ಪಶ್ಚಿಮ ಘಟ್ಟ ಉಳಿಸಲು ಟಾಸ್ಕ್‌ ಫೋರ್ಸ್‌ ಕೆಲಸ ಆರಂಭ..! ಏನಿದರ ಕೆಲಸ? ಯಾರಿಗೆ ಸಂಕಷ್ಟ?

ವಯನಾಡಿನಲ್ಲಿ ಸಂಭವಿಸಿದ ಮಹಾ ದುರಂತಕ್ಕೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ಸದ್ಯಕ್ಕೆ ಕಾರ್ಯಚರಣೆ ಅಂತಿಂ ಘಟ್ಟ ತಲುಪಿದ್ದು, ಇಡೀ ಗ್ರಾಮಗಳು ಮಣ್ಣಿನಲ್ಲಿ ಕೊಚ್ಚಿ ಹೋಗಿವೆ. ಸದ್ಯ ಅಲ್ಲಿ ಹೊಸದಾಗಿ ಮನೆ ನಿರ್ಮಾಣ, ಸೇತುವೆ, ರಸ್ತೆ, ನೀರಿನ ವ್ಯವಸ್ಥೆ ಹೀಗೆ ಎಲ್ಲವೂ ಹೊಸದಾಗಿ ಆರಂಭವಾಗಬೇಕಿದೆ. ಈ ‍ಬಾರಿಯ ಮಳೆಗಾಲದಲ್ಲಿ ಗುಡ್ಡ ಕುಸಿತ ಪ್ರಕರಣಗಲು ಮರುಕಳಿಸುತ್ತಲೇ ಇವೆ.

ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ಇನ್ನೂ ಕೆಲವರು ಪತ್ತೆಯಾಗಿಲ್ಲ. ಇತ್ತರ ಚಾರ್ಮಾಡಿ ಘಾಟ್, ಶಿರಾಡಿ ಘಾಟ್‌ ಸೇರಿ ಮಲೆನಾಡು, ಪಶ್ಚಿಮ ಘಟ್ಟ ಸಾಲಿನಲ್ಲಿ ಗುಡ್ಡ ಕುಸಿತದಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಸದ್ಯ ಇದಕ್ಕೆಲ್ಲ ಕಾರಣ ಹುಡುಕುತ್ತಿದ್ದ ಇಲಾಖೆಗಳು ಹಾಗೂ ಪಶ್ಚಿಮ ಘಟ್ಟ ಉಳಿಸಲು ಅಭಿಯಾನಗಳು, ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಲೇ ಇವೆ.

Task Force Established To Protect Western Ghats Who Will Face The Heat

ಈಗ ಸರ್ಕಾರ ಪಶ್ಚಿಮ ಘಟ್ಟ ಉಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅರಣ್ಯ ಅತಿಕ್ರಮಣಗಳ ತೆರವಿಗೆ ಟಾಸ್ಕ್‌ ಫೋರ್ಸ್ ರಚಿಸಿದೆ. ಹೌದು ರಾಜ್ಯ ಸರ್ಕಾರದ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, 'ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ಅತಿಕ್ರಮಣ ತೆರವು ಕಾರ್ಯಪಡೆ' ತನ್ನ ಕೆಲಸ ಆರಂಭಿಸಲಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇಂದಿನಿಂದಲೇ ಪಶ್ಚಿಮ ಘಟ್ಟಗಳು ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ ಅರಣ್ಯ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಟಾಸ್ಕ್ ಫೋರ್ಸ್‌..? ಇದರ ಕೆಲಸವೇನು?

ಈ ಟಾಸ್ಕ್ ಫೋರ್ಸ್ ಸುಮಾರು 10 ಜಿಲ್ಲೆಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಸಾಲು ಪ್ರದೇಶವನ್ನು ಅಧ್ಯಯನ ನಡೆಸಲಿದೆ. ಈ ಮೂಲಕ ಯಾವ ಪ್ರದೇಶದಲ್ಲಿ ಕಾನೂನಾತತ್ಮಕವಾಗಿ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಿದೆ. ಯಾವ ಪ್ರದೇಶದಲ್ಲಿ ಅರಣ್ಯ ಒತ್ತುವರಿ ಇಲ್ಲವೆ ಅತಿಕ್ರಮಣ ಸಂಭವಿಸಿದೆ ಎಂಬುದನ್ನು ಪತ್ತೆ ಮಾಡಿ ತೆರವು ಕಾರ್ಯಾಚರಣೆ ಸಹ ನಡೆಸಲಿದೆ. ಅಲ್ಲದೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ 2015ರ ನಂತರ ತಲೆ ಎತ್ತಿರುವ ಎಲ್ಲ ಅರಣ್ಯ ಒತ್ತುವರಿ ತೆರವಿಗೆ ಆದೇಶ ಹೊರಡಿಸಿ, ಒಂದು ತಿಂಗಳೊಳಗೆ ಕ್ರಮ ಕೈಗೊಂಡ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಿದೆ.

