಿದ ಜನರು ಭಯಭೀತರಾಗಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ಶೇರ್ ಮಾಡಿ ಉತ್ತರ ಪ್ರದೇಶದ ಬುಲೇಂದರ್ಶರ್ ಜಿಲ್ಲೆಗೆ ಈ ಮೊಸಳೆ ಗಂಗಾ ಕಾಲುವೆಯಿಂದ ಬಂದಿದೆ. ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಆ ಮೊಸಳೆ ರಕ್ಷಣೆ ಮಾಡಿ ನದಿಗೆ ಬಿಟ್ಟಿದ್ದಾರೆ.

ತುಂಬಾ ಜನರು ಈ ಮೊಸಳ ಬಂದಿರುವ ವೀಡಿಯೋ ಮಾಡಿದ್ದು ಇದೀಗ ಈ ವೀಡಿಯೋಗಳು ವೈರಲ್ ಆಗಿವೆ, ಈ ಮೊಸಳೆ ಸುಮಾರು 10 ಅಡಿ ಉದ್ದವಿದೆ.
ಇದನ್ನು ಹೇಗೆ ರಕ್ಷಣೆ ಮಾಡಲಾಯ್ತು?
ಮೊಸಳೆಯ ಬಾಯಿ ಭಾಗವನ್ನು ಬಟ್ಟೆಯಿಂದ ಮುಚ್ಚಿ, ಅದನ್ನು ಅಲುಗಾಡದಂತೆ ಹಗ್ಗದಿಂದ ಕಟ್ಟಿ ಹಿಡಿದು ಅದನ್ನು ಕೊಂಡೊಯ್ಯಲಾಯ್ತು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅನಾಹುತ ಉಂಟಾಗಬಹುದು, ಅದ್ದರಿಂದ ಅತಿ ಜಾಗ್ರತೆಯಿಂದ ಮೊಸಳೆಯನ್ನು ಕಟ್ಟಿ ಕೊಂಡೊಯ್ಯೊದ್ದು ನಂತರ ಹಗ್ಗ ಬಿಚ್ಚಿ ನೀರಿಗೆ ಬಿಡಲಾಯ್ತು.
ಮೊಸಳೆ ಈ ರೀತಿ ಆಗಾಗ ನೀರಿನಿಂದ ನಾಡಿಗೆ ಬಂದಿರುವ ಅನೇಕ ಘಟನೆಗಳಿವೆ. ನದಿಯಲ್ಲಿ ನೀರಿನಂಶ ಹೆಚ್ಚಾದಾಗ ನೀರು ಉಕ್ಕಿ ಹರಿಯಲಾರಂಭಿಸಿದಾಗ ಕೂಡ ಮೊಸಳೆ ನೀರಿನಿಂದ ಹೊರ ಬರುತ್ತದೆ. ಈ ಮೊಸಳೆ ನೀರಿನಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೊರ ಬಂದಿದೆ ಎಂದು ಹೇಳಲಾಗುವುದು.
ಅಷ್ಟು ದೊಡ್ಡ ಮೊಸಳೆಯು ನದಿಯಿಂದ ಹೊರಬಂದು ಅಲ್ಲಿರುವ ಕಬ್ಬಿಣದ ಬೇಲಿ ಹತ್ತಲು ಹೊರಟಂತೆ ಕಾಣುತ್ತದೆ. ಈ ಮೊಸಳೆಗೆ ನೀರಿನಿಂದ ಹೊರ ಬಂದ ಮೇಲೆ ಗಲಿಬಿಲಿಯಾಗಿರಬಹುದು, ಇದನ್ನು ಸೇರಿ ನೆರೆದಿರುವ ಜನ, ಎತ್ತ ಹೋಗಬೇಕು ಅಂತ ಗೊತ್ತಾಗುವುದಿಲ್ಲ, ಹಾಗಾಗಿ ರೇಲಿಂಗ್ ಹತ್ತಲು ನೋಡಿದೆ.
ಬುಲಂದ್ಶಹರ್ನ ನರೋರಾ ಗಂಗಾ ಕಾಲುವೆ ಬಳಿ ಹಾದುಹೋಗುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಮೊಸಳೆಯನ್ನು ರಕ್ಷಿಣೆ ಮಾಡಲಾಗಿದೆ, ಈ ರಕ್ಷಣೆ ಕಾರ್ಯಾಚರಣೆಯಲ್ಲಿ ಯಾವುದೇ ಜನರಿಗೆ ತೊಂದರೆಯಾಗಿಲ್ಲ, ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.



Click it and Unblock the Notifications
