Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ! ಕೋವಿಡ್ ನಂತರ ಹೆಚ್ಚಾಯ್ತಾ ಹೃದಯಾಘಾತ!
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ರಾಜ್ ಕುಮಾರ್ ಸಾವಿನ ದೊಡ್ಮನೆ ಕುಟುಂಬಕ್ಕೆ ಸ್ಪಂದನಾ ಅವರ ಸಾವು ಬಹು ದೊಡ್ಡ ಆಘಾತ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಥೈಲಾಂಡ್ ನ ಪ್ರವಾಸಕ್ಕೆ ಹೋಗಿದ್ದ ವಿಜಯ ರಾಘವೇಂದ್ರ ಪತ್ನಿ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ.

ಮಂಗಳೂರು ಮೂಲದವರಾದ ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿಯಾದ ಬಿ.ಕೆ ಶಿವರಾಮ್ ಅವರ ಮಗಳು. ಸಿನಿಮಾ ರಂಗದ ಯಾವುದೇ ಹಿನ್ನಲೆ ಇರದ ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ವಿಜಯ ರಾಘವೇಂದ್ರ ತಮ್ಮ ಪತ್ನಿಯ ಮೇಲೆ ಜೀವಾನೆ ಇಟ್ಟುಕೊಂಡಿದ್ರು. ಈ ನೋವನ್ನು ನಿಜಕ್ಕೂ ಅವರಿಂದ ಅರಗಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅಂತಾನೇ ಹೇಳಬಹುದು.
ಅನ್ಯೋನ್ಯವಾಗಿದ್ದ ದಂಪತಿಗಳು!
ವಿಜಯ ರಾಘವೇಂದ್ರ ಅವರು ಚಿತ್ರರಂಗದಲ್ಲಿದ್ರೂ ಕೂಡ ಯಾವುದೇ ವಿಚಾರಕ್ಕೂ ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ವಿಜಯ ರಾಘವೇಂದ್ರ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು. ಕುಟುಂಬಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡ್ತಿದ್ರು. ವಿಜಯ್ ರಾಘವೇಂದ್ರ ಕೂಡ ಮೃದು ಸ್ವಭಾವದವರು. ಅವರ ರೀತಿಯಲ್ಲಿಯೇ ಪತ್ನಿ ಕೂಡ ಮಾತು ಕಡಿಮೆ. ಟಿವಿ ಶೋ ಗಳಲ್ಲಿ ಕಾಣಿಸಿಕೊಂಡಾಗಲೂ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ತುಂಬಾನೇ ಸರಳವಾಗಿ ಇದ್ದವರು.
16 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಬೇಕಿದ್ದ ದಂಪತಿ!
ಇನ್ನೇನು ಕೇವಲ ಹತ್ತೊಂಬತ್ತು ದಿನದಲ್ಲಿ ತಮ್ಮ 16 ನೇ ವಾರ್ಷಿಕೋತ್ಸವವನ್ನು ಈ ದಂಪತಿ ಆಚರಿಸಿಕೊಳ್ಬೇಕಿತ್ತು. ಆದ್ರೀಗ ವಿಧಿಯ ಆಟವೇ ಬೇರೆಯಾಗಿದೆ. ಕೆಲವು ಮೂಲಗಳ ಪ್ರಕಾರ ಭಾನುವಾರ ರಾತ್ರಿ ಸ್ಪಂದನಾ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇನ್ನೂ ಸ್ಪಂದನಾ ಅವರು ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ರು.
ಅತೀ ಸಣ್ಣ ವಯಸ್ಸಿಗೆ ಹೃದಯಾಘಾತ ಆಗ್ತಿರೋದ್ಯಾಕೆ?
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸು ಅಂದ್ರೆ ನಲ್ವತ್ತರಿಂದ ಐವತ್ತರ ಆಸುಪಾಸಿನಲ್ಲಿರುವವರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಸ್ಪಂದನಾ ಕೂಡ ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದು ಈ ಸುದ್ದಿ ನಿಜವಾಗಿಯೂ ಬರ ಸಿಡಿಲು ಬಡಿದಂತಾಗಿದೆ. ತಜ್ಞರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ರು. ಆದ್ರೆ ಕೆಲ ವರ್ಷಗಳ ಹಿಂದೆಗೆ ಹೋಲಿಸಿದ್ರೆ ಮಹಿಳೆಯರ ಸಂಖ್ಯೆ ಕೂಡ ನಿಧಾನವಾಗಿ ಹೆಚ್ಚಾಗ್ತಿದೆ.
ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕಡಿಮೆ!
ಇತ್ತೀಚಿಗೆ ಹತ್ತು ವರ್ಷಗಳಲ್ಲಿ ಶೇ 30 ರಷ್ಟು ಜನ 45 ವರ್ಷಕ್ಕಿಂತ ಕಡಿಮೆ ಇರುವವರೇ ಹೃದಯಾಘಾತಕ್ಕೆ ತುತ್ತಾಗ್ತಿದ್ದಾರೆ ಅಂತ ತಜ್ಞರು ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಮಹಿಳೆಯರಲ್ಲಿ ಈ ರೀತಿ ಸಾವನ್ನಪ್ಪುವವರ ಸಂಖ್ಯೆ ಶೇಕಡಾ 50ಕ್ಕಿಂತ ಕಡಿಮೆ ಅಂತಾನೇ ಹೇಳಬಹುದು. ಇನ್ನೂ ಈ ರೀತಿ ಹೃದಯಾಘಾತ ಆಗುವವರಲ್ಲಿ ಶೇಕಡಾ 8ರಷ್ಟು ಮಂದಿ 40 ವರ್ಷಕ್ಕಿಂತ ಕೆಳಗಿನವರೇ ಆಗಿದ್ದಾರೆ.
ಕೋವಿಡ್ ನಂತರ ಹೃದಯಾಘಾತದ ಸಂಖ್ಯೆಗಳು ಹೆಚ್ಚಾಗ್ತಿದ್ಯಾ?
ತಜ್ಞರು ಹೇಳೋ ಪ್ರಕಾರ ಕೋವಿಡ್ ನಂತರ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ 3-5% ನಷ್ಟು ಹೆಚ್ಚಾಗಿದ್ಯಂತೆ. ಇನ್ನೂ ಈ ರೀತಿ ಹೃದಯಾಘಾತದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗೋದಕ್ಕೆ ಕಾರಣ ಈಗಿನ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿ.
ಸಾಲು ಸಾಲು ನಟರು ಹೃದಯಾಘಾತಕ್ಕೆ ಬಲಿ!
ಕಳೆದ ಕೆಲ ವರ್ಷದಿಂದ ಗಮನಿಸುತ್ತಾ ಬಂದ್ರೆ ಸಾಲು ಸಾಲು ನಟರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಿಂದಿ ಬಿಗ್ ಬಾಸ್ ನ ವಿನ್ನರ್ ಆಗಿದ್ದ ಸಿದ್ಧಾರ್ಥ್ ಶುಕ್ಲ, ನಟ ಚಿರಂಜೀವಿ ಸರ್ಜಾ, ನಟ ಡಾ.ಪುನೀತ್ ರಾಜ್ ಕುಮಾರ್ ಸದ್ಯ ಸ್ಪಂದನಾ ಅವರ ಸಾವು ಅವರ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಅಂತಾನೇ ಹೇಳಬಹುದು.
ಸ್ಪಂದನಾ ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ. ಹಾಗೂ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹಾರೈಸೋಣ.



Click it and Unblock the Notifications