Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಕರ್ಮ ನಿಜವಾಗಿದ್ದರೆ ಒಳ್ಳೆಯವರು ಕಷ್ಟ ಅನುಭವಿಸುವುದೇಕೆ? ಗೀತೆಯಲ್ಲಿದೆ ಇದಕ್ಕೆಲ್ಲಾ ಉತ್ತರ..!
ಒಬ್ಬ ವ್ಯಕ್ತಿಯ ಫಲಾನುಫಲಗಳು ಆತನ ಕರ್ಮದ ಮೇಲೆ ನಿರ್ಧರಿತವಾಗುತ್ತದೆ ಎಂದು ನಂಬಲಾಗಿದೆ. ಕರ್ಮ ಸಿದ್ಧಾಂತವು ಪ್ರತಿಯೊಬ್ಬರ ಜೀವನದ ಆಗು ಹೋಗಗಳ ಮೇಲೆ ನಿರ್ಧರಿತವಾಗುತ್ತದೆ. ಕರ್ಮವನ್ನು ಸಾಮಾನ್ಯವಾಗಿ ವಿಧಿ ಅಥವಾ ಪೂರ್ವನಿರ್ಧಾರ ಎಂದು ಅರ್ಥೈಸಲಾಗಿದೆ. ಪೂರ್ವ ಜನ್ಮದಿಂದ ಹಿಡಿದು ಪ್ರಸ್ತುತ ಆತನ ಧರ್ಮಗಳನುಸಾರವಾಗಿ ನಡೆಯದ ಕೆಲಸವು ಆತನ ಕರ್ಮವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ.
ಯಾರೆ ಆಗಿರಲಿ ಆತನನ್ನು ಕರ್ಮವು ಶಿಕ್ಷಿಸಿಯೇ ಶಿಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಈ ಕರ್ಮ ಸಿದ್ದಾಂತ ಕುರಿತು ತಿಳಿಯಪಡಿಸುತ್ತಾನೆ. ಹಾಗೆ ಒಳ್ಳೆಯ ಜನರಿಗೆ ಕೆಟ್ಟದಾಗುವ ಬಗೆ ಹಾಗೆ ಕೆಟ್ಟ ಕೆಲಸ ಮಾಡುವವರು ಜೀವನದಲ್ಲಿ ಯಶಸ್ಸು ಪಡೆಯುವುದು ಏಕೆ ಎಂಬ ದೊಡ್ಡ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು.

ಹೀಗಾಗಿ ಕರ್ಮ ನಿಜವೇ ಆಗಿದ್ದರೆ ಕೆಟ್ಟ ಕೆಲಸ ಮಾಡುವವರು ಮುಂದೆ ಬರುವುದೇಕೆ? ಭಗವದ್ಗೀತೆಯಲ್ಲಿ ನ್ಯಾಯ ಕರ್ಮದ ಕುರಿತಾಗಿ ಹೇಳಿರುವುದೇನು? ಎಂಬುದನ್ನು ನಾವಿಲ್ಲಿ ತಿಳಿಯೋಣ. ಅದರಲ್ಲು ದುಖಃ ಹಾಗೂ ಕಷ್ಟ ಎನ್ನುವುದು ಶಿಕ್ಷೆಯಲ್ಲ ಬದಲಿಗೆ ಅದು ಆಧ್ಯಾತ್ಮಿಕ ವಿಕಾಸದ ಕಡೆಗಿರುವ ಮಾರ್ಗ ಎಂದು ಹೇಳಲಾಗಿದೆ.
ಅವಶ್ಯಯನ್ ಭವಿತಂ ದ್ವಿಜೇನಿ ಯಾತ್ಯಾ ದುರ್ಗತಿವಾಪ್ನಿಭಾವಸ್ಥಿತಾಃ.
ಅವಶ್ಯಯನ್ ಭವಿತಂ ದ್ವಿಜನಿಃ ಯಥಾ ದುಸ್ತರಮಾವಾಪ್ ನಿಭಾವಸ್ಥಿತಾಂ
ಭಗವದ್ಗೀತೆಯಲ್ಲಿ ಈ ರೀತಿಯ ಶ್ಲೋಕವು ನಿಮ್ಮ ಜೀವನದಲ್ಲಿ ಏನಾಗಬೇಕೋ ಅದು ಖಂಡಿತವಾಗಿಯೂ ನಡೆಯುತ್ತದೆ. ಯಾರು ಕೂಡ ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದಾಗಿ ವಿವರಣೆ ನೀಡುತ್ತದೆ. ಭಗವದ್ಗೀತೆಯು ನ್ಯಾಯದ ಸರಳ ವಿಚಾರಗಳನ್ನು ಮೀರಿದ ಉತ್ತರವನ್ನು ನೀಡುತ್ತದೆ. ಕರ್ಮವು ಕೇವಲ ಕಾರಣ ಮತ್ತು ಪರಿಣಾಮಕ್ಕಿಂತ ಹೆಚ್ಚು ಜಟಿಲವಾಗಿದೆ.