ಯಾರಿಗೆ ಕಾದಿದೆ ಸಂಕಷ್ಟ..?

ಅರಣ್ಯ ಕಾಯ್ದೆ 64Aಗೆ ಸಂಬಂಧಿಸಿದಂತೆ ಈಗಾಗಲೆ ತಮ್ಮ ಹಕ್ಕು ಪತ್ರಗಳ ಪಡೆದಿರುವವರು ಹಾಗೂ ಈ ಕಾಯ್ದೆಯಡಿ ವರದಿಗಾಗಿ ಕಾಯುತ್ತಿರುವವರಿಗೆ ಈ ಟಾಸ್ಕ್‌ ಪೋರ್ಸ್‌ನಿಂದ ಸಮಸ್ಯೆಯಾಗುವುದು ದೂರದ ಮಾತು. ಆದ್ರೆ ಪಶ್ಚಿಮ ಘಟ್ಟ ಸಾಲಿನಲ್ಲಿ ವಾಣಿಜ್ಯ ಉದ್ದೇಶದಿಂದಾಗಿ ನಿರ್ಮಿಸಲಾಗಿರುವ ರೆಸಾರ್ಟ್‌, ಹೋಟೆಲ್, ಹೋಮ್ ಸ್ಟೇ ಸೇರಿದಂತೆ ಕೈಗಾರಿಕೆ ಸಂಬಂಧ ನಿರ್ಮಿಸಲಾಗಿರುವ ಕಟ್ಟಡಗಳು ಸೇರಿ ಅತಿಕ್ರಮಣ ಪ್ರವೇಶ ಮಾಡಿರುವವರಿಗೆ ನೋಟಿಸ್ ಜಾರಿಯಾಗುವ ಜೊತೆಗೆ ಕ್ರಮವೂ ಆಗಲಿದೆ.

ಯಾರಿಗೆಲ್ಲಾ ವಿನಾಯಿತಿ?

ಇನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು , ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಅತಿಕ್ರಮಣ ಪ್ರಕರಣಗಳ ವಿಚಾರಣೆ ಮತ್ತು ವಿನಾಯಿತಿ ನೀಡುವ ಅಧಿಕಾರ ಪಡೆದಿರುತ್ತಾರೆ. ಹೀಗಾಗಿ ಇವರುಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದಾದರು ಪ್ರಕರಣಗಳಿದ್ದಾಗ ಆ ಕುರಿತ ನಿರ್ಧಾರ ತೆಗೆದುಕೊಳ್ಳಬಹುದು.

ಪಶ್ಚಿಮ ಘಟ್ಟದ ​​ರಸ್ತೆಗಳ ನವೀಕರಣ ಮತ್ತು ವಿಸ್ತರಣೆ ಸಂದರ್ಭದಲ್ಲಿ 90 ಡಿಗ್ರಿ ಕೋನದಲ್ಲಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕಡಿಯುವ ಮೂಲಕ ಭೂಕುಸಿತಕ್ಕೆ ಕಾರಣವಾದುದನ್ನು ಗಮನಿಸಿದ ಸಚಿವರು, ಅಂತಹ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೂ ನೋಟಿಸ್ ನೀಡಲಾಗಿದ್ದು, ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ' ಎಂದು ವಿವರಿಸಿದ್ದಾರೆ.

English summary

Task Force Established To Protect Western Ghats: Who Will Face The Heat?

Now the government has taken another step to save the Western Ghats and formed a task force to clear forest encroachments. Yes, a task force has been formed at the state government level and 'Forest and Western Ghats Encroachment Clearance Task Force' will start its work.
Story first published: Monday, August 5, 2024, 8:32 [IST]
X
Desktop Bottom Promotion