Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಕುಂಭಮೇಳ ನಡೆಯುವ ಪ್ರಯಾಗ್ರಾಜ್ ನಗರದ ಕಥೆ ನಿಮಗೆ ಗೊತ್ತಾ? ಈ ಹೆಸರು ಬಂದಿದ್ಯಾಕೆ?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವ ವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿದೆ. 144 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳವು ವಿಶ್ವದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುತ್ತದೆ. ಕೋಟಿ ಕೋಟಿ ಮಂದಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಹೀಗಾಗಿ ಒಂದು ತಿಂಗಳ ಕಾಲ ತ್ರಿವೇಣಿ ಸಂಗಮ ಕೇಸರಿಯಿಂದ ಮುಚ್ಚಿರುತ್ತದೆ.
ಈ ಮಹಾ ಕುಂಭಮೇಳವು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಖ್ಯಾತಿ ಪಡೆದುಕೊಂಡಿದೆ. ವಿದೇಶದಿಂದಲೂ ಈ ಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸುತ್ತಾರೆ. ಇನ್ನು ಸಾಧು, ಸಂತರು ಪ್ರಯಾಗ್ರಾಜ್ನಲ್ಲಿನ ಶಿಬಿರದಲ್ಲಿ ನೆಲೆಸುತ್ತಾರೆ. ಹಾಗೆ ಈ ಸಮಯದಲ್ಲಿ ಕೋಟ್ಯಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಮುಂದಾಗುತ್ತಾರೆ.

ಆದ್ರೆ ಈ ಕುಂಭಮೇಳದ ಹಿಂದಿರುವ ಪ್ರಯಾಗ್ರಾಜ್ ಎಂಬ ನಗರದ ಹಿಂದಿರುವ ಅದ್ಭುತ ಕತೆಯ ಬಗ್ಗೆ ನಿಮಗೆ ಗೊತ್ತಾ? ಪ್ರಯಾಗ್ ರಾಜ್ ಎಂಬ ಹೆಸರಿನ ಅರ್ಥವೇನು? ಅಲಹಾಬಾದ್ ಎಂಬ ಹೆಸರಿನ ಬದಲಾಗಿ ಪ್ರಯಾಗ್ರಾಜ್ ಎಂದು ನಾಮಕರಣ ಮಾಡಲಾಗಿದೆ ಎಂಬ ವಿಚಾರ ನಿಮಗೆ ಗೊತ್ತಾ? ನಾವಿಂದು ಅಲಹಾಬಾದ್ ಬದಲಿಗೆ ಪ್ರಯಾಗ್ರಾಜ್ ಹೆಸರು ಇಟ್ಟಿದ್ದು ಏಕೆ? ಇದರ ಅರ್ಥವೇನು ಎಂಬುದನ್ನು ತಿಳಿಯೋಣ.
ವೇದಗಳ ಅಸ್ತಿತ್ವಕ್ಕೂ ಮುಂಚೆಯೇ ಮಹಾ ಕುಂಭಮೇಳವನ್ನು ಪ್ರಯಾಗ್ರಾಜ್ನಲ್ಲಿ ಆಚರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಹಾಗೆ 'ಪ್ರ' ಎಂದರೆ ಮೊದಲು ಅಥವಾ ಪ್ರಥಮ, ಯಾಗ್ ಎಂದರೆ ಯಾಗ ಎಂಬ ಅರ್ಥ ಬರುತ್ತದೆ. ಹೀಗಾಗಿ ಮೊದಲ ಯಾಗ ಎಂಬ ಅರ್ಥವನ್ನು ಈ ನಗರ್ ಹೊಂದಲಿದೆ. ಬ್ರಹ್ಮ ಅಕ್ಷಯ್ ವಾಡ್ ಬಳಿಕ ಮೊದಲ ಯಾಗ ಮಾಡಿದ್ದರು, ಆ ಸ್ಥಳವೇ ಪ್ರಯಾಗ್ ಎಂದು ಕರೆಯಲಾಯಿತು. ಕಾಲಾನಂತರ ಪ್ರಯಾಗ್ರಾಜ್ ಆಗಿ ಬದಲಾಯಿತು. 2018 ಅಕ್ಟೋಬರ್ 16ರಂದು ಅಲಹಾಬಾದ್ ಹೆಸರನ್ನು ಪ್ರಯಾಗ್ರಾಜ್ ಎಂದು ಅಧಿಕೃತವಾಗಿ ಬದಲಾಯಿಸಲಾಗಿತ್ತು.
