Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ವರ್ಷದ ಮೊದಲ ದಿನ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ...!
ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಅದ್ದೂರಿಯಾಗಿ ಹೊಸ ವರ್ಷ ಸ್ವಾಗತಿಸಲು ಎಲ್ಲರೂ ಕಾಯುತ್ತಿದ್ದಾರೆ. ಹೊಸ ವರ್ಷದಿಂದ ಏನೆಲ್ಲಾ ಕೆಲಸ ಮಾಡಬೇಕು, ಏನು ಮಾಡಿದ್ರೆ ಒಳಿತು ಎಲ್ಲವನ್ನೂ ಯೋಚಿಸಿರುತ್ತಾರೆ. ಆದ್ರೆ ಹೊಸ ವರ್ಷದ ಮೊದಲ ದಿನ ಏನು ಮಾಡಬಾರದು ಗೊತ್ತಾ? ಆ ದಿನ ಯಾವೆಲ್ಲಾ ವಿಚಾರಗಳಿಂದ ದೂರವಿದ್ದರೆ ಒಳಿತಾಗಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಹಲವಾರು ಮಂದಿ ಹೊಸ ವರ್ಷವನ್ನು ನಿರ್ಲಕ್ಷ ಮಾಡುತ್ತಾರೆ. ಎಲ್ಲ ದಿನವೂ ಒಂದೆ ಎಂಬ ಭಾವನೆಯಲ್ಲಿರುತ್ತಾರೆ. ಆದ್ರೆ ಹೊಸ ವರ್ಷ ಎಂದಿನಂತೆ ಇರುವುದಿಲ್ಲ ಎಂಬುದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ಅಲ್ಲದೆ ಈ ದಿನ ಏನು ಮಾಡಬಾರದು ಏನು ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ದಿನ ಏನು ಮಾಡಬೇಕು ಏನು ಮಾಡಬಾರದೆಂಬುದನ್ನು ನೋಡಿ..

ಮೊದಲ ದಿನ ದೇವಾಲಯ ಭೇಟಿ ಉತ್ತಮ
ಜ್ಯೋತಿಷ್ಯದಲ್ಲಿ ವರ್ಷದ ಮೊದಲ ದಿನ ಗಣೇಶನ ದೇವಾಲಯ ಭೇಟಿ ಮಾಡಲು ಸೂಚಿಸಲಾಗುತ್ತದೆ. ವಿಘ್ನ ನಿವಾರಕನ ಆರಾಧನೆಯಿಂದ ವರ್ಷವೆಲ್ಲಾ ವಿಘ್ನಗಳ ನಿವಾರಣೆ ಮಾಡುವ ಶಕ್ತಿ ಬೇಡಲು ದೇವಸ್ಥಾನಕ್ಕೆ ಭೇಟಿ ನೀಡಿ. ಈ ದಿನ ಆದಷ್ಟು ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದು ಉತ್ತಮವಂತೆ. ನಿಮ್ಮ ನಂಬಿಕೆಗೆ ಅರ್ಹ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಆ ದಿನದ ಬಹುಕಾಲ ಆ ಸಮಯದಲ್ಲಿ ಕಳೆಯುವುದರಿಂದ ವರ್ಷವೆಲ್ಲಾ ಧನಾತ್ಮಕ ಚಿಂತನೆ ನಿಮ್ಮಲ್ಲಿ ಉಳಿಯಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರದ ತಿಳುವಳಿಯಾಗಿದೆ.
ಹೊಸ ವಸ್ತುಗಳ ಮನೆಗೆ ತರಬೇಡಿ
ಬಹಳಷ್ಟು ಮಂದಿ ಹೊಸ ವರ್ಷದಂದೇ ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲಿ ಪ್ಲಾಸ್ಟಿಕ್, ಲೆದರ್ನಿಂದ ಮಾಡಲಾದ ವಸ್ತುಗಳನ್ನು ಈ ದಿನ ಮನೆಯೊಳಗೆ ತರುವುದು ಅಶುಭದ ಸಂಕೇತವಂತೆ. ಇದರ ಬದಲು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮವಂತೆ.
ತಡವಾಗಿ ಏಳುವುದು
ವರ್ಷದ ಆರಂಭಿಕ ದಿನದಂದೆ ತೀರಾ ತಡವಾಗಿ ಏಳುವುದು ಅಶುಭದ ಸಂಕೇತವಾಗಿರಲಿದೆ. ಜೊತೆಗೆ ಹೊಸ ವರ್ಷದಂದು ನಿತ್ಯ ಕೆಲಸಕ್ಕೆ ರಜೆ ಹಾಕುವುದು ಇಡೀ ದಿನ ಆಲಸಿಯಾಗಿ ಮಲಗಿರುವುದು ಅಶುಭಕ್ಕೆ ದಾರಿ ಮಾಡಿಕೊಟ್ಟಂತೆ.
ಪ್ರಾಣಿ ವಧೆ ಮತ್ತು ಮಾಂಸ ಸೇವನೆ
ವರ್ಷದ ಆರಂಭದ ದಿನದಲ್ಲಿ ಪ್ರಾಣಿ ವಧೆ ಮಾಡಿದರೆ ಪಾಪ ಸುತ್ತಿಕೊಳ್ಳಲಿದೆ ಎಂಬುದು ಶಾಸ್ತ್ರದ ತಿಳುವಳಿಯಾಗಿದೆ. ಮತ್ತು ಈ ದಿನ ಬಹಳಷ್ಟು ಮಂದಿ ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡುತ್ತಾರೆ ಇದು ಸಹ ಅಶುಭದ ಸಂಕೇತವಾಗಿದೆ. ಇದಕ್ಕಿಂತ ಹೊಸ ವರ್ಷದ ದಿನದಂದು ಸಿಹಿ ತಿಂಡಿ ಹಂಚಿ, ಹೊಸ ಬಟ್ಟೆ ತೊಟ್ಟು, ಸಾತ್ವಿಕ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಮನೆ ಸ್ವಚ್ಛಗೊಳಿಸುವುದು
ಹೊಸ ವರ್ಷದಂದೇ ಮನೆಯನ್ನು ತೊಳೆದು ಸ್ವಚ್ಛ ಮಾಡುವುದು ಸಹ ಅಶುಭವಂತೆ. ಇದಕ್ಕಿಂತ ವರ್ಷದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅಥವಾ ವರ್ಷದ ಆರಂಭಗೊಂಡು ಒಂದೆರಡು ದಿನದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ.
ಗಾಜಿನ ವಸ್ತು ಒಡೆಯುವುದು
ಮನೆಯಲ್ಲಿ ಅಥವಾ ನೀವು ಹೊರಗಿದ್ದ ಸಂದರ್ಭದಲ್ಲೂ ಗಾಜಿನ ವಸ್ತುಗಳನ್ನು ಪಡೆಯುವ ಕೆಲಸ ಮಾಡಬೇಡಿ. ಇದರಿಂದ ಇಡೀ ವರ್ಷ ಅಶುಭ ಕಾಡಲಿದೆಯಂತೆ. ಗಾಜಿನ ವಸ್ತು ಮನೆಯಲ್ಲಿದ್ದರೆ ಅಥವಾ ನೀವು ಅದರ ಬಳಕೆ ಮಾಡುತ್ತಿದ್ದರೆ ಎಚ್ಚರವಹಿಸುವುದು ಉತ್ತಮ. ಈ ದಿನ ಗಾಜಿನ ವಸ್ತು ಪಡೆದರೆ ಅದೃಷ್ಟ ನಮ್ಮಿಂದ ದೂರಾಗಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಆಹಾರ ವ್ಯರ್ಥ ಮಾಡಬೇಡಿ
ಹೊಸ ವರ್ಷದಂದು ನೀವು ಅತೀಯಾಗಿ ಆಹಾರ ವ್ಯರ್ಥ ಮಾಡಬೇಡಿ. ಇಲ್ಲದೆ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಏಳಬೇಡಿ ಇದು ಅಶುಭವಂತೆ. ಇಂದು ಆಹಾರ ವ್ಯರ್ಥ ಮಾಡುವುದರಿಂದ ಸಂಪತ್ತಿನ್ನು ನಿರ್ಲಕ್ಷಿಸಿದಂತೆ. ಇದು ಸಂಕಷ್ಟ ತರಬಹುದು ಎಂದು ಹೇಳಲಾಗಿದೆ.



Click it and Unblock the Notifications