Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೆಹಲಿ ಕೆಂಪುಕೋಟೆ ಹಿಂದೆ ಬಿಳಿ ಬಣ್ಣದಿಂದ ಕೂಡಿತ್ತು..! ಈ ಅಚ್ಚರಿ ವಿಷಯ ನಿಮಗೆ ಗೊತ್ತಾ?
ದೆಹಲಿ ಹೆಸರು ಕೇಳಿದ ತಕ್ಷಣ ನಿಮಗೆ ಸಂಸತ್ ಭವನ ಹಾಗೂ ಕೆಂಪು ಕೋಟೆ ನೆನಪಿಗೆ ಬರಬಹುದು. ಕೆಂಪು ಕೋಟೆ ನಮ್ಮ ಇತಿಹಾಸದಲ್ಲಿ ಬಹುಮುಖ್ಯ ಅಂಶವಾಗಿ ಉಳಿದುಬಿಟ್ಟದೆ. ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯದ ಹೋರಾಟಕ್ಕೂ ಈ ಕೆಂಪುಕೋಟೆಗು ನಿಕಟ ಸಂಬಂಧವಿರುವುದು ನಾವು ಅರಿತ್ತಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. ಹಾಗೆ ಆ ದಿನದಂದು ಪ್ರಧಾನಿ ಭಾಷಣ ದೇಶವಾಸಿಗಳ ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಇನ್ನು ಹೆಸರೇ ಹೇಳುವಂತೆ ಕೆಂಪು ಕೋಟೆಯ ಬಣ್ಣ ಕೆಂಪಾಗಿದೆ. ಆದ್ರೆ ನಿಮಗೆ ಗೊತ್ತಾ ಕೆಂಪು ಕೋಟೆ ಮೊದಲು ತಾಜ್ಮಹಲ್ನಂತೆಯೇ ಬಿಳಿ ಬಣ್ಣದಲ್ಲಿತ್ತು. ಹೌದು ನಿಮಗೆ ಅಚ್ಚರಿ ಎನಿಸಬಹುದು ಕೆಂಪು ಕೋಟೆಯ ಬಣ್ಣ ಬಿಳಿಯಾಗಿತ್ತು. ಆದರೆ ಇದನ್ನು ಕೆಂಪು ಬಣ್ಣದ ಕೋಟೆಯನ್ನಾಗಿ ಮಾಡಲಾಗಿತ್ತು ಎಂಬುದು ನಿಮಗೆ ಗೊತ್ತಾ?

ಈ ಬಿಳಿಯ ಕೋಟೆಯನ್ನು ಕೆಂಪು ಮಾಡುವ ಹಿಂದಿರುವ ಉದ್ದೇಶ ತಿಳಿಯಬೇಕಾದರೆ ಈ ಕೋಟೆಯ ಇತಿಹಾಸ ತಿಳಿಯಬೇಕಾಗುತ್ತದೆ. ಈ ಕೆಂಪು ಕೋಟೆಯನ್ನು ಮೊಘಲ್ ದೊರೆ 1638ರಿಂದ 1648ರ ನಡುವೆ ಷಹಜಹಾನ್ ನಿರ್ಮಿಸಿದ್ದ. ಅಂದಿನ ಕಾಲದಲ್ಲಿ ಇದೊಂದು ಅದ್ಭುತ ನಿರ್ಮಾಣವಾಗಿತ್ತು. ಹಾಗೆ ಮೊಘಲ್ ದೊರೆ ತನ್ನ ರಾಜಧಾನಿ ಬದಲಿಸಿದ ಕಾಣದಿಂದಾಗಿ ಈ ಭವ್ಯ ಕಟ್ಟಡ ದೆಹಲಿಯಲ್ಲಿ ನಿರ್ಮಿಸಲಾಗಿತ್ತು ಎಂಬುದು ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ.
ಈ ಕೋಟೆಯನ್ನು ಕಿಲಾ ಎ ಮುಬಾರಕ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದರ ಅರ್ಥ ಪವಿತ್ರ ಕೋಟೆ ಎಂಬುದಾಗಿತ್ತು. ಷಹಜಹಾನ್ ತನ್ನ ರಾಜಧಾನಿಯನ್ನು ಆಗ್ರಾದಿಂದ ದೆಹಲಿಗೆ ಬದಲಾಯಿಸಿದಾಗ ಈ ಕೋಟೆಯ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ದೆಹಲು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜೊತೆಗೆ ಹಲವು ಐತಿಹಾಸಿಕ ಘಟನೆಗಳಿಗೂ ಇದು ಸಾಕ್ಷಿಯಾಗಿದೆ.
ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿತ್ತು ಈ ಕೋಟೆ
ಹಷಜಹಾನ್ ಈ ಕೋಟೆಯನ್ನು ಮೊದಲು ಕೆಂಪು ಬಣ್ಣದ ಕಲ್ಲಿನಿಂದ ನಿರ್ಮಿಸಲಿಲ್ಲ. ಬದಲಿಗೆ ಬಿಳಿ ಅಮೃತಶಿಲೆಯ ಕಲ್ಲುಗಳಿಂದಲೇ ನಿರ್ಮಿಸಿದ್ದ. ಆದರೆ ಈ ಅಮೃತಶಿಲೆಗಳು ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದಿಲ್ಲ, ವರ್ಷಗಳು ಕಳೆದಂತೆ ಈ ಕಲ್ಲುಗಳು ತಮ್ಮ ಮೂಲ ರೂಪದಿಂದ ಕೆಂಪು ಬಣ್ಣಕ್ಕೆ ತಿರುಗಲು ಆರಂಭಿಸಿದ್ದವು. ಹವಾಮಾನದಲ್ಲಿನ ಬದಲಾವಣೆಗೆ ಈ ಕಲ್ಲಿನ ಸ್ವರೂಪ ಬದಲಿಗೆ ಕಾರಣವಾಗಿತ್ತು. ಇದು ಕೋಟೆಯ ಅಂದವನ್ನು ಕೆಡಿಸಿತ್ತು.
ಕೋಟೆಗೆ ಹೊಸ ರೂಪ ಕೊಟ್ಟ ಬ್ರಿಟಿಷರು
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟಿಷರು ಈ ಕೋಟೆಯನ್ನು ತಮ್ಮ ವಶಕ್ಕೆ ಪಡೆದರು. ಈ ಸಮಯದಲ್ಲಿ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ ಅನ್ನು ಬ್ರಿಟಿಷರು ವಶಕ್ಕೆ ಪಡೆದಿದ್ದರು. ಹೀಗಾಗಿ ಕೋಟೆ ಕೂಡ ಬ್ರಿಟಿಷರ ವಶದಲ್ಲಿತ್ತು. ಈ ಸಮಯದಲ್ಲಿ ಕೋಟೆಯ ಬಣ್ಣ ವಿಪರೀತ ಕೆಟ್ಟು ಹೋಗಿತ್ತು. ಅಮೃತಶಿಲೆಗಳು ಗುರುತು ಹಿಡಿಯಲಾಗದ ಸ್ಥಿತಿಗೆ ತಲುಪಿದ್ದವು. ಹೀಗಾಗಿ ಬ್ರಿಟಿಷರು ಈ ಮೂಲ ಅಮೃತಶಿಲೆಯನ್ನು ತೆಗೆದು ಎಷ್ಟು ವರ್ಷ ಇದ್ದರೂ ಹಾಳಾಗದಂತ ಎಲ್ಲಾ ಹವಾಮಾನದಲ್ಲೂ ಒಗ್ಗಿಕೊಳ್ಳುವ ಮರಳು ಕಲ್ಲುಗಳ ಬಳಸಿ ಮತ್ತೆ ಕೋಟೆ ದುರಸ್ಥಿ ಕಾರ್ಯಕ್ಕೆ ಮುಂದಾದರು. ಹೀಗಾಗಿ ಬಳಿಕ ಇದನ್ನು ಕೆಂಪು ಕೋಟೆಯಾಗಿ ಗುರುತಿಸಲಾಗಿದೆ.
ಈಗ ಕೆಂಪುಕೋಟೆಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಇದರ ಒಳಗೆ ಇಂದಿಗೂ ಒಂದು ಬಿಳಿ ಬಣ್ಣದ ಮಸೀದಿ ಇರುವುದು ನೋಡಬಹುದು. ವರ್ಷವೂ ಲಕ್ಷಾಂತರ ಮಂದಿ ಪ್ರವಾಸಿಗರು ಈ ಕೋಟೆ ವೀಕ್ಷಿಸಲು ಬರುತ್ತಾರೆ.



Click it and Unblock the Notifications