ಕರ್ಮ ಬಹು-ಜೀವನದ ಕೊಡುಗೆ
ನೀವು ಇಂದು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳಿಗೆ ಹಲವು ಜನ್ಮದ ಕರ್ಮದ ಫಲ ಎಂದು ಭಗವದ್ಗೀತೆಯು ವಿವರಿಸುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದನ್ನು ಪಡೆಯುತ್ತಾರೆ ಎಂಬ ಮಾತಿದೆ ಆದ್ರೆ ಕೃಷ್ಣನು ಕರ್ಮವು ಬಹು ಜೀವಿತಾವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸುತ್ತಾನೆ. ಇಂದು ಅನುಭವಿಸುವ ಕಷ್ಟವು ಹಿಂದಿನ ಜನ್ಮದ ಪಾಪ ಕ್ರಿಯೆಗಳ ಪರಿಣಾಮವಾಗಿರಲಿದೆ. ಇಂದು ನೀವು ಒಳ್ಳೆಯ ಕೆಲಸ ಮಾಡಿದರೆ ಮುಂದಿನ ಜನ್ಮವು ನಿಮಗೆ ಸುಖ ತರಲಿದೆ ಎಂಬುದು ಕೃಷ್ಣನ ಮಾತಿನ ಸಾರಾಂಶವಾಗಿದೆ.
ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಮಮತೀಶ್ವರಃ |
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಸಯಾತ್ ||
ಗಾಳಿಯಲ್ಲಿ ಹೂವಿನ ಸುಗಂಧವು ಚಲಿಸುವಂತೆ, ಆತ್ಮವು ನಿಮ್ಮ ಕರ್ಮಗಳನ್ನು ಒಂದು ದೇಹದಿಂದ ಮತ್ತೊಂದಕ್ಕೆ ಕೊಂಡೊಯ್ಯುತ್ತದೆ ಎಂದು ಭಗವದ್ಗೀತೆಯ ಸಾರ ಹೇಳುತ್ತದೆ. ಅಂದರೆ ಈ ಜನ್ಮದಲ್ಲಿ ವ್ಯಕ್ತಿಯೊಬ್ಬ ತಪ್ಪುಗಳನ್ನು ಮಾಡುತ್ತಿದ್ದರೂ ಅಥವಾ ಕೆಟ್ಟ ಕೆಲಸದಲ್ಲಿ ಭಾಗಿಯಾಗಿಯೂ ಆತ ಉತ್ತಮ ಜೀವನ ಕಟ್ಟಿಕೊಂಡಿದ್ದರೆ ಅದು ಆತ ಹಿಂದಿನ ಜನ್ಮದಲ್ಲಿ ಮಾಡಿರುವ ಪುಣ್ಯದ ಫಲ ಎಂದು ಗೀತೆ ಹೇಳಲಿದೆ.
ಮಾತ್ರಾಸ್ಪರ್ಶಾಸ್ತು ಕೌನ್ತೆಯ ಶೀತೋಷ್ಣಸುಖದುಃಖದಾಃ |
ಆಗಮಪಾಯಿನನೋ ⁇ ನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ||
ಓ ಅರ್ಜುನ ಸುಖದುಃಖಗಳು ಋತುಗಳಂತೆ ಬಂದು ಹೋಗುತ್ತವೆ; ತಾಳ್ಮೆಯಿಂದ ಸಹಿಸಿಕೊಳ್ಳಿ, ಏಕೆಂದರೆ ಅವು ತಾತ್ಕಾಲಿಕ ಎಂದು ಕೃಷ್ಣನು ಅರ್ಜುನನಿಗೆ ಹೇಳಿದ್ದಾನೆ. ಆತ್ಮ ಶುದ್ಧವಾಗಬೇಕಾದರೆ ಚಿನ್ನದಂತೆ ಬಿಸಿಯಾಗಬೇಕು. ಹಾಗೆ ಆತ್ಮಕ್ಕೆ ಶಿಕ್ಷೆಯಾಗಿಸುವುದಲ್ಲ ಒಳ್ಳೆಯ ಕಾರ್ಯಗಳು ಆತ್ಮಶುದ್ಧಿಯ ದಾರಿ ಎಂದು ಕೃಷ್ಣ ಹೇಳಿದ್ದಾನೆ.
ಕರ್ಮವು ಮಾರಕವಲ್ಲ. ಹಿಂದಿನ ಕ್ರಿಯೆಗಳು ವರ್ತಮಾನವನ್ನು ರೂಪಿಸುತ್ತಿದ್ದರೂ, ಭವಿಷ್ಯವು ಇನ್ನೂ ನಮ್ಮ ಕೈಯಲ್ಲಿದೆ ಎಂದು ಕೃಷ್ಣನು ಭರವಸೆ ನೀಡುತ್ತಾನೆ. ನಾವು ಮಾಡುವ ಪ್ರತಿಯೊಂದು ಪ್ರಜ್ಞಾಪೂರ್ವಕ ಆಯ್ ಇದನ್ನು ನಿರ್ಧರಿಸುತ್ತದೆ. ಸುಳ್ಳಿನ ವಿರುದ್ಧ ಸತ್ಯದ ಆಯ್ಕೆ, ಅಧರ್ಮದ ವಿರುದ್ಧ ಧರ್ಮದ ಆಯ್ಕೆ, ದ್ವೇಷದ ವಿರುದ್ಧ ಪ್ರೀತಿಯ ಆಯ್ಕೆಯು ನಿಮ್ಮ ಕರ್ಮ ಮಾರ್ಗ ಬದಲಾಯಿಸಲು ಇರುವ ದಾರಿಯಾಗಿದೆ ಎಂದು ಗೀತೆ ಹೇಳುತ್ತದೆ.



Click it and Unblock the Notifications