Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಉಳಿತಾಯದ ಹಣವೆಲ್ಲಾ ರಾಮನಿಗೆ ಅರ್ಪಿಸಿದ ನೇಕಾರ..! ಸೀತೆಗಾಗಿ 196 ಅಡಿ ಸೀರೆ ಉಡುಗೊರೆ..! ಎಷ್ಟು ದುಬಾರಿ ಗೊತ್ತಾ?!
ಜನವರಿ 22, ಎಲ್ಲಾ ಶ್ರೀರಾಮ ಭಕ್ತರು ಕಾತುರದಿಂದ ಎದುರು ನೋಡುತ್ತಿರುವ ದಿನ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರು ರಾಮ ಜಪ ಆರಂಭಿಸಿದ್ದಾರೆ. ಈಗಾಗಲೇ ಭಕ್ತರು ಅಯೋಧ್ಯೆಯೆಡೆಗೆ ಪ್ರಯಾಣ ಮಾಡುತ್ತಿದ್ದಾರೆ. ಅದೆಷ್ಟೋ ಭಕ್ತರ ದಶಕಗಳ ಕನಸು ಇಡೇರುವ ಶುಭಗಳಿಗೆಯನ್ನು ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ.
ಈ ಹಂಬಲದ ನಡುವೆಯೂ ವಿಶ್ವದ ಮೂಲೆ ಮೂಲೆಯಿಂದಲೂ ರಾಮನಿಗಾಗಿ ಉಡುಗೊರೆಗಳ ಹೊತ್ತು ತರುತ್ತಿದ್ದಾರೆ. ಇದೀಗ ಇಲ್ಲೊಬ್ಬರು ತಮ್ಮ ಜೀವನದ ಉಳಿತಾಯದ ಹಣವನ್ನು ಒಟ್ಟು ಮಾಡಿ ಸೀತಾ ದೇವಿಗೆ ಅರ್ಪಿಸಲು ಮುಂದಾಗಿದ್ದಾರೆ. ಹೌದು ಆತ ದುಡಿದ ಹಣವನ್ನು ಉಳಿಸಿ ಅದರಿಂದ ರಾಮನಿಗೆ 196 ಅಡಿಯ ಸೀರೆ ಉಡುಗೊರೆ ನೀಡಲು ಮುಂದಾಗಿದ್ದಾರೆ.
ಜನವರಿ 22 ರಂದು ನಿಗದಿಯಾಗಿರುವ ಅದರ ಪ್ರತಿಷ್ಠಾಪನೆ ಸಮಾರಂಭದ ಮೊದಲು 196 ಅಡಿ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಜುಜಾರು ನಾಗರಾಜು , ಧರ್ಮಾವರಂನ ಸಣ್ಣ ನೇಕಾರರಾಗಿದ್ದು, ಅವರು ಸೀತಾ ದೇವಿಯ ವಿಗ್ರಹಕ್ಕೆ ರೇಷ್ಮೆ ಸೀರೆಯನ್ನು ತಯಾರಿಸಲು ತಮ್ಮ ಇಡೀ ಜೀವನ ಉಳಿತಾಯ ಹಣವನ್ನು ಮುಡಿಪಾಗಿಟ್ಟಿದ್ದಾರೆ.

ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆ ನೀಡಲು 196 ಅಡಿ ಉದ್ದದ ಬೃಹತ್ ಸೀರೆಯನ್ನು ನೇಯ್ದಿದ್ದಾರೆ. ಧರ್ಮಾವರಂನ ಜುಜಾರು ನಾಗರಾಜು ಎಂಬುವರು ತಮ್ಮ ಜೀವಮಾನದ ಉಳಿತಾಯದ 3.5 ಲಕ್ಷ ರೂ.ಗಳನ್ನು ಸೀರೆ ತಯಾರಿಸಲು ವ್ಯಯಿಸಿದ್ದಾರೆ. 'ಜೈ ಶ್ರೀ ರಾಮ್' ಪಠಣವನ್ನು ಸೀರೆಯ ಮೇಲೆ 13 ಭಾಷೆಗಳಲ್ಲಿ 32,200 ಬಾರಿ ಕಸೂತಿ ಮಾಡಲಾಗಿದೆಯಂತೆ.
ಕುಶಲಕರ್ಮಿಯು 2022ರಲ್ಲಿ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ತಮಿಳು, ತೆಲುಗು, ಕನ್ನಡ, ಮರಾಠಿ, ಉರ್ದು, ಮಲಯಾಳಂ ಮತ್ತು ಒಡಿಯಾ ಸೇರಿದಂತೆ 13 ವಿವಿಧ ಭಾಷೆಗಳಲ್ಲಿ 'ಜೈ ಶ್ರೀ ರಾಮ್' ಎಂದು ಒಟ್ಟು 32,200 ಬಾರಿ ಸೀರೆಯ ಮೇಲೆ ಕಸೂತಿ ಮಾಡಿದ್ದಾರೆ, ಇದರ ಬೆಲೆ ಅವರಿಗೆ 3.5 ಲಕ್ಷ ರೂ ಆಗಿದೆಯಂತೆ.
ಈ ಸೀರೆಗೆ ಮೂಲತಃ 1.5 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದರೂ, ನಾಗರಾಜು ಅವರ ಕುಟುಂಬದ ಆದಾಯದ ಮೇಲೆ ಭಾರಿ ಖರ್ಚು ಮಾಡಲಾಗಿದ್ದರೂ, ಅವರು 'ರಾಮ ಕೋಟಿ ವಸ್ತ್ರಂ' ಎಂಬ ವಿಶೇಷ ಬಟ್ಟೆಯ ಮೇಲೆ ಮೇರುಕೃತಿಯನ್ನು ರಚಿಸಲು ತಮ್ಮ ಎಲ್ಲಾ ಉಳಿತಾಯವನ್ನು ವ್ಯಯಿಸಿದ್ದಾರೆ.
ಕಸೂತಿ ಜೊತೆಗೆ ಹಿಂದೂ ಪುರಾಣಗಳಲ್ಲಿನ ಎರಡು ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದಲ್ಲಿ ಭಗವಾನ್ ರಾಮನ ಜೀವನದಿಂದ 168 ಚಿತ್ರಾತ್ಮಕ ಚಿತ್ರಣಗಳನ್ನು ಸಹ ಈ ಸೀರೆ ಒಳಗೊಂಡಿದೆ. ಸೀರೆಯು ಸಾಂಪ್ರದಾಯಿಕ ಭಾರತೀಯ ಸೀರೆಯ ಸರಾಸರಿ ಉದ್ದಕ್ಕಿಂತ ಸುಮಾರು 11 ಪಟ್ಟು ಉದ್ದವಾಗಿದೆ ಮತ್ತು 16 ಕೆಜಿ ತೂಕ ಹೊಂದಿದೆ. ಇದನ್ನು ತಯಾರಿಸಲು ಅರ್ಧ ವರ್ಷ ತೆಗೆದುಕೊಂಡಿದ್ದಾರೆ. ನಾಗರಾಜು ಪ್ರತಿದಿನ ಸುಮಾರು 10 ಗಂಟೆಗಳ ಕಾಲ ಮಗ್ಗದಲ್ಲಿ ಈ ಸೀರೆಗಾಗಿ ಕಳೆದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯಕ್ಕೆ ಸಿದ್ಧ ಮಾಡಿದ್ದಾರೆ.
ಸೀರೆ ಹಸ್ತಾಂತರಿಸುವ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನೊಂದಿಗೆ ಮಾತನಾಡಿದ್ದೇನೆ ಎಂದು ನಾಗರಾಜು ತಿಳಿಸಿದರು. ಟ್ರಸ್ಟ್ ಸದಸ್ಯರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ನಂತರ ನಾನು ವಿಶೇಷ ಸೀರೆಯನ್ನು ವೈಯಕ್ತಿಕವಾಗಿ ಹಸ್ತಾಂತರಿಸಲು ಅಯೋಧ್ಯೆಗೆ ಹೋಗುತ್ತೇನೆ. ಕೆಲವು ಕಾರಣಗಳಿಂದಾಗಿ, ಜನವರಿ 22 ರಂದು ಉಡುಗೊರೆಯನ್ನು ನೀಡಲು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ಸಮಯದ ನಂತರ ಮತ್ತೊಂದು "ಶುಭ" ಸಂದರ್ಭದಲ್ಲಿ ಹಸ್ತಾಂತರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.



Click it and Unblock the Notifications
