Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ವೈರಲ್ ಆಯ್ತು ಪುಣೆ ಮನೆ ಕೆಲಸದಾಕೆಯ ವಿಸಿಟಿಂಗ್ ಕಾರ್ಡ್
ಇದೀಗ ಟ್ವಿಟರ್ನಲ್ಲಿ ಒಂದು ವಿಸಿಟಿಂಗ್ ಕಾರ್ಡ್ ತುಂಬಾ ಸೌಂಡ್ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಕೆಲಸದ ಸಿಗುವುದು ಕಷ್ಟವೇನಿಲ್ಲ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ ನೋಡಿ.

ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ ಕಲೆಗೆ ಪರಿಸ್ಥಿತಿಯ ಕಾರಣದಿಂದಾಗಿ ಕೆಲಸ ಇಲ್ಲವಾಗಿತ್ತು, ಹೀಗಾಗಿ ಹಣಕಾಸಿಗೆ ತೊಂದರೆಯಾಗುವುದು ಎಂಬ ಭಯ ಅವರನ್ನು ಕಾಡಲಾರಂಭಿಸಿತು, ಅವರು ಧನಶ್ರೀ ಎಂಬವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು, ಗೀತಕಲೆಯ ಸಪ್ಪೆ ಮೊರೆ ನೋಡಿದ ಧನಶ್ರೀ ಕೇಳಿದಾಗ ಇವರು ತಮ್ಮ ಕತೆ ಹೇಳಿದ್ದಾರೆ. ಧನಶ್ರೀಗೆ ಗೀತಾ ಅವರನ್ನು ಸಹಾಯ ಮಾಡಬೇಕೆಂಬ ಮನಸ್ಸಾಗಿದೆ. ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಧನಶ್ರೀ 24 ಗಂಟೆಯೊಳಗಾಗಿ ತಮ್ಮ ವೃತ್ತಿ ಕೌಶಲ್ಯದಿಂದ ಗೀತಾ ಅವರಿಗೆ 100 ವಿಸಿಟಿಂಗ್ ಕಾರ್ಡ್ ಮಾಡಿ, ಆ ಕಾರ್ಡ್ಗಳನ್ನು ಅವರಿದ್ದ ಸೊಸೈಟಿಯ ವಾಚ್ಮೆನ್ ಕೈಗೆ ನೀಡಿ ಹಂಚಲು ಹೇಳುತ್ತಾರೆ. ಈ ವಿಸಿಟಿಂಗ್ ಕಾರ್ಡ್ ವಿತರಣೆಯಾಗಿದ್ದೇ ಗೀತಾ ಕಲೆಗೆ ಕೆಲಸದ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ.
ಈ ಕುರಿತು ಅಸ್ಮಿತಾ ಜಾವೇದ್ಕರ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದೇ ತಡ, ಆ ವಿಸಿಟಿಂಗ್ ಕಾರ್ಡ್ ವೈರಲ್ ಆಗಿ ಬಿಟ್ಟಿದೆ. ಭಾರತದ ಮೂಲೆ-ಮೂಲೆಯಿಂದ ಗೀತಾ ಅವರಿಗೆ ಕರೆಗಳು ಬರುತ್ತಿವೆ. ಈಗ ಬಿಡದೆ ಸ್ದ್ದು ಮಾಡುತ್ತಿರುವ ಮೊಬೈಲ್ ನಿರ್ವಹಣೆಯೇ ಅವರಿಗೆ ತಲೆನೋವಾಗಿದೆ, ನೀವೇ ಇದಕ್ಕೆ ಒಂದು ಪರಿಹಾರ ಸೂಚಿಸಿ ಅಂತ ಧನಶ್ರೀ ಮೊರೆ ಹೋಗಿದ್ದಾರೆ ಎಂದು ಅಸ್ಮಿತಾ ಹೇಳಿಕೊಂಡಿದ್ದಾರೆ,
ನಮ್ಮಲ್ಲಿ ಕೆಲಸ ಇಲ್ಲ ಅಂತ ಕೊರಗುವವರು ಅನೆಕ ಮಂದಿ ಇದ್ದಾರೆ, ಏನಾದರೂ ಕ್ರಿಯೇಟಿವ್ ಆಗಿ ಯೋಚಿಸಿದರೆ ಸಂಪಾದನೆಯ ಬಾಗಿಲಿ ತನ್ನಿಂದ ತಾನೇ ತೆರೆದುಕೊಳ್ಳುವುದು ನೋಡಿ.



Click it and Unblock the Notifications