ಅಕ್ಷಯ್ ವಾಟ್ ಎಂಬುದು ಪ್ರಯಾಗ್ರಾಜ್ನಲ್ಲಿರುವ ಒಂದು ಪವಿತ್ರ ಮರ ಎಂದು ನಂಬಲಾಗಿದೆ. ಹಾಗೆ ಭಾರತದ ಪ್ರಮುಖ ಯಾತ್ರಾ ಸ್ಥಳದಲ್ಲಿ ಪ್ರಯಾಗ್ರಾಜ್ ಕೂಡ ಒಂದಾಗಿದೆ. ಅಲ್ಲದೆ ಸರಸ್ವತಿ ನದಿ ಹರಿಯುವಿಕೆ ಇದ್ದ ಕೆಲವೆ ಸ್ಥಳದಲ್ಲಿ ಇದು ಕೂಡ ಒಂದು ಎಂದು ನಂಬಲಾಗಿದೆ. ಹಾಗೆ ಗಂಗಾ, ಯಮುನ, ಸರಸ್ವತಿ ನದಿಗಳು ಸಂಧಿಸುವ ಪವಿತ್ರ ಸ್ಥಳ ಎಂಬ ಹೆಸರು ಕೂಡ ಇದೆ. ಇದನ್ನೆ ತ್ರಿವೇಣಿ ಸಂಗಮ ಎಂಬ ಹೆಸೆರಿನಿಂದ ಕರೆಯಲಾಗಿದೆ.
ಮೋಕ್ಷ ಹಾಗೂ ಸ್ವರ್ಗದ ಪ್ರಾಪ್ತಿಗಾಗಿ ಪ್ರಯಾಗ್ರಾಜ್ನ ಈ ಸ್ಥಳದಲ್ಲಿ ಸ್ನಾನ ಮಾಡಬೇಕು ಎಂಬ ನಂಬಿಕೆ ಇದೆ. ವಾರಣಾಸಿ, ಕಾಶಿಯಂತೆ ಈ ಸ್ಥಳ ಕೂಡ ಪಾವಿತ್ರತೆಯನ್ನು ಕಾಯ್ದುಕೊಂಡಿದೆ. ಜನವರಿ 13ರ ಪೌಷ ಪೂರ್ಣಿಮೆಯ ಶಾಹಿ ಸ್ನಾನದೊಂದಿಗೆ ಪ್ರಾರಂಭವಾದ ಮಹಾ ಕುಂಭವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವನ್ನು ನಂಬಿಕೆ, ಸಂಸ್ಕೃತಿ ಮತ್ತು ಮಾನವೀಯತೆಯ ರೋಮಾಂಚಕ ಕೇಂದ್ರವಾಗಿ ಪರಿವರ್ತಿಸಿದೆ.
ಫೆಬ್ರವರಿ 26ರ ವರೆಗೆ ನಡೆಯುವ ಮಹಾಕುಂಭ ಮೇಳದಲ್ಲಿ 40-45 ಕೋಟಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ನಿರೀಕ್ಷಿಸಿದೆ. ಹಾಗೆ ಈ ಸಮಯದಲ್ಲಿ ಪ್ರಯಾಗ್ರಾಜ್ನಲ್ಲಿ ಕೋಟಿಗೂ ಅಧಿಕ ಮೌಲ್ಯದ ವ್ಯವಹಾರಗಳು ನಡೆಯಲಿವೆ. ಇದು ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಎಂದು ಅಂದಾಜಿಸಲಾಗಿದೆ.



Click it and Unblock the Notifications