Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
'ಸೂಸೈಡ್ ಫಾರೆಸ್ಟ್' ಎಂಬ ನಿಗೂಢ ಕಾಡು..! ಇದರ ಬಗ್ಗೆ ಕೇಳಿದ್ದೀರಾ?
ಪ್ರಪಂಚದಲ್ಲಿ ಕೆಲವು ಸ್ಥಳಗಳು ಎಷ್ಟು ನಿಗೂಢತೆಯನ್ನು ತನ್ನಲ್ಲಿಟ್ಟುಕೊಂಡಿವೆ ಅಂದ್ರೆ ಅದನ್ನು ಕೇಳಿದಾಗ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಅಂತಹದ್ದೆ ಸ್ಥಳದ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಈ ಸ್ಥಳದ ಹೆಸರು ಸೂಸೈಡ್ ಫಾರೆಸ್ಟ್.
ಹೌದು ಆ ಸ್ಥಳದೆ ಅಷ್ಟು ವಿಚಿತ್ರ ಎಂದರೆ ಅಲ್ಲಿ ನಡೆಯುವ ಘಟನೆ ಇನ್ನೆಷ್ಟು ನಿಗೂಢ ಎಂದು ಊಹಿಸಿ ನೋಡಿ. ಜಪಾನ್ನ ಅಕಿಗಹರಾ ಅರಣ್ಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ಕಾಡು ಆತ್ಮಹತ್ಯೆ ಕೇಸ್ಗಳಿಗೆ ಸಿಕ್ಕಾಪಟ್ಟೆ ಫೇಮಸ್, ಈ ಕಾಡಿಗೆ ಪ್ರವೇಶ ನೀಡುವ ಮುನ್ನ ನಿಮ್ಮ ಕಣ್ಣಿಗೆ ಕೆಲವು ಸೂಚನೆಗಳು ಕಾಣುತ್ತವೆ. ಜೊತೆಗೆ ಇದು ಅತ್ಯಂತ ದಟ್ಟವಾದ ಮತ್ತು ಹಸಿರಾದ ಕಾಡಾಗಿದೆ. ವಿಶ್ವದ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗುವ 2ನೇ ಸ್ಥಳ ಇದಾಗಿದೆ.

ಈ ಕಾಡು ಎಲ್ಲಿದೆ?
ಅಕಿಗಹರಾ ಅರಣ್ಯ ಅಥವಾ ಆತ್ಮಹತ್ಯಾ ಅರಣ್ಯವು ಜಪಾನ್ನ ಫ್ಯೂಜಿ ಪರ್ವತದ ವಾಯುವ್ಯದಲ್ಲಿದೆ. ಇದು ದೇಶದ ರಾಜಧಾನಿ ಟೋಕಿಯೊದಿಂದ 2 ಗಂಟೆಗಳಿಗಿಂತ ಕಡಿಮೆ ದೂರದಲ್ಲಿದೆ. ಸುಮಾರು 35 ಚದರ ಕಿ.ಮೀ ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ಅಕಿಗಹಾರ ಅರಣ್ಯವು ದಟ್ಟ ಹಸಿರಿನಿಂದ ಸುತ್ತುವರಿದಿದೆ. ಇದೇ ಕಾರಣಕ್ಕೆ ಇದನ್ನು 'ಮರಗಳ ಸಮುದ್ರ' ಎಂದೂ ಕರೆಯುತ್ತಾರೆ.
ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಕಳೆದುಹೋಗುವುದು ಮತ್ತು ಕಾಡಿನ ದಟ್ಟವಾದ ಕಾರಣದಿಂದ ಹೊರಬರಲು ಅಸಾಧ್ಯವಾಗಿದೆ ಸಿಲುಕುವ ಪ್ರಕರಣಗಳು ಸರ್ವೇ ಸಾಮಾನ್ಯ. ಅಂದರೆ ಒಮ್ಮೆ ಈ ಕಾಡನ್ನು ಪ್ರವೇಶಿಸಿದರೆ ಹೊರಗೆ ಬರುವುದು ತುಂಬಾ ಕಷ್ಟ.
