Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಯುಗಾದಿ 2023: ಯುಗಾದಿಯಂದು ಯಾವ ದೇವರನ್ನು ಪೂಜಿಸುತ್ತಾರೆ?
ಹಿಂದೂಗಳಿಗೆ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಶುರುವಾಗುವುದು ಯುಗಾದಿಯಿಂದ. ಈ ವರ್ಷ ಮಾರ್ಚ್ 22ಕ್ಕೆ ಶುಭಕೃತ್ ಸಂವತ್ಸರ ಮುಗಿದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ.

ಯುಗಾದಿ ಹಬ್ಬವೆಂದರೆ ನಮ್ಮೆಲ್ಲರಿಗೂ ಸಂಭ್ರಮದ ಆಚರಣೆ. ಈ ದಿನ ದೇವರಿಗೆ ಪೂಜಿಸಿ, ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ಬೇವು-ಬೆಲ್ಲ ಸವಿಯುತ್ತೇವೆ. ಹೊಸ ವರ್ಷದಲ್ಲಿ ಬರುವ ಖುಷಿ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ಉದ್ದೇಶದಿಂದ ಬೇವು ಬೆಲ್ಲವನ್ನು ಸವಿಯುತ್ತೇವೆ.
ಯುಗಾದಿ ಹಬ್ಬದ ದಿನ ಯಾವ ದೇವರನ್ನು ಪೂಜಿಸುತ್ತಾರೆ ಎಂಬುವುದು ಬಹುತೇಕರು ಕೇಳುವ ಪ್ರಶ್ನೆಯಾಗಿದೆ. ಯುಗಾದಿಯಂದು ಯಾವ ದೇವರನ್ನು ಪೂಜಿಸಲಾಗುವುದು ಎಂದು ನೋಡೋಣ ಬನ್ನಿ:
ಯುಗಾದಿಯಂದು ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು
ಬ್ರಹ್ಮ ಚೈತ್ರಮಾನ ಯುಗಾದಿಯಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬ ಪೌರಾಣಿಕ ನಂಬಿಕೆಯಿದೆ. ಯುಗಾದಿ ಎಂಬುವುದು ಹೊಸತನದ ಸಂಕೇತ, ಸೂಚನೆಯಾಗಿದೆ. ನೀವು ಯುಗಾದಿ ಸಮಯದಲ್ಲಿ ಪ್ರಕೃತ್ತಿಯಲ್ಲೂ ಹೊಸತನ ಕಾಣುವಿರಿ. ಒಣಲೆಗಳು ಉದುರಿ ಚಿಗುರೆಲೆಗಳು ಮೂಡಿರುತ್ತವೆ, ಪ್ರಕೃತಿ ತುಂಬಾನೇ ಸುಂದರವಾಗಿ ಕಾಣುತ್ತಿರುತ್ತದೆ. ಚಿಗುರು ಬಂದ ಮಾವಿನ ಮರದಲ್ಲಿ ಕುಳಿತು ಕೋಗಿಲೇ ಕುಹೂ ಕುಹೂ ಎಂದು ಹಾಡುತ್ತಿರುತ್ತದೆ. ಇವೆಲ್ಲಾ ನಾವು ಪ್ರಕೃತಿಯಲ್ಲಿ ಕಾಣುವ ವಿಶೇಷವಾಗಿದೆ. ಆ ಬ್ರಹ್ಮ ಇಂಥ ಸುಂದರ ಪ್ರಪಂಚವನ್ನು ಯುಗಾದಿಯಂದು ಸೃಷ್ಟಿಸಿದ ಎಂದು ಹೇಳಲಾಗುವುದು. ಆದ್ದರಿಂದ ಆ ದಿನ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು.
ಕುಲ ದೇವರನ್ನು ಪೂಜಿಸಲಾಗುವುದು
ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಲದೇವರು ಇರುತ್ತಾರೆ. ಇಡೀ ಕುಡುಂಬ ತಮ್ಮ ಕುಟುಂಬದ ಏಳಿಗೆಗೆ, ಒಳಿತಿಗೆ ಆ ಕುಲದೈವರೇ ಕಾರಣ ಎಂದು ನಂಬಿರುತ್ತದೆ. ಈ ದಿನ ಮನೆಮಂದಿಯೆಲ್ಲಾ ಮೂಲ ಮನೆಯಲ್ಲಿ ಸೇರಿ ಕುಲದೇವರಿಗೆ ಪೂಜೆಯನ್ನು ಮಾಡಿ ನಮ್ಮೆಲ್ಲರನ್ನು ಹರಿಸಿ ಚೆನ್ನಾಗಿಡು ದೇವರೇ ಎಂದು ಬೇಡಿಕೊಳ್ಳಲಾಗುವುದು.
ಈ ದಿನ ಗಣಪತಿ, ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿಗೆ ವಿಶೇಷ ಪೂಜೆ ಮಾಡಲಾಗುವುದು
ಯಾವುದೇ ಪೂಜೆಯಿರಲಿ ಮೊದಲು ಶ್ರೀ ಗಣೇಶನನ್ನು ಆರಾಧಿಸುವ ಮೂಲಕವೇ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಮೊದಲು ಗಣೇಶನಿಗೆ ತೆಂಗಿನಕಾಯಿ ಒಡೆದು ನಂತರ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ಈ ದಿನ ಶಿವನ ದೇವಾಲಯ, ಶ್ರೀ ವಿಷ್ಣು ದೇವಾಲಯ, ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.
ಯುಗಾದಿಯನ್ನು ಹೇಗೆ ಆಚರಿಸಲಾಗುವುದು?
ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲ ಇರಲೇಬೇಕು. ಈ ನಂತರ ಯುಗಾದಿ ಪಚಡಿ ಕೂಡ ತಯಾರಿಸಲಾಗುವುದು.
ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆ ಮುಂದೆ ರಂಗೋಲಿ ಬಿಡಿಸಿ. ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ನಂತರ ಹಬ್ಬದ ಅಡುಗೆಗಳನ್ನು ಹಬ್ಬವನ್ನು ಸಂಭ್ರಮಿಸಲಾಗುವುದು.



Click it and Unblock the Notifications