Latest Updates
-
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು?
ಬಿಗ್ಬಾಸ್ಗೆ ವಡಾ ಪಾವ್ ಹುಡುಗಿ..! ಆಕೆ ಒಂದು ದಿನದ ಆದಾಯ ಕೇಳಿದ್ರೆ ತಲೆ ತಿರುಗುತ್ತೆ..!
ಹಿಂದಿ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಬಿಗ್ಬಾಸ್ ಒಟಿಟಿ ಸೀಸನ್- 3 ಮತ್ತೆ ಆರಂಭವಾಗಿದೆ. ಈ ಬಾರಿ ಹಲವು ಬದಲಾವಣೆಗಳೊಂದಿಗೆ ಆರಂಭವಾಗುತ್ತಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಇದೇ ಮೊದಲ ಬಾರಿಗೆ ಈ ಶೋ ನಡೆಸಿಕೊಡಲಿದ್ದಾರೆ. ಇನ್ನೊಂದೆಡೆ ಈ ಬಾರಿ ಭಾರೀ ಸದ್ದು ಮಾಡಿದ್ದು ಸ್ಪರ್ಧಿಗಳು.
ಬಿಲ್ಗೇಸ್ಟ್ಗೆ ಚಾಯ್ ಮಾಡಿಕೊಟ್ಟು ಸುದ್ದಿಯಾಗಿದ್ದ ಡಾಲಿ ಚಾಯ್ ವಾಲಾ ಈ ಬಾರಿಯ ಒಟಿಟಿ ಸೀಸನ್ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತು, ಆದರೆ ಆಫರ್ ಬಂದಿದ್ದರೂ ನಾನು ಹೋಗುವುದಿಲ್ಲ ಎಂದು ಹೇಳಿ ಆತ ಅಚ್ಚರಿ ಮೂಡಿಸಿದ್ದ. ನಾನು ತಾಯಿ ಹಾಗೂ ನನ್ನ ಟೀ ಅಂಗಡಿ ಬಿಟ್ಟು ಬಿಗ್ಬಾಸ್ಗೆ ತೆರಳಿ 45 ದಿನ ಇರಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದ ಎಂದು ವರದಿಯಾಗಿದೆ.

ಆದರೆ ಈಗ ಸುದ್ದಿಯಾಗುತ್ತಿರುವ ಮತ್ತೊಬ್ಬ ಸ್ಪರ್ಧಿ ಎಂದರೆ ಅದು ವಡಾ ಪಾವ್ ಗರ್ಲ್, ಈ ಬಾರಿ ಸದ್ದು ಮಾಡಿದ್ದ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್ ಈಗ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾಳೆ. ಆಕೆಯ ಅಂಗಡಿ ಇಂದ ಇಡೀ ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳು ಸೇರಿ ಹಲವರ ನಡುವಿನ ಆಕೆಯ ಕಾದಾಟ ಭಾರೀ ಸದ್ದು ಮಾಡಿತ್ತು.
ಜೊತೆಗೆ ಆಕೆಯ ಅಂಗಡಿಯಲ್ಲಿ ಜನರು ಸಾಲಿನಲ್ಲಿ ನಿಂತು ವಡಾ ಪಾವ್ ಸವಿಯುವ ಸುದ್ದಿ ಹಾಗೂ ವಿಡಿಯೋಗಳು ಸಹ ಹರಿದಾಡುತ್ತಿದ್ದವು. ಆದ್ರೆ ಆಕೆಯ ಒಂದು ದಿನದ ಆದಾಯ ಕೇಳಿ ಜನರು ಮಾತ್ರವಲ್ಲ ಒಳಗಿರುವ ಬಿಗ್ಬಾಸ್ ಸ್ಪರ್ಧಿಗಳೇ ಶಾಕ್ ಆಗಿದ್ದಾರೆ. ಹೌದು ಆಕೆಯ ಬಳಿ ಐಷಾರಾಮಿ ವಸ್ತುಗಳಿವೆ. ಅಲ್ಲದೆ ಯಾವಾಗಲು ಆಕೆಯ ಅಂಗಡಿ ಗ್ರಾಹಕರಿಂದ ತುಂಬಿರುತ್ತದೆ.
