Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಉತ್ಪನ್ನ ಏಕಾದಶಿ: ಡಿಸೆಂಬರ್ 9ಕ್ಕಲ್ಲ 8ಕ್ಕೆ ಏಕಾದಶಿ, ಈ ದಿನ ಉಪವಾಸ ಮಾಡಿದರೆ ಈ ಫಲಗಳು ಸಿಗಲಿವೆ
ಕಾರ್ತಿಕ ಮಾಸ ಶಿವನ ಆರಾಧನೆಗೆ ವಿಶೇಷವಾದ ತಿಂಗಳು. ಈ ತಿಂಗಳಿನಲ್ಲಿ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಶ್ರೀ ವಿಷ್ಣುವಿನ ಆರಾಧನೆ ಏಕಾದಶಿ ತುಂಬಾನೇ ಶುಭ ದಿನವಾಗಿದೆ. ಈ ದಿನ ಶ್ರೀ ವಿಷ್ಣುವನ್ನು ಪೂಜಿಸಿಸುವುದರಿಂದ ಸಿಗುವ ಫಲ ಅಧಿಕ. ಯಜ್ಜ-ಯಾಗಗಳನ್ನು ಮಾಡಿದರೆ ದೊರೆಯುವ ಪುಣ್ಯಫಲ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುತ್ತದೆ.
ಏಕಾದಶಿಯಂದು ಉಪವಾಸವದ್ದು ಶ್ರೀವಿಷ್ಣುವನ್ನು ಆರಾಧಿಸಲಾಗುವುದು. ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ಪ್ರತಿಯಿಂದು ಏಕಾದಶಿಯನ್ನು ಬೇರೆ-ಬೇರೆ ಹೆಸರುಗಳಿಂದ ದೊರೆಯಲಾಗುವುದು. ಕಾರ್ತಿಕ ಮಾಸದ ಕೊನೆಯಲ್ಲಿ ಉತ್ಪನ್ನ ಏಕಾದಶಿ ಬಂದಿದೆ. ಉತ್ತರ ಭಾರತದ ಇದನ್ನು ಮಾರ್ಗಶಿರ ಮಾಸದ ಮೊದಲ ಏಕಾದಶಿಯಂದು ಆಚರಿಸಿದರೆ ಕರ್ನಾಟಕದಲ್ಲಿ ಕಾರ್ತಿಕ ಮಾಸದಲ್ಲಿ ಬರುವ ಕೊನೆಯ ಏಕಾದಶಿಯಾಗಿದೆ.

ಈ ಏಕಾದಶಿ ಯಾವ ದಿನಾಂಕದಂದು ಆಚರಿಸಲಾಗುವುದು
ಉತ್ಪನ್ನ ಏಕಾದಶಿ ಡಿಸೆಂಬರ್ ಬೆಳಗ್ಗೆ 08 ಬೆಳಗ್ಗೆ 05.06 ಕ್ಕೆ ಪ್ರಾರಂಭವಾಗುತ್ತದೆ. ಏಕಾದಶಿ ತಿಥಿ ಡಿಸೆಂಬರ್ 9, 2023 ರಂದು ಬೆಳಿಗ್ಗೆ 06:31 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದಾಗಿ ಡಿಸೆಂಬರ್ 8 ರಂದು ಉತ್ಪನ್ನ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತದೆ.
ಪಾರಣ ಸಮಯ: 9 ಡಿಸೆಂಬರ್ 2023 ರಂದು ಮಧ್ಯಾಹ್ನ 01:15 ರಿಂದ 03:20 ರವರೆಗೆ ಪಾರಣ ಸಮಯ.
ಉತ್ಪನಾ ಏಕಾದಶಿಯ ಉಪವಾಸದ ವಿದಾನ ಹಾಗೂ ಮಹತ್ವ
* ಉತ್ಪನ್ನ ಏಕಾದಶಿಯ ದಿನದಂದು, ಬೆಳಿಗ್ಗೆ ಎದ್ದು ಸ್ನಾನ ಮಾಡಿ ಉಪವಾಸ ಮಾಡಲು ಸಂಕಲ್ಪ ತೆಗೆದುಕೊಳ್ಳಿ.
* ವಿಷ್ಣುವಿಗೆ ಧೂಪ, ದೀಪ, ನೈವೇದ್ಯ ಮೊದಲಾದ ಹದಿನಾರು ವಸ್ತುಗಳಿಂದ ಪೂಜೆ ಮಾಡಿ ರಾತ್ರಿ ದೀಪವನ್ನು ದಾನ ಮಾಡಬೇಕು.
* ಈ ಏಕಾದಶಿಯಂದು ರಾತ್ರಿಯಲ್ಲಿ ಭಗವಾನ್ ವಿಷ್ಣುವಿನ ಸ್ತೋತ್ರಗಳು, ಕೀರ್ತನೆಗಳನ್ನು ಹಾಡಿ.
* ಉಪವಾಸದ ಕೊನೆಯಲ್ಲಿ, ಯಾವುದೇ ಉದ್ದೇಶಪೂರ್ವಕ ತಪ್ಪು ಆಗದ್ದರೆ ಶ್ರೀ ಹರಿವಿಷ್ಣುವಿನಲ್ಲಿ ಕ್ಷಮೆ ಕೇಳಬೇಕು.
* ಮರುದಿನ ಅಂದರೆ ದ್ವಾದಶಿ ತಿಥಿಯಂದು ಶ್ರೀಕೃಷ್ಣನನ್ನು ಪೂಜಿಸಬೇಕು, ನಂತರ ಬ್ರಾಹ್ಮಣನಿಗೆ ಆಹಾರ ದಾನ ಮಾಡಿ.
* ಅವರು ಊಟ ಮಾಡಿದ ಮೇಲೆ ಬ್ರಾಹ್ಮಣನಿಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನಗಳನ್ನು ಮಾಡಿ ಅವರ ಆಶೀರ್ವಾದ ಪಡೆಯಿರಿ.
ಈ ದಿನ ಉಪವಾಸ ಮಹತ್ವವೇನು?
ಉತ್ಪನ್ನ ಏಕಾದಶಿಯ ವ್ರತವನ್ನು ಯಾರು ಸಂಪೂರ್ಣ ವಿಧಿವಿಧಾನಗಳೊಂದಿಗೆ ಆಚರಿಸುತ್ತಾರೋ ಅವರಿಗೆ ಎಲ್ಲಾ ಪುಣ್ಯ ಫಲ ಸಿಗುವುದು ಎಂದು ಹೇಳಲಾಗುವುದು. ಅಲ್ಲದೆ ಈ ಉಪವಾಸದಂದು ದಾನ ಮಾಡುವುದರಿಂದ ಲಕ್ಷ ಪಟ್ಟು ಶುಭ ಫಲಗಳು ಸಿಗುತ್ತವೆ. ಉತ್ಪನ್ನ ಏಕಾದಶಿಯಂದು ಉಪವಾಸ ಆಚರಿಸುವುದರಿಂದ ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳು ನಾಶವಾಗುವುದು. ನಿಮ್ಮ ಕೆಲಸದಲ್ಲಿ ಉತ್ತಮ ಫಲ ಪಡೆಯುತ್ತೀರಿ, ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು.
* ವಿಧಿವಿಧಾನಗಳೊಂದಿಗೆ ಉತ್ಪನ್ನ ಏಕಾದಶಿ ವ್ರತ ಮಾಡುವುದರಿಂದ ಶ್ರೀವಿಷ್ಣುವಿನ ಅಪಾರವಾದ ಅನುಗ್ರಹಗಳು ದೊರೆಯುತ್ತವೆ. ಈ ದಿನದಂದು ಉಪವಾಸ ಮಾಡುವುದರಿಂದ ಶ್ರೀ ಹರಿವಿಷ್ಣುವಿನ ಜೊತೆಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಹೀಗಾಗಿ ಲಕ್ಷ್ಮಿ ಕೃಪೆ ದೊರೆಯಲಿದೆ.
ಈ ದಿನ ಏನು ಮಾಡಿದರೆ ಒಳ್ಳೆಯದು?
1. ಉತ್ಪನ್ನ ಏಕಾದಶಿಯ ದಿನದಂದು ದಾನಕ್ಕೆ ತುಂಬಾನೇ ಮಹತ್ವವುದೆ, ಈ ದಿನ ಉಪವಾಸವಿದ್ದು, ವಿಷ್ಣು ದೇವರನ್ನು ಪೂಜಿಸಿ, ಜೋಳ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ದಾನ ಮಾಡಿ. ಹೀಗೆ ಮಾಡಿದರೆ ಸಂಪತ್ತು ಹೆಚ್ಚಾಗುವುದು.
2. ಉತ್ಪನ್ನ ಏಕಾದಶಿಯ ದಿನದಂದು ಬಡವರಿಗೆ ಮತ್ತು ಅಸಹಾಯಕರಿಗೆ ವಸ್ತ್ರಗಳನ್ನು ಸಹ ದಾನ ಮಾಡಬೇಕು. ಇದರಿಂದ ಭಗವಾನ್ ವಿಷ್ಣು ಸಂತಸಗೊಂಡು ನಮ್ಮನ್ನು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ.
3. ನಿಮ್ಮ ವ್ಯವಹಾರವು ನಿಧಾನವಾಗಿ ನಡೆಯುತ್ತಿದ್ದರೆ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಆರಾಧಿಸಿ.
4 . ಉತ್ಪನ್ನ ಏಕಾದಶಿ ಆಚರಣೆ ಮಾಡುವುದರಿಂದ ಗ್ರಹದೋಷಗಳು ದೂರಾಗುತ್ತವೆ.



Click it and Unblock the Notifications
