Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಧನು ರಾಶಿ ಯುಗಾದಿ ರಾಶಿಫಲ (2023-24): ಈ ವರ್ಷ ಇವುಗಳಲ್ಲಿ ನಿಮಗೆ ಶುಭವೋ ಶುಭ
ಮಾರ್ಚ್ 22ಕ್ಕೆ ಶುಭಕೃತ ಸಂವತ್ಸರ ಕಳೆದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಈ ಹೊಸ ಸಂವತ್ಸರ ನಿಮ್ಮ ಬಾಳಿನಲ್ಲಿ ಒಳಿತನ್ನು ತರಲಿ, ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿ.

2023-24 ಯುಗಾದಿ ರಾಶಿಫಲ ಪ್ರಕಾರ ಧನು ರಾಶಿಯವರಿಗೆ ಒಂದು ವರ್ಷ ಹೇಗಿರಲಿದೆ ಎಂದು ನೋಡೋಣ:
ಧನು ರಾಶಿಯವರ ಮೇಲೆ 4 ಪ್ರಮುಖ ಗ್ರಹಗಳ ಪ್ರಭಾವ
ಯುಗಾದಿ ರಾಶಿಫಲದ ಪ್ರಕಾರ ಧನು ರಾಶಿಯವರಲ್ಲಿ ರಾಹು-ಗುರು 5ನೇ ಸ್ಥಾನದಲ್ಲಿದೆ. ರಾಹು ನಿಮ್ಮ ರಾಶಿಯಲ್ಲಿ ನವೆಂಬರ್ 29ರವರೆಗೆ ಇರಲಿದೆ. ಏಪ್ರಿಲ್ 22ಕ್ಕೆ ನಿಮ್ಮ ರಾಶಿಯಲ್ಲಿ ಗುರು 5ನೇ ಸ್ಥಾನಕ್ಕೆ ಬರಲಿದೆ. ಇನ್ನೆರಡು ಪ್ರಮುಖ ಗ್ರಹಗಳಾದ ಕೇತು ನಿಮ್ಮ 12ನೇ ಮನೆಯಲ್ಲಿ ಶನಿ ನಿಮ್ಮ 3ನೇ ಮನೆಯಲ್ಲಿದೆ. ಈ ನಾಲ್ಕು ಗ್ರಹಗಳ ಸ್ಥಾನವೂ ನಿಮಗೆ ಅನುಕೂಲಕರವಾಗಿಯೇ ಇರಲಿದೆ. ಇವುಗಳು ನಿಮಗೆ ಶುಭ ಫಲ ನೀಡಲಿದೆ.
ಆರ್ಥಿಕ ಸ್ಥಿತಿ
ಈ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಯಾವುದಾದರೂ ಹಳೆಯ ಸಾಲವಿದ್ದರೆ ಅದನ್ನು ಮರುಪಾವತಿ ಮಾಡುವಿರಿ. ಅಲ್ಲದೆ ಜನವರಿ 17ಕ್ಕೆ ನಿಮಗೆ ಸಾಡೇಸಾತಿಯಿಂದ ಬಿಡುಗಡೆಯಾಗಿದ್ದೀರಿ. ಹಾಗಾಗಿ ಸಾಡೇಸಾತಿ ಸಮಯದಲ್ಲಿ ಅನುಭವಿಸಿದ ಕಷ್ಟಗಳು, ನೋವುಗಳು ಎಲ್ಲವೂ ದೂರಾಗಲಿದೆ. ಈ ವರ್ಷ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.
ವೃತ್ತಿ ಜೀವನ
ಈ ವರ್ಷ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆಯಲಿದೆ. ಈ ವರ್ಷ ನಿಮಗೆ ಬಡ್ತಿ ಸಿಗಲಿದೆ. ನಿಮ್ಮ ಸ್ಥಾನಮಾನ, ಜವಾಬ್ದಾರಿ ಎಲ್ಲವೂ ಹೆಚ್ಚಾಗಲಿದೆ. ಈ ವರ್ಷ ಕರ್ಚು ಕಮ್ಮಿಯಿರಲಿದೆ.
ಆರೋಗ್ಯ ಹಾಗೂ ಕುಟುಂಬ ಜೀವನ
ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಒಳ್ಳೆಯದಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಶನಿ ಸಾಡೇಸಾತಿ ಇರುವಾಗ ಕುಟುಂಬದಲ್ಲಿ ಉಂಟಾದ ಸಮಸ್ಯೆಗಳಿಂದ ಹೊರಬರುವಿರಿ. ಈ ವರ್ಷ ಗುರುದೆಸೆ ಇರುವುದರಿಂದ ನಿಮಗೆ ತುಂಬಾನೇ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲರವಾಗಿದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಸಂಶೋಧನೆ ಮಾಡಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಲಿದೆ.
ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಒಟ್ಟಿನಲ್ಲಿ ಈ ವರ್ಷ ಯುಗಾದಿ ನಿಮಗೆ ಬೆಲ್ಲದ ಸಿಹಿಯನ್ನೇ ಹೆಚ್ಚಾಗಿ ನೀಡಿರುವುದರಿಂದ ಈ ವರ್ಷ ಖುಷಿಯಾಗಿರುವಿರಿ.
ಪರಿಹಾರ:
ನವೆಂಬರ್ವರೆಗೆ ದೇವಾಲಯಕ್ಕೆ ಉದ್ದಿನ ಬೇಳೆ ದಾನ ಮಾಡುವುದು ಒಳ್ಳೆಯದು.



Click it and Unblock the Notifications