ಆದ್ರೆ ಆಕೆ ದಿನವೊಂದಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿ ದುಡಿಯುತ್ತಾಳಂತೆ. ರಸ್ತೆ ಬದಿಯ ವಡಾ ಪಾವ್ ಅಂಗಡಿಯಲ್ಲೇ ಆಕೆಗೆ ನಿತ್ಯ 40 ಸಾವಿರ ಆದಾಯವಿದೆ ಎಂದು ಹೇಳಿಕೊಂಡಿದ್ದಾಳೆ. ಬಿಗ್ಬಾಸ್ ಮನೆಯಲ್ಲಿ ಮಾತನಾಡಿರುವ ಚಂದ್ರಿಕಾ ದೀಕ್ಷಿತ್ ಅವರು, ವಡಾ ಪಾವ್ ಮಾರಾಟ ಮಾಡಿ ಒಂದು ದಿನಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು ಗಳಿಸುತ್ತೇನೆ. ಇದಕ್ಕಾಗಿ ನಾನು ತುಂಬಾ ಕಷ್ಟ ಪಡುತ್ತೇನೆ. ನೀವು ಕಷ್ಟಪಟ್ಟರೇ ಒಳ್ಳೆಯ ಫಲ ಸಿಗುತ್ತದೆ. ಯಾವುದೇ ಕಾರಣಕ್ಕೂ ನೀವು ಸ್ಮಾರ್ಟ್fಫೋನ್ ಅಂತವುಗಳನ್ನ ಬಳಸಬೇಡಿ. ಬೆಳಗ್ಗೆ ಎದ್ದ ತಕ್ಷಣ ಹೊರಗಡೆ ಹೋಗಿ ನಿಮಗಾಗಿ ಕೆಲಸ ಮಾಡಿ ಎಂದು ಆಕೆ ಹೇಳಿದ್ದಾಳೆ.
ದೆಹಲಿಯ ವೈರಲ್ ವಡಾ ಪಾವ್ ಹುಡುಗಿ ಚಂದ್ರಿಕಾ ದೀಕ್ಷಿತ್, ಮಹಾರಾಷ್ಟ್ರದ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಖ್ಯಾತಿ ಪಡೆದಿದ್ದಾರೆ, ಈಗ ಬಿಗ್ ಬಾಸ್ OTT 3 ನಲ್ಲಿ ಸ್ಪರ್ಧಿಯಾಗಿದ್ದಾರೆ. ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ, ಅವರು ತಮ್ಮ ಆದಾಯವನ್ನು ಬಹಿರಂಗಪಡಿಸಿ ಸುದ್ದಿಯಾಗಿದ್ದಾರೆ.
ಆಕೆಯ ಮಾತು ಕೇಳಿ ಉಳಿದ ಸ್ಪರ್ಧಿಗಳು ಶಾಕ್ ಆದರೆ ಇತ್ತ ಜನರು ಸಹ ಇಷ್ಟೊಂದು ಆದಾಯ ತರುವ ಮಾಹಿತಿ ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ. ಜನರಿಗೆ ಇಷ್ಟವಿಲ್ಲದಿದ್ದರೆ ನಾನು ದಿನಕ್ಕೆ 40,000 ರೂ ಗಳಿಸುತ್ತೇನೆ, ಅವರು ಕಠಿಣ ಪರಿಶ್ರಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ನೆಟ್ಫ್ಲಿಕ್ಸ್ನಿಂದ ಹೊರಬಂದು, ತಮ್ಮ ಫೋನ್ಗಳನ್ನು ಇಟ್ಟು, ಹೊರಗೆ ಹೆಜ್ಜೆ ಹಾಕಬೇಕು ಮತ್ತು ಗಳಿಸಬೇಕು. ಅವರ ತಂದೆ-ತಾಯಿಯ ಸಂಪತ್ತನ್ನು ಅವಲಂಬಿಸುವ ಬದಲು ಅವರ ಸ್ವಂತ ಹಣ ಮಾಡುವ ದಾರಿ ಹುಡುಕಬೇಕು ಎಂದಿದ್ದಾಳೆ.



Click it and Unblock the Notifications