Just In
- 12 hrs ago ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- 13 hrs ago ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- 14 hrs ago ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
- 14 hrs ago ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ
Don't Miss
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- News DV Sadananda Gowda: ಕಾಂಗ್ರೆಸ್ ನತ್ತ ಡಿ ವಿ ಸದಾನಂದಗೌಡ? ನಾಲ್ಕು ಕ್ಷೇತ್ರಗಳ ಆಫರ್ ಕೊಟ್ಟ ಕೈ ನಾಯಕರು?
- Movies 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಿದರೆ ಅವು ಮನುಷ್ಯನಿಗಿಂತ ಹೆಚ್ಚು ನಿಯತ್ತು, ಕೃತಜ್ಞತೆ ತೋರಿಸುತ್ತವೆ ಎಂದು ಹೇಳುವುದು ಅಕ್ಷರಶಃ ನಿಜ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ನೋಡಿ.
ಕರಡಿಗಳಲ್ಲಿ ಸ್ಲಾತ್ ಕರಡಿ ಎಎಂಬ ಬಗೆಯ ಕರಡಿಗಳಿವೆ. ಅವುಗಳನ್ನು ಭೂಮಿ ಮೇಲಿನ ಅತಿ ಹೆಚ್ಚಿನ ಆಲಸಿ ಪ್ರಾಣಿಯೆಂದೇ ಗುರುತಿಸಲಾಗಿದೆ. ಅದಕ್ಕೆ ಒಂದು ಎಲೆ ತಿಂದರೆ ಜೀರ್ಣವಾಗಲು 25 ದಿನಗಳು ಬೇಕಂತೆ ಅಂದ ಮೇಲೆ ಅದು ಎಷ್ಟರ ಮಟ್ಟಿಗೆ ಸೋಮಾರಿ ಪ್ರಾಣಿಯಿರಬಹುದು ಅಲ್ವಾ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು 50 ಮೀ ಸಾಗಲು ತಾಸುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ, ಅದಕ್ಕೆ ಇದನ್ನು ಸೋಮಾರಿ ಪ್ರಾಣಿ ಎಂದು ಕರೆಯುತ್ತಾರೆ. ಇದನ್ನು ಜೇನು ತುಪ್ಪ ಕದಿಯುವ ಕರಡಿ, ಸೋಮಾರಿ ಕರಡಿ, ಸ್ಲಾತ್ ಕರಡಿ ಎಂದೆಲ್ಲಾ ಕರೆಯುತ್ತಾರೆ.
If gratitude has a face. This man helps a #sloth in crossing the road. And look how sloth thanked him in this old video. Do good, it will grow someday. pic.twitter.com/81i5k1FsX1
— Parveen Kaswan, IFS (@ParveenKaswan) December 6, 2019
ಈ ಕರಡಿಯ ಕುರಿತ ಒಂದು ವೀಡಿಯೋ ವೈರಲ್ ಆಗಿದೆ. ಚಿಕ್ಕ ಸೋಮಾರಿ ಕರಡಿ ಮರಿ ರಸ್ತೆ ದಾಟಲು ಕಷ್ಟ ಪಡುತ್ತಿತ್ತು. ವಾಹನಗಳು ಓಡಾಡುವ ರಸ್ತೆಯಲ್ಲಿ ಮೆಲ್ಲನೆ ಚಲಿಸುತ್ತಿದ್ದರೆ ಯಾವುದಾದರೂ ವಾಹನ ಬಂದು ಅದರ ಮೇಲೆ ಹರಿದುಕೊಂಡು ಹೋಗುವ ಅಪಾಯವಿತ್ತು. ಇದನ್ನರಿತ ವ್ಯಕ್ತಿಯೊಬ್ಬರು ತಮ್ಮ ಗಾಡಿ ನಿಲ್ಲಿಸಿ, ಅದನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಬಿಟ್ಟು ಬರುತ್ತಾರೆ.
ತನ್ನನ್ನು ಮರದ ಮೇಲೆ ಬಿಟ್ಟ ತಕ್ಷಣ ಕರಡಿ ತನ್ನ ಪಾಡಿಗೆ ತಾನಿರುವುದಿಲ್ಲ, ಬದಲಿಗೆ ಆ ಕರಡಿ ಆ ಮನುಷ್ಯನ ಕಡೆಗೆ ತಿರುಗಿ ಧನ್ಯವಾದ ಹೇಳಿದ ರೀತಿಯಿದೆಯೆಲ್ಲಾ ನೋಡುವಾಗ ಮನಸ್ಸು ತುಂಬಿ ಬರುತ್ತದೆ. ಇದೊಂದು ಹಳೆಯ ವೀಡಿಯೋ ಆಗಿದ್ದರೂ ಪ್ರವೀಣ್ ಕಶ್ವಾನ್ ಎಂಬ ಪೊಲೀಸ್ ಅಧಿಕಾರಿ ಈ ಸುಂದರ ವೀಡಿಯೋ ಮತ್ತೆ ಹಂಚಿಕೊಂಡಿದ್ದೇ ತಡ ವೈರಲ್ ಆಗಿದೆ.