Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರಕ್ಷಾ ಬಂಧನದ ಇತಿಹಾಸ ಹೇಳಿ ಟೀಕೆಗೆ ಒಳಗಾದ ಸುಧಾ ಮೂರ್ತಿ..! ವಿಡಿಯೋದಲ್ಲಿ ಏನಿದೆ?
ಇಂದು ದೇಶದಾದ್ಯಂತ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಾಡಿನ ಖ್ಯಾತನಾಮರು, ನಟ-ನಟಿಯರು, ಉದ್ಯಮಿಗಳು, ರಜಕಾರಣಿಗಳು ಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಹಬ್ಬಕ್ಕೆ ಇತಿಹಾಸ, ಅದರ ಉದ್ದೇಶಗಳ ತಿಳಿ ಹೇಳಿದ್ದಾರೆ. ಹಾಗೆ ಈ ಹಬ್ಬ ಏಕೆ ಆಚರಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ.
ಆದ್ರೆ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿಯಾಗಿರುವ ಸುಧಾ ಮೂರ್ತಿ ರಕ್ಷಾ ಬಂಧನ ಸಂಬಂಧ ಹಂಚಿಕೊಂಡಿರುವ ವಿಡಿಯೋ ಈಗ ಹೊಸ ಚರ್ಚೆ ಹುಟ್ಟುಹಾಕಿದೆ. ಜೊತೆಗೆ ಒಂದಿಷ್ಟು ಪರ ವಿರೋಧ ಚರ್ಚೆಗೂ ಕಾರಣವಾಗಿದೆ. ರಕ್ಷಾ ಬಂಧನದ ದಿನದಂದು ಎಲ್ಲರು ಮಾಡುವಂತೆಯೇ ಅವರು ಸಹ ಶುಭ ಕೋರಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಸುಧಾ ಮೂರ್ತಿ ರಕ್ಷಾ ಬಂಧನದ ಹಿಂದಿನ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಹಬ್ಬ ಹೇಗೆ ಆರಂಭಗೊಂಡಿತು ನಾವು ಏಕೆ ಆಚರಿಸುತ್ತಿದ್ದೇವೆ. ಇದನ್ನು ಆರಂಭಿಸಿದ್ದು ಯಾರು? ಎಂಬ ಕುರಿತಾದ ಮಾಹಿತಿಯನ್ನ ಅವರು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಪರ ವಿರೋಧದ ಪ್ರಶ್ನೆ ಎದುರಾಗಿದೆ.
ಅವರು ಎಕ್ಸ್ ಖಾತೆಯಲ್ಲಿ ಇತಿಹಾದ ಒಂದು ಪ್ರಸಂಗವನ್ನು ಹಂಚಿಕೊಂಡಿದ್ದಾರೆ. 16 ನೇ ಶತಮಾನದಲ್ಲಿ, ರಾಣಿ ಕರ್ಣಾವತಿ ಅಪಾಯದಲ್ಲಿದ್ದಾಗ, ಮೊಘಲ್ ದೊರೆ ಹುಮಾಯೂನ್ಗೆ ಸಹಾಯ ಕೋರಿದ್ದಳು, ಇದಕ್ಕಾಗಿ ಕಣಿಕಟ್ಟಿಗೆ ಕಟ್ಟುವ ಒಂದು ದಾರವನ್ನು ಕಳುಹಿಸಿದಳು ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ರಾಣಿ ಕರ್ಣಾವತಿ ರಾಜ್ಯ ತುಂಬಾನೆ ಚಿಕ್ಕದಾಗಿತ್ತು. ಈ ವೇಳೆ ರಾಜನೊಬ್ಬ ದಂಡೆತ್ತಿ ಬಂದಿದ್ದ. ಈ ವೇಳೆ ಮೊಘಲ್ ಚಕ್ರವರ್ತಿ ರಾಜ ಹುಮಾಯೂನ್ ಸಹಾಯ ಪಡೆಯಲು ಮುಂದಾದಳು. ಹೀಗಾಗಿ ರಾಜನಿಗೆ ಒಂದು ದಾರ ಕಳುಹಿಸಿ ನನ್ನನ್ನು ಸಹೋದರಿ ಎಂದು ಭಾವಿಸಿ ಸಹಾಯ ಮಾಡುವಂತೆ ಬೇಡಿಕೊಂಡಳು.
