Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಡುತ್ತಾ, ಕುಣಿಯುತ್ತಾ ಪಾಠ ಮಾಡುವ ಈ ಟೀಚರ್..! ವಿಡಿಯೋ ವೈರಲ್
ಮಕ್ಕಳಿಗೆ ಶಾಲೆಯಲ್ಲಿ ಹೇಗೆ ಹೇಳಿಕೊಡುತ್ತಾರೋ ಅವರು ಅಷ್ಟು ಬೇಗ ಅಷ್ಟು ರೀತಿಯ ವಿಷಯಗಳ ಕಲಿಯುತ್ತಾರೆ. ಆದ್ರೆ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬುದೇ ದೊಡ್ಡ ಸವಾಲು. ಅವರಿಗೆ ಹೊಡೆದು, ಬೆದರಿಸಿ ಕಲಿಯಲು ಹೋದರೆ ಈ ಭಯದಿಂದ ಕಲಿಯರು ಅದು ಬೇಕಾದ ಸಮಯಕ್ಕೆ ನೆನಪಾಗದೆ ಇರಬಹುದು. ಮಕ್ಕಳ ಬುದ್ದಿವಂತಿಕೆ, ಕಲಿಕೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಪಾತ್ರ ಮಹತ್ವ ಪಡೆದಿರುತ್ತದೆ.
ಪ್ರಾಥಮಿಕ ಶಾಲೆಯಲ್ಲಿ ಕಲಿಸಿಕೊಟ್ಟ ಪಾಠಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವೊದು ಶಾಲೆಯಲ್ಲಿ ಅಲ್ಲಿರುವ ಶಿಕ್ಷಕಿಯರು ಸ್ವಲ್ಪ ವಿಭಿನ್ನವಾಗಿ ಮಕ್ಕಳಿಗೆ ಕಲಿಸಿಕೊಡಲು ಮುಂದಾಗುತ್ತಾರೆ. ನೀವು ಕಾರ್ಕಳದ ವಂದನಾ ಟೀಚರ್ ಕುರಿತು ಕೇಳಿರಬಹುದು, ಅವರು ಶಾಲೆಯಲ್ಲಿ ಹಾಡು, ಡ್ಯಾನ್ಸ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಹಲವು ವಿಡಿಯೋಗಳು ನೋಡಲು ಸಿಗುತ್ತಿದ್ದವು.

ಇದೇ ರೀತಿಯ ಮತ್ತೋರ್ವ ಟೀಚರ್ ವಿಡಿಯೋ ಈಗ ವೈರಲ್ ಆಗುತ್ತಿದೆ. ವಂದನಾ ಟೀಚರ್ ಕಾರ್ಕಳದ ಶಾಲೆಯೊಂದರಲ್ಲಿ ಮಕ್ಕಳಿಗೆ ಹಾಡಿನ ಮೂಲಕ ನೃತ್ಯದ ಮೂಲಕ ಪಾಠ ಮಾಡುತ್ತಿದ್ದರು. ಇದು ಬಹಳ ಮೆಚ್ಚುಗೆಯ ಜೊತೆಗೆ ಈ ರೀತಿ ವಿಧಾನದಿಂದ ಮಕ್ಕಳು ಬಹುಬೇಗ ಅರ್ಥ ಮಾಡಿಕೊಳ್ಳುವುದು ಹಾಗೂ ಬೇಗ ಅರಿತುಕೊಳ್ಳುತ್ತಿದ್ದರು.
ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಅಕ್ಷರ ಮಾಲೆ, ರಜೆಯಲ್ಲಿ ಕಲಿಯಬೇಕಾದ ಹಾಡುಗಳು, ತರಕಾರಿಗಳ ಹಾಡು, ಹೂಗಳ ಹಾಡು, ಪ್ರಾರ್ಥನೆಗಳು, ಪರಿಸರ ಗೀತೆ, ಕಾಗುಣಿತದ ಹಾಡು, ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳಿಗೆ ಹೊಂದುವ ದೇಶಭಕ್ತಿ ಗೀತೆಗಳ ಮೂಲಕ ವಂದನಾ ಟೀಚರ್ ಮನೆ ಮಾತಾಗಿದ್ದರು.
