Latest Updates
-
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್
'ಸೂಸೈಡ್ ಫಾರೆಸ್ಟ್' ಎಂಬ ನಿಗೂಢ ಕಾಡು..! ಇದರ ಬಗ್ಗೆ ಕೇಳಿದ್ದೀರಾ?
ಪ್ರಪಂಚದಲ್ಲಿ ಕೆಲವು ಸ್ಥಳಗಳು ಎಷ್ಟು ನಿಗೂಢತೆಯನ್ನು ತನ್ನಲ್ಲಿಟ್ಟುಕೊಂಡಿವೆ ಅಂದ್ರೆ ಅದನ್ನು ಕೇಳಿದಾಗ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಅಂತಹದ್ದೆ ಸ್ಥಳದ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಈ ಸ್ಥಳದ ಹೆಸರು ಸೂಸೈಡ್ ಫಾರೆಸ್ಟ್.
ಹೌದು ಆ ಸ್ಥಳದೆ ಅಷ್ಟು ವಿಚಿತ್ರ ಎಂದರೆ ಅಲ್ಲಿ ನಡೆಯುವ ಘಟನೆ ಇನ್ನೆಷ್ಟು ನಿಗೂಢ ಎಂದು ಊಹಿಸಿ ನೋಡಿ. ಜಪಾನ್ನ ಅಕಿಗಹರಾ ಅರಣ್ಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ಕಾಡು ಆತ್ಮಹತ್ಯೆ ಕೇಸ್ಗಳಿಗೆ ಸಿಕ್ಕಾಪಟ್ಟೆ ಫೇಮಸ್, ಈ ಕಾಡಿಗೆ ಪ್ರವೇಶ ನೀಡುವ ಮುನ್ನ ನಿಮ್ಮ ಕಣ್ಣಿಗೆ ಕೆಲವು ಸೂಚನೆಗಳು ಕಾಣುತ್ತವೆ. ಜೊತೆಗೆ ಇದು ಅತ್ಯಂತ ದಟ್ಟವಾದ ಮತ್ತು ಹಸಿರಾದ ಕಾಡಾಗಿದೆ. ವಿಶ್ವದ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗುವ 2ನೇ ಸ್ಥಳ ಇದಾಗಿದೆ.

ಈ ಕಾಡು ಎಲ್ಲಿದೆ?
ಅಕಿಗಹರಾ ಅರಣ್ಯ ಅಥವಾ ಆತ್ಮಹತ್ಯಾ ಅರಣ್ಯವು ಜಪಾನ್ನ ಫ್ಯೂಜಿ ಪರ್ವತದ ವಾಯುವ್ಯದಲ್ಲಿದೆ. ಇದು ದೇಶದ ರಾಜಧಾನಿ ಟೋಕಿಯೊದಿಂದ 2 ಗಂಟೆಗಳಿಗಿಂತ ಕಡಿಮೆ ದೂರದಲ್ಲಿದೆ. ಸುಮಾರು 35 ಚದರ ಕಿ.ಮೀ ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ಅಕಿಗಹಾರ ಅರಣ್ಯವು ದಟ್ಟ ಹಸಿರಿನಿಂದ ಸುತ್ತುವರಿದಿದೆ. ಇದೇ ಕಾರಣಕ್ಕೆ ಇದನ್ನು 'ಮರಗಳ ಸಮುದ್ರ' ಎಂದೂ ಕರೆಯುತ್ತಾರೆ.
ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಕಳೆದುಹೋಗುವುದು ಮತ್ತು ಕಾಡಿನ ದಟ್ಟವಾದ ಕಾರಣದಿಂದ ಹೊರಬರಲು ಅಸಾಧ್ಯವಾಗಿದೆ ಸಿಲುಕುವ ಪ್ರಕರಣಗಳು ಸರ್ವೇ ಸಾಮಾನ್ಯ. ಅಂದರೆ ಒಮ್ಮೆ ಈ ಕಾಡನ್ನು ಪ್ರವೇಶಿಸಿದರೆ ಹೊರಗೆ ಬರುವುದು ತುಂಬಾ ಕಷ್ಟ.