ಆದರೆ ಈ ದಾರ ನೋಡಿದ ಹುಮಾಯೂನ್ ಇದರ ಸಂಪ್ರದಾಯದ ಬಗ್ಗೆ ತಿಳಿದಿರಲಿಲ್ಲ. ಬಳಿಕ ರಾಜನ ಆಸ್ಥಾನದಲ್ಲಿದ್ದವರು ಇದು ಸಹೋದರ ಸಹೋದರಿಯರ ನಡುವಿನ ಪವಿತ್ರ ಬಂಧನ ರಕ್ಷಾ ಬಂಧನವೆಂದು ತಿಳಿಸಿದ್ದರಂತೆ. ಬಳಿಕ ಆತ ಕರ್ಣಾವತಿಗೆ ಸಹಾಯ ಮಾಡಲು ನಿರ್ಧರಿಸಿ ಆಕೆಯ ಪರವಾಗಿ ಯುದ್ಧ ಮಾಡಿದನು. ಇಲ್ಲಿಂದ ಈ ರಕ್ಷಾ ಬಂಧನ ಎಂಬ ಹಬ್ಬ ನಡೆದುಕೊಂಡು ಬಂದಿದೆ ಎಂದು ಸುಧಾ ಮೂರ್ತಿ ವಿಡಿಯೋದಲ್ಲಿ ಹೇಳಿದ್ದಾರೆ.
ಆದ್ರೆ ಈ ವಿಚಾರವೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಈ ವಿಡಿಯೋಗೆ ಹಲವು ರೀತಿಯ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದೆ. ಈ ಸಂಪ್ರದಾಯ ಬೆಳೆದು ಬಂದ ಹಾದಿ ಕುರಿತಂತೆ ಹೊಸ ಚರ್ಚೆಗೆ ಕಾರಣವಾಗಿದೆ. ಹಲವರು ಸುಧಾ ಮೂರ್ತಿ ಅವರ ಈ ಅಭಿಪ್ರಾಯವನ್ನು ತಿರಸ್ಕರಿಸಿದ್ದಾರೆ. ರಕ್ಷಾ ಬಂಧನಕ್ಕೂ ನೀವು ಹೇಳಿರುವ ಈ ಕಥೆಗೂ ಸಂಬಂಧವಿಲ್ಲ. ರಕ್ಷಾ ಬಂಧನ ಆರಂಭಗೊಂಡಿದ್ದು, ಶ್ರೀ ಕೃಷ್ಣ ಹಾಗೂ ದ್ರೌಪದಿಯ ಪ್ರಸಂಗದಿಂದ ಎಂದು ವಿವರಿಸಿದ್ದಾರೆ.
ಈ ಸಮಯದಲ್ಲಿ ನನಗೆ ತಿಳಿದಿದೆ, ನೀವು ಈ ಅಸಂಬದ್ಧ ಕಥೆಯನ್ನು ನಂಬಿದರೆ ಭಾರತೀಯ ಹಬ್ಬಗಳು ಮತ್ತು ಸಂಸ್ಕೃತಿಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ಪುಸ್ತಕಗಳನ್ನು ಮಕ್ಕಳಿಗಾಗಿ ಶಿಫಾರಸು ಮಾಡಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ಶ್ರೀಕೃಷ್ಣನಿಗಾಗಿ ದ್ರೌಪದಿಯ ರಕ್ಷಾ ಸೂತ್ರ ಮತ್ತು ಶ್ರಾವಣ ಪೂರ್ಣಿಮೆಯ ಮಹತ್ವದ ಬಗ್ಗೆ ದಯವಿಟ್ಟು ಈ ಕಥೆಯನ್ನು ಕಲಿಯಬೇಕಾಗಿಲ್ಲ ಎಂದು ಕ್ಯಾಂಡಿಡ್ ಶ್ವೇತಾ ಎಂಬ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
'ನೀವು ಬರಹಗಾರರಾಗಿ ಈ ತಪ್ಪು ತಪ್ಪಾಗಿ ಹೇಳುತ್ತಿರುವುದು ನನಗೆ ನಿಜವಾದ ಆಶ್ಚರ್ಯವಾಗಿದೆ. ರಕ್ಷಾ ಬಂಧನವು ಕೃಷ್ಣ ಮತ್ತು ದ್ರೌಪತಿಗೆ ಸಂಬಂಧಿಸಿದೆ. ದಯವಿಟ್ಟು ನೀವೇ ಅರಿತುಕೊಳ್ಳಿ ಎಂದು ಸತೀಶ್ ಎಂಬ ಬಳಕೆದಾರರೊಬ್ಬರು ಹೇಳಿದ್ದಾರೆ.



Click it and Unblock the Notifications