Latest Updates
-
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು!
ವೈರಲ್ ಆಯ್ತು ಪುಣೆ ಮನೆ ಕೆಲಸದಾಕೆಯ ವಿಸಿಟಿಂಗ್ ಕಾರ್ಡ್
ಇದೀಗ ಟ್ವಿಟರ್ನಲ್ಲಿ ಒಂದು ವಿಸಿಟಿಂಗ್ ಕಾರ್ಡ್ ತುಂಬಾ ಸೌಂಡ್ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಕೆಲಸದ ಸಿಗುವುದು ಕಷ್ಟವೇನಿಲ್ಲ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ ನೋಡಿ.

ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ ಕಲೆಗೆ ಪರಿಸ್ಥಿತಿಯ ಕಾರಣದಿಂದಾಗಿ ಕೆಲಸ ಇಲ್ಲವಾಗಿತ್ತು, ಹೀಗಾಗಿ ಹಣಕಾಸಿಗೆ ತೊಂದರೆಯಾಗುವುದು ಎಂಬ ಭಯ ಅವರನ್ನು ಕಾಡಲಾರಂಭಿಸಿತು, ಅವರು ಧನಶ್ರೀ ಎಂಬವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು, ಗೀತಕಲೆಯ ಸಪ್ಪೆ ಮೊರೆ ನೋಡಿದ ಧನಶ್ರೀ ಕೇಳಿದಾಗ ಇವರು ತಮ್ಮ ಕತೆ ಹೇಳಿದ್ದಾರೆ. ಧನಶ್ರೀಗೆ ಗೀತಾ ಅವರನ್ನು ಸಹಾಯ ಮಾಡಬೇಕೆಂಬ ಮನಸ್ಸಾಗಿದೆ. ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಧನಶ್ರೀ 24 ಗಂಟೆಯೊಳಗಾಗಿ ತಮ್ಮ ವೃತ್ತಿ ಕೌಶಲ್ಯದಿಂದ ಗೀತಾ ಅವರಿಗೆ 100 ವಿಸಿಟಿಂಗ್ ಕಾರ್ಡ್ ಮಾಡಿ, ಆ ಕಾರ್ಡ್ಗಳನ್ನು ಅವರಿದ್ದ ಸೊಸೈಟಿಯ ವಾಚ್ಮೆನ್ ಕೈಗೆ ನೀಡಿ ಹಂಚಲು ಹೇಳುತ್ತಾರೆ. ಈ ವಿಸಿಟಿಂಗ್ ಕಾರ್ಡ್ ವಿತರಣೆಯಾಗಿದ್ದೇ ಗೀತಾ ಕಲೆಗೆ ಕೆಲಸದ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ.
ಈ ಕುರಿತು ಅಸ್ಮಿತಾ ಜಾವೇದ್ಕರ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದೇ ತಡ, ಆ ವಿಸಿಟಿಂಗ್ ಕಾರ್ಡ್ ವೈರಲ್ ಆಗಿ ಬಿಟ್ಟಿದೆ. ಭಾರತದ ಮೂಲೆ-ಮೂಲೆಯಿಂದ ಗೀತಾ ಅವರಿಗೆ ಕರೆಗಳು ಬರುತ್ತಿವೆ. ಈಗ ಬಿಡದೆ ಸ್ದ್ದು ಮಾಡುತ್ತಿರುವ ಮೊಬೈಲ್ ನಿರ್ವಹಣೆಯೇ ಅವರಿಗೆ ತಲೆನೋವಾಗಿದೆ, ನೀವೇ ಇದಕ್ಕೆ ಒಂದು ಪರಿಹಾರ ಸೂಚಿಸಿ ಅಂತ ಧನಶ್ರೀ ಮೊರೆ ಹೋಗಿದ್ದಾರೆ ಎಂದು ಅಸ್ಮಿತಾ ಹೇಳಿಕೊಂಡಿದ್ದಾರೆ,
ನಮ್ಮಲ್ಲಿ ಕೆಲಸ ಇಲ್ಲ ಅಂತ ಕೊರಗುವವರು ಅನೆಕ ಮಂದಿ ಇದ್ದಾರೆ, ಏನಾದರೂ ಕ್ರಿಯೇಟಿವ್ ಆಗಿ ಯೋಚಿಸಿದರೆ ಸಂಪಾದನೆಯ ಬಾಗಿಲಿ ತನ್ನಿಂದ ತಾನೇ ತೆರೆದುಕೊಳ್ಳುವುದು ನೋಡಿ.



Click it and Unblock the Notifications