Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಯುಗಾದಿ 2023: ಯುಗಾದಿಯಂದು ಯಾವ ದೇವರನ್ನು ಪೂಜಿಸುತ್ತಾರೆ?
ಹಿಂದೂಗಳಿಗೆ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಶುರುವಾಗುವುದು ಯುಗಾದಿಯಿಂದ. ಈ ವರ್ಷ ಮಾರ್ಚ್ 22ಕ್ಕೆ ಶುಭಕೃತ್ ಸಂವತ್ಸರ ಮುಗಿದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ.

ಯುಗಾದಿ ಹಬ್ಬವೆಂದರೆ ನಮ್ಮೆಲ್ಲರಿಗೂ ಸಂಭ್ರಮದ ಆಚರಣೆ. ಈ ದಿನ ದೇವರಿಗೆ ಪೂಜಿಸಿ, ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ಬೇವು-ಬೆಲ್ಲ ಸವಿಯುತ್ತೇವೆ. ಹೊಸ ವರ್ಷದಲ್ಲಿ ಬರುವ ಖುಷಿ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ಉದ್ದೇಶದಿಂದ ಬೇವು ಬೆಲ್ಲವನ್ನು ಸವಿಯುತ್ತೇವೆ.
ಯುಗಾದಿ ಹಬ್ಬದ ದಿನ ಯಾವ ದೇವರನ್ನು ಪೂಜಿಸುತ್ತಾರೆ ಎಂಬುವುದು ಬಹುತೇಕರು ಕೇಳುವ ಪ್ರಶ್ನೆಯಾಗಿದೆ. ಯುಗಾದಿಯಂದು ಯಾವ ದೇವರನ್ನು ಪೂಜಿಸಲಾಗುವುದು ಎಂದು ನೋಡೋಣ ಬನ್ನಿ:
ಯುಗಾದಿಯಂದು ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು
ಬ್ರಹ್ಮ ಚೈತ್ರಮಾನ ಯುಗಾದಿಯಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬ ಪೌರಾಣಿಕ ನಂಬಿಕೆಯಿದೆ. ಯುಗಾದಿ ಎಂಬುವುದು ಹೊಸತನದ ಸಂಕೇತ, ಸೂಚನೆಯಾಗಿದೆ. ನೀವು ಯುಗಾದಿ ಸಮಯದಲ್ಲಿ ಪ್ರಕೃತ್ತಿಯಲ್ಲೂ ಹೊಸತನ ಕಾಣುವಿರಿ. ಒಣಲೆಗಳು ಉದುರಿ ಚಿಗುರೆಲೆಗಳು ಮೂಡಿರುತ್ತವೆ, ಪ್ರಕೃತಿ ತುಂಬಾನೇ ಸುಂದರವಾಗಿ ಕಾಣುತ್ತಿರುತ್ತದೆ. ಚಿಗುರು ಬಂದ ಮಾವಿನ ಮರದಲ್ಲಿ ಕುಳಿತು ಕೋಗಿಲೇ ಕುಹೂ ಕುಹೂ ಎಂದು ಹಾಡುತ್ತಿರುತ್ತದೆ. ಇವೆಲ್ಲಾ ನಾವು ಪ್ರಕೃತಿಯಲ್ಲಿ ಕಾಣುವ ವಿಶೇಷವಾಗಿದೆ. ಆ ಬ್ರಹ್ಮ ಇಂಥ ಸುಂದರ ಪ್ರಪಂಚವನ್ನು ಯುಗಾದಿಯಂದು ಸೃಷ್ಟಿಸಿದ ಎಂದು ಹೇಳಲಾಗುವುದು. ಆದ್ದರಿಂದ ಆ ದಿನ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು.
ಕುಲ ದೇವರನ್ನು ಪೂಜಿಸಲಾಗುವುದು
ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಲದೇವರು ಇರುತ್ತಾರೆ. ಇಡೀ ಕುಡುಂಬ ತಮ್ಮ ಕುಟುಂಬದ ಏಳಿಗೆಗೆ, ಒಳಿತಿಗೆ ಆ ಕುಲದೈವರೇ ಕಾರಣ ಎಂದು ನಂಬಿರುತ್ತದೆ. ಈ ದಿನ ಮನೆಮಂದಿಯೆಲ್ಲಾ ಮೂಲ ಮನೆಯಲ್ಲಿ ಸೇರಿ ಕುಲದೇವರಿಗೆ ಪೂಜೆಯನ್ನು ಮಾಡಿ ನಮ್ಮೆಲ್ಲರನ್ನು ಹರಿಸಿ ಚೆನ್ನಾಗಿಡು ದೇವರೇ ಎಂದು ಬೇಡಿಕೊಳ್ಳಲಾಗುವುದು.
ಈ ದಿನ ಗಣಪತಿ, ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿಗೆ ವಿಶೇಷ ಪೂಜೆ ಮಾಡಲಾಗುವುದು
ಯಾವುದೇ ಪೂಜೆಯಿರಲಿ ಮೊದಲು ಶ್ರೀ ಗಣೇಶನನ್ನು ಆರಾಧಿಸುವ ಮೂಲಕವೇ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಮೊದಲು ಗಣೇಶನಿಗೆ ತೆಂಗಿನಕಾಯಿ ಒಡೆದು ನಂತರ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ಈ ದಿನ ಶಿವನ ದೇವಾಲಯ, ಶ್ರೀ ವಿಷ್ಣು ದೇವಾಲಯ, ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.
ಯುಗಾದಿಯನ್ನು ಹೇಗೆ ಆಚರಿಸಲಾಗುವುದು?
ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲ ಇರಲೇಬೇಕು. ಈ ನಂತರ ಯುಗಾದಿ ಪಚಡಿ ಕೂಡ ತಯಾರಿಸಲಾಗುವುದು.
ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆ ಮುಂದೆ ರಂಗೋಲಿ ಬಿಡಿಸಿ. ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ನಂತರ ಹಬ್ಬದ ಅಡುಗೆಗಳನ್ನು ಹಬ್ಬವನ್ನು ಸಂಭ್ರಮಿಸಲಾಗುವುದು.



Click it and Unblock the Notifications











