ಚಂದ್ರಗ್ರಹಣ ಯಾವಾಗ ಆರಂಭ..? ಅಂತ್ಯಕಾಲವೇನು? ಇಲ್ಲಿದೆ ಮಾಹಿತಿ

ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ.

ಈ ವರ್ಷ ಮೊದಲ ಚಂದ್ರಗ್ರಹಣ ಮಾರ್ಚ್‌ 25 (ಇಂದು) ಸಂಭವಿಸುತ್ತಿದೆ. ಭಾರತದಲ್ಲಿ ಹೋಳಿ ಆಚರಣೆಯ ದಿನವೇ ಚಂದ್ರಗ್ರಹಣ ಸಹ ಸಂಭವಿಸುತ್ತಿದೆ. ಹೀಗಾಗಿ ಈ ದಿನ ವಿಶೇಷ ಎನಿಸಿದೆ. ಹಾಗಾದರೆ ಚಂದ್ರ ಗ್ರಹಣದ ಸಮಯವೇನು? ಭಾರತದಲ್ಲಿ ಗೋಚರವಿದ್ಯಾ ಎಂಬ ಕುರಿತು ಮಾಹಿತಿ ಇಲ್ಲಿದೆ.

Timing Of Lunar Eclipse In India

ಚಂದ್ರಗ್ರಹಣದ ಸಮಯ

ಪೆನಂಬ್ರಾಲ್ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 10:24ಕ್ಕೆ ಪ್ರಾರಂಭವಾಗುತ್ತದೆ (IST), ಮಧ್ಯಾಹ್ನ 12:43ಕ್ಕೆ ಗರಿಷ್ಠ ಮಟ್ಟ ತಲುಪುತ್ತದೆ ಮತ್ತು 3:01ಕ್ಕೆ ಗ್ರಹಣ ಕಾಲ ಕೊನೆಯಾಗಲಿದೆ.


ಭಾರತದಲ್ಲಿ ಗ್ರಹಣ ಗೋಚರವಾಗಲಿದ್ಯಾ?

ಪೆನಂಬ್ರಲ್ ಚಂದ್ರ ಗ್ರಹಣವು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಎಲ್ಲಾ ಭಾಗಗಳಲ್ಲಿ ಗೋಚರವಾಗುತ್ತಿದೆ. ಆದರೆ ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರಿಸುವುದಿಲ್ಲ. ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ದಕ್ಷಿಣ ನಾರ್ವೆ, ಇಟಲಿ, ಪೋರ್ಚುಗಲ್, ರಷ್ಯಾ, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಜಪಾನ್, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ.

ಮಾರ್ಚ್ 25 ರಂದು ನಡೆಯಲಿರುವ ಪೆನಂಬ್ರಾಲ್ ಚಂದ್ರಗ್ರಹಣವು ಅತ್ಯಂತ ಚಿಕ್ಕದಾದ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಅಂಚಿನಲ್ಲಿ ಹಾದುಹೋಗುತ್ತದೆ.


ಹೋಳಿ ಮೇಲೆ ಚಂದ್ರ ಗ್ರಹಣದ ಪ್ರಭಾವವೇನು?

ಹೋಳಿ ಆಚರಣೆಯೊಂದಿಗೆ ಚಂದ್ರಗ್ರಹಣವು ಸೇರಿಕೊಳ್ಳುವುದರಿಂದ, ಈ ಅವಧಿಯು ಆಚರಣೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಆತಂಕವಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗದ ಕಾರಣ ಹೋಳಿ ಹುಣ್ಣಿಮೆಯಂದು ಯಾವ ಸೂತಕವನ್ನು ನಾವು ಪಡೆಯುವುದಿಲ್ಲ. ಇಂದು ಶುಭ ಗಳಿಗೆ, ಅಶುಭ ಕಾಲ, ಗ್ರಹಣ ಕಾಲ ನೋಡಬೇಕಾದ ಅನಿವಾರ್ಯತೆ ಇಲ್ಲ. ಯಾವ ಸಮಯದಲ್ಲಿ ಬೇಕಾದರು ನೀವು ಹೋಳಿ ಆಚರಿಸಬಹುದು.

ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18ರ ಬುಧವಾರದಂದು ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲಿ ಗೋಚರವಾಗಲಿದ್ದು, ಈ ವ‍ರ್ಷದ ಕೊನೆಯ ಚಂದ್ರಗ್ರಹಣ ಇದಾಗಿರಲಿದೆ.

ಇನ್ನು ಗ್ರಹಣ ಸಮಯದಲ್ಲಿ ದೇವಾಲಯಗಳನ್ನು ಮುಚ್ಚುವುದನ್ನು ನಾವು ನೋಡಿರುತ್ತೇವೆ. ಹಾಗಾದ್ರೆ ಗ್ರಹಣ ಸಮಯದಲ್ಲಿ ದೇವಾಲಯವನ್ನು ಏಕೆ ಮುಚ್ಚುತ್ತಾರೆ? ಗ್ರಹಣದ ಸಮಯದಲ್ಲಿ ದೇವಾಲಯವನ್ನು ಮುಚ್ಚಲು ಅನೇಕ ಧಾರ್ಮಿಕ ಕಾರಣಗಳಿವೆ. ಏನೆಲ್ಲ ಕಾರಣ ಎಂಬುದನ್ನು ನೋಡಿ.

ಗ್ರಹಣ ಸಮಯದಲ್ಲಿ ಸೂರ್ಯ ಮತ್ತು ಚಂದ್ರನಂತಹ ಸ್ವರ್ಗೀಯ ದೇಹಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ರಾಜಸಿಕ ಮತ್ತು ತಮಾಸಿಕ ನಕಾರಾತ್ಮಕ ಶಕ್ತಿಗಳು ಸುತ್ತ-ಮುತ್ತಲಿನ ಸಾತ್ವಿಕ ಶಕ್ತಿಯ ಆವರ್ತನಗಳ ಮೇಲೆ ಪರಿಣಾಮ ಬೀರುವಂತೆಯೇ ಮತ್ತು ಅದು ಪವಿತ್ರ ಸ್ಥಳಗಳಿಗೆ ತಲುಪದಂತೆ ತಡೆಯುತ್ತದೆ. ಅಂತೆಯೇ, ಈ ನಕಾರಾತ್ಮಕ ಶಕ್ತಿಯು ವಿಗ್ರಹಗಳನ್ನು ತಲುಪಬಹುದು ಮತ್ತು ಅವುಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು.

ವಿಗ್ರಹಗಳ ಸೂಕ್ಷ್ಮ ಶಕ್ತಿಯು ನಂತರ ಪರಿಣಾಮ ಬೀರುತ್ತದೆ ಮತ್ತು ಅದರ ಪರಿಣಾಮಕಾರಿತ್ವವು ಕಡಿಮೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ, ಈ ಶಕ್ತಿಯು ದೇವಾಲಯದಲ್ಲಿ ಇರಿಸಲಾಗಿರುವ ವಿಗ್ರಹಗಳನ್ನು ತಲುಪದಂತೆ ತಡೆಯಲು, ದೇವಾಲಯದ ಬಾಗಿಲುಗಳು, ವಿಶೇಷವಾಗಿ ಪೂಜಾ ಕೋಣೆಯ, ವಿಗ್ರಹಗಳನ್ನು ನಿಜವಾಗಿ ಇರಿಸಲಾಗಿರುವ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಕೆಲವೊಮ್ಮೆ ವಿಗ್ರಹವನ್ನು ತುಳಸಿ ಎಲೆಗಳಿಂದ ಕೂಡಿಸಲಾಗುತ್ತದೆ. ತುಳಸಿ ಎಲೆಗಳು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಹೀಗಾಗಿ ವಿಗ್ರಹಗಳನ್ನು ಕೆಳಗಡೆ ರಕ್ಷಿಸುತ್ತವೆ.

English summary

Timing Of Lunar Eclipse In India: Will Indians Be Able To See It? Here The Details

The first lunar eclipse of the year is happening on March 25 (today). Timing Of Lunar Eclipse In India: Will Indians Be Able To See It? Here The Details
Story first published: Monday, March 25, 2024, 9:30 [IST]
X
Desktop Bottom Promotion