Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತ ಸ್ವಾತಂತ್ರ್ಯಗೊಂಡು 15 ವರ್ಷದ ಬಳಿಕ ಈ ರಾಜ್ಯ ಸ್ವತಂತ್ರವಾಗಿತ್ತು!! ಯಾವ ರಾಜ್ಯ? ಹೀಗಾಗಿದ್ದೇಕೆ?
200ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರಿಟಿಷರು ಭಾರತದನ್ನು ಆಳಿದರು ಹಾಗೆ 1947ರಲ್ಲಿ ಭಾರತ ಸ್ವತಂತ್ರಗೊಂಡಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆ ಬಹಳ ಹೋರಾಟದ ಬಳಿಕ ಬ್ರಿಟೀಷರು ಸ್ವಾತಂತ್ರ್ಯ ನೀಡಿದರು. ಈ ಸ್ವಾತಂತ್ರ್ಯಕ್ಕಾಗಿ ಕೋಟಿ ಕೋಟಿ ಮಂದಿ ಬಲಿದಾನ ನೀಡಿರುವುದು ಈಗ ಇತಿಹಾಸ. ಹಾಗೆ ಇಷ್ಟು ವರ್ಷ ಆಳಿದ ಬ್ರಿಟೀಷರು ಭಾರತದಲ್ಲಿ ಹಲವು ಸುಧಾರಣೆಗಳು, ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡಿದ್ದರು ಎಂಬುದನ್ನು ನಾವಿಂದು ನೆನೆಯಬೇಕಿದೆ.
ಆದ್ರೆ ನಿಮಗೆ ಗೊತ್ತಾ ಭಾರತದ ಒಂದು ರಾಜ್ಯ ಭಾರತ ಸ್ವಾತಂತ್ರ್ಯ ಪಡೆದ 15 ವರ್ಷದ ಬಳಿಕ ಸ್ವಾತಂತ್ರ ಪಡೆದುಕೊಂಡಿತು. 1857ರಲ್ಲಿ ಆರಂಭಗೊಂಡ ಸ್ವಾತಂತ್ರ್ಯ ಚಳವಳಿ 1947ರಲ್ಲಿ ಮುಕ್ತಾಯಗೊಂಡಿತ್ತು, ಆದ್ರೆ ಭಾರತದ ಒಂದು ರಾಜ್ಯ ಮಾತ್ರ ಮುಂದಿನ 15 ವರ್ಷಗಳ ನಂತರದಲ್ಲಿ ಸ್ವಾತಂತ್ರ್ಯಗೊಂಡಿತ್ತು. ಭಾರತದ ಸ್ವಾತಂತ್ರ್ಯಗೊಂಡ ನಂತರ ಹರಿದು ಹೋಗಿದ್ದ ದೇಶವನ್ನು ಒಗ್ಗೂಡಿಸಲಾಗಿತ್ತು. ಹಲವು ಒಕ್ಕೂಟಗಳು ಸೇರಿ ಒಂದು ದೇಶವನ್ನಾಗಿ ಮಾಡಲಾಗಿತ್ತು. ಆದ್ರೆ ಒಂದು ರಾಜ್ಯ ಮಾತ್ರ ಇದರಿಂದ ಹೊರಗುಳಿಯಿತು.

ಹೌದು ಈಗ ಪ್ರವಾಸಿಗರ ಸ್ವರ್ಗವಾಗಿರುವ ಗೋವಾ ಭಾರಯತ ಸ್ವಾತಂತ್ರ್ಯ ಪಡೆದ 15 ವರ್ಷದ ಬಳಿಕ ಸ್ವತಂತ್ರವೆಂದು ಘೋಷಿಸಿಕೊಂಡಿತು. ಹಾಗೆ ಒಕ್ಕೂಟ ದೇಶಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು. ಕಡಲ ನಗರಿಯಾಗಿರುವ ಗೋವಾ 1961 ಡಿಸೆಂಬರ್ 19ರಂದು ಪೋರ್ಚುಗೀಸರ ಆಳ್ವಿಕೆಯಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಪೋರ್ಚುಗೀಸರನ್ನು ಗೋವಾದಿಂದ ಹೊರಹಾಕುವುದು ಅಷ್ಟು ಸುಲಭವಾವಿರಲಿಲ್ಲ. ಅವರು ಭಾರತ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ರು. ಇನ್ನೊಂದು ಕಡೆ ಗೋವಾದಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗುತ್ತಲೇ ಇತ್ತು.
1540 ರಲ್ಲಿ ಗೋವಾದಲ್ಲಿ ಪೋರ್ಚುಗೀಸರು ಆಳ್ವಿಕೆ ಆರಂಭಿಸಿದರು. ಗೋವಾದಲ್ಲಿ ಪೋರ್ಚುಗೀಸರು ಕ್ರಿಶ್ಚಿಯನ್ ಧರ್ಮ ಸುಧಾರಣೆಗಾಗಿ ಪಣ ತೊಟ್ಟರು ಹಾಗೆ ಹಲವು ಹಿಂದೂ ದೇವಾಲಯಗಳ ನಾಶಕ್ಕೂ ಕಾರಣವಾದರು. ಹಾಗೆ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದರೆ ಭೂ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಇದರಿಂದ ಗೋವಾದಲ್ಲಿ ಹಿಂದೂಗಳು ಸ್ವಯಂ ಪ್ರೇರಣೆಯಿಂದಾಗಿ ಹಾಗೂ ಒತ್ತಾಯ ಪೂರ್ವವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.
