Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಕಿವಿಯ ಒಳಗಡೆ ಜೀವಂತ ಜೇಡರ ಹುಳು..! ವಿಡಿಯೋ ವೈರಲ್ ..!
ಜೇಡ ಕಂಡರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ. ಮನೆ ತುಂಬಾ ಅಲ್ಲಲ್ಲಿ ಗೂಡು ಕಟ್ಟಿಕೊಂಡು ಇರುತ್ತದೆ. ಈ ಜೇಡಗಳಿಗೆ ಬಡವ-ಶ್ರೀಮಂತ ಅನ್ನೋ ಭೇದ-ಭಾವವಿಲ್ಲ ಎಲ್ಲರ ಮನೆಯಲ್ಲಿ ಟಿಕಾಣಿ ಹೂಡೋದೇ ಇದರ ಕೆಲಸ. ಕೆಲವೊಂದು ಸಲ ಇದ್ದಕ್ಕಿದ್ದ ಹಾಗೇ ಈ ಜೇಡಗಳು ಮೈ ಮೇಲೆ ಎರಗಿ ಬಿಡುತ್ವೆ. ಎಂತಹ ಗಟ್ಟಿ ಗುಂಡಿಗೆ ಇದ್ದವರು ಕೂಡ ಒಂದು ಸಾರಿ ಬೆಚ್ಚಿ ಬೀಳದೇ ಇರೋದಿಲ್ಲ.

ಹೌದು, ಜೇಡಗಳಲ್ಲಿ ಕೂಡ ವಿಷದ ಅಂಶ ಇರುತ್ತಂತೆ. ಮತ್ತು ಜೇಡ ಮನುಷ್ಯನ ದೇಹದ ಭಾಗಕ್ಕೆ ಕಚ್ಚಿದರೆ ಅತೀವ ನೋವು ಸಂಭವಿಸುತ್ತದೆ. ಹೀಗಾಗಿ ಒಂದು ರೀತಿಯ ಭಯವಂತೂ ಇದ್ದೇ ಇದೆ. ಜೇಡಗಳು ಎಷ್ಟು ಚಾಲಾಕಿ ಇರುತ್ತವೆ ಅಂದ್ರೆ ಅದು ಮೈ ಮೇಲೆ ಬಂದೂ ಹೋಗಿದ್ದು ಗೊತ್ತೇ ಆಗುವುದಿಲ್ಲ. ಸರ್ ಅಂತ ಬಂದು ಬಿಡುತ್ತೆ. ಅದ್ರಲ್ಲೂ ರಾತ್ರಿ ಸಮಯದಲ್ಲಿ ತುಂಬಾನೇ ಹುಷಾರಾಗಿದ್ರೆ ಒಳ್ಳೆಯದು.
ಇತ್ತೀಚಿಗಷ್ಟೇ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಜನ ಒಂದು ಕ್ಷಣ ಕಂಗಾಲಾಗಿದ್ರು. ಹೀಗೂ ಆಗುತ್ತಾ ಅಂತ ಲೆಕ್ಕಾಚಾರ ಹಾಕಿದ್ರು. ಅಷ್ಟಕ್ಕು ಆ ವಿಡಿಯೋದಲ್ಲಿ ಅಂತಹದ್ದೇನಿದೆ ಅನ್ನೋದನ್ನ ನೋಡೋಣ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದಾನೆ. ಮತ್ತೊಬ್ಬ ವ್ಯಕ್ತಿ ಆತನ ಕಿವಿಯೊಳಗಡೆ ಇಯರ್ ಡ್ರಾಪ್ ಹಾಕುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆತನ ಕಿವಿಯ ಒಳಗಡೆಯಿಂದ ಪುಟ್ಟದಾದ ಜೇಡವೊಂದು ಹೊರಗಡೆ ಬರುತ್ತದೆ. ಈ ವಿಡಿಯೋ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ಈ ಪುಟ್ಟ ಜೇಡ ಆತನ ಕಿವಿಯೊಳಗಡೆ ಹೋಗಿದ್ಹೇಗೆ? ಜೇಡವೊಂದು ಆತನ ಕಿವಿಯೊಳಗಡೆ ಹೋದಾಗ ಆತನಿಗೆ ಗೊತ್ತೇ ಆಗಿಲ್ವಾ? ಅಂತೆಲ್ಲಾ ಜನ ಪ್ರಶ್ನಿಸ್ತಿದ್ದಾರೆ. ಅದಕ್ಕೆ ಹೇಳೋದು ನಾವು ಮಲಗಿರಲಿ ಅಥವಾ ಎಚ್ಚರವಾಗಿರಲಿ ನಮ್ಮ ಮುಂಜಾಗೃತೆಯಲ್ಲಿ ನಾವಿರಬೇಕು. ಇಲ್ಲವಾದರೆ ಇದೇ ತರಹ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.



Click it and Unblock the Notifications