Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಗೆ ಬರುತ್ತೆ ತ್ರಿವೇಣಿ ಸಂಗಮದ ನೀರು..! ಕೇವಲ ₹69ಕ್ಕೆ ಪುಣ್ಯ ಪಡೆಯಬಹದು!!
ವಿಶ್ವದಲ್ಲೇ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಎನಿಸಿಕೊಂಡಿರುವ ಪ್ರಯಾಗ್ರಾಜ್ನ ಮಹಾ ಕುಂಭಮೇಳವು ಈಗ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವಾಗಿದೆ. ಅದರಲ್ಲೂ ಎಲ್ಲರಿಗೂ ಪ್ರಯಾಗ್ರಾಜ್ಗೆ ತೆರಳಿ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಬೇಕು ಎಂಬ ಬಯಕೆ, ಆಸೆ ಇದ್ದೇ ಇರುತ್ತೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಾಗೋದಿಲ್ಲ. ಗಂಗಾ ಸ್ನಾನ ಮಾಡಲೆಂದು ವಿಶ್ವದ ಮೂಲೆ ಮೂಲೆಯಿಂದಲೂ ಜನರು ಆಗಮಿಸುತ್ತಾರೆ. ಆದ್ರೆ ಕೆಲವರಿಗೆ ಅಲ್ಲಿಗೆ ತೆರಳಲು ಕಷ್ಟವಾಗುತ್ತೆ.
ಇನ್ನು ತ್ರಿವೇಣಿ ಸಂಗಮದಲ್ಲಿ ಸಿಗುವ ನೀರನ್ನು ಪವಿತ್ರ ಎಂದು ನಂಬಲಾಗಿದೆ. ಹೀಗಾಗಿ ಪ್ರಯಾಗ್ರಾಜ್ನ ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿನ ಗಂಗಾಜಲವನ್ನು ಮನೆಗೆ ತರುತ್ತಾರೆ. ಆದ್ರೆ ಎಲ್ಲರೂ ಈ ಸ್ಥಳ ತಲುಪಲು ಆಗೋದಿಲ್ಲ. ಹೀಗಾಗಿ ನೀವೀಗ ಆನ್ಲೈನ್ನಲ್ಲೇ ತ್ರಿವೇಣಿ ಸಂಗಮದ ನೀರು ಮನೆ ತರಿಸಬಹುದು.

ಈಗ ಎಲ್ಲವೂ ಆನ್ಲೈನ್ನಲ್ಲೇ ನೀವು ಖರೀದಿಸಬಹುದು. ಈ ಸಾಲಿಗೀಗ ಗಂಗಾಜಲ ಕೂಡ ಸೇರಿದೆ. ಅದರಲ್ಲೂ ತ್ರಿವೇಣಿ ಸಂಗಮದ ನೀರು ಕೂಡ ನೀವೀಗ ತರಿಸಬಹುದು. ಈ ಹಿಂದೆ ಭಾರತೀಯ ಅಂಚೆ ಮೂಲಕವೂ ಮನೆಗೆ ಗಂಗಾಜಲವನ್ನು ತರಿಸಬಹುದಿತ್ತು. ಆದ್ರೆ ಈಗ ಮಹಾಕುಂಭ ಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದ ನೀರನ್ನೇ ತರಿಸಬಹುದು.
ಆನ್ಲೈನ್ ಗ್ಲೋಸರಿ ಡೆಲಿವರಿ ಆಪ್ ಆಗಿರುವ ಬ್ಲಿಂಕ್ಇಟ್ ಈ ರೀತಿ ಸೇವೆ ಆರಂಭಿಸಿದೆ. ಕೇವಲ 69 ರೂಪಾಯಿಗೆ 10 ನಿಮಿಷದಲ್ಲಿ ಮನೆಗೆ ನೀವು ತ್ರಿವೇಣಿ ಸಂಗಮದ ಪವಿತ್ರ ನೀರು ತರಿಸಬಹುದು. ಇದು 100 ಮಿ.ಲೀ ಬಾಟಲಿಯಲ್ಲಿ ಮನೆ ತಲುಪಲಿದೆ. ಅದರಲ್ಲಿ ಎಂಆರ್ಪಿ ದರವಾಗಿ 99 ರೂಪಾಯಿ ಇದ್ದು, ರಿಯಾಯಿತಿಯಲ್ಲಿ 69ರೂಪಾಯಿಗೆ ಸಿಗುತ್ತಿದೆ. ಸಾಮಾನ್ಯ ನೀರಿನ ಬಾಟಲಿಗೆ ಹೋಲಿಸಿದರೆ ಈ ದರ ಬರೋಬ್ಬರಿ 4,850 ರದಷ್ಟು ಹೆಚ್ಚಾಗಿದೆ.
ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮದಿಂದ ಈ ನೀರನ್ನು ತರಿಸಲಾಗಿದೆ. ಇದನ್ನು ಸರ್ವ್ ಧರ್ಮ್ ಎಂಬ ಸಂಸ್ಥೆಯ ಮೂಲಕ ವಿತರಿಸಲಾಗುತ್ತಿದೆ. ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ವಾಣಿಜ್ಯೀಕರಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಇತ್ತಿಚಿಗೆ ವಾಣಿಜ್ಯ ಕಾರಣಕ್ಕಾಗಿ ಧಾರ್ಮಿಕ ವಸ್ತುಗಳ ಬಳಸುತ್ತಿರುವುದು ಬಹಳದಷ್ಟು ಚರ್ಚೆಗೆ ಕಾರಣವಾಗಲಿದೆ.
ಸದ್ಯ ಈ ತ್ರಿವೇಣಿ ಸಂಗಮದ ನೀರನ್ನು ವಾಣಿಜ್ಯೀಕರಣ ಮಾಡಲಾಗಿದೆ. ವ್ಯಾಪಾರದ ಉದ್ದೇಶದಿಂದ ಈ ರೀತಿ ಧಾರ್ಮಿಕ ವಸ್ತುಗಳ ಬಳಸುತ್ತಿರುವುದಕ್ಕೆ ವಿರೋಧವೂ ಇದೆ. ಹೀಗಾಗಿ ತ್ರಿವೇಣಿ ಸಂಗಮದ ನೀರನ್ನು ಬಳಸುತ್ತಿರುವ ಉದ್ದೇಶ ಉತ್ತಮವಾಗಿದ್ದರು. ಅದರಿಂದ ಲಾಭ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕೇವಲ 1 ಲಕ್ಷ ಬಾಟಲಿಗಳು ಮಾರಾಟವಾದರೆ ಸುಮಾರು 1 ಕೋಟಿ ರೂಪಾಯಿಗಳ ಆದಾಯದ ಅಂದಾಜು ಸಂಭಾವ್ಯತೆಯೊಂದಿಗೆ, ಇದು ನಂಬಿಕೆ ಆಧಾರಿತ ವಾಣಿಜ್ಯದ ಲಾಭದಾಯಕ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಸದ್ಯ ಈ ತ್ರಿವೇಣಿ ಸಂಗಮದ ನೀರು ಆನ್ಲೈನ್ನಲ್ಲಿ ಸಿಗುತ್ತಿರುವುದಕ್ಕೆ ಪರವಾದ ಚರ್ಚೆಗಳು ಕೂಡ ಇದೆ.
ಇದೇ ಪ್ರಕಾರವಾಗಿ ಡಿಜಿಟಲ್ ತ್ರಿವೇಣಿ ಸ್ನಾನದ ಐಡಿಯಾ ಕೂಡ ವೈರಲ್ ಆಗಿದೆ. ಒಬ್ಬ ವಾಟ್ಸಾಪ್ನಲ್ಲಿ ನಿಮ್ಮ ಫೋಟೋ ಹಾಗೂ ಹಣ ಪಡೆದು ಅದನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಡಿಜಿಟಲ್ ಸ್ನಾನ ಮಾಡಿಸುತ್ತಿರುವ ಐಡಿಯಾ ಕೂಡ ವೈರಲ್ ಆಗಿದೆ.



Click it and Unblock the Notifications