ಈಗ ಬಿಹಾರದ ಬಂಕಾ ಜಿಲ್ಲೆಯ ಶಿಕ್ಷಕಿ ಸಹ ಈಗ ಇಂತಹ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶಿಕ್ಷಕಿ ಖುಷ್ಬೂ ಕುಮಾರಿ ಅವರು ಪ್ರೋಥೋಮೋಟ್ ಮಾಧ್ಯಮಿಕ ವಿದ್ಯಾಲಯದಲ್ಲಿ ತಮ್ಮ ವಿನೂತನ ಬೋಧನಾ ವಿಧಾನಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ಖುಷ್ಬೂ ಅವರು ಭಾರತ ಸರ್ಕಾರದ ಚಹಕ್ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ತರಬೇತಿಯನ್ನು ಬಳಸಿಕೊಂಡು ಸಂಕೀರ್ಣವಾದ ವಿಷಯಗಳನ್ನು ಸರಳಗೊಳಿಸುವ ವಿಶಿಷ್ಟವಾದ ಬೋಧನಾ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ.
ಅವರು ಹಿಂದಿ ವರ್ಣಮಾಲೆಯ ಸಂಕೀರ್ಣ ಅಕ್ಷರಗಳನ್ನು ಸುಲಭವಾಗಿ ಬರೆಯುವುದು ಹೇಗೆ? ನೆನಪಿನಲ್ಲಿ ಇಟ್ಟುಕೊಳ್ಳುವ ಸುಲಭ ಮಾರ್ಗವೇನು ಎಂಬುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಅವರು ಪ್ರಾಯೋಗಿಕವಾಗಿ ಹಾಡು ಹೇಳಿ ಕೈ ಬಳಸಿ ಸಹ್ನೆ ಮೂಲಕ ಆ ಅಕ್ಷರ ಹೇಗೆ ಕಾಣಿಸುತ್ತದ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ.
ಈ ರೀತಿಯ ಕಲಿಕೆಯಿಂದ ಮಕ್ಕಳು ಬೇಗ ಕಲಿಯುವ ಜೊತೆಗೆ ಬಹಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಮಕ್ಕಳು ಸಹ ಶಿಕ್ಷಕಿಯ ಜೊತೆಗೆ ಅಭ್ಯಾಸ ಮಾಡುವುದರಿಂದ ಈ ಹಾಡು ಹಾಗೂ ಆ ಪದ ಅವರ ಮನದಲ್ಲಿ ಗಾಢವಾಗಿ ಉಳಿದು ಬಿಡುತ್ತದೆ.
मात्रा का ज्ञान।
— Khushboo Anand 🇮🇳 (@Tchr_Khushboo) August 10, 2024
बच्चों की समझ बेहतर तरीके से विकसित हो इसके लिए हमें भी कभी-कभी बच्चा बनना पड़ता है और बच्चा बनकर बच्चों को पढ़ाना व सीखने-सिखाने की प्रक्रिया में मदद करना अत्यंत ही आनंद की अनुभूति देता है..😊☺️#Tchr_Khushboo #GovernmentSchool #Bihar pic.twitter.com/PxMsX2GAR0
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ವಿಶೇಷ ಕರ್ತವ್ಯದ ಅಧಿಕಾರಿ (OSD) ಸಂಜಯ್ ಕುಮಾರ್, ಆಕೆಯ ತರಗತಿಯ ತುಣುಕುಗಳು ಬಿಹಾರದ ಶಿಕ್ಷಕರ ಫೇಸ್ಬುಕ್ ಗುಂಪಿನಲ್ಲಿ ವೈರಲ್ ಆದ ನಂತರ ಶಿಕ್ಷಕಿಯ ಕಾರ್ಯ ಮೆಚ್ಚಿಗೆ ಹೊಳಿಕೆಯ ಮಾತುಗಳ ಆಡಿದ್ದಾರೆ. ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಉದ್ದೇಶದಿಂದ ಖುಷ್ಬೂ ಅವರಿಗೆ ತರಬೇತಿ ನೀಡಿದ ಚಹಕ್ ಕಾರ್ಯಕ್ರಮವು ಸರ್ಕಾರಿ ಯೋಜನೆಯಾಗಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಮಕ್ಕಳಿಗೆ ಈ ರೀತಿಯ ಶಿಕ್ಷಕರು ಸಿಕ್ಕಿದರೆ ಅವರಿಗೆ ಹೆಚ್ಚುವರಿಯಾಗಿ ಟ್ಯೂಷನ್ ಕೊಡಿಸುವುದು, ಮನೆಯಲ್ಲಿ ತಂದೆ ತಾಯಿ ಹೇಳಿಕೊಡುವುದು ಇದ್ಯಾವುದೂ ಬೇಕಾಗಿಯೇ ಇಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications











