Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೇಷರಾಶಿಯಲ್ಲಿ ಒಂದಾದ ರಾಹು-ಶುಕ್ರ! ಈ ನಾಲ್ಕು ರಾಶಿಯವರು ಜಾಗ್ರತೆ
ರಾಹು ಈಗಾಗಲೇ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಮಾರ್ಚ್ 12ಕ್ಕೆ ಶುಕ್ರನು ಮೇಷ ರಾಶಿಗೆ ಸಂಚರಿಸಿದ್ದು, ಹೀಗಾಗಿ ರಾಹು ಹಾಗೂ ಶುಕ್ರನು ಮೇಷ ರಾಶಿಯಲ್ಲಿ ಒಟ್ಟಾಗಿದ್ದಾರೆ. ಹೀಗಾಗಿ ರಾಹುವಿನ ಕೆಟ್ಟ ನೆರಳು ಕೆಲವೊಂದು ರಾಶಿಗಳ ಮೇಲೆ ಋಣಾತ್ಮಕ ಪರಿಣಾಮವನ್ನೇ ಉಂಟುಮಾಡಲಿದೆ.
ಶುಕ್ರನನ್ನು ದೈಹಿಕ ಸಂತೋಷ, ಕಲೆ ಮತ್ತು ಸೌಂದರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಶುಕ್ರ ಗ್ರಹವು ಜೀವನದಲ್ಲಿ ಬಹಳ ಮಂಗಳಕರ ಫಲಿತಾಂಶವನ್ನು ನೀಡುತ್ತದೆ. ಆದರೆ ರಾಹು, ಕೇತು ಅಥವಾ ಮಂಗಳದೊಂದಿಗೆ ಅದರ ಸಂಯೋಗವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡೋದಂತೂ ಸುಳ್ಳಲ್ಲ.

2023, ಮಾರ್ಚ್ 12 ರಿಂದ ಏಪ್ರಿಲ್ 6 ರ ತನಕ ರಾಹು ಹಾಗೂ ಶುಕ್ರ ಒಟ್ಟಾಗಿ ಮೇಷ ರಾಶಿಯಲ್ಲಿ ನಲೆಸಲಿದ್ದು, ಇದರ ಪರಿಣಾಮವನ್ನು ನಾಲ್ಕು ರಾಶಿಯವರು ಖಂಡಿತ ಎದುರಿಸಬೇಕಾಗುತ್ತದೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು? ಅದಕ್ಕೆ ಪರಿಹಾರವೇನು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ
ಮೇಷರಾಶಿಯಲ್ಲೇ ರಾಹು ಹಾಗೂ ಶುಕ್ರ ಒಂದಾಗುತ್ತಿದ್ದಾರೆ. ಇದು ನೇರವಾಗಿ ನಿಮ್ಮ ಸಂಬಂಧದ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೆ ಅಗತ್ಯವಿರದ ವ್ಯಕ್ತಿಗೆ ನೀವು ಹತ್ತಿರವಾಗುತ್ತೀರಿ. ಹಾಗೂ ನಿಮ್ಮ ಸಂಗಾತಿಯಿಂದ ನಿಮಗೆ ಮೋಸವಾಗುತ್ತದೆ. ಪ್ರೀತಿಯ ವಿಚಾರದಲ್ಲಿ ನಿಮ್ಮ ಗೊಂದಲ ಹಾಗೆಯೇ ಮುಂದುವರಿಯುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ನೀವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ವೃಷಭ ರಾಶಿ
ರಾಹು-ಶುಕ್ರ ಸಂಯೋಗ ಆಗುತ್ತಿರುವುದರಿಂದ ವೃಷಭ ರಾಶಿಯವರ ಹೊಸ ಸಂಬಂಧಗಳನ್ನು ಮಾಡುವಾಗ ಮುಂಜಾಗೃತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇನ್ನೂ ನಿಮ್ಮ ಪ್ರೀತಿ ವಿಚಾರದಲ್ಲೂ ಹಾಗೆಯೇ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳಿ. ಇನ್ನೂ ಈ ಸಮಯದಲ್ಲಿ ನಿಮ್ಮ ಮಾತು ಹಾಗೂ ನಡವಳಿಕೆಯಲ್ಲಿ ಹಿಡಿತವಿರಲಿ. ನಿಮ್ಮ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ.

