Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವರ್ಷದ ಮೊದಲ ದಿನ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ...!
ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಅದ್ದೂರಿಯಾಗಿ ಹೊಸ ವರ್ಷ ಸ್ವಾಗತಿಸಲು ಎಲ್ಲರೂ ಕಾಯುತ್ತಿದ್ದಾರೆ. ಹೊಸ ವರ್ಷದಿಂದ ಏನೆಲ್ಲಾ ಕೆಲಸ ಮಾಡಬೇಕು, ಏನು ಮಾಡಿದ್ರೆ ಒಳಿತು ಎಲ್ಲವನ್ನೂ ಯೋಚಿಸಿರುತ್ತಾರೆ. ಆದ್ರೆ ಹೊಸ ವರ್ಷದ ಮೊದಲ ದಿನ ಏನು ಮಾಡಬಾರದು ಗೊತ್ತಾ? ಆ ದಿನ ಯಾವೆಲ್ಲಾ ವಿಚಾರಗಳಿಂದ ದೂರವಿದ್ದರೆ ಒಳಿತಾಗಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಹಲವಾರು ಮಂದಿ ಹೊಸ ವರ್ಷವನ್ನು ನಿರ್ಲಕ್ಷ ಮಾಡುತ್ತಾರೆ. ಎಲ್ಲ ದಿನವೂ ಒಂದೆ ಎಂಬ ಭಾವನೆಯಲ್ಲಿರುತ್ತಾರೆ. ಆದ್ರೆ ಹೊಸ ವರ್ಷ ಎಂದಿನಂತೆ ಇರುವುದಿಲ್ಲ ಎಂಬುದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ಅಲ್ಲದೆ ಈ ದಿನ ಏನು ಮಾಡಬಾರದು ಏನು ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ದಿನ ಏನು ಮಾಡಬೇಕು ಏನು ಮಾಡಬಾರದೆಂಬುದನ್ನು ನೋಡಿ..

ಮೊದಲ ದಿನ ದೇವಾಲಯ ಭೇಟಿ ಉತ್ತಮ
ಜ್ಯೋತಿಷ್ಯದಲ್ಲಿ ವರ್ಷದ ಮೊದಲ ದಿನ ಗಣೇಶನ ದೇವಾಲಯ ಭೇಟಿ ಮಾಡಲು ಸೂಚಿಸಲಾಗುತ್ತದೆ. ವಿಘ್ನ ನಿವಾರಕನ ಆರಾಧನೆಯಿಂದ ವರ್ಷವೆಲ್ಲಾ ವಿಘ್ನಗಳ ನಿವಾರಣೆ ಮಾಡುವ ಶಕ್ತಿ ಬೇಡಲು ದೇವಸ್ಥಾನಕ್ಕೆ ಭೇಟಿ ನೀಡಿ. ಈ ದಿನ ಆದಷ್ಟು ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದು ಉತ್ತಮವಂತೆ. ನಿಮ್ಮ ನಂಬಿಕೆಗೆ ಅರ್ಹ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಆ ದಿನದ ಬಹುಕಾಲ ಆ ಸಮಯದಲ್ಲಿ ಕಳೆಯುವುದರಿಂದ ವರ್ಷವೆಲ್ಲಾ ಧನಾತ್ಮಕ ಚಿಂತನೆ ನಿಮ್ಮಲ್ಲಿ ಉಳಿಯಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರದ ತಿಳುವಳಿಯಾಗಿದೆ.
ಹೊಸ ವಸ್ತುಗಳ ಮನೆಗೆ ತರಬೇಡಿ
ಬಹಳಷ್ಟು ಮಂದಿ ಹೊಸ ವರ್ಷದಂದೇ ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲಿ ಪ್ಲಾಸ್ಟಿಕ್, ಲೆದರ್ನಿಂದ ಮಾಡಲಾದ ವಸ್ತುಗಳನ್ನು ಈ ದಿನ ಮನೆಯೊಳಗೆ ತರುವುದು ಅಶುಭದ ಸಂಕೇತವಂತೆ. ಇದರ ಬದಲು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮವಂತೆ.
ತಡವಾಗಿ ಏಳುವುದು
ವರ್ಷದ ಆರಂಭಿಕ ದಿನದಂದೆ ತೀರಾ ತಡವಾಗಿ ಏಳುವುದು ಅಶುಭದ ಸಂಕೇತವಾಗಿರಲಿದೆ. ಜೊತೆಗೆ ಹೊಸ ವರ್ಷದಂದು ನಿತ್ಯ ಕೆಲಸಕ್ಕೆ ರಜೆ ಹಾಕುವುದು ಇಡೀ ದಿನ ಆಲಸಿಯಾಗಿ ಮಲಗಿರುವುದು ಅಶುಭಕ್ಕೆ ದಾರಿ ಮಾಡಿಕೊಟ್ಟಂತೆ.
ಪ್ರಾಣಿ ವಧೆ ಮತ್ತು ಮಾಂಸ ಸೇವನೆ
ವರ್ಷದ ಆರಂಭದ ದಿನದಲ್ಲಿ ಪ್ರಾಣಿ ವಧೆ ಮಾಡಿದರೆ ಪಾಪ ಸುತ್ತಿಕೊಳ್ಳಲಿದೆ ಎಂಬುದು ಶಾಸ್ತ್ರದ ತಿಳುವಳಿಯಾಗಿದೆ. ಮತ್ತು ಈ ದಿನ ಬಹಳಷ್ಟು ಮಂದಿ ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡುತ್ತಾರೆ ಇದು ಸಹ ಅಶುಭದ ಸಂಕೇತವಾಗಿದೆ. ಇದಕ್ಕಿಂತ ಹೊಸ ವರ್ಷದ ದಿನದಂದು ಸಿಹಿ ತಿಂಡಿ ಹಂಚಿ, ಹೊಸ ಬಟ್ಟೆ ತೊಟ್ಟು, ಸಾತ್ವಿಕ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಮನೆ ಸ್ವಚ್ಛಗೊಳಿಸುವುದು
ಹೊಸ ವರ್ಷದಂದೇ ಮನೆಯನ್ನು ತೊಳೆದು ಸ್ವಚ್ಛ ಮಾಡುವುದು ಸಹ ಅಶುಭವಂತೆ. ಇದಕ್ಕಿಂತ ವರ್ಷದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅಥವಾ ವರ್ಷದ ಆರಂಭಗೊಂಡು ಒಂದೆರಡು ದಿನದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ.
ಗಾಜಿನ ವಸ್ತು ಒಡೆಯುವುದು
ಮನೆಯಲ್ಲಿ ಅಥವಾ ನೀವು ಹೊರಗಿದ್ದ ಸಂದರ್ಭದಲ್ಲೂ ಗಾಜಿನ ವಸ್ತುಗಳನ್ನು ಪಡೆಯುವ ಕೆಲಸ ಮಾಡಬೇಡಿ. ಇದರಿಂದ ಇಡೀ ವರ್ಷ ಅಶುಭ ಕಾಡಲಿದೆಯಂತೆ. ಗಾಜಿನ ವಸ್ತು ಮನೆಯಲ್ಲಿದ್ದರೆ ಅಥವಾ ನೀವು ಅದರ ಬಳಕೆ ಮಾಡುತ್ತಿದ್ದರೆ ಎಚ್ಚರವಹಿಸುವುದು ಉತ್ತಮ. ಈ ದಿನ ಗಾಜಿನ ವಸ್ತು ಪಡೆದರೆ ಅದೃಷ್ಟ ನಮ್ಮಿಂದ ದೂರಾಗಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಆಹಾರ ವ್ಯರ್ಥ ಮಾಡಬೇಡಿ
ಹೊಸ ವರ್ಷದಂದು ನೀವು ಅತೀಯಾಗಿ ಆಹಾರ ವ್ಯರ್ಥ ಮಾಡಬೇಡಿ. ಇಲ್ಲದೆ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಏಳಬೇಡಿ ಇದು ಅಶುಭವಂತೆ. ಇಂದು ಆಹಾರ ವ್ಯರ್ಥ ಮಾಡುವುದರಿಂದ ಸಂಪತ್ತಿನ್ನು ನಿರ್ಲಕ್ಷಿಸಿದಂತೆ. ಇದು ಸಂಕಷ್ಟ ತರಬಹುದು ಎಂದು ಹೇಳಲಾಗಿದೆ.



Click it and Unblock the Notifications
