Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವೈರಲ್ ವೀಡಿಯೋ: ಛೇ... ಈ ಕಾಡಾನೆಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ
ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡುತ್ತೇವೆ. ಅಲ್ಲದೆ ನಾವೆಲ್ಲ ಮಾತನಾಡುವಾಗ ನಮ್ಮ ದೇಶ ಸಿಂಗಾಪೂರದಂತೆ ಇರಬೇಕು ಎಂದು ಎಂದೆಲ್ಲಾ ಹೇಳುತ್ತೇವೆ, ಆದರೆ ಅದಕ್ಕೆ ಸರಕಾರ ಒಂದೇ ಪ್ರಯತ್ನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಬೇಕು, ಇದೆಲ್ಲಾ ಇರಲಿ ಬಿಡಿ, ಇಲ್ಲ ನಾವು ಹೇಳ ಹೊರಟಿರುವುದು ಕಾಡಾನೆಯೊಂದು ಸ್ವಚ್ಛತೆಗೆ ಗಮನ ನೀಡಿರುವ ಕುರಿತು.

ಹೌದು ಆನೆಯೊಂದು ಮನೆಯೊಂದರ (ಹೋಂಸ್ಟೇ ಅಥವಾ ಮನೆನಾ ಅಂತ ನಿಖರತೆ ಇಲ್ಲ) ಸಮೀಪಕ್ಕೆ ಬರುತ್ತದೆ, ಅಲ್ಲಿಗೆ ಬಂದ ಆನೆ ಅಲ್ಲೊಂದು ಬುಟ್ಟಿ ನೋಡುತ್ತದೆ, ಅದರೊಳಗೆ ಮೆಲ್ಲನೆ ಸೊಂಡಿಲ ಇಳಿ ಬಿಡುತ್ತದೆ, ಆಗ ಅದಕ್ಕೆ ಅಲ್ಲಿ ಬುಟ್ಟಿ ಇಟ್ಟಿರುವ ಉದ್ದೇಶ ತಿಳಿಯುತ್ತದೆ. ಆಗ ಅದು ಅಲ್ಲಿಯೇ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಪಾಪ ಆನೆಗೆ ಕಸವನ್ನು ಬುಟ್ಟಿಗೆ ಹಾಕಬೇಕೆಂದು ಗೊತ್ತಾಯಿತು, ಆದರೆ ಅದನ್ನು ಬಿಸಾಡಿದ ಪುಣ್ಯಾತ್ಮರಿಗೆ ಗೊತ್ತಿರಲಿಲ್ಲ!
ಈ ಅದ್ಭುತ ಪರಿಸರ ಕಾಳಜಿಯ ವೀಡಿಯೋವನ್ನು ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ, ಆನೆಯ ಬುದ್ಧಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications
