Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮಾಯಣದ ನೈಜ ತಾಣಗಳ ಕಣ್ಮುಂದೆ ಇಟ್ಟ ಲಂಕಾ..! ವಿಡಿಯೋ ನೋಡಿ ಅದ್ಭುತ ಎಂದ ಮಂದಿ.!
ರಾಮಾಯಣದ ಕಥೆಗಳು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿದಂತೆ ಕತೆಯೂ ಭಾರತ ಹಾಗೂ ಈಗಿನ ಶ್ರೀಲಂಕಾದಲ್ಲಿ ಸಂಭವಿಸಿದೆ ಎಂಬುದನ್ನು ನಾವು ಓದಿ ತಿಳಿದಿದ್ದೇವೆ. ಹಾಗೆ ಈ ರಾಮಾಯಣ ಕಾವ್ಯ ಎಲ್ಲರಲ್ಲು ಕುತೂಹಲ, ವಿಸ್ಮಯಕ್ಕೆ ಕಾರಣವಾಗುವಂತಹ ಹಲವು ವಿಚಾರಗಳನ್ನು ತನ್ನಲ್ಲಿಟ್ಟುಕೊಂಡಿದೆ.
ಹಾಗೆ ರಾಮಯಣ ನಿಜವಾಗಿಯೂ ನಡೆದಿದೆ ಎಂಬುದಕ್ಕೆ ಹತ್ತು ಹಲವು ಜೀವಂತ ಸಾಕ್ಷಿಗಳು ಕೂಡ ಇರುವುದು ನಾವು ನೋಡಬಹುದು. ರಾಮ ಸೇತು, ರಾಮ ಹಾಗೂ ಸೀತೆ ತಂಗಿದ್ದ ಸ್ಥಳಗಳು, ಈಗಿನ ಪುರಾಣ ಪ್ರಸಿದ್ಧ ದೇವಾಲಯಗಳು ಹೀಗೆ ಹತ್ತಾರು ಸಾಕ್ಷಿಗಳು ರಾಮಾಯಣವನ್ನು ಜೀವಂತಾಗಿಸಿವೆ. ಭಾರತದಲ್ಲಿ ಮಾತ್ರವಲ್ಲ ಶ್ರೀಲಂಕಾದಲ್ಲೂ ಕೂಡ ರಾಮಾಯಣಕ್ಕೆ ಸಂಬಂಧಿಸಿದ ಹಲವು ಕುರುಹುಗಳಿವೆ.

ಈಗ ಶ್ರೀಲಂಕಾ ಏರ್ಲೈನ್ಸ್ನ ಒಂದು ಜಾಹಿರಾತು ರಾಮಾಯಣದ ವಿಶೇಷ ಸ್ಥಳಗಳನ್ನು ಮತ್ತೆ ಕಣ್ಣೆದುರು ತೆರೆದಿಟ್ಟಿದೆ. ಶ್ರೀಲಂಕಾದ ಈ ವಿಶೇಷ ಜಾಹಿರಾತು ಈಗ ಭಾರತೀಯರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದ್ದು ಈ ವಿಡಿಯೋ ನೋಡಿದ ಮಂದಿ ಭಾರತೀಯರು ಹಿಂದೆಂದಿಗೂ ಇಂತಹ ರಾಮಾಯಣದ ಕತೆಯನ್ನು ಸುಂದರವಾಗಿ ಕೇಳಿರಲಿಲ್ಲ ಎನ್ನುತ್ತಿದ್ದಾರೆ.
ಶ್ರೀಲಂಕಾದಲ್ಲಿನ ರಾಮಾಯಣದ ಕುರುಹುಗಳನ್ನು ಸುಂದರವಾಗಿ ಒಂದು ವಿಡಿಯೋ ಮೂಲಕ ಚಿತ್ರಿಸಲಾಗಿದೆ. ಇದು ರಾಮಾಯಣ ಮಹಾಕಾವ್ಯವನ್ನು 5 ನಿಮಿಷದಲ್ಲಿ ಕಣ್ಣಿಗೆ ಕಟ್ಟಿದಂತೆ ವಿವರಿಸಲಿದೆ. ಹೀಗಾಗಿ ಭಾರೀ ಮೆಚ್ಚುಗೆಯ ಜೊತೆಗೆ ರಾಮಾಯಣದ ಬಹುಮುಖ್ಯ ಸ್ಥಳಗಳನ್ನು ಈ ವಿಡಿಯೋದಲ್ಲಿ ಸೇರಿಸಿರುವುದು ಪ್ರಶಂಸೆಗೆ ಕಾರಣವಾಗಿದೆ.
