Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸದಲ್ಲಿ ಹೇರ್ ಕಟ್, ಶೇವಿಂಗ್ ಮಾಡಿಸಬಾರದು ಅನ್ನೋದು ಇದೇ ಕಾರಣಕ್ಕೆ!
ಶ್ರಾವಣ ತಿಂಗಳು ಹಿಂದೂಗಳಿಗೆ ಪವಿತ್ರವಾದ ತಿಂಗಳು. ಈ ತಿಂಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಜೊತೆಗೆ ಶಿವನಿಗೆ ಪ್ರಿಯವಾದ ತಿಂಗಳು ಅಂತಾನೂ ಕರೆಯಲಾಗುತ್ತದೆ. ಈ ಶ್ರಾವಣ ತಿಂಗಳಿನಲ್ಲಿ ಶಿವನ ಜೊತೆಗೆ ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಿ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಅಂತಾನೂ ಹೇಳಲಾಗುತ್ತದೆ.
ಈ ತಿಂಗಳಿನಲ್ಲಿ ಶಿವನನ್ನು ನಿಷ್ಕಲ್ಮಷ ಮನಸ್ಸಿನಿಂದ ಪ್ರೀತಿಸಿದ್ರೆ ನಾವು ಅಂದುಕೊಂಡಿದ್ದೆಲ್ಲಾ ನೆರವೇರುತ್ತೆ ಅಂತ ಹೇಳಲಾಗುತ್ತದೆ. ಈ ಶ್ರಾವಣ ತಿಂಗಳಿನಲ್ಲಿ ಕೆಲವೊಂದು ಆಚರಣೆಗಳನ್ನು ಪಾಲಿಸಬೇಕು. ಅದೇ ರೀತಿ ಈ ತಿಂಗಳಿನಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅಷ್ಟಕ್ಕು ಈ ಶ್ರಾವಣ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

ಈ ತಿಂಗಳು ಹೊಸತಾಗಿ ಮದುವೆಯಾದವರಿಗೆ ವಿಶೇಷವಾದ ತಿಂಗಳು ಅಂತಾನೇ ಪರಿಗಣಿಸಲಾಗುತ್ತದೆ. ಇನ್ನೂ ಅವಿವಾಹಿತರು ಈ ಶ್ರಾವಣ ಮಾಸದಲ್ಲಿ ಶಿವನಿಗಾಗಿ ಉಪವಾಸ ವ್ರತ ಮಾಡಿದರೆ ತಮ್ಮ ನೆಚ್ಚಿನ ಸಂಗಾತಿಯನ್ನು ಪಡೆಯಬಹುದಂತೆ. ಇನ್ನೂ ಈಗಾಗಲೇ ಪ್ರೀತಿಯಲ್ಲಿ ಇರುವವರು ಭಕ್ತಿಯಿಂದ ಶಿವನನ್ನು ಬೇಡಿಕೊಂಡರೆ ಅವರ ಮಧ್ಯೆ ಪ್ರೀತಿ ಮತ್ತಷ್ಟು ಹೆಚ್ಚಾಗಲಿದ್ಯಂತೆ.
ಶ್ರಾವಣ ತಿಂಗಳಿನಲ್ಲಿ ಕೈಲಾಸದಿಂದ ಇಳಿದು ಬರುತ್ತಾನಾ ಶಿವ?
ಈ ಶ್ರಾವಣ ತಿಂಗಳಿನಲ್ಲಿ ಶಿವನು ಕೈಲಾಸದಿಂದ ಭೂಮಿಗೆ ಇಳಿದು ಬರುತ್ತಾನಂತೆ. ಇನ್ನೂ ಈ ಶ್ರಾವಣ ಮಾಸದಲ್ಲಿ ಪದ್ಮಿನಿ ಏಕಾದಶಿಯನ್ನೂ ಕೂಡ ಆಚರಣೆ ಮಾಡಲಾಗ್ತಿದ್ದು, ಭಗವಾನ್ ವಿಷ್ಣುವು ಮುಂದಿನ ನಾಲ್ಕು ತಿಂಗಳುಗಳವರೆಗೆ ಯೋಗ ನಿದ್ರಾಗೆ ಜಾರುತ್ತಾನೆ. ಮತ್ತು ಈ ಸಮಯದಲ್ಲಿ ಭಗವಾನ್ ಶಿವನು ಸೃಷ್ಟಿಯನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಈ ಶ್ರಾವಣ ಮಾಸದಲ್ಲಿ ಮಹಾದೇವನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
ಇನ್ನೂ ಈ ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಕೆಲವೊಂದು ಕಟ್ಟು-ಪಾಡುಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಈ ಪವಿತ್ರ ಮಾಸದಲ್ಲಿ ಹೇರ್ ಕಟ್, ಶೇವಿಂಗ್ ಕೂಡ ಮಾಡಿಸಬಾರದು ಅನ್ನೋದು ಯಾಕೆ ಅನ್ನೋದನ್ನು ತಿಳಿಯೋಣ.