ಹೀಗಾಗಿ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಗೆ ಅಂತ್ಯ ಹಾಡುವುದು ಬಹಳ ಕಷ್ಟಕರವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 1946ರ ಸಮಯದಲ್ಲಿ ಗೋವಾದಲ್ಲಿಯೂ ಸ್ವಾತಂತ್ರ್ಯದ ಕಹಳೆ ಮೊಳಗಿತ್ತು. ಗೋವಾದಲ್ಲಿ ರಾಮ್ ಮನೋಹರ್ ಲೋಹಿಯಾ ಸ್ವಾತಂತ್ರ್ಯದ ಕಿಡಿ ಹೊತ್ತಿಸಲು ಅಸಹಕಾರ ಚಳವಳಿಗೆ ಕರೆ ನೀಡಿದ್ದರು. ಅಲ್ಲಿಯೂ ಸ್ವಾತಂತ್ರ್ಯ ಬಯಸಿದ್ದ ಒಂದು ತಂಡ ಅವರನ್ನು ಸೇರಿಕೊಂಡಿತ್ತು. ಅಲ್ಲಿ ಸಾರ್ವಜನಿಕ ಸಭೆ, ಚಳವಳಿ, ಹೋರಾಟ ಮಾಡುವುದನ್ನು ಪೋರ್ಚುಗೀಸ್ ಸರ್ಕಾರ ನಿಷೇಧಿಸಿತು. ಇದರ ವಿರುದ್ಧವೇ ಲೋಹಿಯಾ ಹೋರಾಟ ಆರಂಭಿಸಿದರು.
ಈ ಹೋರಾಟದ ನಡುವೆ ರಾಮ್ ಮನೋಹರ್ ಲೋಹಿಯಾ ಅವರನ್ನು ಬಂಧಿಸಲಾಯಿತು. ಅಲ್ಲಿ ಹೋರಾಟ ಮಾಡುವವರ ಮೇಲೆ ಕೇಸ್ಗಳು ದಾಖಲಾಗಿ ಜೈಲು ಸೇರಬೇಕಾಯಿತು. ಆದ್ರೆ ಹೋರಾಟಗಾರ ಪ್ರಭಾಕರ್ ವಿಠಲ್ ಸಿನಾರಿಯಂತಹ ಅನೇಕ ಯುವ ಹೋರಾಟಗಾರರು ಗೋವಾ ಸ್ವಾತಂತ್ರ್ಯದಲ್ಲಿ ಧುಮುಕುವಂತೆ ಮಾಡಿತು. ಅಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆರಂಭಗೊಂಡಿತ್ತು.
ಅದು ನವೆಂಬರ್ 1961 ರಲ್ಲಿ ಪೋರ್ಚುಗೀಸರು ಭಾರತೀಯ ಸ್ಟೀಮರ್ಗಳು ಮತ್ತು ಮೀನುಗಾರಿಕಾ ದೋಣಿಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿಗೆ ಮುಂದಾದರು. ಇದು ಭಾರತ ಸರ್ಕಾರದ ಗಮನಕ್ಕೂ ಬಂದಿತ್ತು. ಈ ಘಟನೆಯಲ್ಲಿ ಓರ್ವ ಮೀನುಗಾರ ಮೃತಪಟ್ಟಿದ್ದ. ಈ ಘಟನೆ ಗೋವಾದ ಸ್ಥಳೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತ್ತು. ಹಾಗೆ ಸ್ಥಳೀಯರನ್ನು ಅವರು ಒತ್ತೆಯಾಳಾಗಿ ಇಟ್ಟುಕೊಳ್ಳಲು ಮುಂದಾದರು.
ಆದ್ರೆ ಈ ವೇಳೆಗೆ ಭಾರತದ ಸರ್ಕಾರ ಸೇನೆಯಲ್ಲಿ ಬಲ ಸಾಧಿಸಿತ್ತು, ಹೀಗಾಗಿ ಅಂದಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಗೋವಾದ ಮೇಲೆ 30 ಸಾವಿರಕ್ಕೂ ಹೆಚ್ಚು ಸೈನಿಕರು ಇಳಿಯುವಂತೆ ಆದೇಶ ನೀಡಿದರು. ನೌಕಾ ಸೇನೆ ಹಾಗೂ ವಾಯುಸೇನೆ ಗೋವಾವನ್ನು ಸುತ್ತುವರೆದವು. ಭಾರತದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದಾಗ ಪೋರ್ಚುಗೀಸರು ಕೇಂದ್ರದ ಜೊತೆಗೆ ಮಾತುಕತೆಗೆ ಮುಂದಾದರು. ಆದ್ರೆ ಅದಾಗಲೆ ಸಮಯ ಮೀರಿತ್ತು. ಕೇವಲ 48 ಗಂಟೆಯ ಒಳಗಾಗಿ ಪೋರ್ಚುಗೀಸರು ಗೋವಾ ಬಿಟ್ಟು ತೆರಳಬೇಕಾಯಿತು. ಹೀಗಾಗಿ ಡಿಸೆಂಬರ್ 19, 1961 ಗೋವಾ ಸ್ವತಂತ್ರಗೊಂಡಿತ್ತು.



Click it and Unblock the Notifications