Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮೊಮ್ಮಗಳು ಸೇರಿ ಮೂವರಿಗೆ ಕ್ಯಾನ್ಸರ್, ಚಿಕಿತ್ಸೆಗೆ ಮಾಡಿದ ಸಾಲದಿಂದ ಮನೆಯೂ ಜಪ್ತಿ: ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ ಕೇಂ
ಮನೆಯಲ್ಲಿ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್, ಬ್ಯಾಂಕ್ನಿಂದ ಮನೆ ಜಪ್ತಿ: ನೆರವಿಗೆ ಬಂದ ಕೇಂದ್ರ ಸಚಿವನ ನೋಡಿ ಇದೇ ಮನುಷ್ಯತ್ವ ಎಂದರೆ ಎನ್ನುತ್ತಿದ್ದಾರೆ ಜನ.
ಕೇಂದ್ರ ಸಚಿವರಾದ ಸುರೇಶ್ ಗೋಪಿ ಕೇರಳದಲ್ಲಿ ಕ್ಯಾನ್ಸರ್ನಿಂದ ಇರಲು ಒಂದು ಸೂರು ಇಲ್ಲದಿದ್ದ ಕುಟುಂಬಕ್ಕೆ ನೆರವಾಗುವ ಮೂಲಕ ಒಬ್ಬ ಸಚಿವನಾಗಿ ಮಾತ್ರವಲ್ಲ ಮನುಷ್ಯನಾಗಿ ಗ್ರೇಟ್ ಅನಿಸಿಕೊಂಡಿದ್ದಾರೆ, ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ್ದಾರೆ.

ಬ್ಯಾಂಕ್ ಸಾಲದಿಂದಾಗಿ ಮನೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ, ಜೊತೆಗೆ ಅದೇ ಮನೆಯ ಮೂವರನ್ನು ಕಾಡಿದ ಕ್ಯಾನ್ಸರ್ ರೋಗ ಇದರಿಂದ ಹೈರಾಣಾಗಿದ್ದ ಕುಟುಂಬ ಸುರೇಶ್ ಗೋಪ ನೆರವಿನಿಂದಾಗಿ ನೆಮ್ಮದಿಯಿಂದ ಉಸಿರಾಡುವಂತಾಗಿದೆ.
ಸಚಿವನ ನಡೆಗೆ ಭಾರೀ ಮೆಚ್ಚುಗೆ
ಸುರೇಶ್ ಅ ಕುಟುಂಬಕ್ಕೆ ನೆರವಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಅದು ಬರೀ ಕೇರಳದ ಗಮನವನ್ನಲ್ಲ ದೇಶದ ಗಮನವನ್ನು ಸೆಳೆದಿದೆ. ಮನುಷ್ಯತ್ವ ಎಂಬುವುದು ಇದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಮೂವರಿಗೆ ಕ್ಯಾನ್ಸರ್
ಕುಟುಂಬದಲ್ಲಿ ಒಬ್ಬರಿಗೆ ಕ್ಯಾನ್ಸರ್ ಬಂದರೆ ಆ ಕುಟುಂಬ ಆರ್ಥಿಕವಾಗಿ, ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗುತ್ತದೆ, ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಬರುತ್ತದೆ. ಈ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್ ಇದೆ. ಮಗಳು ಕ್ಯಾನ್ಸರ್ನಿಂದ ತೀರಿಕೊಂಡಿದ್ದಾರೆ, ಅಜ್ಜಿ ಮತ್ತು ಮೊಮ್ಮಗಳು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಮನೆ, ಆಸ್ತಿ ಎಲ್ಲಾ ಅಟವಿಟ್ಟು ಚಿಕಿತ್ಸೆ ನೀಡಿದ ಕುಟುಂಬ
ಅದೊಂದು ಸಾಧಾರಣ ಕುಟುಂಬವಾಗಿತ್ತು, ಮನೆಯಲ್ಲಿದ್ದ ಮೂವರ ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಆಸ್ತಿ, ಮನೆಯನ್ನು ಅಡವಿಟ್ಟು ಹಣ ಪಡೆದು ಚಿಕಿತ್ಸೆ ಕೊಡಿಸುತ್ತಾರೆ. ಅಜ್ಜಿಯ ಮಗಳು ತೀರಿ ಹೋಗಿದ್ದಾಳೆ, ನನಗೇನಾದರೂ ಪರ್ವಾಗಿಲ್ಲ, ಆದರೆ ಮೊಮ್ಮಗಳು ಬದುಕಬೇಕು ಎಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸಾಲ ಮರುಪಾವತಿ ಮಾಡದೆ ಮನೆಯ ಜಪ್ತಿ
ಇವರಿಗೆ ಸಾಲ ಪಡೆದ ಹಣಕ್ಕೆ ಅಸಲು ಬಡ್ಡಿ ನೀಡುವುದು ಸಾದ್ಯವಾಗದ ಮಾತಾಗಿತ್ತು. ಇವರ ಕಷ್ಟಗಳನ್ನು ಹೇಳಿಕೊಂಡರೆ ಬ್ಯಾಂಕ್ನವರು ಕೇಳುತ್ತಾರೆಯೇ, ಖಂಡಿತ ಇಲ್ಲ, ಜಪ್ತಿ ನೋಟೀಸ್ ನೀಡಿ ಜಪ್ತಿ ಮಾಡಿದರು. ಭಯಾನಕ ಖಾಯಿಲೆ ಇರಲು ಮನೆಯು ಕಳೆದುಕೊಮಡ ಕುಟುಂಬದ ನೆರವಿಗೆ ನಿಂತಿದ್ದಾರೆ ಸುರೇಶ್ ಗೋಪಿ, ಬ್ಯಾಂಕ್ಗೆ ಹೋಗಿ ಸಾಲ ತೀರಿಸಿ ಅವರ ಚಿಕಿತ್ಸೆಗೂ ನೆರವಿನ ಹಸ್ತ ಚಾಚಿದ್ದಾರೆ.
ಕೇರಳದ ಆಲಪುಝಾದೆ ಪೆರುಂಬಾಲಂ ಗ್ರಾಮದ ನಿವಾಸಿ ರಾಜಪ್ಪನ್ ಕುಟುಂಬ ಇದೀಗ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಪುಟ್ಟ ಮಗುವಿಗೆ ಬೋನ್ ಮ್ಯಾರೋ ಕ್ಯಾನ್ಸರ್
ಅಜ್ಜಿಯ ಮೊಮ್ಮಗಳಿಗೆ ಬೋನೋ ಮ್ಯಾರೋ ಕ್ಯಾನ್ಸರ್. ಅವಳ ಚಿಕಿತ್ಸೆಗೆ ವೈದ್ಯರ ಜೊತೆ ಮಾತನಾಡಿ ಡೋನರ್ ಸಿಕ್ಕ ತಕ್ಷಣ ಆ ಮಗುವಿಗೆ ಸರ್ಜರಿ ನಡೆಯಲಿದೆ. ಇದೀಗ ಇವರು ಮಾಡಿದ ಕಾರ್ಯ ಎಲ್ಲರ ಗಮನ ಸೆಳೆದಿದೆ.



Click it and Unblock the Notifications