Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ವೈರಲ್ ವೀಡಿಯೋ: ಛೇ... ಈ ಕಾಡಾನೆಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ
ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡುತ್ತೇವೆ. ಅಲ್ಲದೆ ನಾವೆಲ್ಲ ಮಾತನಾಡುವಾಗ ನಮ್ಮ ದೇಶ ಸಿಂಗಾಪೂರದಂತೆ ಇರಬೇಕು ಎಂದು ಎಂದೆಲ್ಲಾ ಹೇಳುತ್ತೇವೆ, ಆದರೆ ಅದಕ್ಕೆ ಸರಕಾರ ಒಂದೇ ಪ್ರಯತ್ನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಬೇಕು, ಇದೆಲ್ಲಾ ಇರಲಿ ಬಿಡಿ, ಇಲ್ಲ ನಾವು ಹೇಳ ಹೊರಟಿರುವುದು ಕಾಡಾನೆಯೊಂದು ಸ್ವಚ್ಛತೆಗೆ ಗಮನ ನೀಡಿರುವ ಕುರಿತು.

ಹೌದು ಆನೆಯೊಂದು ಮನೆಯೊಂದರ (ಹೋಂಸ್ಟೇ ಅಥವಾ ಮನೆನಾ ಅಂತ ನಿಖರತೆ ಇಲ್ಲ) ಸಮೀಪಕ್ಕೆ ಬರುತ್ತದೆ, ಅಲ್ಲಿಗೆ ಬಂದ ಆನೆ ಅಲ್ಲೊಂದು ಬುಟ್ಟಿ ನೋಡುತ್ತದೆ, ಅದರೊಳಗೆ ಮೆಲ್ಲನೆ ಸೊಂಡಿಲ ಇಳಿ ಬಿಡುತ್ತದೆ, ಆಗ ಅದಕ್ಕೆ ಅಲ್ಲಿ ಬುಟ್ಟಿ ಇಟ್ಟಿರುವ ಉದ್ದೇಶ ತಿಳಿಯುತ್ತದೆ. ಆಗ ಅದು ಅಲ್ಲಿಯೇ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಪಾಪ ಆನೆಗೆ ಕಸವನ್ನು ಬುಟ್ಟಿಗೆ ಹಾಕಬೇಕೆಂದು ಗೊತ್ತಾಯಿತು, ಆದರೆ ಅದನ್ನು ಬಿಸಾಡಿದ ಪುಣ್ಯಾತ್ಮರಿಗೆ ಗೊತ್ತಿರಲಿಲ್ಲ!
ಈ ಅದ್ಭುತ ಪರಿಸರ ಕಾಳಜಿಯ ವೀಡಿಯೋವನ್ನು ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ, ಆನೆಯ ಬುದ್ಧಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications