Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಹಸುವಿನ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್: ವೀಡಿಯೋಗೆ ಅಪಾರ ಮೆಚ್ಚುಗೆ
ರೈಲು ಬರುವಾಗ ಹಳಿ ದಾಟುತ್ತಿದ್ದ ಹಸುವನ್ನು ನೋಡಿ ರೈಲು ನಿಲ್ಲಿಸಿದ ವೀಡಿಯೋ ವೈರಲ್ ಆಗುತ್ತಿದದ್ದು ಲೋಕೋ ಪೈಲೆಟ್ ಕಾರ್ಯಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಮನುಷ್ಯತ್ವವೆಂದರೆ ಇದು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರೈಲು ನಿಲ್ಲಿಸದಿದ್ದರೆ ಆ ಹಸುಗಳ ಪ್ರಾಣ ಹೋಗುತ್ತಿತ್ತು
ಆ ಹಸುಗಳು ಹಳಿಗಳ ಮೇಲೆ ಇತ್ತು, ಹಸುಗಳನ್ನು ನೋಡಿದ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿದರು. ಒಂದು ಹಸು ಹಲಿ ದಾಟಿದೆ, ಆದರೆ ಮತ್ತೊಂದು ಹಸು ಗೊಂದಲಕ್ಕೆ ಒಳಗಾಯ್ತು, ಅದು ಹಳಿಯಲ್ಲಿಯೇ ನಿಂತಿದ್ದರಿಂದ ರೈಲು ನಿಲ್ಲಿಸಿ ಆ ಹಸು ದಾಟಿದ ಮೇಲೆ ರೈಲು ಮುಂದೆಕ್ಕೆ ಹೋಗಿದೆ, ಆ ಹಸುವಿನ ಪ್ರಾಣ ಉಳಿಸಿದ್ದಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಹಸುವನ್ನು ನೋಡಿದ್ದರಿಂದ ರೈಲು ನಿಲ್ಲಿಸಿ ಪ್ರಾಣ ಉಳಿಸಲು ಸಾಧ್ಯವಾಯ್ತು. ಅದರೆ ಎಲ್ಲಾ ಸಮಯದಲ್ಲಿ ಈ ರೀತಿ ಸಾಧ್ಯವಾಗಲ್ಲ, ಅಪಘಾತ ಸಂಭವಿಸುತ್ತದೆ.
आप लोग विडियो को अंत तक जरूर देखे और ट्रेन चालक के लिए दो शब्द जरूर लिखे,. pic.twitter.com/1TwcR0PMdV
— Naresh Yadav (@NareshYadav100) September 6, 2024
ವೇಗವಾಗಿ ಚಲಿಸುತ್ತಿದ್ದ ರೈಲು ಎದುರುಗಡೆ ಇದ್ದಕ್ಕಿದ್ದಂತೆ ಹಸು ಬಂದರೆ , ಹಸು ಅಂತಲ್ಲ ಯಾವುದೇ ಪ್ರಾಣಿ ಬಂದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಇತ್ತೀಚೆಗೆ ಕಾಡಾನೆಯೊಂದಕ್ಕೆ ರೈಲು ಡಿಕ್ಕಿ ಹೊಡೆದು ಕಾಡಾನೆ ನೋವಿನಿಂದ ತೆವಳಿಕೊಂಡು ಹೋಗುವ ದೃಶ್ಯ ಮನಕಲುಕುವಂತಿತ್ತು, ಕಾಡು ಪ್ರಾಣಿಗಳು ಈ ರೀತಿ ನಾಡಿಗೆ ಬರುವುದನ್ನು ತಪ್ಪಿಸಲು ಅರನ್ಯ ಇಲಾಖೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ರಕ್ಷಣೆ ಮಾಡಬೇಕು. ಪ್ರಾಣಿಗಳು ಜೀವ ಕಳೆದುಕೊಳ್ಳುವುದನ್ನು ತಪ್ಪಿಸಬೇಕಾಗಿದೆ.
ರಸ್ತೆಯಲ್ಲಿಯೂ ಹಸುಗಳು ಎದುರಾಗುವುದು, ಅವುಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
ಹಸುಗಳನ್ನು ಮೇಯಲು ಬಿಡುವಾಗ ಅವಳನ್ನು ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟು ಮೇಯಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅದರೆ ತುಂಬಾ ಜನರಿಗೆ ಹಾಲು ಕರೆಯಲು ಮಾತ್ರ ಹಸುವಿನ ನೆನಪಾಗುವುದು, ಆದರೆ ನಂತರ ಅವುಗಳನ್ನು ಮೇಯಲು ರೋಡ್ನಲ್ಲಿ ಬಿಟ್ಟು ಬಿಡುತ್ತಾರೆ, ಈ ರೀತಿ ರೋಡ್ನಲ್ಲಿ ಬಿಡುವುದರಿಂದ ಅವುಗಳಿಗೆ ಅಪಘಾತವಾಗುವ ಸಾಧ್ಯತೆ ಇದೆ, ಅವುಗಳಿಗೆ ಡಿಕ್ಕಿಯಾಗಿ ಮನುಷ್ಯರು ಪ್ರಾಣ ಕಳೆದುಕೊಂಡಿರುವ ಎಷ್ಟೋ ಘಟನೆಗಳಿವೆ. ಅದರಲ್ಲಿಯೂ ಬೈಕ್ನಲ್ಲಿ ಹೀಗುವವರೆಗೆ ಹೆಚ್ಚು ಅಪಾಯಕಾರಿ, ರಸ್ತೆ ಬದಿಯಲ್ಲಿರುವ ಹಸುಗಳು ಇದ್ದಕ್ಕಿದ್ದಂತೆ ರಸ್ತೆಗೆ ಬರುತ್ತದೆ, ಇನ್ನು ಕೆಲವು ಕಡೆ ಹಸುಗಳು ಗುಂಪು ಗುಂಪಾಗಿ ಮಲಗಿರುತ್ತದೆ, ಇದರಿಂದಾಗಿ ಗಾಡಿಗೆ ಮುಂದೆಕ್ಕೆ ಹೋಗುವುದೇ ಕಷ್ಟ, ಎಷ್ಟೇ ಹಾರ್ನ್ ಹೊಡೆದರೂ ಅವುಗಳು ಸೈಡ್ಗೆ ಹೋಗಲ್ಲ.
ಹಸುಗಳನ್ನು ರಸ್ತೆಯಲ್ಲಿ ಬಿಡುವುದರಿಂದ ಅವುಗಳಿಗೂ ತೊಂದರೆ, ಆ ದಾರಿಯಲ್ಲಿ ಪ್ರಯಾಣ ಮಾಡುವವರಿಗೂ ತೊಂದರೆ, ಬೇಜಾವ್ದಾರಿಯಿಂದ ಹಸುವನ್ನು ರಸ್ತೆಯಲ್ಲಿ ಬಿಡುವ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಹಸುವನ್ನು ಸಾಕುವವರು ಅದರ ಸಂಪೂರ್ಣ ಸುರಕ್ಷತೆಯ ಗಮನಹರಿಸಬೇಕು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ.



Click it and Unblock the Notifications
