Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಯಿಯ ಖುಣ ತೀರಿಸಲು ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿದ ಪುತ್ರ..!
ಜಗತ್ತಿನಲ್ಲಿ ತಾಯಿ ಖುಣ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆಕೆ ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವಳು. ಮಕ್ಕಳ ಆರೋಗ್ಯ ಬಯಸೋದೂ ಬಿಟ್ಟು ಆಕೆ ಬೇರೆನು ಮಾಡಿಯೇ ಇರುವುದಿಲ್ಲ. ಹೀಗಿರುವಾಗ ನಿಮಗೆಲ್ಲಾ ತ್ರಾತಾಯುಗದ ಶ್ರವಣ ಕುಮಾರನ ಕಥೆ ಗೊತ್ತಿರಬಹುದು. ಆತ ತನ್ನ ಭುಜದ ಮೇಲೆ ತನ್ನ ಕುರುಡ ಪೋಷಕರನ್ನು ಯಾತ್ರೆ ಮಾಡಿಸಿದ್ದ.
ಆದ್ರೆ ಇಲ್ಲೊಂದು ಕಥೆ ಸಹ ಯಾವ ಶ್ರವಣ ಕುಮಾರನಿಗಿಂತಲೂ ಕಡಿಮೆ ಇಲ್ಲ. ಆತ ತನ್ನ ತಾಯಿಗಾಗಿ ಈ ಜಗತ್ತಿನಲ್ಲೇ ಯಾರು ಮಾಡದ ಕೆಲಸ ಮಾಡಿದ್ದಾನೆ. ತಾಯಿ ಪ್ರೀತಿಗೆ ಸರಿಸಾಟಿ ಯಾರು ಇಲ್ಲ. ಸ್ವಾರ್ಥವಿಲ್ಲದೆ ಪ್ರೀತಿ ನೀಡುವ ತಾಯಿಗೆ ಇಲ್ಲೊಬ್ಬ ಮಗ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿದ್ದಾನೆ.

ಹೌದು ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಉಜ್ಜಯಿನಿಯಲ್ಲಿ. ಆತ ತನ್ನ ತಾಯಿಗೆ ಯಾರು ಊಹಿಸದ ಕೊಡುಗೆ ನೀಡಿದ್ದಾನೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ. ರೋನಕ್ ಗುರ್ಜರ್ ಎಂಬಾತ ರಾಮಾಯಣದಿಂದ ಪ್ರೇರೇಪಿತನಾಗಿ ತನ್ನ ತಾಯಿಗೆ ಈ ರೀತಿಯ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದ್ದನಂತೆ.
ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ
ತಾಯಿಗೆ ತನ್ನ ಚರ್ಮದಲ್ಲಿ ಚಪ್ಪಲಿ ಮಾಡಿಸಬೇಕು ಎಂದು ನಿರ್ಧರಿಸಿದ ಆತ ಚರ್ಮ ತೆಗೆಯಬೇಕಾದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಈ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಈ ಕುರಿತು ವೈದ್ಯರ ಬಳಿ ತಿಳಿಸದಾಗ ಅಕ್ಷರಶಃ ಅವರು ಶಾಕ್ಗೆ ಒಳಗಾಗಿದ್ದರಂತೆ. ಈ ರೀತಿ ಎಂದಿಗೂ ಅವರು ಕೇಳಿರಲಿಲ್ಲ. ಆದರೆ ತೊಡೆ ಭಾಗದ ಚರ್ಮ ತೆಗೆದು ಬೇರೆ ಚಿಕಿತ್ಸೆಗೆ ಬಳಸಿರುವ ಉದಾಹರಣೆ ಇದೆ. ಯಾರಾದರು ಆಸಿಡ್ ದಾಳಿಗೆ ಒಳಗಾದರೆ ಇಲ್ಲವೆ ಬೆಂಕಿ ಅನಾಹುತದಲ್ಲಿ ಮುಖದ ಚರ್ಮ ಹಾಳಾದರೆ ತೊಡೆಯ ಚರ್ಮ ತೆಗೆದು ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಾರೆ. ಆದರೆ ಈ ವಿಚಿತ್ರ ಪ್ರಕರಣದಲ್ಲಿ ವೈದ್ಯರಿಗೂ ಅಚ್ಚರಿಯಾಗಿತ್ತು. ಆದರೆ ವೈದ್ಯರು ಸಹ ಆ ಮಗನ ಆಸೆಗೆ ಕೈ ಜೋಡಿಸಿದ್ದಾರೆ. ಆತ ಎರಡೂ ಕಡೆ ತೊಡೆಯ ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
ಕಣ್ಣೀರಿಟ್ಟ ತಾಯಿ
ಇನ್ನು ತನ್ನ ಚರ್ಮದಿಂದ ಮಾಡಿದ್ದ ಚಪ್ಪಲಿಯನ್ನು ತಾಯಿಗೆ ನೀಡಲು ಆತ ಜಿತೇಂದ್ರ ಮಹಾರಾಜ್ ಅವರ ಧಾರ್ಮಿಕ ಕಾರ್ಯಕ್ರದಲ್ಲಿ ತಾಯಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಪುತ್ರ ಅಲ್ಲಿಯೇ ತಾಯಿಗೆ ಚರ್ಮದ ಚಪ್ಪಲಿ ನೀಡಿದ್ದಾನೆ. ತನ್ನ ಮಗನ ತೊಡೆಯ ಚರ್ಮದಿಂದ ಮಾಡಿದ್ದ ಚಪ್ಪಲಿ ಎಂದು ತಿಳಿದ ಬಳಿಕ ತಾಯಿ ಕಣ್ಣೀರಿಟ್ಟಿದ್ದಾರೆ. ಮಗನನ್ನು ತಬ್ಬಿಕೊಂಡಾಕೆ ಕಣ್ಣೀರು ಹಾಕಿದ್ದಾರೆ. ಈ ರೀತಿಯ ಹರಕೆ ಇಟ್ಟುಕೊಳ್ಳುತ್ತಾನೆ ಎಂದು ನಾನು ಭಾವಿಸಿರಲಿಲ್ಲ ಎಂದು ಆಕೆ ಕಣ್ಣೀರಿಟ್ಟು ಆತನ ತಂಬಿಕೊಂಡರು. ಈ ರೀತಿಯ ಮಗನ ಪಡೆದಿರುವ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ದೇವರು ಅವನ ಎಲ್ಲಾ ಕಷ್ಟಗಳನ್ನು ದೂರಮಾಡಲಿ ಎಂದು ಆಕೆ ಬೇಡಿಕೊಂಡಳು.
ಪುತ್ರನ ವಿರುದ್ಧ ಇವೆ ಕ್ರಿಮಿನಲ್ ಕೇಸ್
ಅಚ್ಚರಿ ಅಂದರೆ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿಕೊಟ್ಟ ಪುತ್ರನ ಮೇಲೆ ಹಲವು ಕ್ರಿಮಿನಲ್ ಕೇಸ್ಗಳಿವೆ. ಉಜ್ಜಯಿನಿಯ ಚಿಮಂಗಂಜ್ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಧಂಚಾ ಭವನದ ನಿವಾಸಿಯಾಗಿರುವ ಈತನ ವಿರುದ್ಧ 2019ರಲ್ಲಿ ಕಾಲಿಗೆ ಗುಂಡೇಟು ಬಿದ್ದಿತ್ತು, ಪೊಲೀಸರು ಒಂದು ಕಾಲಿಗೆ ಗುಂಡು ಹಾರಿಸಿದ್ದರು. ಈತನ ವಿರುದ್ಧ ದರೋಡೆ, ಕೊಲೆ ಸೇರಿ ಒಟ್ಟು 37 ಕ್ರಿಮಿನಲ್ ಕೇಸ್ಗಳಿವೆ ಎಂದು ತಿಳಿದುಬಂದಿದೆ.



Click it and Unblock the Notifications