Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಮರಳಿ ಯತ್ನವ ಮಾಡು: ಸಾಲ ಸಿಗದೆ ಅಲೆದಾಡಿ ₹63 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಕಥೆ..!
ಕೆಲವರ ಜೀವನದಲ್ಲಿ ಒಂದೇ ಒಂದು ಟರ್ನಿಂಗ್ ಪಾಯಿಂಟ್ ಅವರ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಇಂತಹ ನೂರಾರು ಉದಾಹರಣೆಗಳು ನಮ್ಮ ಮುಂದಿದೆ. ಇಲ್ಲೊಬ್ಬ ಸ್ಟಾರ್ಟ್ಅಪ್ ಉದ್ಯಮಿಯ ಕಥೆಯು ಸಹ ಇದೇ ರೀತಿ ಆಗಿದೆ. ಆತನಿಗೆ ಮೊದಲು ಸಾಲ ನೀಡಲು ಹಿಂದೇಟು ಹಾಕಿದ ಬ್ಯಾಂಕ್ಗಳು ಈಗ ಅವರ ಜೊತೆಯೇ ವ್ಯವಹಾರ ನಡೆಸಲು ಮುಂದಾಗಿವೆ.
ಹೌದು ಈ ಕಥೆ ರೇಜರ್ ಪೇ ಎಂಬ ಕಂಪನಿ ಹುಟ್ಟಿದ ಕಥೆ. ಇಂದು ಹತ್ತು ಹಲವು ಕಂಪನಿಗಳು ಇದೆ ಪೇಮೆಂಟ್ ಗೇಟ್ ವೇಯನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿವೆ. ಆದ್ರೆ ಈ ಕಂಪನಿ ಹುಟ್ಟಿದ ಕಥೆ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಈ ಕಂಪನಿಗೆ ಮೊದಲು ಹಣವಿಲ್ಲದೆ ಸಾಲ ಮಾಡಲು ಮುಂದಾದಾಗ 100 ಬ್ಯಾಂಕ್ಗಳು ತಿರಸ್ಕರಿಸಿದ್ದವು.

ಹರ್ಷಿಲ್ ಮಾಥುರ್ ಎಂಬ ಕಾರ್ಪೋರೇಟ್ ಕಂಪನಿಯ ಉದ್ಯೋಗಿ ಮತ್ತೋರ್ವ ಉದ್ಯಮಿಯ ಸೇರಿಸಿಕೊಂಡು ಈ ಕಂಪನಿ ಕಟ್ಟಿದ್ದಾರೆ. ಬೆಂಗಳೂರು ಮೂಲದ ಈ ಕಂಪನಿ ಈಗ ಬರೋಬ್ಬರಿ 63 ಸಾವಿರ ಕೋಟಿ ಮೌಲ್ಯವಾಗಿ ಬೆಳೆದು ನಿಂತಿದೆ. 2014 ರಲ್ಲಿ ಸಹ ಹಳೆಯ ವಿದ್ಯಾರ್ಥಿ ಶಶಾಂಕ್ ಕುಮಾರ್ ಜೊತೆಗೆ ರೇಜರ್ಪೇ ಪ್ರಾರಂಭಿಸಲು ಕಾರಣವಾಯಿತು. ಬೆಂಗಳೂರು ಮೂಲದ ಸ್ಟಾರ್ಟಪ್ ಇದಾಗಿದ್ದು, ಇದೊಂದು ಸಾಮಾನ್ಯ ಪರಿಕಲ್ಪನೆ ಎಂದು ಬ್ಯಾಂಕ್ಗಳು ಇಬ್ಬರ ಐಡಿಯಾವನ್ನು ನಿರಾಕರಿಸಿದ್ದವು.
Razorpay ಒಂದು ಸಮಗ್ರ ಡಿಜಿಟಲ್ ಪೇಮೆಂಟ್ ಪರಿಹಾರ ಪೂರೈಕೆದಾರರಾಗಿದ್ದು, ಸುಲಭ ಏಕೀಕರಣ ಮತ್ತು ಡೆವಲಪರ್-ಸ್ನೇಹಿ APIಗಳೊಂದಿಗೆ ಆನ್ಲೈನ್ ಪಾವತಿಗೆ ಅನುಕೂಲಕರವಾದ ಕಾರ್ಯವಿಧಾನವಾಗಿದೆ. ಹೀಗಾಗಿ ಭಾರತದಲ್ಲಿ ಕ್ಷಿಪ್ರ ಬೆಳವಣಿಗೆಯ ಆನ್ಲೈನ್ ಕ್ರಾಂತಿಯಲ್ಲಿ ಈ ಸಂಸ್ಥೆ ಬಹುಕೋಟಿ ಉದ್ಯಮವಾಗಿ ಬದಲಾಗಿದೆ.
