Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ದೆಹಲಿ ಕೆಂಪುಕೋಟೆ ಹಿಂದೆ ಬಿಳಿ ಬಣ್ಣದಿಂದ ಕೂಡಿತ್ತು..! ಈ ಅಚ್ಚರಿ ವಿಷಯ ನಿಮಗೆ ಗೊತ್ತಾ?
ದೆಹಲಿ ಹೆಸರು ಕೇಳಿದ ತಕ್ಷಣ ನಿಮಗೆ ಸಂಸತ್ ಭವನ ಹಾಗೂ ಕೆಂಪು ಕೋಟೆ ನೆನಪಿಗೆ ಬರಬಹುದು. ಕೆಂಪು ಕೋಟೆ ನಮ್ಮ ಇತಿಹಾಸದಲ್ಲಿ ಬಹುಮುಖ್ಯ ಅಂಶವಾಗಿ ಉಳಿದುಬಿಟ್ಟದೆ. ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯದ ಹೋರಾಟಕ್ಕೂ ಈ ಕೆಂಪುಕೋಟೆಗು ನಿಕಟ ಸಂಬಂಧವಿರುವುದು ನಾವು ಅರಿತ್ತಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. ಹಾಗೆ ಆ ದಿನದಂದು ಪ್ರಧಾನಿ ಭಾಷಣ ದೇಶವಾಸಿಗಳ ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಇನ್ನು ಹೆಸರೇ ಹೇಳುವಂತೆ ಕೆಂಪು ಕೋಟೆಯ ಬಣ್ಣ ಕೆಂಪಾಗಿದೆ. ಆದ್ರೆ ನಿಮಗೆ ಗೊತ್ತಾ ಕೆಂಪು ಕೋಟೆ ಮೊದಲು ತಾಜ್ಮಹಲ್ನಂತೆಯೇ ಬಿಳಿ ಬಣ್ಣದಲ್ಲಿತ್ತು. ಹೌದು ನಿಮಗೆ ಅಚ್ಚರಿ ಎನಿಸಬಹುದು ಕೆಂಪು ಕೋಟೆಯ ಬಣ್ಣ ಬಿಳಿಯಾಗಿತ್ತು. ಆದರೆ ಇದನ್ನು ಕೆಂಪು ಬಣ್ಣದ ಕೋಟೆಯನ್ನಾಗಿ ಮಾಡಲಾಗಿತ್ತು ಎಂಬುದು ನಿಮಗೆ ಗೊತ್ತಾ?

ಈ ಬಿಳಿಯ ಕೋಟೆಯನ್ನು ಕೆಂಪು ಮಾಡುವ ಹಿಂದಿರುವ ಉದ್ದೇಶ ತಿಳಿಯಬೇಕಾದರೆ ಈ ಕೋಟೆಯ ಇತಿಹಾಸ ತಿಳಿಯಬೇಕಾಗುತ್ತದೆ. ಈ ಕೆಂಪು ಕೋಟೆಯನ್ನು ಮೊಘಲ್ ದೊರೆ 1638ರಿಂದ 1648ರ ನಡುವೆ ಷಹಜಹಾನ್ ನಿರ್ಮಿಸಿದ್ದ. ಅಂದಿನ ಕಾಲದಲ್ಲಿ ಇದೊಂದು ಅದ್ಭುತ ನಿರ್ಮಾಣವಾಗಿತ್ತು. ಹಾಗೆ ಮೊಘಲ್ ದೊರೆ ತನ್ನ ರಾಜಧಾನಿ ಬದಲಿಸಿದ ಕಾಣದಿಂದಾಗಿ ಈ ಭವ್ಯ ಕಟ್ಟಡ ದೆಹಲಿಯಲ್ಲಿ ನಿರ್ಮಿಸಲಾಗಿತ್ತು ಎಂಬುದು ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ.
ಈ ಕೋಟೆಯನ್ನು ಕಿಲಾ ಎ ಮುಬಾರಕ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದರ ಅರ್ಥ ಪವಿತ್ರ ಕೋಟೆ ಎಂಬುದಾಗಿತ್ತು. ಷಹಜಹಾನ್ ತನ್ನ ರಾಜಧಾನಿಯನ್ನು ಆಗ್ರಾದಿಂದ ದೆಹಲಿಗೆ ಬದಲಾಯಿಸಿದಾಗ ಈ ಕೋಟೆಯ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ದೆಹಲು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜೊತೆಗೆ ಹಲವು ಐತಿಹಾಸಿಕ ಘಟನೆಗಳಿಗೂ ಇದು ಸಾಕ್ಷಿಯಾಗಿದೆ.
ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿತ್ತು ಈ ಕೋಟೆ
ಹಷಜಹಾನ್ ಈ ಕೋಟೆಯನ್ನು ಮೊದಲು ಕೆಂಪು ಬಣ್ಣದ ಕಲ್ಲಿನಿಂದ ನಿರ್ಮಿಸಲಿಲ್ಲ. ಬದಲಿಗೆ ಬಿಳಿ ಅಮೃತಶಿಲೆಯ ಕಲ್ಲುಗಳಿಂದಲೇ ನಿರ್ಮಿಸಿದ್ದ. ಆದರೆ ಈ ಅಮೃತಶಿಲೆಗಳು ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದಿಲ್ಲ, ವರ್ಷಗಳು ಕಳೆದಂತೆ ಈ ಕಲ್ಲುಗಳು ತಮ್ಮ ಮೂಲ ರೂಪದಿಂದ ಕೆಂಪು ಬಣ್ಣಕ್ಕೆ ತಿರುಗಲು ಆರಂಭಿಸಿದ್ದವು. ಹವಾಮಾನದಲ್ಲಿನ ಬದಲಾವಣೆಗೆ ಈ ಕಲ್ಲಿನ ಸ್ವರೂಪ ಬದಲಿಗೆ ಕಾರಣವಾಗಿತ್ತು. ಇದು ಕೋಟೆಯ ಅಂದವನ್ನು ಕೆಡಿಸಿತ್ತು.
ಕೋಟೆಗೆ ಹೊಸ ರೂಪ ಕೊಟ್ಟ ಬ್ರಿಟಿಷರು
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟಿಷರು ಈ ಕೋಟೆಯನ್ನು ತಮ್ಮ ವಶಕ್ಕೆ ಪಡೆದರು. ಈ ಸಮಯದಲ್ಲಿ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ ಅನ್ನು ಬ್ರಿಟಿಷರು ವಶಕ್ಕೆ ಪಡೆದಿದ್ದರು. ಹೀಗಾಗಿ ಕೋಟೆ ಕೂಡ ಬ್ರಿಟಿಷರ ವಶದಲ್ಲಿತ್ತು. ಈ ಸಮಯದಲ್ಲಿ ಕೋಟೆಯ ಬಣ್ಣ ವಿಪರೀತ ಕೆಟ್ಟು ಹೋಗಿತ್ತು. ಅಮೃತಶಿಲೆಗಳು ಗುರುತು ಹಿಡಿಯಲಾಗದ ಸ್ಥಿತಿಗೆ ತಲುಪಿದ್ದವು. ಹೀಗಾಗಿ ಬ್ರಿಟಿಷರು ಈ ಮೂಲ ಅಮೃತಶಿಲೆಯನ್ನು ತೆಗೆದು ಎಷ್ಟು ವರ್ಷ ಇದ್ದರೂ ಹಾಳಾಗದಂತ ಎಲ್ಲಾ ಹವಾಮಾನದಲ್ಲೂ ಒಗ್ಗಿಕೊಳ್ಳುವ ಮರಳು ಕಲ್ಲುಗಳ ಬಳಸಿ ಮತ್ತೆ ಕೋಟೆ ದುರಸ್ಥಿ ಕಾರ್ಯಕ್ಕೆ ಮುಂದಾದರು. ಹೀಗಾಗಿ ಬಳಿಕ ಇದನ್ನು ಕೆಂಪು ಕೋಟೆಯಾಗಿ ಗುರುತಿಸಲಾಗಿದೆ.
ಈಗ ಕೆಂಪುಕೋಟೆಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಇದರ ಒಳಗೆ ಇಂದಿಗೂ ಒಂದು ಬಿಳಿ ಬಣ್ಣದ ಮಸೀದಿ ಇರುವುದು ನೋಡಬಹುದು. ವರ್ಷವೂ ಲಕ್ಷಾಂತರ ಮಂದಿ ಪ್ರವಾಸಿಗರು ಈ ಕೋಟೆ ವೀಕ್ಷಿಸಲು ಬರುತ್ತಾರೆ.



Click it and Unblock the Notifications
