Latest Updates
-
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ?
ವೈರಲ್ ವೀಡಿಯೋ: ಛೇ... ಈ ಕಾಡಾನೆಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ
ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡುತ್ತೇವೆ. ಅಲ್ಲದೆ ನಾವೆಲ್ಲ ಮಾತನಾಡುವಾಗ ನಮ್ಮ ದೇಶ ಸಿಂಗಾಪೂರದಂತೆ ಇರಬೇಕು ಎಂದು ಎಂದೆಲ್ಲಾ ಹೇಳುತ್ತೇವೆ, ಆದರೆ ಅದಕ್ಕೆ ಸರಕಾರ ಒಂದೇ ಪ್ರಯತ್ನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಬೇಕು, ಇದೆಲ್ಲಾ ಇರಲಿ ಬಿಡಿ, ಇಲ್ಲ ನಾವು ಹೇಳ ಹೊರಟಿರುವುದು ಕಾಡಾನೆಯೊಂದು ಸ್ವಚ್ಛತೆಗೆ ಗಮನ ನೀಡಿರುವ ಕುರಿತು.

ಹೌದು ಆನೆಯೊಂದು ಮನೆಯೊಂದರ (ಹೋಂಸ್ಟೇ ಅಥವಾ ಮನೆನಾ ಅಂತ ನಿಖರತೆ ಇಲ್ಲ) ಸಮೀಪಕ್ಕೆ ಬರುತ್ತದೆ, ಅಲ್ಲಿಗೆ ಬಂದ ಆನೆ ಅಲ್ಲೊಂದು ಬುಟ್ಟಿ ನೋಡುತ್ತದೆ, ಅದರೊಳಗೆ ಮೆಲ್ಲನೆ ಸೊಂಡಿಲ ಇಳಿ ಬಿಡುತ್ತದೆ, ಆಗ ಅದಕ್ಕೆ ಅಲ್ಲಿ ಬುಟ್ಟಿ ಇಟ್ಟಿರುವ ಉದ್ದೇಶ ತಿಳಿಯುತ್ತದೆ. ಆಗ ಅದು ಅಲ್ಲಿಯೇ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಪಾಪ ಆನೆಗೆ ಕಸವನ್ನು ಬುಟ್ಟಿಗೆ ಹಾಕಬೇಕೆಂದು ಗೊತ್ತಾಯಿತು, ಆದರೆ ಅದನ್ನು ಬಿಸಾಡಿದ ಪುಣ್ಯಾತ್ಮರಿಗೆ ಗೊತ್ತಿರಲಿಲ್ಲ!
ಈ ಅದ್ಭುತ ಪರಿಸರ ಕಾಳಜಿಯ ವೀಡಿಯೋವನ್ನು ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ, ಆನೆಯ ಬುದ್ಧಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications