Latest Updates
-
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ!
ಶಬರಿಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ವ್ಯಕ್ತಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ವೀಡಿಯೋ
ಶಬರಿಮಲೆಗೆ ಮಾಲೆ ಹಾಕುವುದು ಎಂದರೆ ಯಾರು ಆ ಕಠಿಣ ವ್ರತ ನಿಯಮಗಳನ್ನು ಪಾಲಿಸಲು ಸಾಧ್ಯವೋ ಅವರು ಮಾತ್ರೆ ಹಾಕಬೇಕು. ಮಾಲೆ ಹಾಕುವ ಕೆಲ ದಿನಗಳ ಮೊದಲೇ ಈ ವ್ರತ ನಿಯಮ ಶುರು ಮಾಡುತ್ತಾರೆ, ಮಾಲೆ ಹಾಕಿದ ದಿನದಿಂದ 41 ದಿನಗಳವರೆಗೆ ಆ ಕಠಾಇಣ ನಿಯಮ ಅನುಸರಿಸಬೇಕು, ಮಾಲೆ ಹಾಕಿದ ಮೇಲೆ ಅವರನ್ನು ಸ್ವಾಮಿಗಳೆಂದು ಕರೆಯುತ್ತೇವೆ, ಏಕೆಂದರೆ ಅವರು ಅಷ್ಟೂ ಸ್ವಾಮಿಯಂತೆಯೇ ವರ್ತಿಸಬೇಕು.
ಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ
ಆದರೆ ಇಲ್ಲೊಬ್ಬರು ಮಲೆಗೆ ಮಾಲೆ ಹಾಕಿ, ನಂತರ ಹೆಣ್ಣು ನೋಡಲು ಹೋಗಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ, ಏನು ಕಾಲ ಬಂತ ಸ್ವಾಮಿ ಎಂದು ಜನ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನೂ ವಿಶೇಷತೆಯೆಂದರೆ ಅವರ ಮನೆಯ ಹಿರಿಯರು ಇದಕ್ಕೆ ಸಾಥ್ ನೀಡಿದ್ದಾರೆ.

ಮನೆಗೆ ಹುಡುಗಿ ನೋಡಲು ಬಂದಾಗ ಆ ಹುಡುಗಿಯ ಸಂಭ್ರಮ, ಮಾಲೆಧಾರಿ ವ್ಯಕ್ತಿ ಹಾಗೂ ಆ ವ್ಯಕ್ತಿ ಇಬ್ಬರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಂತರ ಜೊತೆಯಾಗಿ ನಿಂತು ಫೋಟೋ ತೆಗಿಸಿಕೊಂಡ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಮಾಲೆ ಹಾಕಿದಾಗ ಸ್ತ್ರೀಯರನ್ನು ಹಾಗೂ ಹೆಂಡತಿಯ ಮುಖವನ್ನು ನೋಡುವುದು ತಪ್ಪಾಗುತ್ತದೆ ಎಂದು ವ್ರತಾಚರಣೆಯ ನಿಯಮವೇ ಹೇಳುತ್ತದೆ.
ಗುರುಗಳು ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಉದ್ದೇಶ ಬಹುಶಃ ಈ ತಪ್ಪನ್ನು ಮಾಡಬೇಡಿ ಎಂದು ತಿಳಿಸಲಿಕ್ಕೆ ಎನಿಸುತ್ತದೆ.
ಸ್ವಾಮಿ ಶರಣು ಅಯ್ಯಪ್ಪಾ..... ಎಂದು ಕೆಲವರು ಪೋಸ್ಟ್ ಹಾಕುತ್ತಿದ್ದಾರೆ.
ಮಾಲೆಧಾರಿ ವ್ಯಕ್ತಿ ಸ್ತ್ರೀಯನ್ನು ಮೋಹಿಸಬಾರದು ಎಂದು ವ್ರತ ನಿಯಮದಲ್ಲಿದೆ
* ಶಬರಿಮಲೆಗೆ ಮಾಲೆ ಹಾಕಿ ಹೋಗುವುದು ಎಂದರೆ ತಮಾಷೆಯ ವಿಷಯವಲ್ಲ, 41 ದಿನ ಕಟ್ಟುನಿಟ್ಟಿನ ವ್ರತ ಮಾಡಬೇಕು.
