Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ವೈರಲ್ ಆಯ್ತು ಪುಣೆ ಮನೆ ಕೆಲಸದಾಕೆಯ ವಿಸಿಟಿಂಗ್ ಕಾರ್ಡ್
ಇದೀಗ ಟ್ವಿಟರ್ನಲ್ಲಿ ಒಂದು ವಿಸಿಟಿಂಗ್ ಕಾರ್ಡ್ ತುಂಬಾ ಸೌಂಡ್ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಕೆಲಸದ ಸಿಗುವುದು ಕಷ್ಟವೇನಿಲ್ಲ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ ನೋಡಿ.

ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ ಕಲೆಗೆ ಪರಿಸ್ಥಿತಿಯ ಕಾರಣದಿಂದಾಗಿ ಕೆಲಸ ಇಲ್ಲವಾಗಿತ್ತು, ಹೀಗಾಗಿ ಹಣಕಾಸಿಗೆ ತೊಂದರೆಯಾಗುವುದು ಎಂಬ ಭಯ ಅವರನ್ನು ಕಾಡಲಾರಂಭಿಸಿತು, ಅವರು ಧನಶ್ರೀ ಎಂಬವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು, ಗೀತಕಲೆಯ ಸಪ್ಪೆ ಮೊರೆ ನೋಡಿದ ಧನಶ್ರೀ ಕೇಳಿದಾಗ ಇವರು ತಮ್ಮ ಕತೆ ಹೇಳಿದ್ದಾರೆ. ಧನಶ್ರೀಗೆ ಗೀತಾ ಅವರನ್ನು ಸಹಾಯ ಮಾಡಬೇಕೆಂಬ ಮನಸ್ಸಾಗಿದೆ. ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಧನಶ್ರೀ 24 ಗಂಟೆಯೊಳಗಾಗಿ ತಮ್ಮ ವೃತ್ತಿ ಕೌಶಲ್ಯದಿಂದ ಗೀತಾ ಅವರಿಗೆ 100 ವಿಸಿಟಿಂಗ್ ಕಾರ್ಡ್ ಮಾಡಿ, ಆ ಕಾರ್ಡ್ಗಳನ್ನು ಅವರಿದ್ದ ಸೊಸೈಟಿಯ ವಾಚ್ಮೆನ್ ಕೈಗೆ ನೀಡಿ ಹಂಚಲು ಹೇಳುತ್ತಾರೆ. ಈ ವಿಸಿಟಿಂಗ್ ಕಾರ್ಡ್ ವಿತರಣೆಯಾಗಿದ್ದೇ ಗೀತಾ ಕಲೆಗೆ ಕೆಲಸದ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ.
ಈ ಕುರಿತು ಅಸ್ಮಿತಾ ಜಾವೇದ್ಕರ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದೇ ತಡ, ಆ ವಿಸಿಟಿಂಗ್ ಕಾರ್ಡ್ ವೈರಲ್ ಆಗಿ ಬಿಟ್ಟಿದೆ. ಭಾರತದ ಮೂಲೆ-ಮೂಲೆಯಿಂದ ಗೀತಾ ಅವರಿಗೆ ಕರೆಗಳು ಬರುತ್ತಿವೆ. ಈಗ ಬಿಡದೆ ಸ್ದ್ದು ಮಾಡುತ್ತಿರುವ ಮೊಬೈಲ್ ನಿರ್ವಹಣೆಯೇ ಅವರಿಗೆ ತಲೆನೋವಾಗಿದೆ, ನೀವೇ ಇದಕ್ಕೆ ಒಂದು ಪರಿಹಾರ ಸೂಚಿಸಿ ಅಂತ ಧನಶ್ರೀ ಮೊರೆ ಹೋಗಿದ್ದಾರೆ ಎಂದು ಅಸ್ಮಿತಾ ಹೇಳಿಕೊಂಡಿದ್ದಾರೆ,
ನಮ್ಮಲ್ಲಿ ಕೆಲಸ ಇಲ್ಲ ಅಂತ ಕೊರಗುವವರು ಅನೆಕ ಮಂದಿ ಇದ್ದಾರೆ, ಏನಾದರೂ ಕ್ರಿಯೇಟಿವ್ ಆಗಿ ಯೋಚಿಸಿದರೆ ಸಂಪಾದನೆಯ ಬಾಗಿಲಿ ತನ್ನಿಂದ ತಾನೇ ತೆರೆದುಕೊಳ್ಳುವುದು ನೋಡಿ.



Click it and Unblock the Notifications