ಕನ್ಯಾ ರಾಶಿ
ರಾಹು ಹಾಗೂ ಶುಕ್ರ ಮೇಷ ರಾಶಿಯಲ್ಲಿ ಒಟ್ಟಾಗುತ್ತಿರೋದ್ರಿಂದ ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಯಾಕಂದ್ರೆ ನಿಮ್ಮ ಮಾತು ಸಂಬಂಧಗಳನ್ನು ಹಾಳು ಮಾಡಬಹುದು. ಇನ್ನೂ ಪ್ರಯಣ ಮಾಡುವಾಗ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಇಲ್ಲದಿದ್ದರೆ ಅಪಾಯ ಖಂಡಿತ. ಇನ್ನೂ ನಿಮ್ಮ ಸಂಗಾತಿಗೆ ಪ್ರಾಶಸ್ತ್ಯ ನೀಡಿ ಅವರೊಂದಿಗೆ ಕಟುವಾಗಿ ನಡೆದುಕೊಳ್ಳಲೇಬೇಡಿ.

ಮೀನರಾಶಿ
ರಾಹು-ಶುಕ್ರನ ಸಂಯೋಗದ ಪರಿಣಾಮ ಮೀನ ರಾಶಿಯವರಲ್ಲಿ ಉದ್ವೇಗ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಸಮಸ್ಯೆಗಳನ್ನು ಪರಿಹರಿಸುವಾಗ ತೊಂದರೆ ಎದುರಾಗಬಹುದು. ಈ ಸಮಯದಲ್ಲಿ ನಿಮಗೆ ಕುಟುಂಬದ ಸಹಕಾರ ದೊರೆಯೋದಿಲ್ಲ.

ಪರಿಹಾರ ಕ್ರಮಗಳೇನು?
ರಾಹು ಹಾಗೂ ಶುಕ್ರನ ಸಂಯೋಗ ಮನುಷ್ಯನಿಗೆ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡೋದಂತೂ ಸುಳ್ಳಲ್ಲ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಎದ್ದು "ಓಂ ಶನ್ ಶುಕ್ರಯಾ ನಮಃ" ಮಂತ್ರವನ್ನು ಪಠಿಸಿ. ಹಾಗೂ ಪ್ರತಿ ಶುಕ್ರವಾರ ಉಪವಾಸ ವೃತ ಆಚರಣೆ ಮಾಡಿ. ಹಾಗೆಯೇ ಶುಕ್ರವಾರದ ದಿನ ಬಿಳಿ ಬಟ್ಟೆಗಳನ್ನೇ ಧರಿಸಿ. ಜ್ಯೋತಿಷಿಗಳನ್ನು ಸಂಪರ್ಕಿಸಿದ ನಂತರ ಶುಕ್ರನ ರತ್ನವಾದ ವಜ್ರ ಅಥವಾ ಒಪಲ್ ಮಣಿ ಧರಿಸಿ. ಇನ್ನೂ ರಾಹುವಿನ ಪರಿಣಾಮವನ್ನು ಕಡಿಮೆ ಮಾಡಲು ಪಕ್ಷಿಗಳಿಗೆ ಆಹಾರ ನೀಡಿ ಮತ್ತು ನಿರ್ಗತಿಕರಿಗೆ ಅನ್ನ ದಾನ ಮಾಡಿದರೆ ಒಳ್ಳೆಯದು.
ರಾಹು-ಶುಕ್ರನ ವಕ್ರ ದೃಷ್ಟಿ ನಾಲ್ಕು ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ಮುಂಜಾಗೃತೆಯಿಂದ ಇರೋದು ತುಂಬಾನೇ ಒಳ್ಳೆಯದು. ಗಂಡಾಂತರ ಕಳೆಯೋದಕ್ಕೆ ಕೆಲವೊಂದು ಪರಿಹಾರಗಳನ್ನು ಮಾಡಲೇಬೇಕು.



Click it and Unblock the Notifications