* ಹೆಣ್ಣಿನ ಸಂಪರ್ಕ ಮಾಡಬಾರದು, ಹೆಣ್ಣಿನ ಬಗ್ಗೆ ಯಾವುದೇ ಮೋಹವಿರಬಾರದು
* ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು.
* ಹಾಸಿಗೆಯಲ್ಲಿ ಮಲಗಬಾರದು
* ಮದ್ಯ, ಧೂಮಪಾನ ಮಾಡಬಾರದು
* ಕೆಟ್ಟ ಆಲೋಚನೆ ಮಾಡಬಾರದು
* ಕೆಟ್ಟ ಪದಗಳನ್ನು ಮಾತನಾಡಬಾರದು.
ಮಾಲೆಹಾಕಿದಾಗ ಹೆಣ್ಣು ನೋಡಲು ಹೋದರೆ ಅದು ತಪ್ಪೇ?
ಅಯ್ಯಪ್ಪಸ್ವಾಮಿ ವ್ರತ ನಿಯಮದ ಪ್ರಕಾರ ಹೆಣ್ಣಿನ ಮೇಲೆ ಮಾಲೆ ಹಾಕಿದಾಗ ಯಾವುದೇ ಮೋಹ ಉಂಟಾಗಬಾರದು. ಹೆಣ್ಣು ನೋಡಲು ಹೋಗಿ ಆ ಹೆಣ್ಣು ಇಷ್ಟವಾದಾಗ ಅವಳ ಬಗ್ಗೆ ಮೋಹಗಳು ಹುಟ್ಟಿಕೊಳ್ಳುವುದು.
ಹಾಗಾದರೆ ಪ್ರೀತಿಯಲ್ಲಿ ಇದ್ದವರು ಮಾಲೆಧಾರಿ ಆದರೆ ಅವರಲ್ಲಿ ಮೋಹಗಳು ಇರುವುದಿಲ್ಲವೇ?
ಪ್ರೀತಿಯಲ್ಲಿರುವವರು, ಮದುವೆಯಾದವರು ಮಲೆಗೆ ಮಾಲೆ ಹಾಕಿದಾಗ ಅಯ್ಯಪ್ಪಸ್ವಾಮಿ ಕಠಿಣ ನಿಯಮಗಳನ್ನು ಪಾಲಿಸುತ್ತಾರೆ. ಈ ಅವಧಿಯಲ್ಲಿ ತನ್ನ ಮಡದಿ ಅಥವಾ ಸ್ನೇಹಿತೆಯೊಂದಿಗೆ ಹೆಚ್ಚಿನ ಕರೆ ಮಾಡುವುದಿಲ್ಲ. ಯಾವುದೇ ರೊಮ್ಯಾಂಟಿಕ್ ಮಾತುಗಳನ್ನಾಡಲ್ಲ, ಹೀಗಾಗಿ ಈ ರೀತಿ ಮಲೆಗೆ ಮಾಲೆ ಹಾಕಿ ಇಂಥ ಕಾರ್ಯಗಳನ್ನು ಮಾಡಬಾರದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಶ್ರೀ ಧರ್ಮಶಾಸ್ತ ಅಯ್ಯಪ್ಪ ಎಂಬ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ, ಯಾರೂ ಈ ಕಾರ್ಯ ಮಾಡಬೇಡಿ ಎಂದು ಹೇಳಲು ಆ ಪೇಜ್ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರಬಹುದು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು, ಅದಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು, ಆದರೆ ಈ ವ್ಯಕ್ತಿ ಮಾಲೆಧಾರಿಯಾಗಿ ಹೆಣ್ಣು ನೋಡಲು ಹೋಗಿದ್ದು ಮಾತ್ರವಲ್ಲ ಅದನ್ನು ವೀಡಿಯೋ ಮಾಡಿ ಹಾಕಿದ್ದಾರೆ. ನಾವು ಅಯ್ಯಪ್ಪಸ್ವಾಮಿ ವ್ರತ ನಿಯಮ ಅನುಸರಿಸುವುದಾದರೆ ಮಾತ್ರ ಮಾಲೆಹಾಕಬೇಕು, ಶೋಕಿಗಾಗಿ ಮಾಲೆ ಹಾಕಬಾರದು, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications