Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಮೊಟ್ಟ ಮೊದಲ ಗಣರಾಜ್ಯೋತ್ಸವ ಹೇಗಿತ್ತು ಗೊತ್ತಾ? ಆ ದಿನ ದೆಹಲಿ ಭವನದಲ್ಲಿ ಏನೆಲ್ಲಾ ನಡೆದಿತ್ತು!
ಜನವರಿ 26ರಂದು ಇಡೀ ದೇಶ ಗಣರಾಜ್ಯೋತ್ಸವ ಆಚರಿಸುತ್ತಿದೆ. ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ. ಭಾರತವು 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವು ಜಾರಿಯಾಯಿತು. ಈ ದಿನದಿಂದ ನಾವು ಸಾರ್ವಭೌಮ, ಗಣತಂತ್ರ ದೇಶವನ್ನಾಗಿ ಅಧಿಕೃತವಾಗಿ ಒಪ್ಪಿಕೊಂಡಿವೆ.
ಅದಕ್ಕೂ ಮೊದಲು ಇದ್ದಂತಹ ರಾಜಪ್ರಭುತ್ವವೂ ಪ್ರಜಾಪ್ರಭುತ್ವವನ್ನು ಸಂವಿಧಾನ ಬದ್ಧವಾಗಿ ಒಪ್ಪಿಕೊಂಡಿದ್ದ ದಿನವಿದು. ಹೀಗಾಗಿ ಈ ದಿನವು ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಿಸುವುದು ನೋಡಬಹುದು. ಅಲ್ಲದೆ ಪ್ರತಿ ಶಾಲಾ-ಕಾಲೇಜುಗಳಲ್ಲಿ ಬಾವುಟ ಹಾರಿಸಿ ಗೌರವ ಸಲ್ಲಿಸಲಾಗುತ್ತದೆ. ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಈ ಸಂದರ್ಭದಲ್ಲಿ ರಾಷ್ಟ್ರಪತಿಯವರಿಗೆ ತೆರೆದ ಮಿಲಿಟರಿ ವಾಹನದಲ್ಲಿ ನಮನ ಸಲ್ಲಿಸಲಾ ಗುತ್ತದೆ. ಪೊಲೀಸ್, ಎನ್ ಸಿ ಸಿ ಗಳಿಂದ ಪೆರೇಡ್ ಮಾಡಲಾಗುತ್ತದೆ. ಹೀಗಾಗಿ ದೆಹಲಿಯ ಗಣರಾಜ್ಯೋತ್ಸವ ಇಡೀ ದೇಶದ ಗಮನ ಸೆಳೆಯುತ್ತದೆ. ಈ ವರ್ಷ ನಾವು 77ನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷಗಳ ಪ್ರಯಾಣದಲ್ಲಿ ಹಲವು ರೀತಿಯ ಬದಲಾವಣೆಗಳು, ಸವಾಲುಗಳನ್ನು ಸಹ ನೋಡಿದ್ದೇವೆ.
ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ಆಚರಣೆಯು ಒಂದೇ ನಾಣ್ಯದ ಎರಡು ಮುಖಗಳು ಎಂದು ಕರೆಯಲಾಗುಯತ್ತದೆ. ಸ್ವಾತಂತ್ರ್ಯ ದೊರಕದೆ ಹೋಗಿದ್ದರೆ ನಾವು ನಮ್ಮದೇ ಸಂವಿಧಾನ ರಚಿಸಿಕೊಳ್ಳಲು ಅವಕಾಶ ಕೂಡ ಸಿಗುತ್ತಿರಲಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ನಾವು ಈ ಸಮಯದಲ್ಲಿ ನೆನೆಯಬೇಕಾಗುತ್ತದೆ. ಭಾರತಕ್ಕೆ ಉತ್ತಮ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನದ ರಚನೆಗೆ, ರಚನಾ ಸಮಿತಿಯನ್ನು ನೇಮಿಸಲಾಗಿತ್ತು. 1947 ರ ಆಗಸ್ಟ್ 29 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದರು. ಇದಾದ ಬಳಿಕ ನಾವೀಗ 77ನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ.
ದೇಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಯಲ್ಲಿ ವೀಕ್ಷಿಸಲಾಗುತ್ತದೆ. ಆದ್ರೆ ನಿಮಗೆ ಗೊತ್ತಾ ದೇಶದ ಮೊದಲ ಗಣರಾಜ್ಯೋತ್ಸವ ಹೇಗೆ ನಡೆದಿತ್ತು? 1950 ಜನವರಿ 26ರಂದು ಸಂಭ್ರಮಾಚರಣೆ ಹೇಗೆ ನಡೆದಿತ್ತು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
1950 ಜನವರಿ 26ರಂದು ನಡೆದಿದ್ದೇನು?
ಈ ದಿನ ಸಂವಿಧಾನವನ್ನು ಒಪ್ಪಿಕೊಂಡ ಬಳಿಕ ದೆಹಲಿಯ ಸರ್ಕಾರಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಗಂಭೀರ ಸಮಾರಂಭದಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲಾಯಿತು. ಡಾ. ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತೀಯ ಗಣರಾಜ್ಯದ ಜನನ ಮತ್ತು ಅದರ ಮೊದಲ ರಾಷ್ಟ್ರಪತಿಯ ಪ್ರತಿಷ್ಠಾಪನೆಯನ್ನು 31-ಗನ್ ಸೆಲ್ಯೂಟ್ನೊಂದಿಗೆ ಘೋಷಿಸಲಾಯಿತು. ಭಾರತವನ್ನು ಜನವರಿ 26, 1950 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಿಖರವಾಗಿ 18 ನಿಮಿಷಗಳಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲಾಯಿತು. ಆರು ನಿಮಿಷಗಳ ನಂತರ, ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲ ಗಣರಾಜ್ಯೋತ್ಸವ ಮೆರವಣಿಗೆಯನ್ನು ಇರ್ವಿನ್ ಆಂಫಿಥಿಯೇಟರ್ನಲ್ಲಿ ನಡೆಸಲಾಯಿತು, ನಂತರ ಇದನ್ನು ರಾಷ್ಟ್ರೀಯ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು. ಇರ್ವಿನ್ ಆಂಫಿಥಿಯೇಟರ್ ಅನ್ನು ರಾಬರ್ಟ್ ಟಾರ್ ರಸೆಲ್ ವಿನ್ಯಾಸಗೊಳಿಸಿದರು ಮತ್ತು ಇದನ್ನು 1933 ರಲ್ಲಿ ಭಾವನಗರದ ಮಹಾರಾಜರಿಂದ ಉಡುಗೊರೆಯಾಗಿ ನಿರ್ಮಿಸಲಾಯಿತು. ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸುವ ಮೊದಲು 1951 ರಲ್ಲಿ ಇದನ್ನು ಮರುನಾಮಕರಣ ಮಾಡಲಾಯಿತು.
ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರು ಗಣರಾಜ್ಯದ ಘೋಷಣೆಯನ್ನು ಓದಿದರು, ದೇಶವು ಹಿಂದಿನ ಗವರ್ನರ್ ಪ್ರಾಂತ್ಯಗಳು, ರಾಜ್ಯಗಳು ಮತ್ತು ಮುಖ್ಯ ಆಯುಕ್ತರ ಪ್ರಾಂತ್ಯಗಳನ್ನು ಒಳಗೊಂಡಿರುವ ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದು ಘೋಷಿಸಿದರು. ಇದಾದ ಬಳಿಕ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರ ಲಾಂಚನವಾಗಿದ್ದ ಅಶೋಕ ಲಾಂಛನವನ್ನು ಹಿಡಿದು ಅಂಗರಕ್ಷಕರೊಡನೆ ಭವನಿಂದ ಹೊರಟರು. ಅವರ ಮೆರವಣಿಗೆ ಸಾಗುವ ಉದ್ದಕ್ಕೂ ಜನರು ಸೇರಿದ್ದರು. ಜಯಘೋಷ ಮುಳುಗಿತ್ತು.
ಬಳಿಕ ರಾಜೇಂದ್ರ ಪ್ರಸಾದ್ ಅವರು ಮೊದಲ ಗಣರಾಜ್ಯೋತ್ಸವ ಭಾಷಣ ಮಾಡಿದರು. ಇದಕ್ಕು ಮುನ್ನ ಪಥ ಸಂಚಲನ ಸಹ ನಡೆದಿತ್ತು. ಆಚರಣೆಯ ಸಂದರ್ಭದಲ್ಲಿ ಆಂಫಿಥಿಯೇಟರ್ನಲ್ಲಿ 15,000 ಜನರು ಒಟ್ಟುಗೂಡಿ ಭವ್ಯವಾದ ಮಿಲಿಟರಿ ಮೆರವಣಿಗೆಯನ್ನು ವೀಕ್ಷಿಸಿದರು, ಇದರಲ್ಲಿ ಭಾರತದ ಮೂರು ಸಶಸ್ತ್ರ ಪಡೆಗಳು ಮತ್ತು ಪೊಲೀಸರು, ಸಾಮೂಹಿಕ ಬ್ಯಾಂಡ್ಗಳು ಮತ್ತು ಸ್ಥಳೀಯ ತುಕಡಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು. ಈ ಬಾರಿ ಈ ಆಚರಣೆ ವಿಶೇಷವಾಗಿರಲಿದೆ, ಹಾಗೆ ಹಲವು ಹೊಸತನಗಳು ಸಹ ಸೇರಿಕೊಳ್ಳುತ್ತಿವೆ.



Click it and Unblock the Notifications













