Latest Updates
-
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು?
ಕುಂಭ ರಾಶಿ ಯುಗಾದಿ ರಾಶಿಫಲ 2023: ಈ ವರ್ಷ ಶುಭವೋ, ಮಿಶ್ರಫಲವೋ?
ಎಲ್ಲರಿಗೂ ಶೋಭಾಕೃತ ಸಂವತ್ಸರ ಶುಭಾಶಯಗಳು. ಈ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಹೊಸತನ ತುಂಬಲಿ, ನಿಮ್ಮ ಬಾಳು ಬಂಗಾರವಾಗಲಿ, ಈ ಯುಗಾದಿ ನಿಮಗೆ ಹರ್ಷದ ಯುಗಾದಿ ಆಗಿರಲಿ ಎಂದು ಹೇಳುತ್ತಾ ನಾವಿಲ್ಲಿ ಕುಂಭ ರಾಶಿಯವರಿ 2023-34ರ ಯುಗಾದಿ ರಾಶಿಫಲ ನೀಡಿದ್ದೇವೆ ನೋಡಿ:
ಕುಂಭ ರಾಶಿಯವರಲ್ಲಿ 2023-24 ಯುಗಾದಿಯವರೆಗೆ ಗ್ರಹಗತಿಗಳ ಪ್ರಭಾವ:
ಕುಂಭ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು, ಗುರು ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಕೇತು ನಿಮ್ಮ 10ನೇ ಮನೆಯಲ್ಲಿ ಇದೆ, ಶನಿಯು ನಿಮ್ಮ ಲಗ್ನ ಮನೆಯಲ್ಲಿದೆ. ಆದ್ದರಿಂದ ಈ ವರ್ಷ ನಿಮ್ಮ ಬಾಳಲ್ಲಿ ಬೇವು-ಬೆಲ್ಲ ಎರಡೂ ಇದೆ.

ಏಕೆಂದರೆ ನಿಮಗೆ ಶನಿ ಸಾಡೇಸಾತಿ ಇದೆ. ಇದರಿಂದಾಗಿ ಈ ವರ್ಷ ಶುಭ ಹಾಗೂ ಅಶುಭ ಫಲ ಎರಡೂ ಇರಲಿದೆ. ಗುರು ಕೂಡ 3ನೇ ಮನೆಯಲ್ಲಿ ಇರುವುದರಿಂದ ಗುರುವಿನ ಅನುಕೂಲ ಶುಭ ಫಲ ನೀಡುತ್ತಾನೆ.
ಆರ್ಥಿಕ ಸ್ಥಿತಿ
ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನೋಡುವುದಾದರೆ ಕೆಲವೊಂದು ಹಣ ಕಾಸಿನ ತೊಂದರೆ ಕಾಣಿಸಬಹುದು. ಬೇರೆಯವರ ಮಾತು ಕೇಳಿ ಹಣದ ಹೂಡಿಕೆ ಮಾಡಲು ಹೋಗಬೇಡಿ, ಒಂದು ವೇಳೆ ಮಾಡಿದರೆ ನಷ್ಟ ಅನುಭವಿಷಬೇಕಾಗುವುದು. ನೀವು ದುಡ್ಡಿನಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಯಾರಿಗಾದರೂ ಸಾಲ ನೀಡಿದರೆ ಆ ಹಣ ವಾಪಾಸು ಬರಲ್ಲ. ಅಲ್ಲದೆ ಈ ವರ್ಷ ಇರುವ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಿ, ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಹಾಕದಿರುವುದು ಒಳ್ಳೆಯದು.
ವೃತ್ತಿ ಜೀವನ
ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ಕೆಲಸದ ಒತ್ತಡ ಅಧಿಕ ಇರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದು ನಿಮಗನಿಸಬಹುದು. ಕೆಲಸ ಬದಲಾಯಿಸಬೇಕೆಂದು ಅನಿಸುವುದು. ಆದರೆ ಒಂದು ಸಲಹೆ ಏನೆಂದರೆ ನಿಮಗೆ ಸರಿಯಾದ ಒಂದು ಕೆಲಸ ಸಿಗುವ ಮೊದಲು ಕೆಲಸ ಬಿಡಬೇಡಿ. ಕೆಲಸ ಬಿಟ್ಟು ಮತ್ತು ಹುಡುಕುವ ಎಂದು ಯೋಚಿಸಿದರೆ ಕೆಲಸದ ವಿಷಯದಲ್ಲಿ ತೊಂದರೆ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುವುದು.
ಇನ್ನು ನೀವು ಕೆಲಸ ಬದಲಾಯಿಸಿ ಬೇರೆ ಕಡೆ ಹೋದರೂ ಅಲ್ಲಿಯೂ ಕೆಲಸದಲ್ಲಿ ಒತ್ತಡವಿರಲಿದೆ. ಆದ್ದರಿಂದ ನೀವು ಕೆಲಸದಲ್ಲಿನ ಸಮಸ್ಯೆ ಕಡಿಮೆ ಮಾಡಲು ಶನಿಗೆ ಪರಿಹಾರ ಮಾಡುವುದು ಒಳ್ಳೆಯದು
ಕುಟುಂಬ ಮತ್ತು ಆರೋಗ್ಯ
ಕುಟುಂಬ ಜೀವನದಲ್ಲಿ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿರುತ್ತದೆ, ಆದರೆ ಸರಿಪಡಿಸಿಕೊಂಡು ಹೋಗಲು ಪ್ರಯತ್ನಿಸಿ. ಆರೋಗ್ಯದಲ್ಲೂ ಸಣ್ಣಪುಟ್ಟ ಸಮಸ್ಯೆಗಳಿರುತ್ತದೆ.
ಶನಿಗೆ ಪರಿಹಾರ
* ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ.
* ಶನಿ ದೇವಾಲಯಕ್ಕೆ ಸಾಸಿವೆ ಎಣ್ಣೆ ಹಾಗೂ ಕಪ್ಪು ಎಳ್ಳು ದಾನ ಮಾಡಿ.
* ನೀವು ಮಂಗಳವಾರ ಹಾಗೂ ಶನಿವಾರ ಹನುಮಾನ್ ದೇವಾಲಯಕ್ಕೆ ಭೇಟಿ.
* ಶನಿವಾರ ನಿರ್ಗತಿಕರಿಗೆ ದಾನ ಮಾಡಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications












