Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೋವಿಡ್ 19 ವಿರುದ್ಧ ಹೋರಾಟ: ವೈದ್ಯಾಧಿಕಾರಿ ಫೋಟೋಗೆ ಮಿಡಿದ ಜನರ ಮನ
ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಆ ಫೋಟೋ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ನರ್ಸ್, ಡಾಕ್ಟರ್ಗಳ ಸೇವೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.
ಆ ಫೋಟೋ ನೋಡುತ್ತಿದ್ದರೆ ನಿಜ ಜೀವನದ ಅಂಥ ಹೀರೋಗಳ ಬಗ್ಗೆ ಹೆಮ್ಮೆಯುಂಟಾಗುವುದು, ಅವರ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಅನಿಸದೆ ಇರಲ್ಲ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡಿರುವ ಒಂದು ಫೋಟೋ ಇದೀಗ ಇಡೀ ದೇಶದ ಜನತೆಯ ಗಮನ ಸೆಳೆದಿದೆ. ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ನಿರಂತರವಾಗಿ ವೈದ್ಯರು, ನರ್ಸ್ಗಳು ಶ್ರಮಿಸುತ್ತಿದ್ದಾರೆ. ಮಧ್ಯ ಪ್ರದೇಶದ ಭೋಪಾಲ್ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಸುಧೀರ್ ದೆಹರಿಯಾ ಮಾಡಿರುವ ಕಾರ್ಯ ಎಲ್ಲರ ಗಮನ ಸೆಳೆದಿದೆ.

ವೈದ್ಯನ ಕಾರ್ಯಕ್ಕೆ ಮೆಚ್ಚುಗೆ
ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಗಲು-ಇರಳು ಎನ್ನದೆ ಕೆಲಸ ಮಾಡಿದ ಆರೋಗ್ಯ ಅಧಿಕಾರಿ 5 ದಿನಗಳ ಬಳಿಕ ಮನೆಗೆ ತೆರಳುತ್ತಾರೆ. ಆದರೆ ಅವರು ಮನೆಯೊಳಗೆ ಹೋಗುವುದಿಲ್ಲ. ಬದಲಿಗೆ ಮನೆಯ ಗೇಟಿನ ಹೊರಗಡೆ ಕೂತು ಟೀ ಕುಡಿದು, ಪತ್ನಿ-ಮಕ್ಕಳನ್ನು ನೋಡಿ ಕೆಲಸಕ್ಕೆ ಹಿಂತಿರುಗುತ್ತಾರೆ. ಇದೀಗ ಅವರು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಹೀರೋಗಳು
ಏಕೆಂದರೆ ಅವರು ಆಸ್ಪತ್ರೆಯಲ್ಲಿ ಸೋಂಕಿತರ ಸೇವೆ ಮಾಡುವುದರಿಂದ ಮನೆಗೆ ಹೋಗುವುದು ಅಷ್ಟು ಸುರಕ್ಷಿತವಲ್ಲ. ಡಾ. ಸುಧೀರ್ ಸೇರಿದಂತೆ ಲಕ್ಷಾಂತರ ವೈದ್ಯಕೀಯ ಸಿಬ್ಬಂದಿ ಕೊರೊನಾ ಎಂಬ ವೈರಸ್ನ ವಿರುದ್ಧ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ಅವರ ಬಗ್ಗೆ ಹೆಮ್ಮೆ ಪಡುವುದು ಮಾತ್ರವಲ್ಲ, ಅವರಿಗೆ ಸಹಾಯ ಮಾಡುವ ಕಾರ್ಯವನ್ನು ನಾವು ಮಾಡಬೇಕಾಗಿದೆ.

ನಾವೇನು ಮಾಡಬೇಕು?
ನಾವು ಅವರಿಗೆ ಸಹಾಯ ಮಾಡಲು ಬೇರೇನೂ ಮಾಡಬೇಕಾಗಿಲ್ಲ, ನಮ್ಮ ಮನೆಯೊಳಗೆ ನಾವಿದ್ದರೆ ಸಾಕು. ಆದರೆ ನಮ್ಮ ಜನರು ಅದನ್ನು ಅರ್ಥ ಮಾಡಿಕೊಳ್ಳುತ್ತನೇ ಇಲ್ಲ, ಸ್ವಲ್ಪ ಅವಕಾಶ ಸಿಕ್ಕರೂ ಗುಂಪು-ಗುಂಪಾಗಿ ಸೇರಿ ಬಿಡುತ್ತಾರೆ. ಜನರು ಗುಂಪು ಸೇರದಂತೆ, ಕ್ವಾರೆಂಟೈನ್ನಲ್ಲಿ ಇರುವವರು ಹೊರಗಡೆ ಓಡಾಡದಂತೆ ಮಾಡುವುದೇ ಹರಸಾಹಸವಾಗಿದೆ.

ಕೊರೊನಾವೈರಸ್ ವಿರುದ್ಧ ಹೋರಾಡೋಣ
ಇಡೀ ದೇಶ ಕೊರೊನಾವೈರಸ್ ವಿರುದ್ಧ ಸಾರಿರುವ ಸಮರದಲ್ಲಿ ಜಯ ಸಾಧಿಸಲು ನಾವೆಲ್ಲಾ ಕೈಜೋಡಿಸೋಣ, ಮನೆಯಲ್ಲಿಯೇ ಇದ್ದು, ಈ ಮಹಾಮಾರಿ ತೊಲಗಿಸೋಣ. ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಾ ಇರಿ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿದರೆ ಕೂಡಲೇ ಇತತರಿಂದ ಅಂತರ ಕಾಯ್ದುಕೊಂಡು ವೈದ್ಯರಿಗೆ ಕರೆ ಮಾಡಿ ತಿಳಿಸಿ.ಕೋವಿಡ್ 19 ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆಯಿಂದ ಇರಿ.



Click it and Unblock the Notifications











