Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕುಂಭ ರಾಶಿ ಯುಗಾದಿ ರಾಶಿಫಲ 2023: ಈ ವರ್ಷ ಶುಭವೋ, ಮಿಶ್ರಫಲವೋ?
ಎಲ್ಲರಿಗೂ ಶೋಭಾಕೃತ ಸಂವತ್ಸರ ಶುಭಾಶಯಗಳು. ಈ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಹೊಸತನ ತುಂಬಲಿ, ನಿಮ್ಮ ಬಾಳು ಬಂಗಾರವಾಗಲಿ, ಈ ಯುಗಾದಿ ನಿಮಗೆ ಹರ್ಷದ ಯುಗಾದಿ ಆಗಿರಲಿ ಎಂದು ಹೇಳುತ್ತಾ ನಾವಿಲ್ಲಿ ಕುಂಭ ರಾಶಿಯವರಿ 2023-34ರ ಯುಗಾದಿ ರಾಶಿಫಲ ನೀಡಿದ್ದೇವೆ ನೋಡಿ:
ಕುಂಭ ರಾಶಿಯವರಲ್ಲಿ 2023-24 ಯುಗಾದಿಯವರೆಗೆ ಗ್ರಹಗತಿಗಳ ಪ್ರಭಾವ:
ಕುಂಭ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು, ಗುರು ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಕೇತು ನಿಮ್ಮ 10ನೇ ಮನೆಯಲ್ಲಿ ಇದೆ, ಶನಿಯು ನಿಮ್ಮ ಲಗ್ನ ಮನೆಯಲ್ಲಿದೆ. ಆದ್ದರಿಂದ ಈ ವರ್ಷ ನಿಮ್ಮ ಬಾಳಲ್ಲಿ ಬೇವು-ಬೆಲ್ಲ ಎರಡೂ ಇದೆ.

ಏಕೆಂದರೆ ನಿಮಗೆ ಶನಿ ಸಾಡೇಸಾತಿ ಇದೆ. ಇದರಿಂದಾಗಿ ಈ ವರ್ಷ ಶುಭ ಹಾಗೂ ಅಶುಭ ಫಲ ಎರಡೂ ಇರಲಿದೆ. ಗುರು ಕೂಡ 3ನೇ ಮನೆಯಲ್ಲಿ ಇರುವುದರಿಂದ ಗುರುವಿನ ಅನುಕೂಲ ಶುಭ ಫಲ ನೀಡುತ್ತಾನೆ.
ಆರ್ಥಿಕ ಸ್ಥಿತಿ
ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನೋಡುವುದಾದರೆ ಕೆಲವೊಂದು ಹಣ ಕಾಸಿನ ತೊಂದರೆ ಕಾಣಿಸಬಹುದು. ಬೇರೆಯವರ ಮಾತು ಕೇಳಿ ಹಣದ ಹೂಡಿಕೆ ಮಾಡಲು ಹೋಗಬೇಡಿ, ಒಂದು ವೇಳೆ ಮಾಡಿದರೆ ನಷ್ಟ ಅನುಭವಿಷಬೇಕಾಗುವುದು. ನೀವು ದುಡ್ಡಿನಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಯಾರಿಗಾದರೂ ಸಾಲ ನೀಡಿದರೆ ಆ ಹಣ ವಾಪಾಸು ಬರಲ್ಲ. ಅಲ್ಲದೆ ಈ ವರ್ಷ ಇರುವ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಿ, ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಹಾಕದಿರುವುದು ಒಳ್ಳೆಯದು.
ವೃತ್ತಿ ಜೀವನ
ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ಕೆಲಸದ ಒತ್ತಡ ಅಧಿಕ ಇರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದು ನಿಮಗನಿಸಬಹುದು. ಕೆಲಸ ಬದಲಾಯಿಸಬೇಕೆಂದು ಅನಿಸುವುದು. ಆದರೆ ಒಂದು ಸಲಹೆ ಏನೆಂದರೆ ನಿಮಗೆ ಸರಿಯಾದ ಒಂದು ಕೆಲಸ ಸಿಗುವ ಮೊದಲು ಕೆಲಸ ಬಿಡಬೇಡಿ. ಕೆಲಸ ಬಿಟ್ಟು ಮತ್ತು ಹುಡುಕುವ ಎಂದು ಯೋಚಿಸಿದರೆ ಕೆಲಸದ ವಿಷಯದಲ್ಲಿ ತೊಂದರೆ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುವುದು.
ಇನ್ನು ನೀವು ಕೆಲಸ ಬದಲಾಯಿಸಿ ಬೇರೆ ಕಡೆ ಹೋದರೂ ಅಲ್ಲಿಯೂ ಕೆಲಸದಲ್ಲಿ ಒತ್ತಡವಿರಲಿದೆ. ಆದ್ದರಿಂದ ನೀವು ಕೆಲಸದಲ್ಲಿನ ಸಮಸ್ಯೆ ಕಡಿಮೆ ಮಾಡಲು ಶನಿಗೆ ಪರಿಹಾರ ಮಾಡುವುದು ಒಳ್ಳೆಯದು
ಕುಟುಂಬ ಮತ್ತು ಆರೋಗ್ಯ
ಕುಟುಂಬ ಜೀವನದಲ್ಲಿ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿರುತ್ತದೆ, ಆದರೆ ಸರಿಪಡಿಸಿಕೊಂಡು ಹೋಗಲು ಪ್ರಯತ್ನಿಸಿ. ಆರೋಗ್ಯದಲ್ಲೂ ಸಣ್ಣಪುಟ್ಟ ಸಮಸ್ಯೆಗಳಿರುತ್ತದೆ.
ಶನಿಗೆ ಪರಿಹಾರ
* ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ.
* ಶನಿ ದೇವಾಲಯಕ್ಕೆ ಸಾಸಿವೆ ಎಣ್ಣೆ ಹಾಗೂ ಕಪ್ಪು ಎಳ್ಳು ದಾನ ಮಾಡಿ.
* ನೀವು ಮಂಗಳವಾರ ಹಾಗೂ ಶನಿವಾರ ಹನುಮಾನ್ ದೇವಾಲಯಕ್ಕೆ ಭೇಟಿ.
* ಶನಿವಾರ ನಿರ್ಗತಿಕರಿಗೆ ದಾನ ಮಾಡಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