ಶ್ರಾವಣದಲ್ಲಿ ಹೇರ್ ಕಟ್, ಶೇವಿಂಗ್ ಮಾಡಿಸಬಾರದು ಯಾಕೆ ಗೊತ್ತಾ?
ಶ್ರಾವಣದಲ್ಲಿ ಹೇರ್ ಕಟ್ ಮಾಡಿಸಬಾರದು, ಶೇವಿಂಗ್ ಮಾಡಿಸಬಾರದು ಅನ್ನೋ ಮಾತನ್ನು ನಾವು ಕೇಳಿರ್ತೀವಿ. ಆದರೆ ಈ ರೀತಿ ನಂಬಿಕೆಗಳು ಯಾಕಿದೆ ಅನ್ನೋದು ಇಂದಿಗೂ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ಇದರ ಹಿಂದಿನ ಕಾರಣ ಏನು ಅಂದ್ರೆ ಹಿಂದಿನ ಕಾಲದಲ್ಲಿ ಹೇರ್ ಕಟ್ ಮತ್ತು ಶೇವಿಂಗ್ ಗೆ ಕಬ್ಬಿಣದ ಉಪಕರಣಗಳನ್ನು ಬಳಕೆ ಮಾಡಲಾಗ್ತಿತ್ತು. ಮತ್ತು ಅವುಗಳ ಅಂಚುಗಳು ತುಂಬಾ ತೀಕ್ಷ್ಣವಾಗಿತ್ತು. ಅದರಿಂದ ಗಾಯಗಳಾಗುವ ಅಪಾಯ ಹೆಚ್ಚಿತ್ತು.
ಇನ್ನೂ ಈ ಶ್ರಾವಣ ಮಾಸದಲ್ಲಿ ಮಳೆ ಅತಿಯಾಗಿರುತ್ತದೆ. ಹಾಗೂ ಸೂರ್ಯನ ಬೆಳಕು ಇರೋದಿಲ್ಲ. ಇದ್ರಿಂದ ಗಾಯಗಳಾದಾಗ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿ ಶ್ರಾವಣದಲ್ಲಿ ಕ್ಷೌರ ಮಾಡಿಸುವ ಸಂದರ್ಭದಲ್ಲಿ ಗಾಯವಾಗಿ ಸೋಂಕು ಆಗುತ್ತೆ ಅನ್ನೋ ಉದ್ದೇಶದಿಂದ ಶ್ರಾವಣದಲ್ಲಿ ಕ್ಷೌರ ನಿಷೇಧಿಸಲಾಗಿದೆ.
ಶ್ರಾವಣದಲ್ಲಿ ಉಗುರು ಕತ್ತರಿಸೋದನ್ನು ನಿಷೇಧಿಸಿರೋದು ಯಾಕೆ?
ಶ್ರಾವಣ ಮಾಸದಲ್ಲಿ ಉಗುರು ಕತ್ತರಿಸುವುದನ್ನೂ ನಿಷೇಧಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಈ ತಿಂಗಳಲ್ಲಿ ಎಣ್ಣೆ ಬಳಸಿ ಬಾಡಿ ಮಸಾಜ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಈ ಮಾಸದಲ್ಲಿ ಎಣ್ಣೆ ಮಸಾಜ್ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಗ್ರಹದೋಷಗಳು ಉಂಟಾಗುವ ಸಾಧ್ಯತೆಗಳಿದೆ. ಜೊತೆಗೆ ಶ್ರಾವಣ ಪೂಜೆಯ ಲಾಭವು ಅವರಿಗೆ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ಇನ್ನೂ ಈ ಶ್ರಾವಣ ಮಾಸದಲ್ಲಿ ಮಾಂಸಹಾರ, ಮಧ್ಯಪಾನ, ಧೂಮಪಾನದಿಂದ ದೂರವಿರಬೇಕು ಅಂತ ಹೇಳಲಾಗುತ್ತದೆ.
ಶ್ರಾವಣ ತಿಂಗಳಿನಲ್ಲಿ ಏನು ಮಾಡಬೇಕು?
ಶ್ರಾವಣ ತಿಂಗಳಿನಲ್ಲಿ ನಮ್ಮ ಮೈ ಹಾಗೂ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೂ ಆದಷ್ಟು ಶಿವನ ಧ್ಯಾನದಲ್ಲಿ ನಿರತವಾಗಿ ಇರಬೇಕು. ಇನ್ನೂ ಕುಟುಂಬದಲ್ಲಿರುವ ಎಲ್ಲಾ ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ಇನ್ನೂ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲಾ ಈಡೇರಬೇಕೆಂದರೆ ಶಿವಲಿಂಗಕ್ಕೆ ನಿತ್ಯ ನೀರನ್ನು ಅರ್ಪಿಸಬೇಕು.
ಹಿಂದಿನ ಕಾಲದವರು ಯಾವುದಾದರೂ ಒಂದು ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದರೂ ಅಂದ್ರೆ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇರುತ್ತಿತ್ತು.



Click it and Unblock the Notifications
