Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ಹಸುವಿನ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್: ವೀಡಿಯೋಗೆ ಅಪಾರ ಮೆಚ್ಚುಗೆ
ರೈಲು ಬರುವಾಗ ಹಳಿ ದಾಟುತ್ತಿದ್ದ ಹಸುವನ್ನು ನೋಡಿ ರೈಲು ನಿಲ್ಲಿಸಿದ ವೀಡಿಯೋ ವೈರಲ್ ಆಗುತ್ತಿದದ್ದು ಲೋಕೋ ಪೈಲೆಟ್ ಕಾರ್ಯಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಮನುಷ್ಯತ್ವವೆಂದರೆ ಇದು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರೈಲು ನಿಲ್ಲಿಸದಿದ್ದರೆ ಆ ಹಸುಗಳ ಪ್ರಾಣ ಹೋಗುತ್ತಿತ್ತು
ಆ ಹಸುಗಳು ಹಳಿಗಳ ಮೇಲೆ ಇತ್ತು, ಹಸುಗಳನ್ನು ನೋಡಿದ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿದರು. ಒಂದು ಹಸು ಹಲಿ ದಾಟಿದೆ, ಆದರೆ ಮತ್ತೊಂದು ಹಸು ಗೊಂದಲಕ್ಕೆ ಒಳಗಾಯ್ತು, ಅದು ಹಳಿಯಲ್ಲಿಯೇ ನಿಂತಿದ್ದರಿಂದ ರೈಲು ನಿಲ್ಲಿಸಿ ಆ ಹಸು ದಾಟಿದ ಮೇಲೆ ರೈಲು ಮುಂದೆಕ್ಕೆ ಹೋಗಿದೆ, ಆ ಹಸುವಿನ ಪ್ರಾಣ ಉಳಿಸಿದ್ದಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಹಸುವನ್ನು ನೋಡಿದ್ದರಿಂದ ರೈಲು ನಿಲ್ಲಿಸಿ ಪ್ರಾಣ ಉಳಿಸಲು ಸಾಧ್ಯವಾಯ್ತು. ಅದರೆ ಎಲ್ಲಾ ಸಮಯದಲ್ಲಿ ಈ ರೀತಿ ಸಾಧ್ಯವಾಗಲ್ಲ, ಅಪಘಾತ ಸಂಭವಿಸುತ್ತದೆ.
आप लोग विडियो को अंत तक जरूर देखे और ट्रेन चालक के लिए दो शब्द जरूर लिखे,. pic.twitter.com/1TwcR0PMdV
— Naresh Yadav (@NareshYadav100) September 6, 2024
ವೇಗವಾಗಿ ಚಲಿಸುತ್ತಿದ್ದ ರೈಲು ಎದುರುಗಡೆ ಇದ್ದಕ್ಕಿದ್ದಂತೆ ಹಸು ಬಂದರೆ , ಹಸು ಅಂತಲ್ಲ ಯಾವುದೇ ಪ್ರಾಣಿ ಬಂದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಇತ್ತೀಚೆಗೆ ಕಾಡಾನೆಯೊಂದಕ್ಕೆ ರೈಲು ಡಿಕ್ಕಿ ಹೊಡೆದು ಕಾಡಾನೆ ನೋವಿನಿಂದ ತೆವಳಿಕೊಂಡು ಹೋಗುವ ದೃಶ್ಯ ಮನಕಲುಕುವಂತಿತ್ತು, ಕಾಡು ಪ್ರಾಣಿಗಳು ಈ ರೀತಿ ನಾಡಿಗೆ ಬರುವುದನ್ನು ತಪ್ಪಿಸಲು ಅರನ್ಯ ಇಲಾಖೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ರಕ್ಷಣೆ ಮಾಡಬೇಕು. ಪ್ರಾಣಿಗಳು ಜೀವ ಕಳೆದುಕೊಳ್ಳುವುದನ್ನು ತಪ್ಪಿಸಬೇಕಾಗಿದೆ.
ರಸ್ತೆಯಲ್ಲಿಯೂ ಹಸುಗಳು ಎದುರಾಗುವುದು, ಅವುಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
ಹಸುಗಳನ್ನು ಮೇಯಲು ಬಿಡುವಾಗ ಅವಳನ್ನು ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟು ಮೇಯಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅದರೆ ತುಂಬಾ ಜನರಿಗೆ ಹಾಲು ಕರೆಯಲು ಮಾತ್ರ ಹಸುವಿನ ನೆನಪಾಗುವುದು, ಆದರೆ ನಂತರ ಅವುಗಳನ್ನು ಮೇಯಲು ರೋಡ್ನಲ್ಲಿ ಬಿಟ್ಟು ಬಿಡುತ್ತಾರೆ, ಈ ರೀತಿ ರೋಡ್ನಲ್ಲಿ ಬಿಡುವುದರಿಂದ ಅವುಗಳಿಗೆ ಅಪಘಾತವಾಗುವ ಸಾಧ್ಯತೆ ಇದೆ, ಅವುಗಳಿಗೆ ಡಿಕ್ಕಿಯಾಗಿ ಮನುಷ್ಯರು ಪ್ರಾಣ ಕಳೆದುಕೊಂಡಿರುವ ಎಷ್ಟೋ ಘಟನೆಗಳಿವೆ. ಅದರಲ್ಲಿಯೂ ಬೈಕ್ನಲ್ಲಿ ಹೀಗುವವರೆಗೆ ಹೆಚ್ಚು ಅಪಾಯಕಾರಿ, ರಸ್ತೆ ಬದಿಯಲ್ಲಿರುವ ಹಸುಗಳು ಇದ್ದಕ್ಕಿದ್ದಂತೆ ರಸ್ತೆಗೆ ಬರುತ್ತದೆ, ಇನ್ನು ಕೆಲವು ಕಡೆ ಹಸುಗಳು ಗುಂಪು ಗುಂಪಾಗಿ ಮಲಗಿರುತ್ತದೆ, ಇದರಿಂದಾಗಿ ಗಾಡಿಗೆ ಮುಂದೆಕ್ಕೆ ಹೋಗುವುದೇ ಕಷ್ಟ, ಎಷ್ಟೇ ಹಾರ್ನ್ ಹೊಡೆದರೂ ಅವುಗಳು ಸೈಡ್ಗೆ ಹೋಗಲ್ಲ.
ಹಸುಗಳನ್ನು ರಸ್ತೆಯಲ್ಲಿ ಬಿಡುವುದರಿಂದ ಅವುಗಳಿಗೂ ತೊಂದರೆ, ಆ ದಾರಿಯಲ್ಲಿ ಪ್ರಯಾಣ ಮಾಡುವವರಿಗೂ ತೊಂದರೆ, ಬೇಜಾವ್ದಾರಿಯಿಂದ ಹಸುವನ್ನು ರಸ್ತೆಯಲ್ಲಿ ಬಿಡುವ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಹಸುವನ್ನು ಸಾಕುವವರು ಅದರ ಸಂಪೂರ್ಣ ಸುರಕ್ಷತೆಯ ಗಮನಹರಿಸಬೇಕು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ.



Click it and Unblock the Notifications