ಉದ್ಯಮಕ್ಕೆ ಅವರ ವಿಭಿನ್ನ ವಿಧಾನದಿಂದಾಗಿ ಹರ್ಷಿಲ್ ವಿಶಿಷ್ಟ ಸವಾಲುಗಳನ್ನು ಎದುರಿಸಿದರು. ಈ ರಂಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಹಿಡಿತ ಸಾಧಿಸಿದ್ದರೂ ಉದ್ಯಮಶೀಲತೆ ಹಾಗೂ ಉದ್ಯಮ ಸ್ನೇಹಿ ತಂತ್ರಾಂಶ ಎಲ್ಲರಿಗೂ ಇಷ್ಟವಾಗಿತ್ತು.
ಇದು ಸಾಂಪ್ರದಾಯಿಕ ಕಾಗದ-ಆಧಾರಿತ KYC ಪ್ರಕ್ರಿಯೆಯನ್ನು ಬದಲಿಸುವ ಮೂಲಕ ವ್ಯಾಪಾರಗಳಿಗೆ ಸಂಪೂರ್ಣ ಡಿಜಿಟಲ್ ಆನ್ಬೋರ್ಡಿಂಗ್ ಪ್ರಕ್ರಿಯೆಯನ್ನು ನೀಡಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆಯಿತು. ಉದ್ಯಮ ಕ್ಷೇತ್ರದಲ್ಲಿ ಬಂದ ಎಲ್ಲಾ ಮೊದಲುಗಳನ್ನು ಅಳವಡಿಸಿಕೊಂಡ ಮೊದಲ ಸಂಸ್ಥೆ ಇದಾಗಿತ್ತು, ಹೀಗಾಗಿ ಉದ್ಯಮ ಬಹಳ ಅಲ್ಪ ಕಾಲದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆಯಿತು.
ಹರ್ಷಿಲ್ ಮತ್ತು ಶಶಾಂಕ್ ಇಬ್ಬರೂ ಈ ಸಂಸ್ಥೆ ಆರಂಭಿಸುವ ಮೊದಲು ಕಾರ್ಪೊರೇಟ್ ಜಗತ್ತಿಗೆ ಹೊಸಬರಾಗಿದ್ದರು-ಮೈಕ್ರೋಸಾಫ್ಟ್ನಲ್ಲಿ ಶಶಾಂಕ್ ಮತ್ತು US-ಆಧಾರಿತ ತೈಲಕ್ಷೇತ್ರದ ಸೇವಾ ಪೂರೈಕೆದಾರರಾದ ಸ್ಕ್ಲಂಬರ್ಗರ್ ಎಂಬ ಸಂಸ್ಥೆಯಲ್ಲಿ ಹರ್ಷಿಲ್ ಉದ್ಯೋಗಿಗಳಾಗಿದ್ದರು. ಅವರು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ದುಡಿಯಬೇಕಿತ್ತು. ಇದರಿಂದ ಹೊರಬರಲು ಯೋಜನೆ ರೂಪಿಸುವಾಗ ಈ ಐಡಿಯಾ ಅವರಿಗೆ ಬಂದಿತ್ತು.
ಮೊದಲು 100 ಬ್ಯಾಂಕ್ಗಳು ಅವರ ಆಲೋಚನೆಯನ್ನು ನಿರಾಕರಿಸಿದವು. ಆದರೆ ಓರ್ವ ಯುವ ಮ್ಯಾನೇಜರ್ ಇವರಲ್ಲಿ ಹೊಸತನ್ನು ಸಾಧಿಸುವ ಗುರಿ ಇದೆ ಎಂದು ಮನಗಂಡು ಮೊದಲು ಸಾಲ ನೀಡಲು ಮುಂದೆ ಬಂದರು. ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಂಪನಿಗಳು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿವೆ. ಈಗ ಕಂಪನಿಯ ಒಟ್ಟು ಮೌಲ್ಯ 63,000 ಕೋಟಿ ರೂಪಾಯಿ ಆಗಿದೆ.
ಬ್ಯಾಂಕ್ ಹಣ ನೀಡಲಿಲ್ಲ ಎಂದು ಕೈ ಕಟ್ಟಿ ಕುಳಿತ್ತಿದ್ದರೆ ಇಂದು 63 ಸಾವಿರ ಕೋಟಿಯ ಕಂಪನಿ ಹುಟ್ಟುತ್ತಿರಲಿಲ್ಲ. ಇವರ ಕಥೆ ಅದೆಷ್ಟೋ ಜನರಿಗೆ ಈಗ ಸ್ಪೂರ್ತಿಯಾಗಿದೆ. ಮರಳಿ ಯತ್ನವ ಮಾಡು ಎಂಬುದು ಇವರಿಂದ ಸತ್ಯವಾಗಿದೆ.



Click it and Unblock the Notifications