Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಧನು ರಾಶಿ ಯುಗಾದಿ ರಾಶಿಫಲ (2023-24): ಈ ವರ್ಷ ಇವುಗಳಲ್ಲಿ ನಿಮಗೆ ಶುಭವೋ ಶುಭ
ಮಾರ್ಚ್ 22ಕ್ಕೆ ಶುಭಕೃತ ಸಂವತ್ಸರ ಕಳೆದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಈ ಹೊಸ ಸಂವತ್ಸರ ನಿಮ್ಮ ಬಾಳಿನಲ್ಲಿ ಒಳಿತನ್ನು ತರಲಿ, ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿ.

2023-24 ಯುಗಾದಿ ರಾಶಿಫಲ ಪ್ರಕಾರ ಧನು ರಾಶಿಯವರಿಗೆ ಒಂದು ವರ್ಷ ಹೇಗಿರಲಿದೆ ಎಂದು ನೋಡೋಣ:
ಧನು ರಾಶಿಯವರ ಮೇಲೆ 4 ಪ್ರಮುಖ ಗ್ರಹಗಳ ಪ್ರಭಾವ
ಯುಗಾದಿ ರಾಶಿಫಲದ ಪ್ರಕಾರ ಧನು ರಾಶಿಯವರಲ್ಲಿ ರಾಹು-ಗುರು 5ನೇ ಸ್ಥಾನದಲ್ಲಿದೆ. ರಾಹು ನಿಮ್ಮ ರಾಶಿಯಲ್ಲಿ ನವೆಂಬರ್ 29ರವರೆಗೆ ಇರಲಿದೆ. ಏಪ್ರಿಲ್ 22ಕ್ಕೆ ನಿಮ್ಮ ರಾಶಿಯಲ್ಲಿ ಗುರು 5ನೇ ಸ್ಥಾನಕ್ಕೆ ಬರಲಿದೆ. ಇನ್ನೆರಡು ಪ್ರಮುಖ ಗ್ರಹಗಳಾದ ಕೇತು ನಿಮ್ಮ 12ನೇ ಮನೆಯಲ್ಲಿ ಶನಿ ನಿಮ್ಮ 3ನೇ ಮನೆಯಲ್ಲಿದೆ. ಈ ನಾಲ್ಕು ಗ್ರಹಗಳ ಸ್ಥಾನವೂ ನಿಮಗೆ ಅನುಕೂಲಕರವಾಗಿಯೇ ಇರಲಿದೆ. ಇವುಗಳು ನಿಮಗೆ ಶುಭ ಫಲ ನೀಡಲಿದೆ.
ಆರ್ಥಿಕ ಸ್ಥಿತಿ
ಈ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಯಾವುದಾದರೂ ಹಳೆಯ ಸಾಲವಿದ್ದರೆ ಅದನ್ನು ಮರುಪಾವತಿ ಮಾಡುವಿರಿ. ಅಲ್ಲದೆ ಜನವರಿ 17ಕ್ಕೆ ನಿಮಗೆ ಸಾಡೇಸಾತಿಯಿಂದ ಬಿಡುಗಡೆಯಾಗಿದ್ದೀರಿ. ಹಾಗಾಗಿ ಸಾಡೇಸಾತಿ ಸಮಯದಲ್ಲಿ ಅನುಭವಿಸಿದ ಕಷ್ಟಗಳು, ನೋವುಗಳು ಎಲ್ಲವೂ ದೂರಾಗಲಿದೆ. ಈ ವರ್ಷ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.
ವೃತ್ತಿ ಜೀವನ
ಈ ವರ್ಷ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆಯಲಿದೆ. ಈ ವರ್ಷ ನಿಮಗೆ ಬಡ್ತಿ ಸಿಗಲಿದೆ. ನಿಮ್ಮ ಸ್ಥಾನಮಾನ, ಜವಾಬ್ದಾರಿ ಎಲ್ಲವೂ ಹೆಚ್ಚಾಗಲಿದೆ. ಈ ವರ್ಷ ಕರ್ಚು ಕಮ್ಮಿಯಿರಲಿದೆ.
ಆರೋಗ್ಯ ಹಾಗೂ ಕುಟುಂಬ ಜೀವನ
ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಒಳ್ಳೆಯದಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಶನಿ ಸಾಡೇಸಾತಿ ಇರುವಾಗ ಕುಟುಂಬದಲ್ಲಿ ಉಂಟಾದ ಸಮಸ್ಯೆಗಳಿಂದ ಹೊರಬರುವಿರಿ. ಈ ವರ್ಷ ಗುರುದೆಸೆ ಇರುವುದರಿಂದ ನಿಮಗೆ ತುಂಬಾನೇ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲರವಾಗಿದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಸಂಶೋಧನೆ ಮಾಡಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಲಿದೆ.
ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಒಟ್ಟಿನಲ್ಲಿ ಈ ವರ್ಷ ಯುಗಾದಿ ನಿಮಗೆ ಬೆಲ್ಲದ ಸಿಹಿಯನ್ನೇ ಹೆಚ್ಚಾಗಿ ನೀಡಿರುವುದರಿಂದ ಈ ವರ್ಷ ಖುಷಿಯಾಗಿರುವಿರಿ.
ಪರಿಹಾರ:
ನವೆಂಬರ್ವರೆಗೆ ದೇವಾಲಯಕ್ಕೆ ಉದ್ದಿನ ಬೇಳೆ ದಾನ ಮಾಡುವುದು ಒಳ್ಳೆಯದು.



Click it and Unblock the Notifications
