Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬರೆ ಕುಸಿತ: ಅರ್ಜುನ್ ಲಾರಿಯೊಳಗಡೆ ಇದ್ದರೆ 10 ದಿನಗಳವರೆಗೆ ಬದುಕಿಳಿಯುವ ಸಾಧ್ಯತೆ ಇದೆ!
ಪ್ರಕೃತಿ ಮುಂದೆ ಮಾನವ ಏನು ಅಲ್ಲ ಎಂಬುವುದು ಅವಳು ಪ್ರತಿಬಾರಿ ಮುನಿದು ಕೊಂಡಾಗ ನಮಗೆ ತಿಳಿಸುತ್ತಲೇ ಇರುತ್ತದೆ.
ಆದರೆ ಸ್ವಲ್ಪ ಸಮಯದಲ್ಲಿ ನಾವು ಅವೆಲ್ಲಾ ಮರೆತು ಮತ್ತೆ ಅವಳ ಮೇಲೆ ದಾಳಿ ಮಾಡುತ್ತೇವೆ, ಇದರ ಪರಿಣಾಮ ಬರೆ ಕುಸಿತ, ಪ್ರವಾಹ, ಭೂಕಂಪನ, ಇದೀಗ ಉತ್ತರ ಕನ್ನಡದಲ್ಲಿ ಉಮಟಾಗಿರುವ ಬರೆಕುಸಿತಕ್ಕೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದು ಎಂದು ಹೇಳಲಾಗುತ್ತಿದೆ, ಈಗ ಕಾರಣಗಳನ್ನು ಹುಡುಕಿಕೊಂಡು ಕೂರುವ ಸಮಯವಲ್ಲ, ಏಕೆಂದರೆ ಆ ಬರೆ ಕುಸಿತದಲ್ಲಿ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಇದುವರೆಗೆ ಸಿಕ್ಕಿಲ್ಲ.

ಬರೆ ಕುಸಿತದಲ್ಲಿ ಮಣ್ಣಿನೊಳಗಡೆ ಸಿಲುಕಿಕೊಂಡ ಕೆಲ ಶವಗಳನ್ನಷ್ಟೆ ಹೊರ ತೆಗೆಯಲಾಗಿದೆ, ಇನ್ನಷ್ಟು ಜನ ಉಸಿರು ಕಟ್ಟಿ ಸತ್ತು ಹೋಗಿದ್ದಾರೆ ಎಂದು ಗೊತ್ತಿಲ್ಲ, ಆದರೆ ಇಲ್ಲಿ ಸಿಲುಕಿಕೊಂಡ ವ್ಯಕ್ತಿಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವ ವ್ಯಕ್ತಿಯೆಂದರೆ ಕೇರಳದ ಅರ್ಜುನ್. ಅರ್ಜುನ್ ಬದುಕಿರುವ ಸಾಧ್ಯತೆ ಇದೆ ಎಂಬ ಊಹೆಯಿದೆ, ನೆನ್ನೆಯವರೆಗೆ ಆ ಊಹೆ ಬಲವಾಗಿತ್ತು, ಅದರೆ ಈಗ ಆ ನಂಬಿಕೆ ಕಡಿಮೆಯಾಗುತ್ತಿದೆ. ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಿ 75 ಗಂಟೆಗಳಾಗಿದೆ, ಹಾಗಾಗಿ ನಂಬಿಕೆ ನಿಧಾನಕ್ಕೆ ಕ್ಷೀಣಿಸುತ್ತಿದೆ.
ಅರ್ಜುನ್ ಬದುಕಿರಬಹುದು ಎಂಬ ನಿರೀಕ್ಷೆ ಮೂಡಿದ್ದು ಹೇಗೆ?
ಶಿರೂರಿನಲ್ಲಿ ನೆರೆ ಕುಸಿತ ಸಂಭವಿಸಿದ್ದು ಜುಲೈ 17ಕ್ಕೆ, ಆವಾಗ ಕೇರಳ ಡ್ರೈವರ್ ಅರ್ಜುನ್ ಡ್ರೈವ್ ಮಾಡುತ್ತಿದ್ದ ಬೆಂಝ್ ಲಾರಿ ಕೂಡ ಕಣ್ಮೆರೆಯಾಗಿದೆ. ಆದರೆ ಲಾರಿಯಲ್ಲಿ ಜಿಪಿಎಸ್ ಈ ಪ್ರದೇಶದಲ್ಲಿಯೇ ಎಂಡ್ ಆಗುತ್ತಿರುವುದರಿಂದ ಲಾರಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಊಹಿಸಲಾಗಿತ್ತು, ಆದರೆ ಈ ಘಟನೆ ನಡೆದ 2 ದಿನಗಳ ಬಳಿಕ ಲಾರಿ ಡ್ರೈವರ್ ಅರ್ಜುನ್ ಮೊಬೈಲ್ ಸದ್ದು ಮಾಡಿದೆ, ಹೀಗಾಗಿ ಈತ ಬದುಕುಳಿದಿರುವ ಸಾಧ್ಯತೆ ಎಂಬ ಭರವಸೆ ಮೂಡಿತ್ತು.
