Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಶಬರಿಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ವ್ಯಕ್ತಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ವೀಡಿಯೋ
ಶಬರಿಮಲೆಗೆ ಮಾಲೆ ಹಾಕುವುದು ಎಂದರೆ ಯಾರು ಆ ಕಠಿಣ ವ್ರತ ನಿಯಮಗಳನ್ನು ಪಾಲಿಸಲು ಸಾಧ್ಯವೋ ಅವರು ಮಾತ್ರೆ ಹಾಕಬೇಕು. ಮಾಲೆ ಹಾಕುವ ಕೆಲ ದಿನಗಳ ಮೊದಲೇ ಈ ವ್ರತ ನಿಯಮ ಶುರು ಮಾಡುತ್ತಾರೆ, ಮಾಲೆ ಹಾಕಿದ ದಿನದಿಂದ 41 ದಿನಗಳವರೆಗೆ ಆ ಕಠಾಇಣ ನಿಯಮ ಅನುಸರಿಸಬೇಕು, ಮಾಲೆ ಹಾಕಿದ ಮೇಲೆ ಅವರನ್ನು ಸ್ವಾಮಿಗಳೆಂದು ಕರೆಯುತ್ತೇವೆ, ಏಕೆಂದರೆ ಅವರು ಅಷ್ಟೂ ಸ್ವಾಮಿಯಂತೆಯೇ ವರ್ತಿಸಬೇಕು.
ಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ
ಆದರೆ ಇಲ್ಲೊಬ್ಬರು ಮಲೆಗೆ ಮಾಲೆ ಹಾಕಿ, ನಂತರ ಹೆಣ್ಣು ನೋಡಲು ಹೋಗಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ, ಏನು ಕಾಲ ಬಂತ ಸ್ವಾಮಿ ಎಂದು ಜನ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನೂ ವಿಶೇಷತೆಯೆಂದರೆ ಅವರ ಮನೆಯ ಹಿರಿಯರು ಇದಕ್ಕೆ ಸಾಥ್ ನೀಡಿದ್ದಾರೆ.

ಮನೆಗೆ ಹುಡುಗಿ ನೋಡಲು ಬಂದಾಗ ಆ ಹುಡುಗಿಯ ಸಂಭ್ರಮ, ಮಾಲೆಧಾರಿ ವ್ಯಕ್ತಿ ಹಾಗೂ ಆ ವ್ಯಕ್ತಿ ಇಬ್ಬರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಂತರ ಜೊತೆಯಾಗಿ ನಿಂತು ಫೋಟೋ ತೆಗಿಸಿಕೊಂಡ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಮಾಲೆ ಹಾಕಿದಾಗ ಸ್ತ್ರೀಯರನ್ನು ಹಾಗೂ ಹೆಂಡತಿಯ ಮುಖವನ್ನು ನೋಡುವುದು ತಪ್ಪಾಗುತ್ತದೆ ಎಂದು ವ್ರತಾಚರಣೆಯ ನಿಯಮವೇ ಹೇಳುತ್ತದೆ.
ಗುರುಗಳು ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಉದ್ದೇಶ ಬಹುಶಃ ಈ ತಪ್ಪನ್ನು ಮಾಡಬೇಡಿ ಎಂದು ತಿಳಿಸಲಿಕ್ಕೆ ಎನಿಸುತ್ತದೆ.
ಸ್ವಾಮಿ ಶರಣು ಅಯ್ಯಪ್ಪಾ..... ಎಂದು ಕೆಲವರು ಪೋಸ್ಟ್ ಹಾಕುತ್ತಿದ್ದಾರೆ.
ಮಾಲೆಧಾರಿ ವ್ಯಕ್ತಿ ಸ್ತ್ರೀಯನ್ನು ಮೋಹಿಸಬಾರದು ಎಂದು ವ್ರತ ನಿಯಮದಲ್ಲಿದೆ
* ಶಬರಿಮಲೆಗೆ ಮಾಲೆ ಹಾಕಿ ಹೋಗುವುದು ಎಂದರೆ ತಮಾಷೆಯ ವಿಷಯವಲ್ಲ, 41 ದಿನ ಕಟ್ಟುನಿಟ್ಟಿನ ವ್ರತ ಮಾಡಬೇಕು.
* ಹೆಣ್ಣಿನ ಸಂಪರ್ಕ ಮಾಡಬಾರದು, ಹೆಣ್ಣಿನ ಬಗ್ಗೆ ಯಾವುದೇ ಮೋಹವಿರಬಾರದು
* ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು.
* ಹಾಸಿಗೆಯಲ್ಲಿ ಮಲಗಬಾರದು
* ಮದ್ಯ, ಧೂಮಪಾನ ಮಾಡಬಾರದು
* ಕೆಟ್ಟ ಆಲೋಚನೆ ಮಾಡಬಾರದು
* ಕೆಟ್ಟ ಪದಗಳನ್ನು ಮಾತನಾಡಬಾರದು.
ಮಾಲೆಹಾಕಿದಾಗ ಹೆಣ್ಣು ನೋಡಲು ಹೋದರೆ ಅದು ತಪ್ಪೇ?
ಅಯ್ಯಪ್ಪಸ್ವಾಮಿ ವ್ರತ ನಿಯಮದ ಪ್ರಕಾರ ಹೆಣ್ಣಿನ ಮೇಲೆ ಮಾಲೆ ಹಾಕಿದಾಗ ಯಾವುದೇ ಮೋಹ ಉಂಟಾಗಬಾರದು. ಹೆಣ್ಣು ನೋಡಲು ಹೋಗಿ ಆ ಹೆಣ್ಣು ಇಷ್ಟವಾದಾಗ ಅವಳ ಬಗ್ಗೆ ಮೋಹಗಳು ಹುಟ್ಟಿಕೊಳ್ಳುವುದು.
ಹಾಗಾದರೆ ಪ್ರೀತಿಯಲ್ಲಿ ಇದ್ದವರು ಮಾಲೆಧಾರಿ ಆದರೆ ಅವರಲ್ಲಿ ಮೋಹಗಳು ಇರುವುದಿಲ್ಲವೇ?
ಪ್ರೀತಿಯಲ್ಲಿರುವವರು, ಮದುವೆಯಾದವರು ಮಲೆಗೆ ಮಾಲೆ ಹಾಕಿದಾಗ ಅಯ್ಯಪ್ಪಸ್ವಾಮಿ ಕಠಿಣ ನಿಯಮಗಳನ್ನು ಪಾಲಿಸುತ್ತಾರೆ. ಈ ಅವಧಿಯಲ್ಲಿ ತನ್ನ ಮಡದಿ ಅಥವಾ ಸ್ನೇಹಿತೆಯೊಂದಿಗೆ ಹೆಚ್ಚಿನ ಕರೆ ಮಾಡುವುದಿಲ್ಲ. ಯಾವುದೇ ರೊಮ್ಯಾಂಟಿಕ್ ಮಾತುಗಳನ್ನಾಡಲ್ಲ, ಹೀಗಾಗಿ ಈ ರೀತಿ ಮಲೆಗೆ ಮಾಲೆ ಹಾಕಿ ಇಂಥ ಕಾರ್ಯಗಳನ್ನು ಮಾಡಬಾರದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಶ್ರೀ ಧರ್ಮಶಾಸ್ತ ಅಯ್ಯಪ್ಪ ಎಂಬ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ, ಯಾರೂ ಈ ಕಾರ್ಯ ಮಾಡಬೇಡಿ ಎಂದು ಹೇಳಲು ಆ ಪೇಜ್ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರಬಹುದು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು, ಅದಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು, ಆದರೆ ಈ ವ್ಯಕ್ತಿ ಮಾಲೆಧಾರಿಯಾಗಿ ಹೆಣ್ಣು ನೋಡಲು ಹೋಗಿದ್ದು ಮಾತ್ರವಲ್ಲ ಅದನ್ನು ವೀಡಿಯೋ ಮಾಡಿ ಹಾಕಿದ್ದಾರೆ. ನಾವು ಅಯ್ಯಪ್ಪಸ್ವಾಮಿ ವ್ರತ ನಿಯಮ ಅನುಸರಿಸುವುದಾದರೆ ಮಾತ್ರ ಮಾಲೆಹಾಕಬೇಕು, ಶೋಕಿಗಾಗಿ ಮಾಲೆ ಹಾಕಬಾರದು, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications