Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 9 ತಪ್ಪುಗಳನ್ನು ಮಾಡುವವನಿಗೆ ಹಣ ಉಳಿತಾಯ ಮಾಡಲು ಸಾಧ್ಯವಾಗುವುದೇ ಇಲ್ಲ!
ಯಾರು ಸಾಲಗಾರರಾಗುತ್ತಾರೆ? ಯಾರು ಜೀವನದಲ್ಲಿ ಈ ತಪ್ಪುಗಳನ್ನು ಮಾಡುತ್ತಾರೋ ಅವರು ಖಂಡಿತ ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಆದ್ದರಿಂದೀ ಬಗೆಯ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸಿ.
ಮನುಷ್ಯನನ್ನು ಆರ್ಥಿಕವಾಗಿ ತೊಂದರೆಗೆ ಒಳಗಾಗಿಸುವ ವಿಷಯಗಳು
ಈಗ ಖರೀದಿಸುವ ನಂತರ ಹಣ ಕೊಟ್ಟರಾಯ್ತು: ನಮ್ಮನ್ನು ತೊಂದರೆಗೆ ಸಿಲುಕಿಸುವ ಇಂಥ ಹಲವು ಯೋಜನೆಗಳಿವೆ, ಸ್ಕೀಮ ಅಂತ ಬರ್ತಾರೆ, ಕ್ರೆಡಿಟ್ ಕಾರ್ಡ್ ಇವೆ, ಅವೆಲ್ಲಾ ಈಗ ಖರೀದಿಸುವ ಸ್ವಲ್ಪ-ಸ್ವಲ್ಪ ಕೊಟ್ಟು ಮುಗಿಸುವ ಎಂಬ ಆಲೋಚನೆ ಹುಟ್ಟು ಮಾಡುತ್ತದೆ. ಆದರೆ ನಮ್ಮ ಇಂಥ ಅಭ್ಯಾಸ ನಮ್ಮನ್ನು ಆರ್ಥಿಕ ತೊಂದರೆಗೆ ಸಿಲುಕಿಸುತ್ತದೆ.

ಪ್ರತಿಬಾರಿ ಹೊರಗಡೆಯಿಂದಲೇ ಆಹಾರ ಸೇವಿಸುವುದು:ಕೆಲವರಿಗೆ ಇದು ಅನನಿವಾರ್ಯ ಇನ್ನು ಕೆಲವರಿಗೆ ಮನೆಯಲ್ಲಿ ಅಡುಗೆ ಮಾಡಲು ಸೋಮಾರಿತನ, ವಿಷಯ ಏನೇ ಆಗಿರಲಿ ಈ ಅಭ್ಯಾಸದಿಂದ ನಾವು ತುಂಬಾ ಹಣವನ್ನು ಖರ್ಚು ಮಾಡುತ್ತೇವೆ, ಹಣ ಕೈಯಲ್ಲಿ ನಿಲ್ಲುವುದಿಲ್ಲ, ಇದರಿಂದ ಕೂಡ ಆರ್ಥಿಕ ತೊಂದರೆ ಉಂಟಾಗುವುದು.
ಲಕ್ಷುರಿ ವಸ್ತುಗಳನ್ನು ಸಾಲದಲ್ಲಿ ತೆಗೆದುಕೊಳ್ಳುವುದು:ಲಕ್ಷುರಿ ವಸ್ತುಗಳನ್ನು ಹಣವಿದ್ದಾಗ ಖರೀದಿಸಬೇಕು. ಆದರೆ ಕೆಲವರು ಬೇರೆಯವರಿಗೆ ನಮ್ಮಲ್ಲಿ ಇದೆ ಎಂದು ತೋರಿಸುವ ಸಲುವಾಗಿ ಸಾಲ ಸೋಲ ಮಾಡಿ ಲಕ್ಷುರಿ ವಸ್ತುಗಳನ್ನು ಖರೀದಿಸುತ್ತಾರೆ. ನಾವು ನಮ್ಮ ಬಜೆಟ್ ಮೀರಿ ಲಕ್ಷುರಿ ವಸ್ತುಗಳಿಗೆ ಹಾಕುವುದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು.
ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಉಜ್ಜುವುದು: ಕ್ರೆಡಿಟ್ ಕಾರ್ಡ್ ಬಳಸದೇ ಇದ್ದರೆ ಜಾಣತನ, ಆದರೆ ಕೆಲವರಿಗೆ ಕ್ರೆಡಿಟ್ ಲಿಮಿಟ್ ಎಷ್ಟಿದೆಯೋ ಅಷ್ಟೂ ಖರೀದಿಸಬೇಕು, ಆದರೆ ಈ ಅಭ್ಯಾಸ ನಮ್ಮನ್ನು ಪ್ರತಿಮಾಸ ಸಾಲಗಾರನ್ನಾಗಿಸುತ್ತದೆ.
ಒಂದೇ ಆದಾಯದ ಮೂಲ
ಮನುಷ್ಯ ಯಾವತ್ತೂ ಒಂದೇ ಆದಾಯವನ್ನು ನಂಬಿಕೊಂಡು ಕೂರಬಾರದು, ಒಂದು ಕೆಲಸವಿದ್ದರೆ ಅದರ ಜೊತೆಗೆ ಹೂಡಿಕೆ ಮುಂತಾದ ಆದಾಯದ ಬಗ್ಗೆ ಕೂಡ ಯೋಚಿಸಬೇಕು, ಹಲವು ಮೂಲಗಳಿಂದ ಹಣ ಬರುವಂತಿರಬೇಕು. ಒಂದೇ ಆದಾಯದ ಮೂಲವನ್ನು ನಂಬಿಕೊಂಡು ಇದ್ದರೆ ಆ ವ್ಯಕ್ತಿ ಕೆಲಸ ಕಳೆದುಕೊಂಡರೆ ಅಥವಾ ಕಾಯಿಲೆ ಬಿದ್ದರೆ, ಮರಣಿಸಿದರೆ ಮನೆಯ ಪರಿಸ್ಥಿತಿ ಶೋಚನೀಯವಾಗುತ್ತದೆ, ಹಾಗಾಗಿ ಒಂದೇ ಆದಾಯದ ಮೂಲ ಮನೆಗೆ ಒಳ್ಳೆಯದಲ್ಲ, ಚಿಕ್ಕ-ಪುಟ್ಟ ಆದಾಯವಾದರೂ ಬೇರೆ ಕಡೆಯಿಂದ ಬರುವಂತಿರಬೇಕು.
ಎಮರ್ಜೆನ್ಸಿ ಫಂಡ್ ಇಲ್ಲದಿರುವುದು
ಇದೇ ಬಹುತೇಕರು ಮಾಡುವ ತಪ್ಪು, ಕೆಲಸ ಹೋದರೂ ಎರಡು ವರ್ಷ ಇರಬಲ್ಲೇ ಎಂದು ಹೇಳುವಷ್ಟು ಹಣ ನಮ್ಮ ಬಳಿ ಉಳಿತಾಯ ಮಾಡಿಡಬೇಕು, ಆವಾಗ ಆಪತ್ತು ಕಾಲದಲ್ಲಿ ಈ ಹಣ ನಮಗೆ ತುಂಬಾನೇ ಸಹಾಯ ಮಾಡುತ್ತದೆ.
ಬೇಗನೆ ಹಣಮಾಡಲು ಜೂಜಾಡುವುದು:
ಆನ್ಲೈನ್ ಗೇಮ್ ಆಡಿ ಹಣ ಕಳೆದುಕೊಂಡು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತದೆ, ಜೂಜಾಟದಿಂದ ಹಣ ಕೆಲವೊಮ್ಮೆ ಬರುತ್ತದೆ, ಆದರೆ ಬಂದ ಹಣ ಉಳಿಯಲ್ಲ, ಅದನ್ನು ಮತ್ತೆ ಜೂಜಿಗೆ ಹಾಕಿ ಕಳೆದುಕೊಳ್ಳುತ್ತಾರೆ, ಹೀಗೆ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.
ಹಣವನ್ನು ಹೂಡಿಕೆ ಮಾಡದೆ ಹಾಗೇ ಇಟ್ಟುಕೊಳ್ಳುವುದು
ನಮ್ಮ ಬಳಿ ಒಂದು ಲಕ್ಷ ಹಣವಿದೆ ಅಂದುಕೊಳ್ಳೋಣ, ಈ ಹಣ ಮನೆಯ ಬೀರುವಿನಲ್ಲಿಟ್ಟರೆ ಹೆಚ್ಚಾಗಲ್ಲ, ಅವ್ಯಕತೆ ಇದ್ದಾಗ ಆ ಹಣ ತೆಗೆಯುವುದರಿಂದ ಹಣ ಕಡಿಮೆಯಾಗುತ್ತಾ ಬರುವುದು. ಆದರೆ ಅದೇ ಒಂದು ಲಕ್ಷ ಹಣ ಹೂಡಿಕೆಯಲ್ಲಿ ಹಾಕಿದರೆ ಮತ್ತಷ್ಟು ಹಣ ಗಳಿಸಲು ಸಾಧ್ಯವಾಗುವುದು.
ಬೇರೆಯವರ ಸಲಹೆ ಕೇಳಿ ಹಣ ಹೂಡಿಕೆ ಮಾಡುವುದು
ಯಾರೋ ಹೇಳಿದರು ಎಂದು ಹಣದ ಹೂಡಿಕೆ ಮಾಡುವುದು, ಇದರ ಬಗ್ಗೆ ಚೆನ್ನಾಗಿ ವಿಚಾರಿಸಿ ಸಾಧಕ-ಬಾಧಕ ತಿಳಿದುಕೊಂಡು ಹಣದ ಹೂಡಿಕೆ ಮಾಡಬೇಕಾಗುತ್ತದೆ, ಅಲ್ಲದೆ ಅನುಭವ ಇಲ್ಲದ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು, ಉದಾಹರಣೆಗೆ ಕಬ್ಬಿಣದ ವ್ಯಾಪಾರ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಸ್ಟೀಲ್ ಬ್ಯುಸ್ನೆಸ್ಗೆ ಇಳಿಯುವುದು ಇವೆಲ್ಲಾ ನಷ್ಟವನ್ನು ಉಂಟು ಮಾಡುತ್ತದೆ.



Click it and Unblock the Notifications











