Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭಾರತ ಇತಿಹಾಸದಲ್ಲಿ 'ಕಪ್ಪು ಬಜೆಟ್' ಯಾವುದು ಗೊತ್ತಾ? ಆ ಬಜೆಟ್ನಲ್ಲಿ ಏನಿತ್ತು?
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1ರ ಶನಿವಾರ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿಯ ಬಜೆಟ್ ಹಲವು ವಿಚಾರಗಳಿಂದ ಗಮನಸೆಳೆದಿದೆ. ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಯಾವೆಲ್ಲಾ ವಲಯಗಳಿಗೆ ಅನುದಾನ, ಕೊಡುಗೆ ನೀಡಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.
ಅದರಲ್ಲೂ ಈ ಬಾರಿ ಯಾವೆಲ್ಲಾ ತೆರಿಗೆ ಹೆಚ್ಚಳವಾಗಲಿದೆ? ಯಾವೆಲ್ಲಾ ವಸ್ತು ತೆರಿಗೆ ಮುಕ್ತವಾಗಲಿದೆ? ಯಾರಿಗೆ ಹೊಸ ಟ್ಯಾಕ್ಸ್ ಅನ್ವಯವಾಗುತ್ತಿದೆ ಎಂಬ ಕುರಿತ ಕುತೂಹಲಕ್ಕೆ ಸದ್ಯವೇ ತೆರೆ ಬೀಳಲಿದೆ. ಆದ್ರೆ ನಿಮಗೆ ನಮ್ಮ ಬಜೆಟ್ ಇತಿಹಾಸದಲ್ಲಿ ಹಲವು ಬಜೆಟ್ಗಳ ಕುರಿತು ತಿಳಿದಿರುವುದಿಲ್ಲ, ಅದರಲ್ಲೂ ನಿಮಗೆ ಕಪ್ಪು ಬಜೆಟ್ ಬಗ್ಗೆ ಗೊತ್ತಿದ್ಯಾ?

ಬಜೆಟ್ನಲ್ಲಿ ಈ ಹಿಂದೆ ರೈಲ್ವೆ ಬಜೆಟ್ ಎಂಬ ವಿಂಗಡಣೆ ಮಾಡಿದ್ದು ನಿಮಗೆಲ್ಲಾ ತಿಳಿದಿರಬಹುದು ಆದ್ರೆ ಕಪ್ಪು ಬಜೆಟ್ ಬಗ್ಗೆ ಎಂದಾದ್ರು ಕೇಳಿದ್ದೀರಾ? ಹೌದು ಭಾರತದ ಇತಿಹಾಸದಲ್ಲಿ ಕಪ್ಪು ಬಜೆಟ್ ಕೂಡ ಒಂದು ಅಚ್ಚರಿಯಾಗಿ ಉಳಿದಿದೆ. ಹಾಗಾದ್ರೆ ಎನಿದು ಕಪ್ಪು ಬಜೆಟ್? ಮಂಡಿಸಿದ್ಯಾರು? ಇದರ ಹಿಂದಿರುವ ಕಾರಣವೇನು ಎಂಬ ಅಚ್ಚರಿಗಳನ್ನು ನಾವಿಂದು ತಿಳಿದುಕೊಳ್ಳೋಣ.
ಅದು 1973-74ರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಅನ್ನು ಬ್ಲಾಕ್ ಬಜೆಟ್, ಕಪ್ಪು ಬಜೆಟ್ ಎಂದು ಕರೆಯಲಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಇದಾಗಿತ್ತು. ಈ ಬಜೆಟ್ ಬೃಹತ್ ಹಣಕಾಸಿನ ಕೊರತೆ ಮತ್ತು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸುವಂತಹ ದಿಟ್ಟ ಕ್ರಮಗಳನ್ನು ಪ್ರತಿಬಿಂಬಿಸಿತು. ಹಾಗೆ ಭಾರತ ಆಗಿನ್ನು ಕೈಗಾರಿಕರಣಕ್ಕೆ ತೆರೆದುಕೊಳ್ಳುತ್ತಿದ್ದ ಸಮಯ ಆಗಿದ್ದರಿಂದ ಈ ಬಜೆಟ್ ಮುಖ್ಯ ಎನಿಸಿತ್ತು.
1973 ಫೆಬ್ರವರಿ 28 ರಂದು ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತರಾವ್ ಬಿ. ಚವಾಣ್ ಅವರು ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಅವರು ದೇಶದ ಆರ್ಥಿಕ ದಿಕ್ಕಿನ ಮೇಲೆ ಬಲವಾದ ಹಿಡಿತ ಹೊಂದಿದ್ದ ಪ್ರಧಾನಿ ಇಂದಿರಾ ಗಾಂಧಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಬಜೆಟ್ ಅನ್ನು ಭಾರತೀಯ ಇತಿಹಾಸವು ಕಪ್ಪು ಬಜೆಟ್ ಎಂದು ಉಲ್ಲೇಖಿಸಿತು.
ಕಪ್ಪು ಬಜೆಟ್ ಎಂದು ಹೆಸರು ಬಂದಿದ್ದೇಕೆ?
ಈ ಬಜೆಟ್ ಆ ಕಾಲ ಘಟ್ಟದಲ್ಲಿ ಹಣಕಾಸಿನ ಕೊರತೆ ಬಜೆಟ್ ಆಗಿತ್ತು. ಅಂದರೆ ಸಾಲದ ಪ್ರಮಾಣ ಅಧಿಕವಾಗಿದ್ದ ಕಾಲವದು. ಬರೋಬ್ಬರಿ 550 ಕೋಟಿ ರೂಪಾಯಿಯ ಹಣಕಾಸಿನ ಕೊರತೆಯ ಬಜೆಟ್ ಅದಾಗಿತ್ತು. ಆದ್ರೆ ಈ ಕಾಲಕ್ಕೆ ಹೋಲಿಸಿದರೆ ಈ ಸಂಖ್ಯೆ ಎಳ್ಳಷ್ಟು ಅಲ್ಲ. ಆದ್ರೆ 1973ರಲ್ಲಿ 550 ಕೋಟಿ ರೂ. ಬಹುದೊಡ್ಡ ಸಂಖ್ಯೆ ಎನಿಸಿತ್ತು. ಇದು ದೇಶವೇ ದಿವಾಳಿ ಆಗುವ ಬಜೆಟ್ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸರ್ಕಾರದ ವೆಚ್ಚ ಆದಾಯವನ್ನೂ ಮೀರಿ ನೀಡಲಾಗಿದ್ದ ಬಜೆಟ್ ಅದಾಗಿತ್ತು. ಹೀಗಾಗಿ ಇದನ್ನು ಕಪ್ಪು ಬಜೆಟ್ ಎಂದು ಕರೆಯಲಾಯಿತು. ಇದು ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆಯಾಗಿತ್ತು.
ಇದಾದ ಬಳಿಕ ಹಲವು ವರ್ಷದಿಂದಲೂ ಕೊರತೆಯ ಬಜೆಟ್ ಅನ್ನೇ ಮಂಡಿಸುತ್ತಾ ಬರಲಾಗುತ್ತಿದೆ. ಆದಾಯಕ್ಕಿಂತಲೂ ವೆಚ್ಚವೇ ಹೆಚ್ಚಾಗಿದೆ. ಹಾಗೆ ಸಾಲದ ಪ್ರಮಾಣ ಕೂಡ ಅಧಿಕವಾಗುತ್ತಿದೆ.



Click it and Unblock the Notifications











