Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ವರ್ಷದ ಮೊದಲ ದಿನ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ...!
ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಅದ್ದೂರಿಯಾಗಿ ಹೊಸ ವರ್ಷ ಸ್ವಾಗತಿಸಲು ಎಲ್ಲರೂ ಕಾಯುತ್ತಿದ್ದಾರೆ. ಹೊಸ ವರ್ಷದಿಂದ ಏನೆಲ್ಲಾ ಕೆಲಸ ಮಾಡಬೇಕು, ಏನು ಮಾಡಿದ್ರೆ ಒಳಿತು ಎಲ್ಲವನ್ನೂ ಯೋಚಿಸಿರುತ್ತಾರೆ. ಆದ್ರೆ ಹೊಸ ವರ್ಷದ ಮೊದಲ ದಿನ ಏನು ಮಾಡಬಾರದು ಗೊತ್ತಾ? ಆ ದಿನ ಯಾವೆಲ್ಲಾ ವಿಚಾರಗಳಿಂದ ದೂರವಿದ್ದರೆ ಒಳಿತಾಗಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಹಲವಾರು ಮಂದಿ ಹೊಸ ವರ್ಷವನ್ನು ನಿರ್ಲಕ್ಷ ಮಾಡುತ್ತಾರೆ. ಎಲ್ಲ ದಿನವೂ ಒಂದೆ ಎಂಬ ಭಾವನೆಯಲ್ಲಿರುತ್ತಾರೆ. ಆದ್ರೆ ಹೊಸ ವರ್ಷ ಎಂದಿನಂತೆ ಇರುವುದಿಲ್ಲ ಎಂಬುದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ಅಲ್ಲದೆ ಈ ದಿನ ಏನು ಮಾಡಬಾರದು ಏನು ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ದಿನ ಏನು ಮಾಡಬೇಕು ಏನು ಮಾಡಬಾರದೆಂಬುದನ್ನು ನೋಡಿ..

ಮೊದಲ ದಿನ ದೇವಾಲಯ ಭೇಟಿ ಉತ್ತಮ
ಜ್ಯೋತಿಷ್ಯದಲ್ಲಿ ವರ್ಷದ ಮೊದಲ ದಿನ ಗಣೇಶನ ದೇವಾಲಯ ಭೇಟಿ ಮಾಡಲು ಸೂಚಿಸಲಾಗುತ್ತದೆ. ವಿಘ್ನ ನಿವಾರಕನ ಆರಾಧನೆಯಿಂದ ವರ್ಷವೆಲ್ಲಾ ವಿಘ್ನಗಳ ನಿವಾರಣೆ ಮಾಡುವ ಶಕ್ತಿ ಬೇಡಲು ದೇವಸ್ಥಾನಕ್ಕೆ ಭೇಟಿ ನೀಡಿ. ಈ ದಿನ ಆದಷ್ಟು ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದು ಉತ್ತಮವಂತೆ. ನಿಮ್ಮ ನಂಬಿಕೆಗೆ ಅರ್ಹ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಆ ದಿನದ ಬಹುಕಾಲ ಆ ಸಮಯದಲ್ಲಿ ಕಳೆಯುವುದರಿಂದ ವರ್ಷವೆಲ್ಲಾ ಧನಾತ್ಮಕ ಚಿಂತನೆ ನಿಮ್ಮಲ್ಲಿ ಉಳಿಯಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರದ ತಿಳುವಳಿಯಾಗಿದೆ.
ಹೊಸ ವಸ್ತುಗಳ ಮನೆಗೆ ತರಬೇಡಿ
ಬಹಳಷ್ಟು ಮಂದಿ ಹೊಸ ವರ್ಷದಂದೇ ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲಿ ಪ್ಲಾಸ್ಟಿಕ್, ಲೆದರ್ನಿಂದ ಮಾಡಲಾದ ವಸ್ತುಗಳನ್ನು ಈ ದಿನ ಮನೆಯೊಳಗೆ ತರುವುದು ಅಶುಭದ ಸಂಕೇತವಂತೆ. ಇದರ ಬದಲು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮವಂತೆ.
ತಡವಾಗಿ ಏಳುವುದು
ವರ್ಷದ ಆರಂಭಿಕ ದಿನದಂದೆ ತೀರಾ ತಡವಾಗಿ ಏಳುವುದು ಅಶುಭದ ಸಂಕೇತವಾಗಿರಲಿದೆ. ಜೊತೆಗೆ ಹೊಸ ವರ್ಷದಂದು ನಿತ್ಯ ಕೆಲಸಕ್ಕೆ ರಜೆ ಹಾಕುವುದು ಇಡೀ ದಿನ ಆಲಸಿಯಾಗಿ ಮಲಗಿರುವುದು ಅಶುಭಕ್ಕೆ ದಾರಿ ಮಾಡಿಕೊಟ್ಟಂತೆ.
ಪ್ರಾಣಿ ವಧೆ ಮತ್ತು ಮಾಂಸ ಸೇವನೆ
ವರ್ಷದ ಆರಂಭದ ದಿನದಲ್ಲಿ ಪ್ರಾಣಿ ವಧೆ ಮಾಡಿದರೆ ಪಾಪ ಸುತ್ತಿಕೊಳ್ಳಲಿದೆ ಎಂಬುದು ಶಾಸ್ತ್ರದ ತಿಳುವಳಿಯಾಗಿದೆ. ಮತ್ತು ಈ ದಿನ ಬಹಳಷ್ಟು ಮಂದಿ ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡುತ್ತಾರೆ ಇದು ಸಹ ಅಶುಭದ ಸಂಕೇತವಾಗಿದೆ. ಇದಕ್ಕಿಂತ ಹೊಸ ವರ್ಷದ ದಿನದಂದು ಸಿಹಿ ತಿಂಡಿ ಹಂಚಿ, ಹೊಸ ಬಟ್ಟೆ ತೊಟ್ಟು, ಸಾತ್ವಿಕ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಮನೆ ಸ್ವಚ್ಛಗೊಳಿಸುವುದು
ಹೊಸ ವರ್ಷದಂದೇ ಮನೆಯನ್ನು ತೊಳೆದು ಸ್ವಚ್ಛ ಮಾಡುವುದು ಸಹ ಅಶುಭವಂತೆ. ಇದಕ್ಕಿಂತ ವರ್ಷದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅಥವಾ ವರ್ಷದ ಆರಂಭಗೊಂಡು ಒಂದೆರಡು ದಿನದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ.
ಗಾಜಿನ ವಸ್ತು ಒಡೆಯುವುದು
ಮನೆಯಲ್ಲಿ ಅಥವಾ ನೀವು ಹೊರಗಿದ್ದ ಸಂದರ್ಭದಲ್ಲೂ ಗಾಜಿನ ವಸ್ತುಗಳನ್ನು ಪಡೆಯುವ ಕೆಲಸ ಮಾಡಬೇಡಿ. ಇದರಿಂದ ಇಡೀ ವರ್ಷ ಅಶುಭ ಕಾಡಲಿದೆಯಂತೆ. ಗಾಜಿನ ವಸ್ತು ಮನೆಯಲ್ಲಿದ್ದರೆ ಅಥವಾ ನೀವು ಅದರ ಬಳಕೆ ಮಾಡುತ್ತಿದ್ದರೆ ಎಚ್ಚರವಹಿಸುವುದು ಉತ್ತಮ. ಈ ದಿನ ಗಾಜಿನ ವಸ್ತು ಪಡೆದರೆ ಅದೃಷ್ಟ ನಮ್ಮಿಂದ ದೂರಾಗಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಆಹಾರ ವ್ಯರ್ಥ ಮಾಡಬೇಡಿ
ಹೊಸ ವರ್ಷದಂದು ನೀವು ಅತೀಯಾಗಿ ಆಹಾರ ವ್ಯರ್ಥ ಮಾಡಬೇಡಿ. ಇಲ್ಲದೆ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಏಳಬೇಡಿ ಇದು ಅಶುಭವಂತೆ. ಇಂದು ಆಹಾರ ವ್ಯರ್ಥ ಮಾಡುವುದರಿಂದ ಸಂಪತ್ತಿನ್ನು ನಿರ್ಲಕ್ಷಿಸಿದಂತೆ. ಇದು ಸಂಕಷ್ಟ ತರಬಹುದು ಎಂದು ಹೇಳಲಾಗಿದೆ.



Click it and Unblock the Notifications