ಕಾಡಿನ ಭಯಾನಕ ಸತ್ಯ
ಅಕಿಗಹರಾ ಸುಸೈಡ್ ಪಾಯಿಂಟ್ ಯಾವಾಗ ಬೆಳಕಿಗೆ ಬಂತು ಎಂಬುದಕ್ಕೆ ಹತ್ತಾರು ಕಥೆಗಳಿವೆ. ಈ ಕಾಡನ್ನು ಜಪಾನ್ ಭಾಷೆಯಲ್ಲಿ ಯುರೇಯ ಎಂದು ಕರೆಯಲಾಗಿದೆ. ಅಂದರೆ ಆತ್ಮಗಳ ಕಾಡು ಎಂಬರ್ಥ ನೀಡುತ್ತದೆ. ಈ ಕಾಡಿನಲ್ಲಿ ಪೊಲೀಸರು ನಿತ್ಯ ಶವಗಳಿಗೆ ಹುಡುಕಾಡಬೇಕಾದ ಅನಿವಾರ್ಯತೆ ಇದೆ. ಇನ್ನು 2023ರಲ್ಲಿ ಪೊಲೀಸರು 105 ಶವಗಳನ್ನು ಕಾಡಿನಿಂದ ಹೊರತೆಗೆದಿದ್ದರು.
ಈ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಅಲ್ಲಿರುವ ಕಾಡಿನ ಮರಗಳಲ್ಲಿ ನೆಲೆಸಿವೆ ಎಂದು ಜಪಾನಿಗರು ನಂಬುತ್ತಾರೆ. ಹೀಗಾಗಿಯೇ ಈ ಕಾಡಿನಲ್ಲಿ ನಿಗೂಢ ಘಟನೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಯಾರಾದರು ಈ ಕಾಡಿನಲ್ಲಿ ಹೋಗುವಾಗ ಮರಗಳನ್ನು ಮುಟ್ಟುವುದು, ಅವುಗಳನ್ನು ಕಡಿಯುವುದು ಮಾಡಿದರೆ ಅವು ಸಹ ಸಾಯುತ್ತಾರೆ ಎಂದು ಭಯ ಬೀಳುತ್ತಾರೆ.
ಈ ಪ್ರದೇಶವು ಜ್ವಾಲಾಮುಖಿಯ ಮಣ್ಣಿನಿಂದ ರೂಪುಗೊಂಡ ಕಾಂತೀಯ ಕಬ್ಬಿಣದ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುವುದರಿಂದ. ಈ ಕಾರಣದಿಂದಾಗಿ, ಈ ಕಾಡಿನಲ್ಲಿ ದಿಕ್ಸೂಚಿ, ಕಂಪಾಸ್ಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಫೋನ್ಗಳಲ್ಲಿ ನೆಟ್ವರ್ಕ್ ಇಲ್ಲದಿರುವುದು, ಹೀಗೆ ಹತ್ತಾರು ವಿಚಿತ್ರ ಘಟನೆ ಇಲ್ಲಿ ನಡೆಯುತ್ತದೆ. ಹೀಗಾಗಿ ಈ ಕಾಡನ್ನು ನಿಗೂಢತೆಯ ಕಾಡು ಅಂತಲೂ ಅವರು ಕರೆಯುತ್ತಾರೆ. ಒಂದು ವೇಳೆ ಯಾರಾದರು ಈ ಕಾಡಿನಲ್ಲಿ ಕಳೆದು ಹೋದರೆ ಅವರು ಹೊರಬರುವುದು ಕಷ್ಟವಾಗುತ್ತದೆ.
ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳೋದೇಕೆ
ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ಜನರು ಈ ಕಾಡಿಗೆ ಬಂದು ವಿಷ ಸೇವಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ. ಇದು ವಿಶ್ವದ 2ನೇ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಈ ಕಾಡು ಎಷ್ಟು ದಟ್ಟವಾಗಿದೆ ಅಂದ್ರೆ ಅಲ್ಲಿ ಸಾಯಲು ಬಂದವನ ಹುಡುಕುವುದು ಕಷ್ಟ.
ಜಪಾನ್ನಲ್ಲಿ ಅತ್ಯಂತ ದಟ್ಟವದ ಕಾಡು ಎಂದರೆ ಈ ಅಕಿಗಹರಾ ಅರಣ್ಯವಾಗಿದೆ. ಹೀಗಾಗಿ ಜನ ಇದೇ ಕಾಡಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಕಾಡಿನಲ್ಲಿ ಶವ ಹುಡುಕುವುದು ಸಹ ಅತ್ಯಂತ ಕಷ್ಟದ ಕೆಲಸವಾಗಿದೆ. ಹೀಗಾಗಿ ಜನ ಭೂಮಿಯಿಂದ ಮರೆಯಾಗಲು ನಿರ್ಧರಿಸಿದರು ಈ ಕಾಡಿನಲ್ಲಿ ತಮ್ಮ ಶವ ಸಹ ಸಿಗಬಾರದು ಎಂಬ ಕಾರಣಕ್ಕೆ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.



Click it and Unblock the Notifications