Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕುಂಭಮೇಳ ನಡೆಯುವ ಪ್ರಯಾಗ್ರಾಜ್ ನಗರದ ಕಥೆ ನಿಮಗೆ ಗೊತ್ತಾ? ಈ ಹೆಸರು ಬಂದಿದ್ಯಾಕೆ?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವ ವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿದೆ. 144 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳವು ವಿಶ್ವದ ಮೂಲೆ ಮೂಲೆಯಿಂದ ಭಕ್ತರನ್ನು ಆಕರ್ಷಿಸುತ್ತದೆ. ಕೋಟಿ ಕೋಟಿ ಮಂದಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಹೀಗಾಗಿ ಒಂದು ತಿಂಗಳ ಕಾಲ ತ್ರಿವೇಣಿ ಸಂಗಮ ಕೇಸರಿಯಿಂದ ಮುಚ್ಚಿರುತ್ತದೆ.
ಈ ಮಹಾ ಕುಂಭಮೇಳವು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಖ್ಯಾತಿ ಪಡೆದುಕೊಂಡಿದೆ. ವಿದೇಶದಿಂದಲೂ ಈ ಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸುತ್ತಾರೆ. ಇನ್ನು ಸಾಧು, ಸಂತರು ಪ್ರಯಾಗ್ರಾಜ್ನಲ್ಲಿನ ಶಿಬಿರದಲ್ಲಿ ನೆಲೆಸುತ್ತಾರೆ. ಹಾಗೆ ಈ ಸಮಯದಲ್ಲಿ ಕೋಟ್ಯಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಮುಂದಾಗುತ್ತಾರೆ.

ಆದ್ರೆ ಈ ಕುಂಭಮೇಳದ ಹಿಂದಿರುವ ಪ್ರಯಾಗ್ರಾಜ್ ಎಂಬ ನಗರದ ಹಿಂದಿರುವ ಅದ್ಭುತ ಕತೆಯ ಬಗ್ಗೆ ನಿಮಗೆ ಗೊತ್ತಾ? ಪ್ರಯಾಗ್ ರಾಜ್ ಎಂಬ ಹೆಸರಿನ ಅರ್ಥವೇನು? ಅಲಹಾಬಾದ್ ಎಂಬ ಹೆಸರಿನ ಬದಲಾಗಿ ಪ್ರಯಾಗ್ರಾಜ್ ಎಂದು ನಾಮಕರಣ ಮಾಡಲಾಗಿದೆ ಎಂಬ ವಿಚಾರ ನಿಮಗೆ ಗೊತ್ತಾ? ನಾವಿಂದು ಅಲಹಾಬಾದ್ ಬದಲಿಗೆ ಪ್ರಯಾಗ್ರಾಜ್ ಹೆಸರು ಇಟ್ಟಿದ್ದು ಏಕೆ? ಇದರ ಅರ್ಥವೇನು ಎಂಬುದನ್ನು ತಿಳಿಯೋಣ.
ವೇದಗಳ ಅಸ್ತಿತ್ವಕ್ಕೂ ಮುಂಚೆಯೇ ಮಹಾ ಕುಂಭಮೇಳವನ್ನು ಪ್ರಯಾಗ್ರಾಜ್ನಲ್ಲಿ ಆಚರಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಹಾಗೆ 'ಪ್ರ' ಎಂದರೆ ಮೊದಲು ಅಥವಾ ಪ್ರಥಮ, ಯಾಗ್ ಎಂದರೆ ಯಾಗ ಎಂಬ ಅರ್ಥ ಬರುತ್ತದೆ. ಹೀಗಾಗಿ ಮೊದಲ ಯಾಗ ಎಂಬ ಅರ್ಥವನ್ನು ಈ ನಗರ್ ಹೊಂದಲಿದೆ. ಬ್ರಹ್ಮ ಅಕ್ಷಯ್ ವಾಡ್ ಬಳಿಕ ಮೊದಲ ಯಾಗ ಮಾಡಿದ್ದರು, ಆ ಸ್ಥಳವೇ ಪ್ರಯಾಗ್ ಎಂದು ಕರೆಯಲಾಯಿತು. ಕಾಲಾನಂತರ ಪ್ರಯಾಗ್ರಾಜ್ ಆಗಿ ಬದಲಾಯಿತು. 2018 ಅಕ್ಟೋಬರ್ 16ರಂದು ಅಲಹಾಬಾದ್ ಹೆಸರನ್ನು ಪ್ರಯಾಗ್ರಾಜ್ ಎಂದು ಅಧಿಕೃತವಾಗಿ ಬದಲಾಯಿಸಲಾಗಿತ್ತು.