ಕಾಡಿನ ಭಯಾನಕ ಸತ್ಯ
ಅಕಿಗಹರಾ ಸುಸೈಡ್ ಪಾಯಿಂಟ್ ಯಾವಾಗ ಬೆಳಕಿಗೆ ಬಂತು ಎಂಬುದಕ್ಕೆ ಹತ್ತಾರು ಕಥೆಗಳಿವೆ. ಈ ಕಾಡನ್ನು ಜಪಾನ್ ಭಾಷೆಯಲ್ಲಿ ಯುರೇಯ ಎಂದು ಕರೆಯಲಾಗಿದೆ. ಅಂದರೆ ಆತ್ಮಗಳ ಕಾಡು ಎಂಬರ್ಥ ನೀಡುತ್ತದೆ. ಈ ಕಾಡಿನಲ್ಲಿ ಪೊಲೀಸರು ನಿತ್ಯ ಶವಗಳಿಗೆ ಹುಡುಕಾಡಬೇಕಾದ ಅನಿವಾರ್ಯತೆ ಇದೆ. ಇನ್ನು 2023ರಲ್ಲಿ ಪೊಲೀಸರು 105 ಶವಗಳನ್ನು ಕಾಡಿನಿಂದ ಹೊರತೆಗೆದಿದ್ದರು.
ಈ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಅಲ್ಲಿರುವ ಕಾಡಿನ ಮರಗಳಲ್ಲಿ ನೆಲೆಸಿವೆ ಎಂದು ಜಪಾನಿಗರು ನಂಬುತ್ತಾರೆ. ಹೀಗಾಗಿಯೇ ಈ ಕಾಡಿನಲ್ಲಿ ನಿಗೂಢ ಘಟನೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಯಾರಾದರು ಈ ಕಾಡಿನಲ್ಲಿ ಹೋಗುವಾಗ ಮರಗಳನ್ನು ಮುಟ್ಟುವುದು, ಅವುಗಳನ್ನು ಕಡಿಯುವುದು ಮಾಡಿದರೆ ಅವು ಸಹ ಸಾಯುತ್ತಾರೆ ಎಂದು ಭಯ ಬೀಳುತ್ತಾರೆ.
ಈ ಪ್ರದೇಶವು ಜ್ವಾಲಾಮುಖಿಯ ಮಣ್ಣಿನಿಂದ ರೂಪುಗೊಂಡ ಕಾಂತೀಯ ಕಬ್ಬಿಣದ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುವುದರಿಂದ. ಈ ಕಾರಣದಿಂದಾಗಿ, ಈ ಕಾಡಿನಲ್ಲಿ ದಿಕ್ಸೂಚಿ, ಕಂಪಾಸ್ಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಫೋನ್ಗಳಲ್ಲಿ ನೆಟ್ವರ್ಕ್ ಇಲ್ಲದಿರುವುದು, ಹೀಗೆ ಹತ್ತಾರು ವಿಚಿತ್ರ ಘಟನೆ ಇಲ್ಲಿ ನಡೆಯುತ್ತದೆ. ಹೀಗಾಗಿ ಈ ಕಾಡನ್ನು ನಿಗೂಢತೆಯ ಕಾಡು ಅಂತಲೂ ಅವರು ಕರೆಯುತ್ತಾರೆ. ಒಂದು ವೇಳೆ ಯಾರಾದರು ಈ ಕಾಡಿನಲ್ಲಿ ಕಳೆದು ಹೋದರೆ ಅವರು ಹೊರಬರುವುದು ಕಷ್ಟವಾಗುತ್ತದೆ.
ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳೋದೇಕೆ
ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ಜನರು ಈ ಕಾಡಿಗೆ ಬಂದು ವಿಷ ಸೇವಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ. ಇದು ವಿಶ್ವದ 2ನೇ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಈ ಕಾಡು ಎಷ್ಟು ದಟ್ಟವಾಗಿದೆ ಅಂದ್ರೆ ಅಲ್ಲಿ ಸಾಯಲು ಬಂದವನ ಹುಡುಕುವುದು ಕಷ್ಟ.
ಜಪಾನ್ನಲ್ಲಿ ಅತ್ಯಂತ ದಟ್ಟವದ ಕಾಡು ಎಂದರೆ ಈ ಅಕಿಗಹರಾ ಅರಣ್ಯವಾಗಿದೆ. ಹೀಗಾಗಿ ಜನ ಇದೇ ಕಾಡಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಕಾಡಿನಲ್ಲಿ ಶವ ಹುಡುಕುವುದು ಸಹ ಅತ್ಯಂತ ಕಷ್ಟದ ಕೆಲಸವಾಗಿದೆ. ಹೀಗಾಗಿ ಜನ ಭೂಮಿಯಿಂದ ಮರೆಯಾಗಲು ನಿರ್ಧರಿಸಿದರು ಈ ಕಾಡಿನಲ್ಲಿ ತಮ್ಮ ಶವ ಸಹ ಸಿಗಬಾರದು ಎಂಬ ಕಾರಣಕ್ಕೆ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.



Click it and Unblock the Notifications