Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ತಾಯಿಯ ಖುಣ ತೀರಿಸಲು ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿದ ಪುತ್ರ..!
ಜಗತ್ತಿನಲ್ಲಿ ತಾಯಿ ಖುಣ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆಕೆ ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವಳು. ಮಕ್ಕಳ ಆರೋಗ್ಯ ಬಯಸೋದೂ ಬಿಟ್ಟು ಆಕೆ ಬೇರೆನು ಮಾಡಿಯೇ ಇರುವುದಿಲ್ಲ. ಹೀಗಿರುವಾಗ ನಿಮಗೆಲ್ಲಾ ತ್ರಾತಾಯುಗದ ಶ್ರವಣ ಕುಮಾರನ ಕಥೆ ಗೊತ್ತಿರಬಹುದು. ಆತ ತನ್ನ ಭುಜದ ಮೇಲೆ ತನ್ನ ಕುರುಡ ಪೋಷಕರನ್ನು ಯಾತ್ರೆ ಮಾಡಿಸಿದ್ದ.
ಆದ್ರೆ ಇಲ್ಲೊಂದು ಕಥೆ ಸಹ ಯಾವ ಶ್ರವಣ ಕುಮಾರನಿಗಿಂತಲೂ ಕಡಿಮೆ ಇಲ್ಲ. ಆತ ತನ್ನ ತಾಯಿಗಾಗಿ ಈ ಜಗತ್ತಿನಲ್ಲೇ ಯಾರು ಮಾಡದ ಕೆಲಸ ಮಾಡಿದ್ದಾನೆ. ತಾಯಿ ಪ್ರೀತಿಗೆ ಸರಿಸಾಟಿ ಯಾರು ಇಲ್ಲ. ಸ್ವಾರ್ಥವಿಲ್ಲದೆ ಪ್ರೀತಿ ನೀಡುವ ತಾಯಿಗೆ ಇಲ್ಲೊಬ್ಬ ಮಗ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿದ್ದಾನೆ.

ಹೌದು ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಉಜ್ಜಯಿನಿಯಲ್ಲಿ. ಆತ ತನ್ನ ತಾಯಿಗೆ ಯಾರು ಊಹಿಸದ ಕೊಡುಗೆ ನೀಡಿದ್ದಾನೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ. ರೋನಕ್ ಗುರ್ಜರ್ ಎಂಬಾತ ರಾಮಾಯಣದಿಂದ ಪ್ರೇರೇಪಿತನಾಗಿ ತನ್ನ ತಾಯಿಗೆ ಈ ರೀತಿಯ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದ್ದನಂತೆ.
ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ
ತಾಯಿಗೆ ತನ್ನ ಚರ್ಮದಲ್ಲಿ ಚಪ್ಪಲಿ ಮಾಡಿಸಬೇಕು ಎಂದು ನಿರ್ಧರಿಸಿದ ಆತ ಚರ್ಮ ತೆಗೆಯಬೇಕಾದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಈ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಈ ಕುರಿತು ವೈದ್ಯರ ಬಳಿ ತಿಳಿಸದಾಗ ಅಕ್ಷರಶಃ ಅವರು ಶಾಕ್ಗೆ ಒಳಗಾಗಿದ್ದರಂತೆ. ಈ ರೀತಿ ಎಂದಿಗೂ ಅವರು ಕೇಳಿರಲಿಲ್ಲ. ಆದರೆ ತೊಡೆ ಭಾಗದ ಚರ್ಮ ತೆಗೆದು