Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂಬುವುದರ ಹಿಂದಿದೆ ಈ 3 ಲೆಕ್ಕಾಚಾರ
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಆ ಸಮಯದಲ್ಲಿ ಪತ್ನಿಯನ್ನು ಅವಳ ತವರಿಗೆ ಕಳುಹಿಸಿಕೊಡುವ ಸಂಪ್ರದಾಯವಿದೆ. ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂದು ಹೇಳಿದರೆ ಆಂಧ್ರಪ್ರದೇಶದಲ್ಲಿ ಅತ್ತೆ-ಸೊಸೆ ಜೊತೆಗಿರಬಾರದು ಎಂದು ಹೇಳಲಾಗುವುದು, ಒಟ್ಟಿನಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂಬ ಉದ್ದೇಶ ಈ ಆಚರಣೆಯಲ್ಲಿದೆ.

ಆಷಾಢದಲ್ಲಿ ನವ ದಂಪತಿಗೆ ವಿರಹ ವೇದನೆ ಅನುಭವಿಸುವ ಅನಿವಾರ್ಯವಿರುತ್ತದೆ. ಆದರೆ ನಮ್ಮ ಹಿರಿಯರು ಈ ರೀತಿಯ ಆಚರಣೆ ತಂದಿರುವುದೇಕೆ ಎಂಬ ಪ್ರಶ್ನೆ ಈಗೀನ ತಲೆಮಾರಿನವರಿಗೆ ಕಾಡುವುದುಂಟು, ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಪತ್ನಿಯನ್ನು ತವರು ಮನೆಗೆ ಕಳುಹಿಸಬೇಕು ಎಂದು ಹೇಳಿದರೆ ಈಗೀನ ಕಾಲದಲ್ಲಿ ಈ ರೀತಿಯ ಆಚರಣೆಯ ಅಗ್ಯತವಿದೆಯೇ ಎಂದು ಮರುಪ್ರಶ್ನೆ ಹಾಕುತ್ತಾರೆ. ಆದರೆ ಹಿರಿಯರು ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂದು ಹೇಳಿರುವುದರ ಹಿಂದೆ ಪಕ್ಕ ಲೆಕ್ಕಾಚಾರವಿದೆ, ಈ ಕಾರಣಕ್ಕಾಗಿಯೇ ಈ ಸಮಯದಲ್ಲಿ ನವ ದಂಪತಿ ಜೊತೆಯಾಗಿ ಇರಬಾರದು ಎಂದು ಹೇಳಲಾಗುವುದು.
ಅಷಾಢದಲ್ಲಿ ಪತಿ-ಪತ್ನಿ ಒಂದು ಸೇರಬಾರದು
ಹೌದು ಆಷಾಢ ಮಾಸದಲ್ಲಿ ನವ ದಂಪತಿ ದೈಹಿಕ ಸಂಪರ್ಕ ಮಾಡಬಾರದು ಎಂಬ ಕಾರಣ ಈ ಸಂಪ್ರದಾಯ ಪಾಲಿಸಲಾಗುವುದು. ಅದರ ಹಿಂದೆ ಇರುವ ಲೆಕ್ಕಚಾರ ಎಂದರೆ ಜೂನ್-ಜುಲೈ ತಿಂಗಳಿನಲ್ಲಿ ಗರ್ಭಿಣಿಯಾದರೆ ಚೈತ್ರ ಮಾಸದಲ್ಲಿ ಹೆರಿಗೆಯಾಗುತ್ತಾರೆ, ಈ ಸಮಯದಲ್ಲಿ ಉಷ್ಣಾಂಶ ಅಧಿಕವಿರುವುದರಿಂದ ಜನಿಸುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಕಾರಣದಿಂದ ಈ ಸಮಯದಲ್ಲಿ ಪತಿ-ಪತ್ನಿವಿರಬೇಕು ಎಂದು ಹೇಳಿರುವುದರ ಹಿಂದಿರುವ ಉದ್ದೇಶವಾಗಿದೆ.
ವೈದಿಕ ಕಾರಣ
ಮೊದಲ ಮಗು ಮನೆಯ ವಾರಸುದಾರ ಎಂಬ ಲೆಕ್ಕಚಾರ ತುಂಬಾ ಜನರಿಗಿದೆ. ಆಷಾಢದಲ್ಲಿ ಗರ್ಭಿಣಿಯಾದರೆ ಮಗು ಚೈತ್ರ ಮಾಸದಲ್ಲಿ ಜನಿಸುತ್ತದೆ, ಚೈತ್ರದಲ್ಲಿ ಸೂರ್ಯ ಮೇಷ ರಾಶಿಗೆ ಬರುತ್ತದೆ, ಬುಧ ಹಾಗೂ ಶುಕ್ರ ಸೂರ್ಯನಿಗೆ ಸಮೀಪದಲ್ಲಿ ಇರುತ್ತದೆ, ಈ ಸಮಯದಲ್ಲಿ ಬುಧ ದುರ್ಬಲವಾಗುವುದು, ಬುಧ ದುರ್ಬಲವಾಗಿರುವ ಸಮಯದಲ್ಲಿ ಮಗು ಜನಿಸಿದರೆ ಅದು ಅಷ್ಟು ಶುಭ ಎಂದು ಪರಿಗಣಿಸುವುದಿಲ್ಲ. ಈ ಕಾರಣಕ್ಕೆ ಮಗು ಈ ಸಮಯದಲ್ಲಿ ಜನಿಸಬಾರದೆಂಬ ಲೆಕ್ಕಚಾರ ಕೂಡ ಇದೆ.
ಆರ್ಥಿಕ ಕಾರಣ: ಇನ್ನು ಆಷಾಢ ಮಾಸದಲ್ಲಿ ಪೈರು ನಾಟಿ ಮಾಡುವ ಸಮಯ. ಈ ಸಮಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಈ ಸಮಯದಲ್ಲಿ ನವ ಜೋಡಿಗಳಿದ್ದರೆ ಅವರಿಗೆ ಕೆಲಸದ ಕಡೆ ಗಮನವಿರುವುದಿಲ್ಲ, ಪತ್ನಿಯ ಜೊತೆ ರೊಮ್ಯಾನ್ಸ್ನಲ್ಲಿ ಕಳೆದು ಕೆಲಸದ ಕಡೆ ಗಮನ ನೀಡುವುದಿಲ್ಲ, ಈ ಕಾರಣದಿಂದಾಗಿ ಕೃಷಿ ಕಡೆ ಗಮನ ಕೊಡದೆ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಈ ಸಮಯದಲ್ಲಿ ನವ ದಂಪತಿ ಜೊತೆಗಿರಬಾರದು ಎಂದು ಹೇಳಲಾಗಿದೆ.
ಈ ಮೂರು ಅಂಶಗಳಲ್ಲಿ ಮೂರನೇಯದು ಈಗೀನ ಐಟಿ ಬಿಟಿಯಲ್ಲಿ ಕೆಲಸ ಮಾಡುವವರಿಗೆ ಸೂಟ್ ಆಗದೇ ಇರಬಹುದು, ಆದರೆ ಉಳಿದೆರಡು ಕಾರಣ ಎಲ್ಲಾ ಕಾಲದಲ್ಲೂ ಸೂಕ್ತವಾಗಿರುವುದರಿಂದ ಈ ಆಚರಣೆ ಇಂದಿಗೂ ಪಾಲಿಸಲಾಗುವುದು.



Click it and Unblock the Notifications