ರಾಡಾರ್, ಮೆಟಲ್ ಡಿಟೆಕ್ಟರ್ ಬಳಸಿ ಎನ್ ಡಿ ಆರ್ ಎಫ್ ಕಾರ್ಯಾಚರಣೆ ಮಾಡಿದರೂ ಅರ್ಜುನ್ ಚಲಾಯಿಸುತ್ತಿದ್ದ ಬೆಂಝ್ ಲಾರಿಯ ಸುಳಿವು ಸಿಕ್ಕಿಲ್ಲ, ಈಗ ಈ ಲಾರಿಯ ಪತ್ತೆಗೆ ನೌಕಾ ಪಡೆ ಕೂಡ ಕಾರ್ಯ ಮಾಡುತ್ತಿದೆ.
ಭಾರತ್ ಬೆಂಝ್ನ ಸುರಕ್ಷಿತಾ ವಿಧಾನಗಳು ಕೂಡ ಈ ನಿರೀಕ್ಷೆ ಮೂಡಿಸಿದೆ
ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಝ್ ಸ್ಟಾರ್ಟ್ ಆಗಿದ್ದರೆ ಅದರೊಳಗಡೆ ಅರ್ಜುನ್ ಇದ್ದರೆ ಅರ್ಜುನ್ 10 ದಿನಗಳವರೆಗೆ ಬದುಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುವುದು.
ಚೀನಾದಲ್ಲಿ 67 ಗಂಟೆ ಮಣ್ಣಿನೊಳಗಡೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದರು
ಅರ್ಜುನ್ ಲಾರಿಯೊಳಗಡೆ ಇದ್ದರೆ ಆತ 10 ದಿನಗಳವರೆಗೆ ಸುರಕ್ಷಿತ ಎಂದು ಆ ಲಾರಿಯ ಕಂಪನಿ ಹೇಳುತ್ತಿದೆ. ಚಿನಾದಲ್ಲಿ ಭಾರೀ ಮಳೆಗೆ ಮಣ್ಣು ಕಸಿಇದಾಗ 19 ವರ್ಷದ ಯುವಕನೊಬ್ಬ ಮಣ್ಣಿನೊಳಗಡೆ ಸಿಲುಕಿಕೊಂಡಿದ್ದ, ಎಲ್ಲರೂ ಆತ ಬದುಕಿಳಿದಿರಲ್ಲ ಎಂದೇ ಭಾವಿಸಿದ್ದರು, ಆದರೆ ಅತ ಬದುಕಿ ಬಂದಿದ್ದ.
ಶಿರುರು ಘಟನೆಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದವರು ಬದುಕಿಳಿದಿರುವ ಸಾಧ್ಯತೆ ತುಂಬಾ ಕಡಿಮೆ ಇದೆ, ಆದರೆ ಅರ್ಜುನ್ ಮೊಬೈಲ್ ರಿಂಗ್ ಆಗಿರುವುದು, ಆ ಮೊಬೈಲ್ನಿಂದ ರಿಂಗ್ ಬಂದು ಕಟ್ ಅಗಿರುವುದು ಆತ ಬದುಕಿರುವ ಚಿಕ್ಕ ಭರವಸೆ ಉಂಟು ಮಾಡಿದೆ. ಇನ್ನು ಯಾರಾರು ಸಿಕ್ಕಾಕಿಕೊಂಡಿದ್ದಾರೆ ಗೊತ್ತಿಲ್ಲ, ಕೆಲವರು ನಮ್ಮ ಕುಟುಂಬಸ್ಥರು, ಮಕ್ಕಳು ಈ ಬರೆ ಕುಸಿತದಲ್ಲಿ ಸಿಕ್ಕಾಕಿಕೊಂಡಿದ್ದಾರೆ ಎಂದು ಗೋಳಾಡುತ್ತಿದ್ದಾರೆ. ವಿಧಿಯ ಆಟದ ಮುಂದೆ ಮನುಷ್ಯ ತಾನೆ ಏನು ಮಾಡಲು ಸಾಧ್ಯ?



Click it and Unblock the Notifications