ಅಕ್ಷಯ್ ವಾಟ್ ಎಂಬುದು ಪ್ರಯಾಗ್ರಾಜ್ನಲ್ಲಿರುವ ಒಂದು ಪವಿತ್ರ ಮರ ಎಂದು ನಂಬಲಾಗಿದೆ. ಹಾಗೆ ಭಾರತದ ಪ್ರಮುಖ ಯಾತ್ರಾ ಸ್ಥಳದಲ್ಲಿ ಪ್ರಯಾಗ್ರಾಜ್ ಕೂಡ ಒಂದಾಗಿದೆ. ಅಲ್ಲದೆ ಸರಸ್ವತಿ ನದಿ ಹರಿಯುವಿಕೆ ಇದ್ದ ಕೆಲವೆ ಸ್ಥಳದಲ್ಲಿ ಇದು ಕೂಡ ಒಂದು ಎಂದು ನಂಬಲಾಗಿದೆ. ಹಾಗೆ ಗಂಗಾ, ಯಮುನ, ಸರಸ್ವತಿ ನದಿಗಳು ಸಂಧಿಸುವ ಪವಿತ್ರ ಸ್ಥಳ ಎಂಬ ಹೆಸರು ಕೂಡ ಇದೆ. ಇದನ್ನೆ ತ್ರಿವೇಣಿ ಸಂಗಮ ಎಂಬ ಹೆಸೆರಿನಿಂದ ಕರೆಯಲಾಗಿದೆ.
ಮೋಕ್ಷ ಹಾಗೂ ಸ್ವರ್ಗದ ಪ್ರಾಪ್ತಿಗಾಗಿ ಪ್ರಯಾಗ್ರಾಜ್ನ ಈ ಸ್ಥಳದಲ್ಲಿ ಸ್ನಾನ ಮಾಡಬೇಕು ಎಂಬ ನಂಬಿಕೆ ಇದೆ. ವಾರಣಾಸಿ, ಕಾಶಿಯಂತೆ ಈ ಸ್ಥಳ ಕೂಡ ಪಾವಿತ್ರತೆಯನ್ನು ಕಾಯ್ದುಕೊಂಡಿದೆ. ಜನವರಿ 13ರ ಪೌಷ ಪೂರ್ಣಿಮೆಯ ಶಾಹಿ ಸ್ನಾನದೊಂದಿಗೆ ಪ್ರಾರಂಭವಾದ ಮಹಾ ಕುಂಭವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವನ್ನು ನಂಬಿಕೆ, ಸಂಸ್ಕೃತಿ ಮತ್ತು ಮಾನವೀಯತೆಯ ರೋಮಾಂಚಕ ಕೇಂದ್ರವಾಗಿ ಪರಿವರ್ತಿಸಿದೆ.
ಫೆಬ್ರವರಿ 26ರ ವರೆಗೆ ನಡೆಯುವ ಮಹಾಕುಂಭ ಮೇಳದಲ್ಲಿ 40-45 ಕೋಟಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ನಿರೀಕ್ಷಿಸಿದೆ. ಹಾಗೆ ಈ ಸಮಯದಲ್ಲಿ ಪ್ರಯಾಗ್ರಾಜ್ನಲ್ಲಿ ಕೋಟಿಗೂ ಅಧಿಕ ಮೌಲ್ಯದ ವ್ಯವಹಾರಗಳು ನಡೆಯಲಿವೆ. ಇದು ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಎಂದು ಅಂದಾಜಿಸಲಾಗಿದೆ.



Click it and Unblock the Notifications