ಅಜ್ಜಿಯೊಬ್ಬರು ಮೊಮ್ಮಗನಿಗೆ ರಾಮಾಯಣದ ಕಥೆ ಹೇಳುವ ಮೂಲಕ ಈ ಜಾಹಿರಾತು ಆರಂಭವಾಗುತ್ತದೆ. ಹಾಗೆ ಶ್ರೀಲಂಕಾಕ್ಕೆ ರಾಮ ಹೇಗೆ ತೆರಳಿದ್ದ ಎಂಬುದನ್ನು ಮೊದಲಿಗೆ ಹೇಳಲಾಗಿದೆ. ಆತ ಪುಷ್ಪಕ ವಿಮಾನದ ಮೂಲಕ ಮೊದಲು ಶ್ರೀಲಂಕಾದ ಯಾವ ಸ್ಥಳಕ್ಕೆ ತೆರಳಿದ ಎಂಬುದನ್ನು ಕೂಡ ಹೇಳಲಾಗಿದೆ. ಹಾಗೆ ರಾವಣ ಸೀತೆಯನ್ನು ಮೊದಲು ಯಾವ ಗುಹೆ ಅಲ್ಲಿ ಇಟ್ಟಿದ್ದ ಅನಂತರ ಅಶೋಕವನದಲ್ಲಿ ಇರಿಸಿದ್ದ. ಈಗ ಆ ಸ್ಥಳ ಎಲ್ಲಿದೆ ಎಂಬುದನ್ನು ಕೂಡ ವಿವರಿಸಲಾಗಿದೆ. ರಾವಣ ವಧೆ ಬಳಿಕ ರಾಮನು ಅಯೋಧ್ಯೆಗೆ ಹಿಂದಿರುಗುವ ಮೊದಲು ಲಂಕಾದ ರಾಜನಾಗಿ ವಿಭೀಷಣನ ಕಿರೀಟವನ್ನು ಕೂಡ ವಿವರಿಸಲಾಗಿದೆ.
ಹಾಗೆ ಹನುಮಂತನಿಗೆ ಕಟ್ಟಲಾಗಿರುವ ದೇವಾಲಯ, ಸೀತಾ ದೇವಿ ಮಂದಿರ, ರಾಮನ ದೇವಾಲಯ ಸೇರಿ ಹಲವು ಪುರಾತನ ಸ್ಥಳಗಳನ್ನು ಜಾಹಿರಾತಿನ ಮೂಲಕ ವಿವರಿಸಲಾಗಿದೆ. ಈ ವಿಡಿಯೋ ಎಷ್ಟು ಸುಂದರವಾಗಿ ಮೂಡಿ ಬಂದಿದೆ ಅಂದ್ರೆ ನೋಡುಗರಿಗೆ ಸಂಪೂರ್ಣ ರಾಮಾಯಣದ ದರ್ಶನವಾಗೋದು ಪಕ್ಕ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ಮಂದಿ ಮೆಚ್ಚುಗೆಯ ಜೊತೆಗೆ ಒಂದಿಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂತಹ ಚಿತ್ರಣಗಳು ಭಾರತದಿಂದಲೂ ಸಾಧ್ಯವಾಗಬೇಕಿದೆ. ಶ್ರೀಲಂಕಾದಲ್ಲಿ ರಾಮಾಯಣದ ಕುರುಹುಗಳನ್ನು ಇಷ್ಟೊಂದು ಜೋಪಾನ ಮಾಡಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಲಂಕಾದ ಪ್ರವಾಸೋಧ್ಯಮಕ್ಕೆ ಬೂಸ್ಟ್ ನೀಡಲು ಈ ಜಾಹಿರಾತು ಹೊರತರಲಾಗಿದೆ.
ರಾವಣನ ರಾಜ್ಯವಾಗಿದ್ದ ಶ್ರೀಲಂಕಾದಲ್ಲಿರುವ ಈ ರಾಮಾಯಣ ಪ್ರಸಿದ್ಧ ಸ್ಥಳಗಳ ನೋಡಿ ಭಾರತೀಯರಂತು ಈ ಸ್ಥಳಗಳ ಭೇಟಿಗೆ ಮುಂದಾಗುವುದು ಖಚಿತ ಎನ್ನಲಾಗ್ತಿದೆ. ಏಕೆಂದರೆ ಈ ಸ್ಥಳಗಳು ರಾಮಾಯಣ ನೈಜ ಕುರುಹುಗಳಾಗಿರುವುದು ಎಲ್ಲರು ಒಮ್ಮೆ ನೋಡಲು ಕುತೂಹಲ ಮೂಡಿಸಿದ್ದಾರೆ.



Click it and Unblock the Notifications