ಬೇರೆ ಚಿಕಿತ್ಸೆಗೆ ಬಳಸಿರುವ ಉದಾಹರಣೆ ಇದೆ. ಯಾರಾದರು ಆಸಿಡ್ ದಾಳಿಗೆ ಒಳಗಾದರೆ ಇಲ್ಲವೆ ಬೆಂಕಿ ಅನಾಹುತದಲ್ಲಿ ಮುಖದ ಚರ್ಮ ಹಾಳಾದರೆ ತೊಡೆಯ ಚರ್ಮ ತೆಗೆದು ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಾರೆ. ಆದರೆ ಈ ವಿಚಿತ್ರ ಪ್ರಕರಣದಲ್ಲಿ ವೈದ್ಯರಿಗೂ ಅಚ್ಚರಿಯಾಗಿತ್ತು. ಆದರೆ ವೈದ್ಯರು ಸಹ ಆ ಮಗನ ಆಸೆಗೆ ಕೈ ಜೋಡಿಸಿದ್ದಾರೆ. ಆತ ಎರಡೂ ಕಡೆ ತೊಡೆಯ ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
ಕಣ್ಣೀರಿಟ್ಟ ತಾಯಿ
ಇನ್ನು ತನ್ನ ಚರ್ಮದಿಂದ ಮಾಡಿದ್ದ ಚಪ್ಪಲಿಯನ್ನು ತಾಯಿಗೆ ನೀಡಲು ಆತ ಜಿತೇಂದ್ರ ಮಹಾರಾಜ್ ಅವರ ಧಾರ್ಮಿಕ ಕಾರ್ಯಕ್ರದಲ್ಲಿ ತಾಯಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಪುತ್ರ ಅಲ್ಲಿಯೇ ತಾಯಿಗೆ ಚರ್ಮದ ಚಪ್ಪಲಿ ನೀಡಿದ್ದಾನೆ. ತನ್ನ ಮಗನ ತೊಡೆಯ ಚರ್ಮದಿಂದ ಮಾಡಿದ್ದ ಚಪ್ಪಲಿ ಎಂದು ತಿಳಿದ ಬಳಿಕ ತಾಯಿ ಕಣ್ಣೀರಿಟ್ಟಿದ್ದಾರೆ. ಮಗನನ್ನು ತಬ್ಬಿಕೊಂಡಾಕೆ ಕಣ್ಣೀರು ಹಾಕಿದ್ದಾರೆ. ಈ ರೀತಿಯ ಹರಕೆ ಇಟ್ಟುಕೊಳ್ಳುತ್ತಾನೆ ಎಂದು ನಾನು ಭಾವಿಸಿರಲಿಲ್ಲ ಎಂದು ಆಕೆ ಕಣ್ಣೀರಿಟ್ಟು ಆತನ ತಂಬಿಕೊಂಡರು. ಈ ರೀತಿಯ ಮಗನ ಪಡೆದಿರುವ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ದೇವರು ಅವನ ಎಲ್ಲಾ ಕಷ್ಟಗಳನ್ನು ದೂರಮಾಡಲಿ ಎಂದು ಆಕೆ ಬೇಡಿಕೊಂಡಳು.
ಪುತ್ರನ ವಿರುದ್ಧ ಇವೆ ಕ್ರಿಮಿನಲ್ ಕೇಸ್
ಅಚ್ಚರಿ ಅಂದರೆ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿಕೊಟ್ಟ ಪುತ್ರನ ಮೇಲೆ ಹಲವು ಕ್ರಿಮಿನಲ್ ಕೇಸ್ಗಳಿವೆ. ಉಜ್ಜಯಿನಿಯ ಚಿಮಂಗಂಜ್ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಧಂಚಾ ಭವನದ ನಿವಾಸಿಯಾಗಿರುವ ಈತನ ವಿರುದ್ಧ 2019ರಲ್ಲಿ ಕಾಲಿಗೆ ಗುಂಡೇಟು ಬಿದ್ದಿತ್ತು, ಪೊಲೀಸರು ಒಂದು ಕಾಲಿಗೆ ಗುಂಡು ಹಾರಿಸಿದ್ದರು. ಈತನ ವಿರುದ್ಧ ದರೋಡೆ, ಕೊಲೆ ಸೇರಿ ಒಟ್ಟು 37 ಕ್ರಿಮಿನಲ್ ಕೇಸ್ಗಳಿವೆ ಎಂದು ತಿಳಿದುಬಂದಿದೆ.



Click it and Unblock the Notifications