Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ಮೊಮ್ಮಗಳು ಸೇರಿ ಮೂವರಿಗೆ ಕ್ಯಾನ್ಸರ್, ಚಿಕಿತ್ಸೆಗೆ ಮಾಡಿದ ಸಾಲದಿಂದ ಮನೆಯೂ ಜಪ್ತಿ: ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ ಕೇಂ
ಮನೆಯಲ್ಲಿ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್, ಬ್ಯಾಂಕ್ನಿಂದ ಮನೆ ಜಪ್ತಿ: ನೆರವಿಗೆ ಬಂದ ಕೇಂದ್ರ ಸಚಿವನ ನೋಡಿ ಇದೇ ಮನುಷ್ಯತ್ವ ಎಂದರೆ ಎನ್ನುತ್ತಿದ್ದಾರೆ ಜನ.
ಕೇಂದ್ರ ಸಚಿವರಾದ ಸುರೇಶ್ ಗೋಪಿ ಕೇರಳದಲ್ಲಿ ಕ್ಯಾನ್ಸರ್ನಿಂದ ಇರಲು ಒಂದು ಸೂರು ಇಲ್ಲದಿದ್ದ ಕುಟುಂಬಕ್ಕೆ ನೆರವಾಗುವ ಮೂಲಕ ಒಬ್ಬ ಸಚಿವನಾಗಿ ಮಾತ್ರವಲ್ಲ ಮನುಷ್ಯನಾಗಿ ಗ್ರೇಟ್ ಅನಿಸಿಕೊಂಡಿದ್ದಾರೆ, ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಸ್ವಂತ ಹಣದಿಂದ ಆ ಕುಟುಂಬದ ಸಾಲ ತೀರಿಸಿದ್ದಾರೆ.

ಬ್ಯಾಂಕ್ ಸಾಲದಿಂದಾಗಿ ಮನೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ, ಜೊತೆಗೆ ಅದೇ ಮನೆಯ ಮೂವರನ್ನು ಕಾಡಿದ ಕ್ಯಾನ್ಸರ್ ರೋಗ ಇದರಿಂದ ಹೈರಾಣಾಗಿದ್ದ ಕುಟುಂಬ ಸುರೇಶ್ ಗೋಪ ನೆರವಿನಿಂದಾಗಿ ನೆಮ್ಮದಿಯಿಂದ ಉಸಿರಾಡುವಂತಾಗಿದೆ.
ಸಚಿವನ ನಡೆಗೆ ಭಾರೀ ಮೆಚ್ಚುಗೆ
ಸುರೇಶ್ ಅ ಕುಟುಂಬಕ್ಕೆ ನೆರವಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಅದು ಬರೀ ಕೇರಳದ ಗಮನವನ್ನಲ್ಲ ದೇಶದ ಗಮನವನ್ನು ಸೆಳೆದಿದೆ. ಮನುಷ್ಯತ್ವ ಎಂಬುವುದು ಇದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಮೂವರಿಗೆ ಕ್ಯಾನ್ಸರ್
ಕುಟುಂಬದಲ್ಲಿ ಒಬ್ಬರಿಗೆ ಕ್ಯಾನ್ಸರ್ ಬಂದರೆ ಆ ಕುಟುಂಬ ಆರ್ಥಿಕವಾಗಿ, ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗುತ್ತದೆ, ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಬರುತ್ತದೆ. ಈ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳಿಗೆ ಕ್ಯಾನ್ಸರ್ ಇದೆ. ಮಗಳು ಕ್ಯಾನ್ಸರ್ನಿಂದ ತೀರಿಕೊಂಡಿದ್ದಾರೆ, ಅಜ್ಜಿ ಮತ್ತು ಮೊಮ್ಮಗಳು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಮನೆ, ಆಸ್ತಿ ಎಲ್ಲಾ ಅಟವಿಟ್ಟು ಚಿಕಿತ್ಸೆ ನೀಡಿದ ಕುಟುಂಬ
ಅದೊಂದು ಸಾಧಾರಣ ಕುಟುಂಬವಾಗಿತ್ತು, ಮನೆಯಲ್ಲಿದ್ದ ಮೂವರ ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಆಸ್ತಿ, ಮನೆಯನ್ನು ಅಡವಿಟ್ಟು ಹಣ ಪಡೆದು ಚಿಕಿತ್ಸೆ ಕೊಡಿಸುತ್ತಾರೆ. ಅಜ್ಜಿಯ ಮಗಳು ತೀರಿ ಹೋಗಿದ್ದಾಳೆ, ನನಗೇನಾದರೂ ಪರ್ವಾಗಿಲ್ಲ, ಆದರೆ ಮೊಮ್ಮಗಳು ಬದುಕಬೇಕು ಎಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸಾಲ ಮರುಪಾವತಿ ಮಾಡದೆ ಮನೆಯ ಜಪ್ತಿ
ಇವರಿಗೆ ಸಾಲ ಪಡೆದ ಹಣಕ್ಕೆ ಅಸಲು ಬಡ್ಡಿ ನೀಡುವುದು ಸಾದ್ಯವಾಗದ ಮಾತಾಗಿತ್ತು. ಇವರ ಕಷ್ಟಗಳನ್ನು ಹೇಳಿಕೊಂಡರೆ ಬ್ಯಾಂಕ್ನವರು ಕೇಳುತ್ತಾರೆಯೇ, ಖಂಡಿತ ಇಲ್ಲ, ಜಪ್ತಿ ನೋಟೀಸ್ ನೀಡಿ ಜಪ್ತಿ ಮಾಡಿದರು. ಭಯಾನಕ ಖಾಯಿಲೆ ಇರಲು ಮನೆಯು ಕಳೆದುಕೊಮಡ ಕುಟುಂಬದ ನೆರವಿಗೆ ನಿಂತಿದ್ದಾರೆ ಸುರೇಶ್ ಗೋಪಿ, ಬ್ಯಾಂಕ್ಗೆ ಹೋಗಿ ಸಾಲ ತೀರಿಸಿ ಅವರ ಚಿಕಿತ್ಸೆಗೂ ನೆರವಿನ ಹಸ್ತ ಚಾಚಿದ್ದಾರೆ.
ಕೇರಳದ ಆಲಪುಝಾದೆ ಪೆರುಂಬಾಲಂ ಗ್ರಾಮದ ನಿವಾಸಿ ರಾಜಪ್ಪನ್ ಕುಟುಂಬ ಇದೀಗ ಸ್ವಲ್ಪ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಪುಟ್ಟ ಮಗುವಿಗೆ ಬೋನ್ ಮ್ಯಾರೋ ಕ್ಯಾನ್ಸರ್
ಅಜ್ಜಿಯ ಮೊಮ್ಮಗಳಿಗೆ ಬೋನೋ ಮ್ಯಾರೋ ಕ್ಯಾನ್ಸರ್. ಅವಳ ಚಿಕಿತ್ಸೆಗೆ ವೈದ್ಯರ ಜೊತೆ ಮಾತನಾಡಿ ಡೋನರ್ ಸಿಕ್ಕ ತಕ್ಷಣ ಆ ಮಗುವಿಗೆ ಸರ್ಜರಿ ನಡೆಯಲಿದೆ. ಇದೀಗ ಇವರು ಮಾಡಿದ ಕಾರ್ಯ ಎಲ್ಲರ ಗಮನ ಸೆಳೆದಿದೆ.



Click it and Unblock the Notifications