Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಸೆಲೆಬ್ರಿಟಿಗಳಿಗೆ ಅಭಿಮಾನಿಗಳು ಕಟ್ಟಿದ್ದಾರೆ ದೇವಾಲಯ..! ಯಾರಿಗೆಲ್ಲಾ ಗುಡಿ ಇದೆ ಗೊತ್ತಾ?
ಭಾರತವನ್ನ ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಯ ನಾಡಾಗಿದೆ. ಇಲ್ಲಿ ಎಲ್ಲಾ ವಸ್ತುಗಳನ್ನೂ ಪೂಜ್ಯಾ ಮನೋಭಾವದಿಂದ ನೋಡಲಾಗಿದೆ. ಈಗಲೂ ಪ್ರಸಿದ್ಧ ವ್ಯಕ್ತಿಗಳ, ಸ್ವಾಮೀಜಿಗಳ, ಗುರುಗಳನ್ನು ದೇವರಂತೆ ಆರಾಧಿಸುತ್ತಾರೆ. ಹಾಗೆ ದೇಶದ ನಾನಾ ಕಡೆಗಳಲ್ಲಿ ಸಿನಿಮಾ ನಟ-ನಟಿಯರನ್ನೂ ಆರಾಧಿಸುವ ಅಭಿಮಾನಿಗಳಿದ್ದಾರೆ.
ಸಿನಿಮಾ ನಟರನ್ನು ಹಾಗೂ ನಟಿಯರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದು, ಅವರನ್ನು ತಮ್ಮ ದೇವರೆಂದೇ ಭಾವಿಸಿದ್ದಾರೆ. ಅವರಿಗಾಗಿ ವಿಶೇಷ ಪೂಜೆ ಅವರ ಫೋಟೋವನ್ನು ಮನೆಯೊಳಗಿಟ್ಟು ಪೂಜಿಸುತ್ತಾರೆ. ಇನ್ನು ಭಾರತದ ಈ 10 ಮಂದಿ ನಟ ನಟಿಯರಿಗೆ ದೇಶದ ಹಲವು ಕಡೆ ದೇವಾಲಯವೇ ಇದೆ.
ಹೌದು ಇದನ್ನು ಕೇಳಿ ನಿಮಗೂ ಅಚ್ಚರಿಯಾಗಬಹುದು. ಭಾರತದ ಖ್ಯಾತ ನಟ-ನಟಿಯರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ದೇವಾಲಯ ಕಟ್ಟಿದ್ದಾರೆ. ಆ ದೇವಸ್ಥಾನದಲ್ಲಿ ನಟ-ನಟಿಯರಿಗೆ ಪೂಜೆಯೂ ನಡೆಯುತ್ತದೆ.
ಕೋಲ್ಕತ್ತಾದಲ್ಲಿದೆ ಅಮಿತಾಬ್ ಬಚ್ಚನ್ ದೇವಸ್ಥಾನ
"ಬಾಲಿವುಡ್ನ ಶಾಹೆನ್ಶಾ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಅಮಿತಾಬ್ ಬಚ್ಚನ್ ಅವರಿಗೆ ಕೋಲ್ಕತ್ತಾದಲ್ಲಿ ದೇವಸ್ಥಾನವಿದೆ. ನೂರಾರು ಹಿಂದಿ ಸಿನಿಮಾ ಸೇರಿ ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲು ಬಿಗ್ ಬಿ ನಟಿಸಿದ್ದಾರೆ. ಹೀಗಾಗಿ ಅಸಂಖ್ಯಾ ಅಭಿಮಾನಿಗಳು ಅವರಿಗಿದ್ದಾರೆ. ಹೀಗಾಗಿ ಕೋಲ್ಕತ್ತಾದಲ್ಲಿ ಅವರಿಗೆ ಗೌರವದಿಂದ ದೇವಾಲಯವನ್ನೇ ಕಟ್ಟಿದ್ದಾರೆ. ಅವರ ಹುಟ್ಟಿನದ ದಿನದಂದು ಈ ದೇವಾಲಯದಲ್ಲಿ ವಿಶೇಷ ಪೂಜೆ ಅನ್ನ ಸಂತರ್ಪಣೆ ಮಾಡುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಬೆಂಗಳೂರಲ್ಲಿ ರಜನಿಕಾಂತ್ ದೇವಾಲಯ
ಮೂಲತಃ ಬೆಂಗಳೂರಿನವರೇ ಆಗಿದ್ದ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಬೆಂಗಳೂರಿನಲ್ಲೇ ದೇವಾಲಯವಿದೆ. ಇದರ ಜೊತೆ ಅವರಿಗೆ ತಮಿಳುನಾಡಿನ ಮಧುರೈನಲ್ಲೂ ಒಂದು ದೇವಾಲಯವಿದೆ. ದಕ್ಷಿಣ ಭಾರತದಲ್ಲಿ ಅವರು ಕೋಟಿ ಕೋಟಿ ಅಭಿಮಾನಿಗಳ ಹೊಂದಿದ್ದು, ಅವರ ಸಿನಿಮಾ ಎಂದರೆ ಹಬ್ಬದ ವಾತಾವರಣವಿರುತ್ತದೆ.
ಖುಷ್ಬೂ ಸುಂದರ್ ದೇವಸ್ಥಾನ, ತಮಿಳುನಾಡು
ದಕ್ಷಿಣ ಭಾರತದ ಜನಪ್ರಿಯ ನಟಿ ಖುಷ್ಬೂ ಸುಂದರ್ ಅವರು ತಮಿಳುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅಲ್ಲದೆ ಅಲ್ಲಿಯೇ ದೇವಾಲಯವನ್ನೂ ಹೊಂದಿದ್ದಾರೆ.
ಸಚಿನ್ ತೆಂಡೂಲ್ಕರ್ ದೇವಸ್ಥಾನ, ಪುಣೆ
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದೆ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರೆಂದೇ ಕರೆಯುತ್ತಾರೆ. ಅವರು ಅಸಂಖ್ಯ ಅಭಿಮಾನಿಗಳ ಹೊಂದಿದ್ದು, ಪುಣೆಯಲ್ಲಿ ಅವರಿಗಾಗಿ ದೇವಾಲಯ ಕಟ್ಟಲಾಗಿದೆ. ಅಭಿಮಾನಿಗಳು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಕೊಡುಗೆ ಸ್ಮರಿಸುತ್ತಾರೆ.
ಎಂ.ಎಸ್. ಧೋನಿ ದೇವಸ್ಥಾನ, ರಾಂಚಿ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಭಾರತದ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅವರು ಜಾರ್ಖಂಡ್ನ ಮೊದಲ ಮತ್ತು ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು, ಮತ್ತು ಅವರ ಅಭಿಮಾನಿಗಳು ಎಂ.ಎಸ್. ಅವರ ಹುಟ್ಟೂರಾದ ರಾಂಚಿಯಲ್ಲಿ ಅವರಿಗಾಗಿ ದೇವಾಲಯ ನಿರ್ಮಿಸಿದ್ದಾರೆ.
ಶ್ರೀದೇವಿ ದೇವಸ್ಥಾನ, ಮುಂಬೈ
ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ಸ್ಟಾರ್ ಎಂದು ಹೆಸರಾಗಿದ್ದ ಶ್ರೀದೇವಿಗೆ ದೇವಾಲಯ ಕಟ್ಟಿದ್ದಾರೆ. ಆಕೆಯ ಅಭಿಮಾನಿಗಳು ಸೇರಿ ಮುಂಬೈನಲ್ಲಿ ಗುಡಿಯೊಂದನ್ನು ನಿರ್ಮಿಸಿದ್ದಾರೆ.
ಎನ್ಟಿಆರ್ ದೇವಾಲಯ, ಆಂಧ್ರಪ್ರದೇಶ
ಆಂಧ್ರಪ್ರದೇಶದ ದಂತಕಥೆ ನಟ ಮತ್ತು ರಾಜಕಾರಣಿ ನಂದಮೂರಿ ತಾರಕ ರಾಮರಾವ್ ಅವರಿಗೆ ರಾಜ್ಯದಲ್ಲಿ ಸಮರ್ಪಿತವಾದ ದೇವಾಲಯವಿದೆ. ಚಲನಚಿತ್ರೋದ್ಯಮ ಮತ್ತು ರಾಜ್ಯದ ರಾಜಕೀಯ ಭೂದೃಶ್ಯ ಎರಡಕ್ಕೂ ಅವರ ಕೊಡುಗೆಗಳನ್ನು ಗೌರವಿಸಲು ಅವರ ಅಭಿಮಾನಿಗಳು ಈ ದೇವಾಲಯವನ್ನು ನಿರ್ಮಿಸಿದರು.
ರಾಜ್ ಕಪೂರ್ ದೇವಸ್ಥಾನ, ಜೈಪುರ
ಭಾರತದ ಹೊರಗೆ, ವಿಶೇಷವಾಗಿ ಸೋವಿಯತ್ ಒಕ್ಕೂಟ ಮತ್ತು ಇತರ ಪೂರ್ವ ಯುರೋಪಿಯನ್ ರಾಜ್ಯಗಳಲ್ಲಿ ಭಾರತೀಯ ಸಿನಿಮಾವನ್ನು ಜನಪ್ರಿಯಗೊಳಿಸಿದ ಭಾರತೀಯ ಚಿತ್ರರಂಗದ ಶ್ರೇಷ್ಠ ರಾಜ್ ಕಪೂರ್, ಜೈಪುರದಲ್ಲಿ ಅವರಿಗೆ ಸಮರ್ಪಿತವಾದ ದೇವಾಲಯವನ್ನು ಹೊಂದಿದ್ದಾರೆ.
ಐಶ್ವರ್ಯ ರೈ ಬಚ್ಚನ್ ದೇವಸ್ಥಾನ, ಮಂಗಳೂರು
ಐಶ್ವರ್ಯಾ ರೈ ಮಿಸ್ ವರ್ಡ್ ಗೆದ್ದ ಬಳಿಕ ಭಾರೀ ಖ್ಯಾತಿ ಗಳಿಸಿದ್ದರು, ಮೂಲತಃ ಮಂಗಳೂರಿನವರಾದ ಅವರಿಗೆ ಹುಟ್ಟೂರಿನಲ್ಲಿ ದೇವಾಲಯವಿದೆ.
ಶಾರುಖ್ ಖಾನ್
"ಕಿಂಗ್ ಖಾನ್" "ಬಾಲಿವುಡ್ ಕಿಂಗ್" ಶಾರುಖ್ ಖಾನ್ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಕೋಲ್ಕತ್ತಾದಲ್ಲಿ ಅವರಿಗೆ ಸಮರ್ಪಿತವಾದ ದೇವಾಲಯವೂ ಇದೆ. ಈ ದೇವಾಲಯಕ್ಕೆ ನಿತ್ಯವೂ ಸಾವಿರಾರು ಮಂದಿ ಭೇಟಿ ನೀಡುವುದು ವಿಶೇಷ.
ಮೈಸೂರಿನಲ್ಲಿದೆ ಅಪ್ಪು ದೇವಾಲಯ
ಪುನೀತ್ ರಾಜ್ಕುಮಾರ್ ಅಪ್ಪು ಅಂತಲೇ ಮನೆಮಾತಾಗಿದ್ದ ಅವರಿಗೆ ಮೈಸೂರಿನಲ್ಲಿ ದೇವಾಲಯ ನಿರ್ಮಿಸಲಾಗಿದೆ.



Click it and Unblock the Notifications




