Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ವೈರಲ್ ವೀಡಿಯೋ: ಛೇ... ಈ ಕಾಡಾನೆಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ
ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡುತ್ತೇವೆ. ಅಲ್ಲದೆ ನಾವೆಲ್ಲ ಮಾತನಾಡುವಾಗ ನಮ್ಮ ದೇಶ ಸಿಂಗಾಪೂರದಂತೆ ಇರಬೇಕು ಎಂದು ಎಂದೆಲ್ಲಾ ಹೇಳುತ್ತೇವೆ, ಆದರೆ ಅದಕ್ಕೆ ಸರಕಾರ ಒಂದೇ ಪ್ರಯತ್ನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಬೇಕು, ಇದೆಲ್ಲಾ ಇರಲಿ ಬಿಡಿ, ಇಲ್ಲ ನಾವು ಹೇಳ ಹೊರಟಿರುವುದು ಕಾಡಾನೆಯೊಂದು ಸ್ವಚ್ಛತೆಗೆ ಗಮನ ನೀಡಿರುವ ಕುರಿತು.

ಹೌದು ಆನೆಯೊಂದು ಮನೆಯೊಂದರ (ಹೋಂಸ್ಟೇ ಅಥವಾ ಮನೆನಾ ಅಂತ ನಿಖರತೆ ಇಲ್ಲ) ಸಮೀಪಕ್ಕೆ ಬರುತ್ತದೆ, ಅಲ್ಲಿಗೆ ಬಂದ ಆನೆ ಅಲ್ಲೊಂದು ಬುಟ್ಟಿ ನೋಡುತ್ತದೆ, ಅದರೊಳಗೆ ಮೆಲ್ಲನೆ ಸೊಂಡಿಲ ಇಳಿ ಬಿಡುತ್ತದೆ, ಆಗ ಅದಕ್ಕೆ ಅಲ್ಲಿ ಬುಟ್ಟಿ ಇಟ್ಟಿರುವ ಉದ್ದೇಶ ತಿಳಿಯುತ್ತದೆ. ಆಗ ಅದು ಅಲ್ಲಿಯೇ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಪಾಪ ಆನೆಗೆ ಕಸವನ್ನು ಬುಟ್ಟಿಗೆ ಹಾಕಬೇಕೆಂದು ಗೊತ್ತಾಯಿತು, ಆದರೆ ಅದನ್ನು ಬಿಸಾಡಿದ ಪುಣ್ಯಾತ್ಮರಿಗೆ ಗೊತ್ತಿರಲಿಲ್ಲ!
ಈ ಅದ್ಭುತ ಪರಿಸರ ಕಾಳಜಿಯ ವೀಡಿಯೋವನ್ನು ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ, ಆನೆಯ ಬುದ್ಧಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications











